Tuesday, March 15, 2011

ಸೋನೆ ಮಳೆ

ಧರೆಯೆದೆಯ ಬಯಲಲಿ
ಕಾರ್ಮುಗಿಲು ಕರಗಿ ಸುರಿದು,
ಕಾತರಿದ ಭುವಿಯ
ನವಿರಾಗಿ ಸವರಿ,
ಹನಿಯು ಇಳಿಯುತಿಳೆಗೆ-
ಹರಡಿ ನಲಿವ ಮಂದಹಾಸ-
ಎಲ್ಲೆಡೆಯೂ ಪಸರಿತೋ..

ಅದೆಂತು ಜೀವಸಂಕುಲ
ಹಿಡಿದಿಟ್ಟ ಹನಿಗಳವೋ;
ಅದೆಂತು ರಮಣೀಯ
ಜಲಪಾತವಾಗಿಸಿದ ಹನಿಗಳವೋ;
ಭೂಮಿಯಿಂದ ಇಣುಕುವ
ಸಸ್ಯರಾಶಿಯ ಸೊಬಗು
ಅದಾರ ಸ್ವಂತವೋ..

ನಿಚ್ಚಳ ಬಾನನರಸುತ
ನಿಂತ ಸಸ್ಯವೆಂತು ಬಲ್ಲುದೋ
ಜನ್ಮವಿತ್ತ ಕಾರ್ಮುಗಿಲ?
ಬಾಷ್ಪವಿತ್ತ ಮೇಘವ?
ಮೆದುವಾದ ಧರೆಯ?

No comments: