Showing posts with label ಪುಸ್ತಕ ವಿಮರ್ಶೆ. Show all posts
Showing posts with label ಪುಸ್ತಕ ವಿಮರ್ಶೆ. Show all posts

Tuesday, May 31, 2022

ಕುಡಿಯರ ಕೂಸು - ಶಿವರಾಮ ಕಾರಂತ

ಕುಡಿಯರ ಕೂಸು
ಮಲೆಗಳಲ್ಲಿ ಮನತಣಿಯುವಂತೆ ತಡವುತ್ತ ಓಡಾಡುವ ಅನುಭವ ನೀಡುವ ಪುಸ್ತಕ - ಕುಡಿಯರ ಕೂಸು. ಕಾರಂತರು ಈ ಕಾದಂಬರಿಯಲ್ಲಿ ಸುಬ್ರಹ್ಮಣ್ಯದ ಬಳಿಯ ಹಿರಿಮಲೆ, ಕಿರಿಮಲೆಯ ಕುಡಿಯರ ಜೀವನ ಬಿಂಬಿಸುವ ಕಥೆ ಹೆಣೆದಿದ್ದಾರೆ. ಇದ್ದೊಬ್ಬ ಮಗನನ್ನೂ ಸೊಸೆಯನ್ನೂ ಕಳೆದುಕೊಳ್ಳುವ ಕೆಂಚಜ್ಜ ತನ್ನ ಮೊಮ್ಮಗು ಕರಿಯನನ್ನು ಬೆಳೆಸುವ ಕಥೆಯ ಜಾಡು ಹಿಡಿದು,  ಕರಿಯನ ಜೀವನ ಹೇಗೆ ರೂಪುಗೊಂಡಿತೆಂಬ ಬಗ್ಗೆ ಚಿತ್ರಣ ಕಟ್ಟಿಕೊಡುತ್ತ ಹೋಗುತ್ತಾರೆ ಕಾರಂತರು. 

ಏಲಕ್ಕಿ ಸೊಂಪಾಗಿ ಬೆಳೆಯುವ ಮಲೆಯ ಮೂಲ ನಿವಾಸಿಗಳೂ, ಅಲ್ಲಿನ ಮಲೆಯನ್ನು ಕೊಳ್ಳುವ ಧಣಿಗಳಿಗೆ ವಿಧೇಯರೂ ಆಗಿರುವ ಕುಡಿಯರು ಬಯನಿಯ ದಿಂಡು ತಿನ್ನುತ್ತಲೂ, ಗೆಡ್ಡೆ ಗೆಣಸು ಸೇವಿಸುತ್ತಲೂ, ಹರಿಯುವ ಜೀವನದಿಯ ತೊರೆಯಲ್ಲಿ ಮೀನು-ಏಡಿಗಳನ್ನು ಹಿಡಿದು, ಬೇಟೆಯಾಡಿ  ಜೀವನ ಮಾಡಲು ಬಲ್ಲರು. ಅವರ ಇತರೆ ಅವಶ್ಯಕತೆಗಳಿಗೆ ಮಲೆಯ ಧಣಿಗಳಿಂದ ಬರುವ ಹಚ್ಚಡ, ಉಪ್ಪು, ಚಿಮಣಿ ಎಣ್ಣೆಯೇ ಸಾಕೆನ್ನುವಂಥವರು. 

ಕಲ್ಲೊಂದಕ್ಕೆ ದೈವತ್ವವನ್ನು ಕೊಟ್ಟು ಆದರಿಸುವ ಮುಗ್ಧರು ತಮ್ಮ ಪೂಜಾರಿಯ ಮೈಮೇಲೆ ಬರುವ ಕಲ್ಕುಡ ದೈವಕ್ಕೆ ನೇಮದಿಂದಿರುತ್ತಾರೆ. ಇವರ ಜೀವನದಲ್ಲಿ ಕಲ್ಕುಡನ ಮಹಿಮೆ- ಆತನ ಒಲುಮೆಗಾಗಿ ಇವರೆಲ್ಲರ ನಿಷ್ಠೆ, ಇವೆಲ್ಲ ಕಲ್ಕುಡನು ಕಲ್ಲಿನಲ್ಲೋ, ಮೈದುಂಬುವ ಪೂಜಾರಿಯಲ್ಲೋ ಇಲ್ಲದೆ, ತಂತಮ್ಮ ಮನದ ಒಳಗಣ ತಿಳಿವಾಗಿ ತೋರುವುದು ಸುಸ್ಪಷ್ಟ.

ಮಳೆಗಾಲದಲ್ಲಿ ಕಾಡು ಸವರಿ ಕುಮರಿಯಲ್ಲಿ ಭತ್ತದ ಬೇಸಾಯ ಮಾಡುವ, ಉಳಿದಂತೆ ಹಲವು ಉರುಳುಗಳನ್ನು ಒಡ್ಡಿ ಬೇಟೆಯಾಡುವ ಇವರು ಒಬ್ಬರಿಟ್ಟ ಉರುಳಿಗೆ ಬಿದ್ದ ಪ್ರಾಣಿಯನ್ನು ಇನ್ನೊಬ್ಬರು ಕದಿಯಲು ಕೈ ಹಾಕದ ನಿಯಮದವರು. ಎಲ್ಲ ಮನುಷ್ಯರಂತೆಯೇ ಮಸೆಯುವ ಮಾತ್ಸರ್ಯ, ಅಧಿಕಾರದ ಆಸೆ ಇವರ ಜೀವನದಲ್ಲಿ ತಿರುವುಗಳನ್ನು ತರುತ್ತ ಮನೋರಂಜಕ ಅಧ್ಯಾಯಗಳನ್ನು ತೆರೆಯುತ್ತ ಹೋಗುತ್ತದೆ.

ಈ ಪುಸ್ತಕದಲ್ಲಿ ಮೂಡಿರುವ ನಿಸರ್ಗದ ವರ್ಣನೆ, ಕಾಡಿನ ಉತ್ಪನ್ನಗಳ ವರ್ಣನೆ, ಆನೆಗಳ ನಡವಳಿಕೆ, ಕರಡಿಯ ಬೇಟೆ,  ನರಭಕ್ಷಕವಾಗುವ ಚಿರತೆಯ ಬೇಟೆ, ಇವ್ಯಾವುವೂ ಉದ್ದೇಶಪೂರ್ವಕವಾಗಿ ತೋರದೆ, ಕಥೆಗೆ ಪೂರಕವಾಗಿ ಎಂದು ಮಾತ್ರ ಕಾಣುವುದೇ ಈ ಕಥೆಯ ಅಂದವನ್ನು ಇನ್ನೂ ಹೆಚ್ಚಿಸಿವೆ. 

ಇಲ್ಲಿ ಮೂಡಿ ಬಂದಿರುವ ಕುಡಿಯರ ಸರಳ ಜೀವನ, ಕನಿಷ್ಠ ಅವಶ್ಯಕತೆಗಳ ಬಗ್ಗೆ ಓದುವ ಈಗಿನ ಪೀಳಿಗೆಗೆ ಆಗಿನ ಸರಳತೆಯೇ, ಅವರ ಸ್ವಾವಲಂಬಿ ಜೀವನವೇ ಒಂದು ಕೌತುಕವಾಗಿ ಕಂಡು ಪುಸ್ತಕ ನಿರರ್ಗಳವಾಗಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. 

Sunday, March 29, 2020

ಪುಸ್ತಕ ವಿಚಾರ- ಅಂಚು: ಎಸ್ ಎಲ್ ಭೈರಪ್ಪ

ಜೀವನದ ಮೇಲಿನ ಆಸ್ಥೆ-ಸಾವಿನ ಬಗೆಗಿನ ಆಕರ್ಷಣೆಯ ಅಂಚಿನಲ್ಲಿ ನಡೆಯುತ್ತ, ಇತ್ತ ಮುಗಿಸದೆ, ಅತ್ತಲೂ ನಿಲ್ಲದೆ ಹೆಣಗುವ, ಕಥಾವಸ್ತು - ಅಂಚು. ಇದರ ಕಥಾ ಹಂದರವನ್ನು ಮೊದಲು ತಿಳಿಸಿದರೆ, ಮುಂದೆ ಹೇಳುವ ಅಂಶಗಳಿಗೆ ಅದೇ ಬೆನ್ನೆಲುಬಾಗುತ್ತದೆಂದೆನಿಸುತ್ತದೆ. 

ಡಾಕ್ಟರ್ ಅಮೃತಾ ಪಿ.ಎಚ್.ಡಿ ಪದವೀಧರೆ, ಉಪನ್ಯಾಸಕಿ. ತಂದೆ - ತಾಯಿ ಇಲ್ಲದ ಈಕೆ ತನ್ನ ಆಸ್ತಿವಿಚಾರದಲ್ಲಿ ಸ್ವಂತ ಚಿಕ್ಕಮ್ಮನಿಂದಲೇ ಚಿಕ್ಕಂದಿನಿಂದಲೂ ನಯವಂಚನೆಗೊಳಗಾಗಿ, ಆಕೆಯ ತಮ್ಮನನ್ನೇ ಮದುವೆಯಾಗಿ, ತಾನು ಮೋಸಕ್ಕೊಳಗಾದದ್ದು ಬೋಧೆಯಾದಾಗಿಂದ ಗಂಡನಿಂದ ದೂರವಿರುವ ಎರಡು ಮಕ್ಕಳ ತಾಯಿ. ಆಗಾಗ ತನ್ನ ಅಸ್ತಿತ್ವದ ಬಗ್ಗೆ ಕಾಡುವ ಶೂನ್ಯಭಾವ ಸದಾ ಆಕೆಯನ್ನು ಸಾವಿನೆಡೆಗೆ ಆಕರ್ಷಿಸುತ್ತಿರುತ್ತದೆ. ಈ ಮಧ್ಯೆ ಸೋಮಶೇಖರನೆಂಬ ಆರ್ಕಿಟೆಕ್ಟ್ ನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬಲಿತು ಗೋಜಲಾಗುವ ಕಥೆ. 

