Saturday, December 7, 2013

ಕಾಲದ ನೆನಹು

ಕಾಲಚಕ್ರ ಹಿಂದೆ ತಿರುಗಿ
ಅಮ್ಮನೆಂಬ ಪಟ್ಟಿ ಕಳಚಿ
ಇನಿಯನೆಳೆಸಬೇಕು; ಸತಿಯು ಮಾತ್ರವಾಗಬೇಕು

ಬಿಗುವ ಬಿಟ್ಟು ಬಿಡುವ ಸುರಿದು
ನಲ್ಲೆಮಾತ್ರವಾಗಿ ನಿಮ್ಮ
ಭುಜದಳೊರಗಬೇಕು; ಮತ್ತೆ ಪ್ರೀತಿಯುಕ್ಕಬೇಕು

ಭ್ರಮಿತ ಜಗವು ನಿಜದ ಜಗವ
ದಾಟಿನಡೆದು ನಾನು ಮತ್ತೆ
ಮಗುವೆ ಆಗಬೇಕು; ಸಮಯ ಹಿಂದೆ ತಿರುಗಬೇಕು

ಮಗುವು ನಾನು ನಿಮ್ಮಲಿನ್ನು
ನಿಮ್ಮ ನಗುವು ನನ್ನ ದಿನದ
ಸೂರ್ಯನಾಗಬೇಕು; ಬೆಳಕ ಮತ್ತೆ ಹರಿಸಬೇಕು

ನಿಮ್ಮ ಹೊರತು ಜಗವೆ ಕಾಣ್ದೆ
ಬಿಡುಗಂಗಳಿಂದಲೆನ್ನ-  
-ಕ್ಕರೆ ತಿಳಿಸಬೇಕು; ನಾನು ಮಗುವೆ ಆಗಬೇಕು

ಸರಿನುಡಿಗಳ ಸುಳಿವಿಲ್ಲದೆ
ಅರ್ಥವಿಲ್ಲದರೆನುಡಿಗಳ
ಮತ್ತೆ ಹೇಳಬೇಕು; ಎನಗೆ ಲಾಲಿ ಹಾಡಬೇಕು

ರಚ್ಚೆ ಹಿಡಿದು ಅಳಲು ನಾನು
ಕಣ್ಣನೊರೆಸಿ ನೀವು ಮತ್ತೆ
ನನ್ನನಗಿಸಬೇಕು; ಮುಗುಳ ಮತ್ತೆ ತರಿಸಬೇಕು

Saturday, November 23, 2013

Robin Cook – Mindbend

There are only two available categories of what novels I read – “The ones I liked reading, and the ones I loved reading”. Most of “the Cook Books” I read have made me fall in love with them all. So far I have read about 12 of his works which have always amazed me at the grueling medical possibilities lest the horror that they have to offer the reader to keep them from eating and sleeping without thinking about the subject and pondering over for the side effects of technology and business on medicine.

One such novel is “Mindbend” (1985).

People presume that pharmaceutical companies are the ones which provide real solution to human illness. Doctor prescribes what he has learnt is the best among the available brands. More than the chemical composition of a medicine, marketing is taking a toll over the general opinion that a Doctor arrives to, by judging through summaries of some real research in journals.

The novel shows how doctors are pitched for making a positive opinion about the medicines released afresh by the pharmaceutical companies, how much important are the executives in convincing medical practitioners to prescribe their company’s medicines.

Horror reveals page by page when renowned doctors go on conference cruise organized by a pharma company, Arolen, and when they come back in business, a good ten percent doctors either join the Julian Clinic run by the same mother company MTIC or they start acting as if they are its drug marketing agents. Adam, a Doctor to be, joins Arolen because of his financial fix when his wife Jennifer has an unplanned pregnancy. Jennifer thinks her developing child is safe in trusted hands of her Gyn, Dr.Vandermer. Jennifer is agonized when the doctor suggests aborting the baby owing to its genetic abnormality. Being sales personnel of Arolen, Adam grows suspicious about the cruise when Dr.Vandermer so strongly prescribes a medicine of Arolen he hardly had belief in, after he returns from Arolen conference, announces that he would join Julian clinic and his behavior seems so parallel with rest of the staff at Julian clinic.

Adam finds out in his nerve racing trip in Arolen cruise impersonating a doctor and later in his stay at their research station, that they modify the minds of the medical troupe on cruise though psychotropic drugs and psychosurgery. Though the story seems farfetched to be true, it explores the possibility of business taking over the noble profession of treating people of their illness.


Needless to say, the story makes the reader race from start to end at one go!

Tuesday, October 15, 2013

ಸಂತಸದ ಶರಧಿ

ಅರಳುಗ‌‍‌ಣ್ಣಲಿ ನಿನ್ನ ನಗುವು
ತುಟಿಗಳಂಚಲಿ ಮಿಂಚಿ ತುಳುಕಿ
ಮೆಲ್ಲ ನಿನ್ನನು ದಾಟಿ ನಡೆದು
ನೋಡುಗರಿಗದು ಪಸರಿದೆ

ಮುಗುಳು ನಗುವಿನ ಮೂಕ ಭಾಷೆ
ಬಿಡದ ಅಳುವಿನ ನಿನ್ನ ಆಜ್ಞೆ
ಮಾತ ಹೊನಲನು ಹರಿಸಿದೆ

ಭವದ ಭಾಷ್ಯವ ಅಳಿಸಿ ಹಾಕಿ
ಪುಟ್ಟ ಮುಷ್ಠಿಯೊಳೆಮ್ಮ ಜಗವನು
ನಿನ್ನ ಸುತ್ತಲೆ ಕಟ್ಟಿ ಹಾಕಿ
ನಿನ್ನೊಳೆಮ್ಮನು ಬಿಗಿದಿರೆ

ಮೃದುವ ಪಾದದಿ ಮೀಟಲೆಮ್ಮನು
ನಿಜದ ಚಿಂತೆಗಳೆಲ್ಲ ಸ್ಪರ್ಶದಿ
ತಿಳಿಗೈದು ಲೀನಗೊಂಡಿದೆ

ಮುಗ್ಧತೆಯ ಪ್ರತಿರೂಪ ನಿನ್ನನು
ಮಾತ ಮರೆತೆಮ್ಮೆಲ್ಲ ಜೀವಕು
ತಣ್ಪ ಶರಧಿಯ ತೋರಲೆಂದೇ
ದೇವ ನಿನ್ನನು ಕಳಿಸಿಹ

ಯಶವು ಸಿಗಲಿ ಎನ್ನ ಕಂದನೆ
ನಿನ್ನ ನೆರಳು ಸೋಂಕೆ ಎಂದಿಗು
ಹಾಲುನಗುವೆ ಉಕ್ಕಲಿ

Thursday, September 26, 2013

ಕಾಡು ಮತ್ತು ಕ್ರೌರ್ಯ – ಕೆ ಪಿ ಪೂರ್ಣಚಂದ್ರ ತೇಜಸ್ವಿ

ನಮ್ಮನ್ನಗಲಿ ೫ ವರ್ಷವಾದರೂ ಓದಿಸುತ್ತಿದ್ದಾರೆ ತೇಜಸ್ವಿ.

ಕಲ್ಮನೆಯೆಂಬ ಮಲೆನಾಡ ತಪ್ಪಲಿನ ಊರ ಕಥೆ ಇದು. ಅಲ್ಲಿನ ಜನರ ನಂಬಿಕೆಗಳು ಹಾಗು ಅವರ ಮೌಢ್ಯದ ನಡುವಿನ ತಾಕಲಾಟವೇ ಕಾದಂಬರಿಯ ವಸ್ತು.

ಕಲ್ಮನೆಯ ರಂಗಪ್ಪನವರು ವೆಂಕನೆಂಬ ಮೌಢ್ಯಪೋಷಿತ ಮಂತ್ರವಾದಿಗೆ ಬದುಕಿದ್ದಾಗ ಮೂಢನಂಬಿಕೆಗಳಿಗೆ ಬಲಿಯಾಗದೆ, ಕಾಯಿಲೆಯಾಗಿ ತೀರಿಹೋದಾಗ ಮಗಳು ಹೋಮ-ಶಾಂತಿಯೆಂದು ವೆಂಕುವನ್ನಾಶ್ರಯಿಸದೆ, ಕಡೆಗೆ ರಂಗಪ್ಪನ ಸಮಾಧಿ ಬಳಿ ವಾಮಾಚಾರ ಮಾಡಲು ಹೋದ ವೆಂಕುವಿನ ಅರಿವಿಗೆ ಬಾರದೆ ತಿರುಮಂತ್ರವಾಗಿ ರಂಗಪ್ಪನ ಬದುಕು-ಸಾವಿನ ಹಾಗೆ ಅವನ ನಂಬಿಕೆ ಅವನಿಗೇ ಪ್ರಶ್ನೆಯಾಗಿ ಉಳಿಯುತ್ತದೆ. ಇಲ್ಲಿ ವೆಂಕ ಶತಮಾನಗಳ ಮೂಢ ಕ್ರೌರ್ಯದ ಪ್ರತಿನಿಧಿ.

ರಂಗಪ್ಪನ ಮಗಳು ನಳಿನಿಯನ್ನು ವಿವಾಹವಾಗಲು ಬಂದ ವಿದ್ಯಾವಂತ ಸೋಮುವು ಆಕೆಯ ತಂದೆಯಗಲಿದ ದುಃಖದಲ್ಲಿ ಮುಸುಕಾದ ಪ್ರೇಮದೆಡೆ ಅಪನಂಬಿಕೆ ಬೆಳೆಸಿಕೊಳ್ಳುತ್ತಾನೆ. ಈ ಮಧ್ಯೆ ಕಲ್ಮನೆಯ ಕಾಡಿದ ಭಾರೀ ಕಾಡುಹಂದಿಗೆ ಡೈನಮೈಟ್ ಇಟ್ಟು, ಅದಕ್ಕೆ ಬಲವಾದ ಪೆಟ್ಟು ತಾಗಿದರೂ ಇನ್ನೂ ಬದುಕುಳಿಯುತ್ತದೆ. ಆಳುಗಳು ಅದರ ಇರುವನ್ನು ಹುಡುಕಿ ಕೊನೆಗಾಣಿಸೋಣವೆಂದಾಗ ಸಮಾಧಿಯನ್ನೂ ಬಿಡದೆ ಬೆದಕಿ ತೆಗೆದು ಹೆಣ ಬಗೆದ ರಾಕ್ಷಸ ಹಂದಿಯ ಸಿಡಿಮದ್ದಿನಿಂದ ಹಿಂಜಿದ ಬಾಯಲ್ಲಿ ಹುಳು ಮುಲುಗುಟ್ಟಿ ಯಾತನೆ ಪಟ್ಟು ಸಾಯಲಿ ಎಂದು ಬಯಸುವ ಸೋಮು ನಿಷ್ಕಾರಣ ಕ್ರೌರ್ಯವೊಂದರ ಕುರುಹಾಗುತ್ತಾನೆ.

ಹಂದಿ ಬೇಟೆಯಾಡಲು ಹೋದಾಗಿನ ರೋಚಕತೆ, ಪಾನಮತ್ತ ಮಾರ್ಯನೆಂಬ ಆಳಿನ ಕಾಲ್ಗಳಡಿಯಲ್ಲೇ ತಿವಿದು ನುಸುಳಿದಾಗಿನ ಕಳ್ಳಭಟ್ಟಿಯ ನಶೆ ತಂದ ಫಜೀತಿ, ವೆಂಕನ ಪೊಳ್ಳು ಮಂತ್ರಗಳಿಗೆ ಒಂಟಿಗ ಹಂದಿಯ ರೂಪದ ಭೂತ ವಶವಾಯಿತೆಂದು ಬೀಗುವ ಅವನ ಹೆಡ್ಡತನ, ಜೀತದಾಳು ಲಿಂಗನ ಮುಗ್ಧತೆ, ತಾನು ಬಯಲುಸೀಮೆಗೆ ಓಡಿಹೋಗಬೇಕೆನ್ನುವ ತವಕ, ಎಲ್ಲವೂ ನಮ್ಮನ್ನು ಕಲ್ಪನೆಯ ಕಥೆಯೊಳಕ್ಕೆ ಇಳಿಸಿ ಎಲ್ಲಿಯೂ ನಿಲ್ಲಿಸದೆ ಓದಿಸಿಕೊಂಡು ಹೋಗುತ್ತವೆ.

ಪ್ರಕಾಶಕರು ಹೇಳುವಂತೆ ಈ ಕಾದಂಬರಿ ೫೦ ವರ್ಷ ಹಳೆಯದು. ತೇಜಸ್ವಿಯವರ ಕಥಾಮಂಡನೆ ಕೊಂಚವೂ ಹಳತೆನ್ನಿಸುವುದಿಲ್ಲ. ಅವರ ಬರಹವನ್ನ ಇಷ್ಟ ಪಡುವವರು ಓದಲು ತಪ್ಪಿಸಬಾರದ ಪುಸ್ತಕ.


Wednesday, September 18, 2013

ನಿದಿರೆಯ ನಗು

ಚಿಟ್ಟೆ ಕಚಗುಳಿಯಿಟ್ಟವೇನೋ,
ಬೆಳ್ಳ ಮುಗಿಲು ಹಿಂಜಿ ಕನಸಲಿ-
ಹಸಿರ ಮರೆಯಲಿ ಹಕ್ಕಿಯೊಂದು
ಕುಹುಕುಹೂ ಎಂದಿತೆ ಮುದದಲಿ?

ಮೃದುವ ಹುಲ್ಲಿನ ಹಾಸ ತಂಪು
ಮೆಲ್ಲ ಪಾದಕೆ ತಾಕಿತೇನೋ,
ಹೂವ ನುಣುಪಿನ ಪಕಳೆ ಅದುವೆ
ಕೈಗಳಿಗೆ ತಾ ಸೋಂಕಿತೋ?

ಘಲ್ಲೆನುವ ಝೇಂಕಾರವೊಂದು
ಪುಟ್ಟ ಕಿವಿಗಳದುಂಬಿತೇನು?
ಸವಿದ ಅಮೃತದ ರುಚಿಯು ಮತ್ತೆ
ನಾಲಗೆಗೆ ಮುದ ನೀಡಿತೋ?

ಮಳೆಯ ದಪ್ಪನೆ ಹನಿಯದೊಂದು
ಎಲೆಯ ಮೇಲ್ಗಡೆ ಜಾರಿ ಹನಿದು-
ನಿಂತ ನೀರೊಳು ಎಬ್ಬಿಸಿದ ಆ
ಸುರುಳಿ ಕನಸಲಿ ಕಂಡಿತೋ?

ಉದಯರವಿಯು ಆಕಳಿಸುತಲಿ
ಕರಿಯ ತೆರೆಯನು ಸರಿಸಿ ಎದ್ದು-
ಬೆಳಕ ಕೋಲ್ಗಳ ಪಸರಿ ಹರಡಿದ
ಬಣ್ಣಗಳು ಅವು ಕಂಡವೋ?

ಏನ ಕಂಡೆಯೊ ನನ್ನ ಕಂದನೆ
ನಗುವ ಸಿರಿಯದು ಎಂಥ ಚಂದ;
ನೀನು ನಿದ್ದೆಯೊಳದ್ದಿ ಬೀರಿಹ
ಮುಗುಳ ಮುದವೇ ಮೋಡಿಯೋ...

Wednesday, August 28, 2013

ನನ್ನ ಮಗು

ಕನಸಿದ್ದ ನಗು ಈಗ ನನಸಾಗಿದೆ. ಒಳಗೆ ಮಿಡುಕಾಡುವ ಜೀವವೊಂದು ಎಲ್ಲಿಂದ ಬಂತೆಂದು ಅಚ್ಚರಿ ಪಡುವಷ್ಟರಲ್ಲಿ, ನಾನಿನ್ನೂ ನನ್ನ ಬಸಿರನ್ನು ಮನಹ್ಪೂರ್ತಿ ಆಸ್ವಾದಿಸುವ ಮೊದಲೇ, ಅವಧಿಗೂ ಮುನ್ನವೇ ಪುಟ್ಟ ಗಂಡು ಮಗುವೊಂದು ನನ್ನ ಮಡಿಲು ತುಂಬಿದೆ.