ಪುಸ್ತಕದ ಹಲವಾರು ಭಾಗಗಳಲ್ಲಿ ಕಥೆಯೇ ಮಾಸುವಷ್ಟು ಸಂಭಾಷಣೆ- ತಗಾದೆ- ಭಾವನೆಗಳ ವಿಸ್ತಾರ ಇರುವುದರಿಂದ ಒಡನೆಯೇ ಈ ಕಥೆಯ ವಿಸ್ತಾರ ಅರಿವಾಗುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಎಸ್ ಎಲ್ ಭೈರಪ್ಪನವರ ಇತರೆ ಹಲವು ಕಾದಂಬರಿಗಳನ್ನೋದಿದವರೂ ಅಂಚುವನ್ನು ತಡವಾಗಿ ಓದಿರುತ್ತಾರೆ - ಅಥವಾ ಮಧ್ಯದಲ್ಲೇ ನಿಲ್ಲಿಸಿರಲಿಕ್ಕೂ ಸಾಕು; ನನ್ನ ಹಾಗೆ. 

ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ  ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು. 

ಕೊರೋನಾ ಮಹಾಮಾರಿಯ ದೆಸೆಯಿಂದ ದೇಶಕ್ಕೆಲ್ಲಾ lockdown ಸೂಚನೆ ಹೊರಟ ನಂತರ ಬಿಡುವಿನ ಸಮಯದಲ್ಲಿ ಓದಲು ಆರಿಸಿಕೊಂಡದ್ದು - "ಅಂಚು" ಕಾದಂಬರಿಯನ್ನು. 

ಅಂಚುವಿನ ಅಮೃತಾ ಉತ್ತಮ ಅಧ್ಯಾಪಕಿ- ಅಪನಂಬಿಕೆಯ ನಂಜುಂಡರೂ ಆಕೆಯ ಚಿಕ್ಕಮ್ಮ ಮತ್ತು ಮನೆಯವರಿಗೆ ಮನದೆಲೆಲ್ಲೋ ಕಿತ್ತೊಗೆಯಲಾಗದ ಅಸಹಾಯಕ ಆರ್ದ್ರತೆ. ಇನ್ನು ತನ್ನೆರಡು ಮಕ್ಕಳಿಗೆ ಒಳ್ಳೆಯ ತಾಯಿಯಾದರೂ, ತಾನು ಸೆಳೆಯಲ್ಪಟ್ಟಿರುವ ಸೋಮಶೇಖರನೊಂದಿಗೆ ಮಾತ್ರ ಅದ್ವಿತೀಯ ಲಹರಿಯವಳು. ಒಮ್ಮೊಮ್ಮೆ ನಿರಾತಂಕ ಪ್ರೀತಿ, ಹಿಂದೇ ಸುತ್ತಿ ಕವುಚಿಬರುವ ಮೌನ- ಶೂನ್ಯತೆ! ಶೂನ್ಯತೆಯ ಪರಮಾವಧಿ ಅಕಾರಣ ಸಿಟ್ಟಿನತ್ತ ಹಲವೊಮ್ಮೆ ಎಳೆದೊಯ್ದರೆ, ಕೆಲವೊಮ್ಮೆ ಮುಗಿಸಿಕೊಂಡುಬಿಡಬೇಕೆನ್ನುವ ಆತ್ಮಹತ್ಯಾ ತುಡಿತ, ಇನ್ನು ಕೆಲವೊಮ್ಮೆ ಪ್ರೀತಿಸಿದವನ ಮೇಲೆ ಕ್ರೌರ್ಯಕ್ಕೂ ತಿರುಗುವ ಮೌಢ್ಯ! ಈ ಭಾವನೆಗಳ ಅಲಗು ಮೊನೆಗಳ ಮೇಲಿನ ಹೊಯ್ದಾಟದಲ್ಲೇ ಕಥೆ ಸಾಗುತ್ತದೆ.  