ಜೀವನ ನಿರಂತರ ಕಲಿಕೆ ಅನ್ನುವ ಮಾತು ಚೆನ್ನಾಗಿಯೇ ಅನುಭವಕ್ಕೆ ಬಂತು. ಅವಧಿಗೆ ಮುನ್ನ ಜನಿಸಿದ/ ಪ್ರತ್ಯೇಕ ವ್ಯವಸ್ಥೆ ಬೇಕಾದ ಮಕ್ಕಳಿಗೆಂದೇ ಇರುವ N-ICU ನಲ್ಲಿ ವಾರದ ಕಾಲ ಇಟ್ಟು, ೪ ದಿನ ಹುಟ್ಟಿದಾರಭ್ಯ ನನ್ನ ಮಗುವನ್ನ ನೋಡಲಾಗಲೇ ಇಲ್ಲ. ಮಕ್ಕಳು ದೂರವಾದಾಗಿನ ವೇದನೆಯನ್ನ ತಿಳಿಸಲೆಂದೇ ಆ ಸಂದರ್ಭ ಬಂತೇನೋ. ಒಟ್ಟಿನಲ್ಲಿ ೧೨ ದಿನ ಆಸ್ಪತ್ರೆಯಲ್ಲಿದ್ದು, ನಂತರ ಮನೆಗೆ ಬಂದಾಗಿನ ಸಮಾಧಾನವೇ ದೊಡ್ಡದು.

ಕೆಲವು ದಿನಗಳಂತೂ ಮಗುವನ್ನು ಪ್ರತಿ ಬಾರಿ ನೋಡಿದಾಗಲೂ ಕಣ್ತುಂಬಿ ಬರುತ್ತಿತ್ತು. ಅದೇ ವಾತ್ಸಲ್ಯದ ಸ್ಫುರಣೆಯಾ? ಎಷ್ಟು ಏಳಿಸಿದರೂ ಏಳದೆ, ಹೊಟ್ಟೆಗೆ ಸರಿಯಾಗಿ ಹಾಲು ಕುಡಿಯದೆ ಹಸಿದು ಮಲಗಿದ ಅವನನ್ನು ನೋಡಿದಾಗ ನಾನು ನನ್ನ ತಾಯಿಯನ್ನ ನಾ ಪುಟ್ಟವಳಿದ್ದಾಗ ಊಟ ಮಾಡದೇ ಕಾಡಿಸಿ, ಮಾತು ಕೇಳದೇ ಹೋದಾಗೆಲ್ಲ ಆಕೆಯ ಮನಸ್ಸಿಗೆ ಎಷ್ಟು ಕಷ್ಟವಾಗಿರಬಹುದೆಂಬ ಭಾವ...

ಜಗವೊಂದು ತೂಕವಾದರೆ ಮಗುವೊಂದು ತೂಕ ಅನ್ನುವ ಮಾತು ಈಗ ಅನುಭವವೇದ್ಯವಾಗಿದೆ. ಟೀವಿ, ಓದು, ಬರವಣಿಗೆ, ಮೊಬೈಲು, ಎಲ್ಲ ಹವ್ಯಾಸ- ಅಭ್ಯಾಸಗಳನ್ನೂ ಬಿಟ್ಟು ಮಗುವೇ ನನ್ನೆಲ್ಲ ಮನೋರಂಜನೆಯಾಗಿದೆ. ಮಲಗಿದಾಗ ಕನಸಿ ನಗುವಾಗಿನ ಸೊಗಸು, ಹಸಿದಾಗ ಗುಬ್ಬಿ ಮರಿಯಂತೆ ತೆಗೆಯುವ ಪುಟ್ಟ ಬಾಯಿ, ಅಳು, ಕೈಗೆತ್ತಿಕೊಂಡ ಕೂಡಲೇ ನಿನ್ನನ್ನೇ ನಾ ಕೇಳಿದ್ದು ಅನ್ನುವ ಹಾಗೆ ಸುಮ್ಮನಾಗುವ ಅವನ ಮೌನ, ನಿದ್ದೆಯಲ್ಲಿನ ಗಾಂಭೀರ್ಯ, ಎಲ್ಲವೂ ಮುದ್ದು ಮುದ್ದು.

ಸಿಸೇರಿಯನ್ ಆದ ನಂತರ ಹೆಚ್ಚು ಮಲಗಿಯೇ ಇರಬೇಕೆಂಬ ನಿಯಮ ಗಾಳಿಗೆ ತೂರಿ ಆಗಿದೆ. ತಿನ್ನುವ ಸಪ್ಪೆ ಊಟೋಪಚಾರದ ಕಡೆ ಗಮನವೇ ಇಲ್ಲ. ಅವನು ಎದ್ದಿರುವಾಗ ಅವನ ಅವಶ್ಯಕತೆಗಳ ಕಡೆ ಗಮನ, ಮಲಗಿರುವಾಗ ಮುದ್ದು ಮುಖ ನೋಡಿ ನಿದ್ದೆಯ ಭಾವಗಳನ್ನು ನೋಡುವ ಸಿರಿಯಲ್ಲೇ ಕಾಲ ಕಳೆಯುತ್ತಿದ್ದೇನೆ.

ಈ ಪರಿಪೂರ್ಣತೆ ಚಿರವಾಗಿರಲಿ ಅಂತ ಆಸೆಪಡುತ್ತಾ,

ಅಮ್ಮನಾದ,

ಸಂತಸದ ನಾನು.

Wednesday, July 3, 2013

ಹನಿ

ಕತ್ತಲಲ್ಲು ಪ್ರೀತಿ ಹೊಳಪ ಕಾಯ್ದುಕೊಂಡಿರೆ
ಚಿಲುಮೆ ಕಂಡ ತೆರದಿ ಬಾಹು ತಾನು ಬಿಡಿಸಿರೆ
ಮಿಂಚಿನ ನಗೆ ಸಂಚು ತೋಳ ಚಾಚಿ ಕಾದಿರೆ
ತಬ್ಬಿಕೊಳಲು ಹೋದರದುವೆ ಮಾಯವಾಗಿದೆ
ಇನಿಯನೆಂದುಕೊಳಲು ಬರಿಯ ದಿಂಬೆ ಸಿಕ್ಕಿದೆ!!!!!

Monday, July 1, 2013

ಗಾಳ

ಮಾಯದಾ ಮಾತಾಡಿ ಮರುಳಾಗಿ ಹದಗೊಳಲು ವಿಷವ ಉಣಿಸುವರೆಲ್ಲ
ವಿಷಯದಾ ಬಾಯಾರಿ ತಮ್ಮ ಚಪಲಕೆ ಗುರಿ ಯಾರಾದರೂ ಅಚ್ಚರಿಯಿಲ್ಲ
ಸತ್ಯವಾ ಸುಳ್ಳೆನಿಸಿ, ಮಾತಿನಾ ಮುಸುಗೆಳೆದು ಮತಿ ಮಂಕುಗವಿಯಿತಲ್ಲ;

ಅರಗಿನರಮನೆ ಗಿಣಿಗೆ ಪಂಜರವೆಂಬುದರಿವಾಗಿಯೇ ಇಲ್ಲ
ಪ್ರೀತಿಯಾ ದೂಡಿ ತನಗೇ ತಿಳಿವಿದೆಯೆಂದು ಬೀಗಿ ಹೊರಟಿತಲ್ಲ
ಸಂಗಾತಿಯಿಂದೆನ್ನ ದೂರವಿರಿಸಲು ಎಲ್ಲ ಕಪಟಯೆಂದರಿಯದಲ್ಲ;

ದೂರವಾಗಿಹ ಸಂಗಾತಿ ಎಂತು ದನಿಮಾಡಿದರೂ ಕೇಳಲೊಲ್ಲ;
ಇನಿದನಿಯ ನೆನೆವು ಕಾಡದೆ ಜೀವ ತತ್ತರಿಸಿ ಸೊರಗಲಿಲ್ಲ

ಬರುವಾಗ ಬರಲೆಂದು ಕೈಚೆಲ್ಲಿ ಸಂಗಾತಿ ಸಮಯ ದೂಡಿತಲ್ಲ..

Wednesday, June 26, 2013

ಕಲ್ದವಸಿ – ಡಾ. ಕೆ. ಏನ್. ಗಣೇಶಯ್ಯ

ಗಣೇಶಯ್ಯನವರ ಇತರೆ ಪುಸ್ತಕಗಳಾದ ‘ಶಾಲಭಂಜಿಕೆ’, ‘ಪದ್ಮಪಾಣಿ’, ‘ಕಪಿಲಿಪಿಸಾರ’, ‘ಚಿತಾದಂತ’ ಪುಸ್ತಕಗಳಂತೆ ಕಲ್ದವಸಿಯನ್ನೂ ಓದಿ ಮುಗಿಸುವ ವರೆಗೆ ಕೆಳಗಿಡಲಾಗಲಿಲ್ಲ. ಅವರ ಬರವಣಿಗೆಯ ವಸ್ತುವೇ ಅಂಥವು.

ರಾಜರು ಸಾಮಾನ್ಯವಾಗಿ ತಂದೆಯ ಹೆಸರಿನಿಂದ ಗುರುತಿಸಲ್ಪಟ್ಟರೆ ಶಾತವಾಹನರನ್ನು ಸೋಲಿಸಿ ಅಮರಾವತಿಯನ್ನಾಳಿದ ಹಿಂದೂ ಧರ್ಮೀಯರೂ ರಘುವಂಶೀಯರೂ ಆದ ಇಕ್ಷ್ವಾಕು ವಂಶಸ್ಥರು ಕೂಡ ಬೌದ್ಧ ರಾಜರಂತೆ (ಗೌತಮಿ ಪುತ್ರ ಯಜ್ಞ ಶತಕರ್ಣಿ, ಗೌತಮಿ ಪುತ್ರ ವಿಜಯ ಶತಕರ್ಣಿ..) ತಾಯಿಯ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಸ್ಥೂಲವಾಗಿ ಬೆಳಕು ಚೆಲ್ಲಲಾಗಿದೆ. ಮೊದಲ ಕಥೆ ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ಕಂಠಪಾಠ ಮಾಡಿ ಕಾಟಾಚಾರಕ್ಕೆ ಪಾಸಾದ ನಮಗೆ ಹೀಗೆ ಇತಿಹಾಸವನ್ನು ಕಥೆಯಾಗಿ ತೋರಿಸಿ ಕುತೂಹಲ ಕೆರಳಿಸಿದ್ದರೆ ಇನ್ನಷ್ಟು ಉತ್ಸುಕತೆಯಿಂದ ಓದುತ್ತಿದ್ದೆವೇನೋ ಎನ್ನಿಸದೆ ಇರಲಿಲ್ಲ.

ನಂತರದ ಕಥೆ ಹಿಂದುತ್ವದ ರಕ್ಷಣೆಯ ವಿಚಾರ ಹಾಗು ಉಗ್ರಗಾಮಿ ಸಂಘಟನೆಗಳ ವಿತ್ತ ವ್ಯವಹಾರಗಳ ಬಗ್ಗೆ ಒತ್ತು ಕೊಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಸ್ವಾರ್ಥಿ ರಾಜಕಾರಣಿಗಳ ಬೆಂಬಲಕ್ಕೆಂದೇ ಬದುಕೇನೊ ಅನ್ನುವಂತೆ ಅನ್ಯ ಕೋಮಿನವರ ಬಗೆಗೊಂದು ಮೃದು ಧೋರಣೆ ಬೆಳೆಸಿಕೊಂಡು ಇತಿಹಾಸದ ಸತ್ಯಗಳೆಡೆ ಜಾಣಕುರುಡರಾಗುವ ಬುದ್ಧಿಜೀವಿಗಳಿಗೆ ಅಂಕಿ-ಅಂಶ ಸಹಿತ ವೈಚಾರಿಕತೆಯ ವಿಮರ್ಶೆ ಇದೆ.

ನನ್ನ ತಂದೆ ಈ ಪುಸ್ತಕವನ್ನ ತಂದ ಕೂಡಲೇ ಹೆಸರಿನ ಅರ್ಥವೇ ಆಗಲಿಲ್ಲ. ಇದೊಂದು ೩ ಕಥೆಗಳ ಸಂಕಲನ. ಕಲ್ದವಸಿ ಅನ್ನೋ ಕಥೆ ಅವುಗಳಲ್ಲಿ ಕಡೆಯದು. ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಪ್ರೇರಣೆಯಾದ ಹಲವು ಸಂದರ್ಭಗಳಲ್ಲಿ ಒಂದರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನ್ನು ರಾಮಾಯಣದ ವೈಭವೀಕರಣದ ಪ್ರಸ್ತುತತೆಯ ಬಗ್ಗೆ ಚಿಂತನೆಗೆ ದೂಡಿಬಿಡುತ್ತಾರೆ. ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. ಇಲ್ಲಿ ಮನಮಂಥನಕ್ಕೆ ಅವಕಾಶವಿದೆ. ಮತ್ತೆ ಮತ್ತೆ ಕೇಳಿ, ಓದಿ, ಹೇಳಿದ ರಾಮಾಯಣದ ತಿರುಳು ಮತ್ತೊಮ್ಮೆ ಒರೆಗಲ್ಲಿಗೆಳೆಯಲ್ಪಡುತ್ತದೆ. ಕಾಲಗರ್ಭದಲ್ಲಿ ಹೂತು ಹೋದ ವೈಚಾರಿಕತೆ ತಾನೇ ಮೈವೆತ್ತು ಬಂದಂತಿದೆ.

ವಿವಿಧ ವಿಚಾರಗಳ ಬಗ್ಗೆ ವಿಶದವಾಗಿ ತಿಳಿಸುತ್ತಾ ತೌಲನಿಕತೆಯನ್ನು ಬೆಳೆಸಿಕೊಳ್ಳುವಲ್ಲಿ ಈ ಪುಸ್ತಕ ಸಹಾಯಕವಾಗಿದೆ. ಪ್ರಾಧ್ಯಾಪಕರಾಗಿದ್ದುಕೊಂಡೂ ಸಂಶೋಧನಾತ್ಮಕ ಮನೋಭಾವವಿರುವ ಲೇಖಕರು ಮೆಚ್ಚುಗೆಯಾಗದೆ ಇರಲು ಕಷ್ಟಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ಬೋಧಕರಾದ ಗಣೇಶಯ್ಯನವರ ಪ್ರಯತ್ನ ಈ ನಿಟ್ಟಿನಲ್ಲಿ ಶ್ಲಾಘನೀಯ. 

Monday, June 24, 2013

Parle G Cake

My colleague taught me this wonderful recipe.  It’s cheap and super easy to prepare. Needs no oven even. Have prepared it twice with improved efficiency and had never dreamt that my baking will turn good at first and guess what, It did!!!
Next time when I bake, I will add dry fruits and nuts to the batter to make it a fruit and nut cake for sure J

Needed:

Parle g biscuits – about 40 pcs
Sugar – 4-5 tbsp
Cacao powder – 6 - 7 tsp
Custard powder – 3-4 tsp
Eno powder – lemon flavor, 1 sachet

Method:

Gry grind biscuits and sugar. When it turns to a fine powder, add cacao powder, custard and mixie it further to blend everything.

Take this prepared powder, add required milk to get a cake batter consistency.
Meanwhile, get ready to bake.

In a cooker, add an inch of water. Place an empty bowl upside down. In another bowl/ designer bowl for cake-making, smear butter or ghee all over inside and sprinkle a little maida over it. Tap off excess maida out of the vessel. Do not touch it with hands or do not use fingers.

Take prepared batter and add eno powder to it and mix well. Immediately pour off the mixture into baking vessel. Place the vessel in cooker over the upside down empty vessel and close the lid, keep cooker on medium flame without whistle/ pressure for 25-30 minutes.

Bake check- inserted toothpick should come out clean. Else, cook it further for 5 more minutes.