ಕಥಾನಾಯಕಿ ಅಮೃತಾಳಂತಹಾ ಪಾತ್ರವನ್ನು ನಾವು ನಿಜಜೀವನದಲ್ಲೂ ನೋಡಿರಬಹುದು; ಕೆಲವರು ಇಡೀ ಜಗತ್ತಿಗಿದ್ದಷ್ಟು ಉದಾರವಾಗಿ, ತಮ್ಮವರೊಡನೆ, ತಮಗೆ ಕಷ್ಟ-ಸುಖಗಳಲ್ಲಿ ಸಮಪಾಲು ಇರುವವರೊಡನೆ ಭಾವ ಕಳೆದವರಂತಿರುತ್ತಾರೆ. ಹೊರಗಿನವರೆನಿಸಿಕೊಂಡ ಬೇರೆಲ್ಲರೊಂದಿಗೂ ನಗುನಗುತ್ತ ಬೆರೆತಂತಿದ್ದು ತಮ್ಮ ಮೇಲೆ ಭಾವುಕವಾಗಿ ಅವಲಂಬಿತರಾದವರ ಮೇಲೆ ಕೊಂಕುಗೆದರಿಸುತ್ತ ತಪ್ಪಿತಸ್ಥ ಭಾವ ಮೂಡಿಸುತ್ತಲೋ, ಆಪಾದನೆ ಹೊರಿಸುತ್ತಲೋ ಇದ್ದುಬಿಡುತ್ತಾರೆ. ಅವರ ಅಭಿವ್ಯಕ್ತಿ ತಮ್ಮವರೆನಿಸಿಕೊಂಡವರ ಮೇಲಾಗಲಿ, ಕಾರಣ ಏನೇ ಇರಲಿ, ಕ್ರೌರ್ಯ, ಆತ್ಮಾವಹೇಳನ, ಕೊಂಕಿನ ಮೂಲ- ಇವೆಲ್ಲ ನಿಲುಕಿಗೂ ಸಿಕ್ಕದ ಅಂತರದಲ್ಲೆಲ್ಲೋ ಹೂತುಹೋಗಿರುತ್ತದೆ. ಆಳದಲ್ಲೆಲ್ಲೋ ಆದ ವ್ರಣ ಮೇಲುಮೇಲಿನ ಸಿಡುಕು - ದ್ವಂಧ್ವಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 

ತೀವ್ರ ಭಾವಸ್ಪಂದನ, ಅದರಿಂದುಂಟಾಗುವ ದಣಿವು - ಸೋಮಶೇಖರನಿಗೆ ಹಿಂಸೆಯೆನಿಸಿದಷ್ಟೂ, ಬಿಡಿಸಿಕೊಳ್ಳಬೇಕೆನಿಸಿದಷ್ಟೂ ತೊರೆಯಲಾರದ ಅಂಟಾಗಿ, ಬಂಧವಾಗಿ, ಆಕರ್ಷಣೆಯಾಗಿ, ಕಡೆಗೆ ವೃತ್ತಿಗಿಂತಲೂ ಮುಖ್ಯವಾಗಿ ವೃತ್ತಿಯಲ್ಲಿ ಸೋಲುತ್ತ ಬಂದು, ಅಮೃತಾಳನ್ನು ಕಳೆದುಕೊಳ್ಳುವ ಸಂಕಲ್ಪವೇ ಭಯತರಿಸಿ, ಈ ಬಂಧವನ್ನು ನಿಭಾಯಿಸಿಯೇ ತೀರುವೆನೆಂಬ ಸ್ಪೂರ್ತಿಯಾಗಿ ಮಜಲು ಮಜಲಾಗಿ ಬಿಡಿಸಿಕೊಳ್ಳುವುದು ಕಾಣುತ್ತದೆ.

ಇಲ್ಲಿ ಸೋಮಶೇಖರನಂಥಾ ತಾಳ್ಮೆಯುಳ್ಳವರ ಪ್ರೀತಿ-ಕಾಳಜಿಯ ಇಂಧನ ಯಾವುದು? ಪ್ರೀತಿಸಿದವರನ್ನು ಪಡೆದೇ ತೀರಬೇಕೆಂಬ ಹಂಬಲವೋ, ಪ್ರೀತಿಸಿದವರು ಸಂತೋಷವಾಗಿಯೇ ಬದುಕಬೇಕೆಂಬ ಛಲವೋ? ಕೋಮಲ ಹೃದಯಿಯಾದ ಅಮೃತಾಳ ನಾಡಿಹಿಡಿಯಲಾರದ, ಭಾರ ಬಲಿಯದೆಯೂ ಇಕ್ಕೆಲಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ತೂಗಾಡುವ ತಕ್ಕಡಿಯಂಥಾ ಸ್ವಭಾವಕ್ಕಿರುವ ತಲ್ಲಣದಲ್ಲಿ- ಪ್ರಸ್ತುತದ ಕ್ಷುಲ್ಲಕ ಕಾರಣಗಳು ಸತ್ಯವೋ, ಅಥವಾ ಜೀವನದಲ್ಲಿ ಹಿಂದೆಲ್ಲೋ ಮನಸ್ಸಿಗೆ ಬಿದ್ದ ಪೆಟ್ಟು ತಾಳಲಾರದ ಏಟುಗಳೋ? ಇವೆಲ್ಲ ಪದರಗಳೊಳಗೂ ಜೀಕುತ್ತ ಸಾಗುವುದು - "ಅಂಚು". 

ಶತಾವಧಾನಿ ಗಣೇಶರು ಹೇಳಿದಂತೆ, ವಿವರಣೆಗಳಿಗೆ ಮಾತ್ರ ಪಕ್ಕಾಗದೆ ಪ್ರೀತಿ, ಸಂಬಂಧ, ವಿವಾಹದ ಮೂಲಧನಕ್ಕೊಂದು ಧಾತು - "ಅಂಚು". 