When done, take out baking vessel, define the edges with a knife, flip the vessel on a plate, tap it with a skillet to get the cake intact.

Honey Aloo

This recipe was picked from a cookery show and modified according to our preferences…
Sure it has loads of calories since it is fried but is tantalizing to taste buds and can be prepared as a rare evening treat or as a starter.


Needed:
Potatoes – 4 big, washed thoroughly and cut thickly as shown in pics. Slices should be thicker than when they are sliced to prepare wedges.
Oil – to deep fry and about 2 tsp to sauté the fried pieces later on.
Garlic – sliced finely and crushed lightly
Required salt
Chilly flakes – 1 tsp
Chilly powder – 1 ½ tsp
Honey – 2 tsp



Method:
Heat oil in a pan. In medium flame, fry potatoes in batches till golden brown. Every batch will take about 5-6 minutes. Keep aside.

Heat about 2 tsp oil in a wide bottomed pan. Sauté garlic for a minute, add chilly flakes, chilly powder and fried potatoes. Put salt and Mix well with a skillet. Add honey, mix well and serve hot.

Hot n Sour Chinese Soup

It’s no herculean task. I was always happy with knor hot n sour veg soup and had never even thought of giving it a try. After some research, I got to know that its much more easier and cheaper when prepared at home. Filled with nutrition, it turned out to be a first time hit when done!

Needed: (Serves 2)

Finely chopped:
Onions - 1 tbsp, 
Spring Onions- 2 tsp,
Garlic - 3 tsp,
Beans - 1 tbsp,
Capsicum - 3 tsp,
Carrot - 2 tsp,
Green chilly – 1-2 tsp (according to its pungency),
Cabbage - 1 tbsp,
Leeks (optional, I did not use) - 2 tsp ,
Coriander (only if you have liking towards coriander flavor, otherwise, skip it) - ½ tsp.

Chilly powder - ½ tsp
Pepper powder- ½ tsp
Sugar - ¼ tsp
Soy sauce/ All in one Chinese sauce - 1 tbsp
Cooking oil (I used Olive oil) - about 2 tsp
Water - about 600 ml
Corn flour - 3 tsp mixed well without lumps in cold water
Salt

Method:

Heat oil in a pan and add garlic, sauté for a minute. Then add onions, sauté for a minute. Add all other veggies and sauté for 3 minutes. Add sauce and required salt. After 1-2 minutes, add water, chilly powder, pepper powder, sugar and bring to boil. Finally add corn flour mixture after simmering the boiling soup. Leave for 2 minutes and the hot n sour soup is ready to serve with a yum Chinese flavor rising aromatically!!

Tomato Carrot Soup

Needed:
2 Tomatoes
1 big Onion
1/2 Carrot
2" Piece Beetroot
1.5" Cinnamon
1 Cardamom
2 Cloves
5 Pepper
2 Garlic cloves

Pressure cook above mentioned ingredients till veggies are soft (2 whistles on medium flame)

1.5-2 Tsp Cornflour mixed well in a little cool water
2 Tsp Sugar
Required Salt
1/2 Tsp Chilly Powder

Strain the cooked veggies and add sugar, salt and chilly powder. After 2 minutes of boiling, add cornflour paste and cook for further 2 minutes and serve hot.

Thursday, May 16, 2013

ಬೆಳೆದ ಮೇಲೆಲ್ಲಾ ಕಹಿಯೇ!

ಅದೇ ಚೆಂದಗಿತ್ತು - ಅರ್ಥವಾಗದ ವಯಸು 
ಮಾತು ಮಾತಿಗೂ ಕಹಿಯೇಳದ ಮುನಿಸು 
ಯಾರೇನೇ  ಅಂದರು ಸರಿಯೆ 
ಮತ್ತೆ ಅಲ್ಲೇ ಮುಗುಳುನಗುವಂತಿರೆ 
ಯಾರೇನೇ ದ್ವೇಷಿಸಿದರು ಸರಿಯೆ 
ಮತ್ತೆ ಅವರನೇ ಅರಸುತ ಪ್ರೀತಿ ಸುರಿಸಿರೆ 

ಎಲ್ಲ ಬೇಸರ ಆಟ ಮುಗಿಯುವ ತನಕ;
ದಿನವು ಕಳೆಯುವ ತನಕ;
ಮರುದಿನದಿ ಮತ್ತೆ ಕೂಡಿಯಾಡುವ ತವಕ 
ಹಂಗಿಲ್ಲ; ಮಾತಿನಾ-ಮೌನದಾ ಛಡಿಯೇಟಿಲ್ಲ 
ಮಾತಿಗಿಂತ ಬರಿದುರಿಯ ಮೌನ ಲೇಸೇನಲ್ಲ 
ಮತ್ತೆ ಮತ್ತೆ ನೆನೆದು ಕೊರಗುವ ತಾವೇ ಇಲ್ಲ 

ಬೆಳೆದುಬಿಟ್ಟೆವು ನಾವು ನಮ್ಮ ಒಳಗಿನ ಮಗುವು 
ಎಂದೋ ಸತ್ತು ಗರ್ಭದೆ ಹೂತು ಹೋಗಿರೆ
ಬರಿ ಕೆದಕಿ ನೋಡುವ ಚಾಳಿಯೆಮಗೆ 
ಇತರರಂದಿಂದ್ದೆಲ್ಲ ಹೌದೌದು.. ತಮಗೇ !
ಬೆದಕುವೆವು ನಾವು ಕಾಲವೂ ಯಾವುದನ್ನೋ 
ಮರೆತೇವೇನು ನಾವು ಅನ್ವರ್ಥ ಕ್ಷಣಗಳನ್ನೂ...  

ಮುಗಿಲು ನೆರೆತರೆ ಅದುವ ಬಿಡಿ ನಮ್ಮ 
ಕೂದಲೇ ನೆರೆತು ತಲೆಯುರುಳುವ ಸರಿಗೆ;
ಬೈತಿಟ್ಟೇ ಇಡುವೆವು ಅನವರತ ಕಳೆದದ್ದನ್ನ;
ನಡೆಯದಿದ್ದ ಅತಿರಂಜಿತ ಕಲ್ಪಿತವನ್ನೂ!!
ಕಲ್ಪಿತಕ್ಕೆ ಬಣ್ಣ ಬೆರೆಸಿ ಕೊರಗಲು ಮರೆತರೆ ಹಾ!!!
ಭುವಿಯೊಳು ಬೆಳೆದೆವೆಂಬುದಕ್ಕರ್ಥವಾದರೂ ಉಂಟೇ!!!

Thursday, April 18, 2013

ಮಾಯಾ ಛಾಯೆ

ಒಡಲಾಳದಲೊಂದು ಪಾತ್ರ 
ಒಡಂಬಡಿಕೆಗೊಂದು ಪಾತ್ರ ;
ಬೀಳಲಾರದ ಜಾಗೆಯೊಳು ಮತ್ತೊಂದು ಪಾತ್ರ 
ಬಿದ್ದ ನಂತರ ಮೇಲೇಳಲಿನ್ನೊಂದು ಪಾತ್ರ ;

ದಣಿವಾರಿಕೆಗೊಂದು, ಆರಿದಮೇಲಿನ್ನೊಂದು 
ಏತನ್ಮಧ್ಯೆ ಸುಮ್ಮಗಾದಾಗ ಕಮ್ಮಗಾದೊಂದು ಪಾತ್ರ ;
ಮುಖವಾಡದ ಜೀವನ ಬೆರೆಸಿದೆ 
ವ್ಯಕ್ತಿತ್ವದೊಳು ಬೆರಕೆಯ ಸತ್ವ 

ಪಾತ್ರ ಮಾಡದೆ ಬದುಕಿಲ್ಲ 
ನಾಟಕೀಯತೆ ಇಲ್ಲದ ನಿಜಾಂಶವಿಲ್ಲ ;
ಕಂಡವರಿಗೊಂದು ಬಾಳು,
ಒಳಗಡೆ ಇದ್ದರಿರಲಿ ಕೋಟಿ ಬೀಳು ;

ತೋರಗೊಡದೆ ಹೋದರಾಯಿತು 
ಸುಳ್ಳ ಸತ್ಯವೆಂ ಉಳಿಸಿ ಕಡೆದರಾಯಿತು 
ನಂಬಿದವರು ಪಾತ್ರವೆನ್ನರು- ನಿಜವ ತಿಳಿದವರು ಸತ್ಯವೆನ್ನರು
ಕಣ್ಣ ಬಿಗಿದಪ್ಪಿ ಮುಚ್ಚಿ ಇದೇ ನಿಜವೆಂಬರು 
ಗಾರುಡಿಗರಾಟಕ್ಕೆ ನಿತ್ಯ ಬಲಿಯಾದಾರು !!!

Thursday, March 21, 2013

ಪ್ಯಾಪಿಲಾನ್ - ೧,೨, - ಪ್ರದೀಪ ಕೆಂಜಿಗೆ, ಕೆ ಪಿ ಪೂರ್ಣಚಂದ್ರ ತೇಜಸ್ವಿ (ಮೂಲ- ಹೆನ್ರಿ ಛಾರೇರೆ)


ಹೆನ್ರಿ ಛಾರೇರೆ 
MBA ಓದುವಾಗ ನನ್ನ ಕಾಲೇಜಿನಲ್ಲಿ ಪುಸ್ತಕಗಳ ಒಂದು ಸ್ಟಾಲ್ ಇಟ್ಟಿದ್ರು. ಆಗ ಸ್ನೇಹಿತ ಅಕ್ಷಯನ ಜೊತೆ ಕೆಲವು ಬುಕ್ಸ್ ಕೊಂಡಿದ್ದೆ. ಪ್ಯಾಪಿಲಾನ್ ಪುಸ್ತಕ ಕೊಳ್ಳೋವಾಗ ಅವನಂದ, ನಂಗೂ ಈ ಪುಸ್ತಕ ಬೇಕು, ನೀನು ಪ್ಯಾಪಿಲಾನ್ ಭಾಗ ೧ ತಗೋ, ನಾನು ಭಾಗ ೨ ತಗೋತೀನಿ. ಖರ್ಚು ಕಮ್ಮಿ, ಅದಲು ಬದಲು ಮಾಡಿಕೊಂಡು ಓದೋಣ ಅಂದ. ಅಲ್ಲಿಂದ ಶುರುವಾಯ್ತು ನಮ್ಮ ಕೋಳಿ ಜಗಳ. ಪುಸ್ತಕವನ್ನೇನೋ ಕೊಂಡು ಆಯ್ತು. ಮೊದಲು ಓದಿ ಎರಡೂ ಪುಸ್ತಕ ನಿಂಗೆ ಓದೋಕೆ ಕೊಡ್ತೀನಿ ಅಂದ ಅಕ್ಷಯ ವರ್ಷಗಟ್ಟಲೆ ಮುಗಿದ್ರೂ ಕೊಡ್ಲೇ ಇಲ್ಲ!! ನಾನಂತೂ ಪೀಡಿಸೋಕೆ ಶುರುವಿಟ್ಟೆ. ಪುಸ್ತಕ ಕೊಡು ಅಂತ ಒಂದೇ ಗೋಳು ನಂದು. ಅಕ್ಷಯ ಏನು ಮಾಡಿದ್ರು ಕೊಡಲೊಲ್ಲ. ಕೊನೆಗೆ ಸಪ್ನಾ ಬುಕ್ ನಿಂದ ಆರ್ಡರ್ ಹಾಕಿ ತರಿಸಿ ಕೊಟ್ಟನೆ ವಿನಃ, ಅದೇ ಪುಸ್ತಕಗಳನ್ನ ವಾಪಸ್ ಮಾಡ್ಲಿಲ್ಲ.

ಓದಿದ ನಂತರವೇ ತಿಳಿದದ್ದು, ಅವನು ಆ ಪುಸ್ತಕಗಳಿಗೆ ಜೋತು ಬಿದ್ದದ್ದು ಯಾಕೆ ಅಂತ. ಇಂಥಾ ರೋಚಕ ಆತ್ಮಕಥೆಯನ್ನ ನಾನೇ ಮೊದಲು ಓದಿದ್ದರೂ ಅವನಿಗೆ ಹಿಂದಿರುಗಿಸ್ತಿರಲಿಲ್ಲ

ಒಬ್ಬ ಖೈದಿ ಕಾರಾಗೃಹದಿಂದ ಎಷ್ಟು ಬಾರಿ ಪಲಾಯನಗಯ್ಯಲು ಸಾಧ್ಯ? ಕಪ್ಪು ಜಗತ್ತಿಗೆ ಸೇರಿದ್ದರೂ ನಮ್ಮ ಕಥಾನಾಯಕ ಹೆನ್ರಿ (ಉರ್ಫ್ ಪ್ಯಾಪಿಲಾನ್)ಗೆ ಸುಳ್ಳು ಆಪಾದನೆಯ ಮೇಲೆ ಸಿಕ್ಕಿ ಹಾಕಿಸಿ ಜೀವಾವಧಿಯಂಥಾ ಕಠೋರ ಶಿಕ್ಷೆಗೆ ತಳ್ಳಿದ ಫ್ರಾನ್ಸ್ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಕುದಿ ಸಿಕ್ಕಿಹಾಕಿಕೊಂಡಂತೆಲ್ಲ ಸ್ವಾತಂತ್ಯ ಬಯಸುವ ಪಲಾಯನದೆಡೆಗೆ ಅವನನ್ನು ಪ್ರೇರೇಪಿಸುತ್ತದೆ. ನರಕ ಸದೃಶ ಜೈಲುಗಳ ವ್ಯವಸ್ಥೆ ಆತನ ಆತಸ್ಥೈರ್ಯ ಕಲಕುವ ಬದಲು ಹೆಚ್ಚು ವ್ಯವಸ್ಥಿತಗೊಳಿಸುತ್ತದೆ. ಒಬ್ಬರಾದಂತೆ ಒಬ್ಬ ಸ್ನೇಹಿತರನ್ನು ಪಲಾಯನದ ಮಜಲುಗಳಲ್ಲಿ ಕಳೆದುಕೊಳ್ಳುವ ಹೆನ್ರಿ ಎರಡು ಬಾರಿ ಏಕಾಂತ ಸೆರೆವಾಸಕ್ಕೆ ತಳ್ಳಲ್ಪಟ್ಟರೂ ಎದೆಗುಂದದೇ ಇದ್ದು, ಆತ್ಮಹತ್ಯೆಯಂಥಾ ಯೋಚನೆ ಆವರಿಸಿದಂತೆಲ್ಲ ಹತ್ತಿಕ್ಕುತ್ತ ಹೋಗುತ್ತಾನೆ. 