Tuesday, July 30, 2019

Vanara: Anand Neelakantan

Let me tell you a bit about the backdrop of this story that it is woven upon.

Valmiki Ramayana tells the tale of how Sugreeva and his Vanara sena helped Rama fight Ravana and rescue Sita. This Sugreeva was an outcast of his brother Vaali or Baali's Kishkinda. He was evicted from the Kingdom of Kishkinda by his own brother who was very dear to him. This is since Sugreeva had married Tara and was ruling Kishkinda since he believed his brother was dead in battle with Mayavi. But the moment Baali comes back winning over the demon, he charges his brother with treachery and evicts him from Kishkinda. Sugreeva waits in vain being an outcast until he meets Rama. Then Sugreeva invites Baali for a duel and Rama killed Baali by standing behind a nearby tree. Sugreeva is crowned again and after him, Angada, son of Tara and Baali is made the Prince of Kishkinda.

Now this act of Rama is justified in various texts in different ways, backing him up that this was done to save Dharma ultimately. This event always leaves a hollow in the epic of Ramayana nevertheless. This novel Vaanara is an attempt at weaving the sequence of events.

Anand Neelakantan has a finesse story telling that captivates the reader. I must mention how he weaves in chapter after chapter. Every chapter ends as a prelude to the next chapter which keeps the reader on toes until the story is completed. One simply cannot put this book down and be at peace until the reading is done. 

Dilemma of Tara about the two brothers, though she heartily loves one and tries to despise the other, her thoughts are stuck not knowing which way to waiver. Baali is so lost in building an empire that though he loves Tara with all his heart, he is unable to spend enough time with her. Meanwhile encashing all this, Sugreeva lusts for his sister-in-law, unknowing of the consequences that it might pose; once Tara is married to Sugreeva as Baali does not return from fighting Mayavi and is thought to be dead, Sugreeva sees that the appeal of having Tara as his is vanished completely, and a constant hindrance towards the relationship sets in. 

Though Tara marries two brothers, she is still considered the virtuous wife and is given a worshipful place till today. Giving the benefit of doubt to the tale that she is considered a pious and virtuous wife, author gives it a justified ending that Tara after Angada and Sugreeva return victorious post battle with Ravana, stays in the sacred grove of seven palmyra trees that Baali had envisioned and nurtured; thinking every moment of Baali, she lives as a telltale to the whole of Kishkinda until her last breath, serving the city-dwellers with her wise deeds and words.

The loyalty of the abandoned wolf pup 'Chemba' raised by Baali is a part of the story that touches the most. The wolf's tried and true love towards its master is depicted well in parts of story where it stays near the cave till its master returns victorious from his struggle with the demon and its unfailing attempts at digging his grave though its claws are all worn out from the futile effort. Chemba still believes that somehow he can bring his master back from the dead if it digs enough to reach his body even after death of Baali.

The sublime character of Baali and Sugreeva's foster father Riksharajas, the valour of Ravana depicted in even his defeat against Baali in duel, the motherly turned pompous Ruma - the wife of Sugreeva, the demonity that is illustrated in weaving sequence about the humongous bull Dundubhi that is brought by Sugreeva, the plight of the outcast - Vana naras - called later as Vanaras, the love and understanding of the two brothers - Baali and Sugreeva and the intervention to their fraternal bonding with entry of Tara in their life, the only amazing city that they build deep in the woods with all amenities and aiming at no caste- colour discrimination is all that is part of reading hangover. 

Definitely a thumbs up for even those who despise heavy reading.

Wednesday, January 11, 2017

Ajaya- Duryodhana's Mahabharata- By Anand Neelakantan


Mahabharata is a poetically narrated story (rather, history) of war that had happened around 6000 years ago. A story of a plethora of events leading to the war unfolds in every chapter of the epic. While Jaya is the story that tells you the winner's side of the story, Ajaya -Roll of dice and The rise of Kali - series is one of the logical most explanations of the Mahabharata war in the voice of the conquered. I had only heard of Kananda author and poet, Ranna, who had written a version of Mahabharata which is narrated as Suryodhana's story (Gadhaayuddha).

I have got to know the story of Mahabharata by bits and parts since I was in the age I could understand 10 liner stories. The beauty of the humongous epic lies in its ability to decipher itself in smaller stories. We can be told 100's of short stories which can finally be comprehended as the Jaya-Mahabharata. The more we study and research about the topic, the complex this book of epic becomes. With thousands of characters into it, Tretayuga's Mahabharata really has in it a lot to tell us, a lot to teach us, apart from the sacred text of Geeta.

In this war of Dharma, did the war really happen for the sake of Dharma or were the turn of events later termed to be the path to achieve and restore Dharma, owing to the fact that Pandavas won over Kauravas? Story can be told either ways; understood either ways. We all know Krishna to be the eternal God who's mortal life came to an end like a commoner owing to Gandhari's curse. What might have been the other side of the story?? Could the eldest of the Kaurava clan, Suyodhana been a good ruler after all? What if the downfall of the empire became more evident only because of the foolish decisions taken and wrong stances, rather than the Kauravas branded to the demonic evils?