ಸೆರೆಮನೆಗಳಲ್ಲಿನ ಅನಾಚಾರ, ಅಲ್ಲಿನ ವಾರ್ಡರ್, ಇತರೆ ಅಧಿಕಾರಿಗಳ ದುರುಳತನ ಮನಕಲಕುವಂತಿದೆ. ಪುಂಡಾಟಗಳಾಗಿ ಕೊಲೆಗಳಾದರೆ, ತನಿಖೆ ನಡೆಯುತ್ತಿದ್ದುದೂ ಅಷ್ಟಕ್ಕಷ್ಟೇ. ಶವಸಂಸ್ಕಾರಕ್ಕೆಂದೇ ಪ್ರತ್ಯೇಕ ಜಾಗಗಳಿಲ್ಲದೆ ಶವವನ್ನು ಗೋಣಿಯೊಳಗೆ ತುಂಬಿ ಸಮುದ್ರದ ಶಾರ್ಕ್ ಗಳ ಮಧ್ಯೆ ಎಸೆಯಲಾಗುತ್ತಿತ್ತು. ಏಕಾಂತ ಸೇರೆವಾಸವಂತೂ ಅತೀ ಕೀಳು ವ್ಯವಹಾರ. ಪುಟ್ಟದಾದ ಭಾಗಶಃ ಕತ್ತಲ ಕೋಣೆಯೊಳಗೆ ದೂಡಿದರೆ ಮುಗಿಯಿತು; ಅಲ್ಲೇ ವರ್ಷಗಟ್ಟಲೆ ಬಂಧಿ. ಯಾರೊಟ್ಟಿಗೂ ಮಾತಾಡುವ ಹಾಗೇ ಇಲ್ಲ. ಚಿಕ್ಕ ಕಿಂಡಿಯೊಂದರಿಂದ ಆಹಾರದ ಸರಬರಾಜು, 2 ವಾರಕ್ಕೊಮ್ಮೆ ಕಿಂಡಿಯಿಂದ ಮುಖ ಹಾಕಿ ಅಧಿಕಾರಿಗಳ ಸಮ್ಮುಖದಲ್ಲಿ ಕ್ಷೌರ. ಅಪರೂಪಕ್ಕೊಮ್ಮೆ ಸಾಗರದಲ್ಲಿ ಸ್ನಾನ. ದಿನವೂ ಬಹಿರ್ದೆಸೆಗೆ ಹೋಗಲು ಒಂದು ಬಕೆಟ್ಟು, ಮೇಲೆ ತೂತಿರುವ ಹಲಗೆ. ಉಪಯೋಗಿಸಿದ್ದಾದ ಮೇಲೆ ಬಕೆಟ್ ಹೊರದೂಡಿ ಸುಮ್ಮನಾಗಬೇಕು. ಚಿಕ್ಕ ಪುಟ್ಟ ಖಾಯಿಲೆ ಬಂದು ವೈದ್ಯರು ಭೇಟಿಯಿದ್ದರೆ, ತೂತಿನಿಂದಲೇ ಕೈ-ಕಾಲು ಆಚೆ ಹಿಡಿದು ಪರೀಕ್ಷೆ. ಊಟವಂತೂ ಕಾಯಿಲೆಗಳಿಂದ ತಡೆಯುವಷ್ಟು ಪುಷ್ಟವಾದುದಲ್ಲ. ಏಕಾಂತ ತಡೆಯಲಾಗದೆ ಮಾನಸಿಕ ಅಸ್ವಸ್ಥಗೊಂಡು, ಆತ್ಮಹತ್ಯೆಗಯ್ಯುವವರೇ ಎಷ್ಟೋ ಜನ. ಫ್ರಾನ್ಸ್ ನ ಅಂದಿನ ಅತ್ಯಂತ ಕೀಳು ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಕನಿಕರ ಬರುವಂತಿದೆ. ಆ ಮಟ್ಟಿಗೆ ಜಗತ್ತಿನ ಕಣ್ತೆರೆಸಿದ ಬರವಣಿಗೆ ಪ್ಯಾಪಿಲಾನ್ ನದ್ದು. 

ಪಲಾಯನದಲ್ಲಿ ಎಷ್ಟೋ ಪೌರರು, ಅಧಿಕಾರಿ ವರ್ಗದವರು, ಸ್ನೇಹಿತರು, ಖೈದಿಗಳು, ಅಪರಿಚಿತರು ಸಹಾಯ ಮಾಡುತ್ತಾರೆ.

ಪ್ಯಾಪಿಲಾನ್ ಬಳಸಿದ ಪಲಾಯನ ಮಾರ್ಗ 
ಪಲಾಯನಗಯ್ಯುತ್ತಾ ಪಿಜನ್ ಐಲ್ಯಾಂಡ್ ತಲುಪುವ ಹೆನ್ರಿ ಮತ್ತವನ ಸ್ನೇಹಿತರಿಗೆ ಅಲ್ಲಿನ ಕುಷ್ಟ ರೋಗ ಪೀಡಿತ ಖೈದಿಗಳಿಂದ ಸಿಗುವ ಸಹಾಯ ಅವಿಸ್ಮರಣೀಯ. ತಾವೇ ಸಾವನ್ನು ಎದುರು ನೋಡುತ್ತಿದ್ದರೂ ಇವರ ಮೇಲಿನ ಕಾಳಜಿಯಿಂದ ಇವರು ಇದ್ದಷ್ಟು ದಿನ ಏನೂ ಕೊರತೆಯಾಗದಂತೆ, ತಮ್ಮ ಜಾಡ್ಯ ಇವರಿಗೆ ತಾಕದಂತೆ ಆಹಾರ, ಬಟ್ಟೆ, ಹೊದಿಕೆ ಎಲ್ಲವನ್ನೂ ಶುದ್ಧಿ ಮಾಡಿ ಮುಟ್ಟಗೊಟ್ಟು, ಹಣವನ್ನೂ ಒದಗಿಸಿ ಕೊಡುತ್ತಾರೆ. 

ಅಲ್ಲಿಂದ ಕೊಲಂಬಿಯಾದಲ್ಲಿ ಮತ್ತೆ ಸೆರೆಸಿಕ್ಕು ಅಲ್ಲಿಂದ ತಪ್ಪಿಸಿಕೊಂಡು ಹೊರಡುವ ಹೆನ್ರಿ, ಗೊಜಿರ ಬುಡಕಟ್ಟಿನ ಬಳಿ ನೆಲೆಯಾಗುತ್ತಾನೆ. ಅಲ್ಲಿನ ಜನ ಇವನನ್ನು ತಮ್ಮೊಳಗೊಬ್ಬನೆಂದು ಸ್ವೀಕರಿಸಿದರೂ ವರ್ಷದವರೆಗೂ ನಿಲ್ಲದೆ ಹೆನ್ರಿಯ ಸೇಡಿನ ಕಿಚ್ಚು ಮತ್ತೆ ಆತನನ್ನು ಸೆರೆಗೆ ದೂಡುತ್ತದೆ. 

ಬಾರಂಕ್ವಿಲಾದಲ್ಲಿ ಬಂದಿಯಾಗುವ ಈತನ 3 ಪಲಾಯನಗಳು ವಿಫಲವಾಗಿ ಮುಂದೆ ರೋಯಲ್ ದ್ವೀಪದಲ್ಲಿಯೂ ಎಲ್ಲವೂ ಹೊಂದಿ ಇನ್ನೇನು ಓಡಿಹೋಗಬಲ್ಲೆ ಅನ್ನಿಸಿದಾಗ 2 ಬಾರಿ ಪ್ರಯತ್ನ ವಿಫಲವಾಗುತ್ತದೆ. ಡೆವಿಲ್ಸ್ ದ್ವೀಪದ ಸುತ್ತ ಶಾರ್ಕುಗಳು ಕಿಕ್ಕಿರಿದಿದ್ದರೂ ಲೆಕ್ಕಿಸದೆ ಕೊನೆಗೆ ಸಮುದ್ರದಲ್ಲಿ ತೇಲುವ ತೆಂಗಿನ ಮೂಟೆಗಳನ್ನು ಉಪಯೋಗಿಸಿ ಕುರೋವು ದ್ವೀಪ ತಲುಪಿಯೇ ಬಿಡುತ್ತಾನೆ. ಅಲ್ಲಿಂದ ಆತನ ಬದುಕು ಇಂಗ್ಲೆಂಡಿನ ಜಾರ್ಜ್ ಟೌನ್ ಗೆ ಕರೆದೊಯ್ಯುತ್ತದೆ. ಕೊಟ್ಟಕೊನೆಯಲ್ಲಿ, ಅಲ್ಲಿಯೂ ನೆಮ್ಮದಿ ಕಾಣದ ಚಿಟ್ಟೆಯಂಥಾ ಪ್ಯಾಪಿಲಾನ್ ವೆನಿಸುವೆಲಾದಲ್ಲಿ ನೆಲೆಯಾಗುತ್ತಾನೆ.

1973 ರಲ್ಲಿ ಈ ಆತ್ಮಕಥೆಯನ್ನು ಆಧರಿತ ಚಲನಚಿತ್ರ ಸಹ ಬಂದಿದೆ. ಕಥೆಯೇ ಪುಸ್ತಕಕ್ಕೊಂದು ಅಸಾಧ್ಯ ಓಘ ಕೊಡುತ್ತದೆ. ಪುಟದ ಪ್ರತಿ ತಿರುವಿನಲ್ಲೂ ಕಥೆಯ ತಿರುವುಗಳೇ!! 