If you have read Mahabharata, you might have wondered why Karna was killed when unarmed, why Drona was killed with a lie and then slayed while in meditating posture, why was Jayadratha killed with the illusion of fall of dusk? Why was Pitamaha Bhishma killed with Shikhandi as an armour, knowing that he would not fight with women or eunuch? Why was Ekalavya killed at all by Krishna? Why did Iravan, naga son of Arjuna die? How can the dying of a woman with her 5 sons in Varanavrata be justified as aapaddharma? How can the killing of nagas like worms in Khandivaprastha through agni be justified as it had medicinal herbs for agni to consume since he had indigestion due to yaaga?

This book tries to answer what might have happened during the period. If you have read the story of Mahabharata already, please do read this one also, to get a different perspective. Anand Neelkanthan doesn't bore you anywhere in the book. The story is woven in such a way that the loose ends in the epic of Mahabharata seem to have tied till the author's efforts and creativity permit. This you can enjoy the most while reading the book. It is a welcome try at deciphering the actual events; trying to reason with what might have happened.

Since research on Mahabharata has left us with solid reasons, places and monuments - sunken Dwaraka, radioactivity of Kurukshetra, and temples of various Mahabharata characters within India and beyond, what really might have led to the war is always a wild guess to think. Here's a nice try from Anand Neelkanthan worth reading and a subject to mull over for days later.

Friday, July 29, 2016

ಕ್ಷಮೆ: ಸಹನಾ ವಿಜಯಕುಮಾರ್

ಇಂಗಿತ, ಆಸ್ಥೆ-ಆಸೆಗಳನ್ನು, ಕೊನೆಗೆ ತನ್ನತನವನ್ನೂ ಜೀವನದ ಬಾಹ್ಯ ಗೆಲುವುಗಳ ವಾಂಛಲ್ಯಕ್ಕಾಗಿ ಬುದ್ಧಿಗೆ ನಿಲುಕದಂತೆ ಬೀಗ ಹಾಕಿ ಯಾಂತ್ರಿಕ ಬದುಕಿಗೆ ಹೊಂದಿಕೊಂಡುಬಿಟ್ಟಿರುವ ಕಥಾನಾಯಕಿ-ಪಲ್ಲವಿ. ಚಿಗುರಿನಲ್ಲೇ ಮಗನೊಂದಿಗೆ ಅಂತರವನ್ನು ಅಳಿಸಿಹಾಕಲು ಪ್ರಯತ್ನಿಸದೆ ಅಂತರ್ಮುಖಿಯಾಗಿ ತನ್ನೊಳಗೇ ಉಳಿದುಹೋದ ತಂದೆ. ಚಿಕ್ಕಂದಿನಲ್ಲೇ ದೂರವಾದ ತಾಯಿ. ತಾನಾಯಿತು-ತನ್ನ ಕೆಲಸವಾಯಿತೆಂದು ಕರ್ತವ್ಯದಾಚೆಗಿನ ಪ್ರೀತಿಯ, ಅನುಭೂತಿಯ, ಸ್ನೇಹದ, ಸಲುಗೆಯ ಆಕರ್ಷಣೆಯತ್ತ ತಾನಾಗಿ ಹಾತೊರೆಯದ ಗಂಡ-ರಘು. ತಂದೆಯನ್ನು ಅವರ ತಪ್ಪಿನಿಂದಾಚೆಗೆ ಎಳ್ಳುಮಾತ್ರವೂ ನೋಡದೇ ಹಳಿಯುವ ಅಣ್ಣ.


ಪಲ್ಲವಿಗೆ ಆರಂಕಿ ಸಂಬಳದ ಬಹುರಾಷ್ಟ್ರೀಯ ಕಂಪನಿಯ ಜವಾಬ್ದಾರಿಯುತ ಸಾಫ್ಟ್ ವೇರ್ ಕೆಲಸ. ತನ್ನ ಕಡೆ ಯಾರಿಗೂ ಕಾಳಜಿಯೇ ಇಲ್ಲವೇನೋ ಅಂತ ಸುಲಭವಾಗಿ ಅನ್ನಿಸಿಬಿಡುವಂಥಾ ಸಂದರ್ಭ ಹಳೆಯ ಗೆಳೆಯ ಚೇತು ಸಿಕ್ಕಾಗ ಸ್ಥಾಯಿಯಾಗಿಬಿಡುತ್ತದೆ. ಅಲ್ಲಿಂದಾಚೆಗೆ ಪಲ್ಲವಿಗೆ ತನ್ನ ಜೀವನದ ಹೊಂದಾಣಿಕೆಗಳು ಬೃಹತ್ತಾಗಿ ಕಾಣತೊಡಗುತ್ತವೆ. ರಘುವಿನ ಪ್ರತಿ ಮಾತನ್ನೂ ನಡೆಯನ್ನೂ ಚೆತುವಿನೊಂದಿಗೆ ತುಲನೆ ಮಾಡುತ್ತಾ ನೆಮ್ಮದಿಯಿಂದ ದೂರವಾಗುತ್ತಾಳೆ ಪಲ್ಲವಿ. ಜೀವನ ನಿರಾಸೆಯ ಅಲೆಗಳ ಮೇಲಿರುವಾಗ ತಂಗಾಳಿಯಂತೆ ಮತ್ತೆ ಬರುತ್ತಾನೆ ಚೇತು.