ಕನ್ನಡದಲ್ಲಿ ಓದಿದಂತೆ ವಿಚಾರಗಳು ಇಂಗ್ಲಿಷ್ ಪುಸ್ತಕಗಳಲ್ಲಿ ಅಷ್ಟು ರುಚಿಸುವುದಿಲ್ಲ. ಇಂಗ್ಲೀಶ್ ಓದುವಾಗ ಸಾಮಾನ್ಯವಾಗಿ ಬರೀ ಕಾದಂಬರಿ ಆರಿಸಿಕೊಳ್ಳುವ ನಾನು ಇನ್ನು ಮುಂದೆ ಕಥೆ-ಕಾದಂಬರಿಯೇ ಆದರೂ ವಿಚಾರಾತ್ಮಕ ಪುಸ್ತಕಗಳ ಕಡೆ ವಾಲಬೇಕೆಂದು ನಿರ್ಧರಿಸಿದ್ದೇನೆ. ಬರಿಯ ಇಂಗ್ಲಿಷ್ ಭಾಷಾಜ್ಞಾನಕ್ಕಷ್ಟೇ ಅಲ್ಲದೆ ಸಾಮಾನ್ಯಜ್ಞಾನಕ್ಕಾಗಿಯೂ ಓದಬೇಕೆಂದುಕೊಂಡಿದ್ದೇನೆ.... ಪ್ಯಾಪಿಲಾನ್ ಗೆ, ಅದನ್ನು ಕೊಡಿಸಿದ ನನ್ನ ಸ್ನೇಹಿತನಿಗೆ ಧನ್ಯವಾದ...

Monday, March 18, 2013

ಅಲೆಮಾರಿಯ ಅಂಡಮಾನ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ


ವಂಡೂರಿನ ಹವಳದ ದಂಡೆಗಳು ಅಂತ ನಮಗೆ ಬಹುಶಃ 10 ನೇ ತರಗತಿಯಲ್ಲ್ಲಿ ಪಾಠ ಇತ್ತು.. 

ಅಲೆಮಾರಿಯ ಅಂಡಮಾನ್ ಓದುತ್ತ ಹೋದಂತೆ ಅದರ ಒಂದು ಭಾಗವಾದ "ವಂಡೂರಿನ ಹವಳದ ದಂಡೆಗಳು" ನನ್ನ ಸ್ಮೃತಿಯಲ್ಲೂ ಅನಾವರಣಗೊಳ್ಳುತ್ತಾ ಹೋಯ್ತು .. ನನ್ನ ಕನ್ನಡ ಪ್ರೇಮದ ಬಗ್ಗೆ ಅಭಿಮಾನವೂ ಹೆಚ್ಚಾಯ್ತೆನ್ನಿ 

Barrier Reef
Fringed coral
ಅಂಡಮಾನ್ ಪ್ರದೇಶವನ್ನು ಬರಿಯ ಪ್ರವಾಸಿ ತಾಣವಾಗಿ ನೋಡದೆ ವಿಸ್ಮಯಗಳ ಪುಟ್ಟದೊಂದು ಹಿಡಿ ಜಗತ್ತಿನ ಹಾಗೆ ಲೇಖಕರು ವಿಸ್ತರಿಸುತ್ತಾ ಹೋಗುತ್ತಾರೆ. ಅಲ್ಲಿನ ಕಾರ್ಬೆನ್ಸ್ ಕೋವ್, ಜಾಲಿ ಬೌಯ್  , ರಾಸ್ಸ್ ದ್ವೀಪಗಳ ಬಗ್ಗೆ ಮಾತ್ರ ಹೇಳದೆ, ಅಲ್ಲಿನ ಜೀವ ವೈವಿಧ್ಯದ ಬಗ್ಗೆ ಬೆಳಕು ಚೆಲ್ಲುತ್ತಾ ಹೋಗುತ್ತಾರೆ. ಕಂಡುಬಂದ ಏಂಜಲ್ ಮೀನು, ಗುಮ್ಮಾಡಲು ಹಕ್ಕಿ (ಇಂಪೀರಿಯಲ್ ಪಿಜನ್), ಗಾಳಕ್ಕೆ ಸಿಕ್ಕದೆ ಪರಾರಿಯಾದ ಸಮುದ್ರದ ಬಣ್ಣವನ್ನೇ ಘನೀಭವಿಸಿಕೊಂಡಂಥಹ ತಿಳಿ ನೀಲಿ ಬಣ್ಣದ ದೊಡ್ಡ ಮೀನು, ಕಂದುಬಣ್ಣದ ಆಕ್ಟೋಪಸ್, ಇವೆಲ್ಲದರ ಬಗ್ಗೆ ಬರೆಯುತ್ತಾರೆ. 

ಗಾಜಿನಷ್ಟು ತಿಳಿ ನೀರಿನ ಅಂಡಮಾನ್ ತೀರ ಪ್ರದೇಶಕ್ಕೆ ಕಾರಣ ಹವಳದ ದಂಡೆಗಳು. 
ಕೋರಲ್ ರೀಫ್ ಗಳ ಬಗ್ಗೆ ಡಾರ್ವಿನ್ ಸಿದ್ಧಾಂತ
(Darwins's Theory about formation of Coral reefs and atoll)

ಸಮುದ್ರ 100ಅಡಿಗಳಿಗಿಂತ ಆಳವಾದ ಕಡೆ ಬೆಳೆಯಲಾರದ, ಸಮುದ್ರದಿಂದ ಸದಾ ತೊಯ್ದ ಎಡೆಗಳಲ್ಲಿ ಮಾತ್ರ ವೃದ್ಧಿಸುವ ಈ ಹವಳದ ದಂಡೆಗಳಿಗೆ ಸೂರ್ಯನ ಬೆಳಕು ಬೇಕೇ ಬೇಕು. ಹವಳದ ರಚೆನೆಯ ಮತ್ತೊಂದು ಸ್ವರೂಪವಾದ ಅಟಾಲ್ ಹಾಗು ಬ್ಯಾರಿಯರ್ ರೀಫ್ ಗಳು ಸಾಗರ ಮೇಲ್ಮೆಯ ವಿಸ್ಮಯಗಳು. ನೋಡಲು ಮನೋಹಕವೆಂದ ಕೂಡಲೇ ಎಲ್ಲ ಹವಳಗಳ ರಚನೆಯೂ ಒಂದೇ ಬಗೆಯದ್ದಿರುವುದಿಲ್ಲ. ಗಾಜಿನಷ್ಟು ಪ್ರಬಲ ಹವಳಗಳು ಕಾಲಿಟ್ಟಲ್ಲಿ ಮೂಳೆಯವರೆಗೆ ಸಿಗಿದು ಹಾಕಬಲ್ಲಷ್ಟು ಅಪಾಯಕಾರಿ ಸಹ. 
ಇಟ್ಟ ಕಡೆ ಕಾಲಿನ ಮಾಂಸವನ್ನೇ ಹಿಸಿದು ಹಾಕಬಲ್ಲ ಸ್ಪೈನಿ ಕೊರಲ್
(Spiny Coral)

ತೇಜಸ್ವಿಯವರು ವಿವರಿಸಿರುವ ಹವಳದ ಬಗೆಗಳ ಚಿತ್ರಗಳನ್ನು ಇಲ್ಲಿ ಹುಡುಕಿ ಕೊಡುವ ಪ್ರಯತ್ನ ಮಾಡಿದ್ದೇನೆ. 


ಕೈಗೆ ಸಿಗದೇ, ದಡ ಹತ್ತದೆ, ಕಡೆಗೆ ಕಣ್ಣಿಗೂ ಬೀಳದ ದೈತ್ಯ ಶಕ್ತಿಯ ಅಂಡಮಾನಿನ ಮೀನುಗಳು ತಮ್ಮ ಮೀನು ಹಿಡಿವ ರೀಲುಗಳನ್ನು ಎಸೆದಂತೆಲ್ಲ ತುಂಡು ಮಾಡಿ ಹೋದ ಸ್ವಾರಸ್ಯ ವಿವರವಾಗಿ ತಿಳಿಯಬೇಕೆಂದರೆ ನೀವು ಅಲೆಮಾರಿಯ ಅಂಡಮಾನ್ ಓದಿ ನೋಡಬೇಕು.