ಮುಂದೆ ಆಕೆಯ ತುಮುಲಗಳು ಏನು? ಎಂದಿಗೋ ಕಳೆದುಕೊಂಡ ತನ್ನತನವನ್ನು ಹುಡುಕುತ್ತ ಆಕೆಯ ನಡೆಗಳೇನು? ಇಲ್ಲಿ ಎಷ್ಟೋ ವರ್ಷ ಕಳೆದು ಸಿಕ್ಕ ಗೆಳೆಯನ ಹತ್ತಿರ ಬಾಲ್ಯವನ್ನು ಕಂಡುಕೊಳ್ಳುವ ಪ್ರಯತ್ನ, ಚೇತುವಿನಲ್ಲೇ ತನ್ನ ಜೀವನದ ಅಷ್ಟೂ ಪಾತ್ರಗಳನ್ನು ಕಾಣುವ ಪಲ್ಲವಿ, ತನ್ನ ಜೀವನವನ್ನ ವಿಶ್ಲೇಷಿಸಿಕೊಳ್ಳುವತ್ತ ಸಾಗುವ ದಾರಿ- ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ ಲೇಖಕಿ.

“ಕ್ಷಮೆ”- ಲೇಖಕಿಯ ಮೊದಲನೆಯ ಕಾದಂಬರಿ ಅಂತ ಕೊಂಚಮಾತ್ರವೂ ಅನ್ನಿಸದಿರುವ ಪುಸ್ತಕ. ಲೇಖಕಿಯ ವಿಚಾರ ಪ್ರಬುದ್ಧತೆ ಓದುತ್ತ ಓದುತ್ತ ಸ್ಪಷ್ಟವಾಗುತ್ತ ಹೋಗುತ್ತದೆ. ಎಲ್ಲಿಯೂ ಎಳೆಯದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ- ಕ್ಷಮೆ. ಎಂದಿಗೂ ಕನ್ನಡ ಪುಸ್ತಕವನ್ನೇ ಓದಿರದವರೂ ಭಾಷಾ ಪ್ರವೇಶಕ್ಕಾಗಿ, ಕಾದಂಬರಿ ಪ್ರಪಂಚದ ಪ್ರವೇಶಕ್ಕಾಗಿ ಓದುವಂತೆ ಮಾಡಬಲ್ಲ ಭಾಷೆ, ವಿಚಾರ ಎರಡೂ ಇದೆ ಈ ಕಾದಂಬರಿಯಲ್ಲಿ.

ಭೈರಪ್ಪನವರಿಂದ ತಿದ್ದಲ್ಪಟ್ಟವರು ಅಂದ ಕೂಡಲೇ ಕುತೂಹಲದಿಂದ ಪುಸ್ತಕ ಬಿಡುಗಡೆಗೇ ಹೋಗಿ ಕೊಂಡ ಪುಸ್ತಕ- ಭಾಷೆಯಲ್ಲೇ ಆಗಲೀ, ವಿಚಾರದಲ್ಲೇ ಆಗಲಿ ನಿರಾಸೆ ಮಾಡಲಿಲ್ಲ. ಇನ್ನಷ್ಟು ವಿಸ್ತಾರವನ್ನು ಬಯಸಿದ್ದುದಕ್ಕೆ ಮಾತ್ರ ಕೊಂಚ ತಣ್ಣೀರೆರೆಚಿದಂತಾಯ್ತು. ರಘು ಹಾಗು ಪಲ್ಲವಿಯ ತಂದೆ-ತಾಯಿಯ ವ್ಯಕ್ತಿತ್ವಕ್ಕೆ ಇನ್ನೂ ವೇದಿಕೆ ಹಾಗು ಒಳನೋಟ ಕೊಡಬಹುದಿತ್ತೇನೋ. ಪಲ್ಲವಿಯ ಪರಿಭಾಷೆಯಲ್ಲಿಯೇ ಇಡೀ ಪುಸ್ತಕವಿರುವುದರಿಂದ ಆ ಅವಕಾಶವಾಗಿಲ್ಲ ಅಂತ ದಟ್ಟವಾಗಿ ಅನ್ನಿಸುತ್ತದೆ. ಬರುವ ಎಲ್ಲ ಪಾತ್ರಗಳ ಮನೋಗತಗಳನ್ನೂ, ಭಾವನೆಗಳನ್ನೂ ವಿವರಿಸಿದ್ದರೆ ಕಥೆ ಇನ್ನಷ್ಟು ಸ್ಪಷ್ಟತೆ ಪಡೆಯುತ್ತಿತ್ತೇನೋ. ಖಂಡಿತವಾಗ್ಯೂ ಕನ್ನಡ ಕಾದಂಬರಿಗಳಲ್ಲಿ ಮುಂಚೂಣಿಗೆ ಸಾಗಬಹುದಾದ ಲೇಖಕಿ- ಸಹನಾ ವಿಜಯಕುಮಾರ್.

ಗುಡ್ ರೀಡ್.. ಕಾದಂಬರಿಪ್ರಿಯರು ಓದಿ ನೋಡಬೇಕಾದ ಪುಸ್ತಕ. ನಾನಂತೂ ಹಿಡಿದಾಗಿನಿಂದ ಕೆಳ ಬಿಡದೆ ಮುಗಿಸಿರುವ ಪುಸ್ತಕ. 

Sunday, July 24, 2016

Sialkot Saga: Ashwin Sanghi

1947 witness more blood than 1857's Sepoy Mutiny had seen. Not because of the war, not since the patriots were martyred; but due to the partition of Pakistan and the anarchy that resulted at India-Pakistan border. Hindus and Sikhs of Pakistan left their home, ancestral lands, and fled for lives. Hindus in the western part of India, now Pakistan wanted to stay with their religion and unfortunately that was least encouraged. Muslims of India had now found their solace in dividing their country for the want of land for themselves. The resultant communal outrage was supernumerary deaths and blood shed all along the borders.

Ashwin Sanghi has woven the story starting from Sialkot and in the backdrop of the changing Indian scenario after independence, till recently. Arbaaz, underworld mafia with his own principles who turns into a respectable businessman, and Arvind, the Marwari businessman who believes in buying and selling businesses and is of dual morality when it comes to business, make it to the list of top 20 richest in India.


Sometimes while reading the book, I started feeling that the characters Arbaaz and Arvind are just a means to show the post-Independence scenario of India and its political ups and downs within. Many political changes and the economic growth, along with the great scams of India post-independence are put across in the story, such that the fiction is not lost either.


Along with that is the story of Asoka and the nine unknown men, and is randomly spread and time-spaced across the past kingdoms that ruled India. The unresolved mystery of how few kings could assimilate more wealth than their capacity is attempted a possible reasoning.

This style of writing is gripping. While the reader would be interested in reading about the lives and shrewdness of Arvind-Arbaaz duo, the reader will also be enlightened about many important turns of events in Independent India. Be it Lal-Bahadur Shastri's death, operation blue star, Indira's death, Bofors scam, Rajiv' death, fodder scam, terror attacks, ups and downs of each elected government are dealt in detail. It is definitely a brush up for the forgotten public memory. The real events are intertwined with the story that Ashwin wants us to read.

I personally felt, that the climax of the story was dramatic and a little dampening. But the book is definitely one of the good reads. Sialkot saga book is a knowledge-giving storyteller. Kudos Ashwin Sanghi!

ಅದ್ಭುತ ಯಾನ - ಕೊನ್ ಟಿಕಿಯ ಯಶೋಗಾಥೆ : ಪ್ರದೀಪ ಕೆಂಜಿಗೆ

ಅದ್ಭುತ ಯಾನ - ಥಾರ್ ಹೈಡ್ರಾಲ್ ಎಂಬ ಸಂಶೋಧಕ ಇನ್ನೈದು ಸಾಹಸಿಗಳೊಡನೆ ಸಿದ್ಧಾಂತವೊಂದನ್ನು ಸಾಬೀತುಪಡಿಸಲು ಪೆಸಿಫಿಕ್ ಮಹಾಸಾಗರದಲ್ಲಿ ಬಾಲ್ಸಾ ಮರದ ದಿಮ್ಮಿಗಳ ತೆಪ್ಪದಲ್ಲಿ ೪೩೦೦ ಮೈಲಿ ಕ್ರಮಿಸಿದ ಯಶೋಗಾಥೆ.

ಪಾಲಿನೇಷ್ಯಾ ದ್ವೀಪವೊಂದರಲ್ಲಿದ್ದಾಗ ಬರುವ ಅಲೆಗಳನ್ನು ವಿರಾಮದಲ್ಲಿ ನೋಡುತ್ತಾ ಕೂತ ಹೈಡ್ರಾಲ್ ಪೂರ್ವದಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ಅಲೆಗಳನ್ನು ನೋಡುತ್ತಾ ಹೊಳೆದ ವಿಚಾರ ಆತನನ್ನು ತನ್ನ ವೃತ್ತಿಗೆ ವಿದಾಯ ಹೇಳಿ, ಪಾಲಿನೇಷ್ಯಾ ಜನರ ಮೂಲ ಹುಡುಕುತ್ತ ಹೊರಡುವಂತೆ ಮಾಡುತ್ತದೆ. ಪಾಲಿನೇಷ್ಯಾ ದ್ವೀಪಗಳ ಬುಡಕಟ್ಟು ಜನಾಂಗ ಹನ್ನೊಂದನೇ ಶತಮಾನದಲ್ಲಿ ವಲಸೆ ಬಂದವರೆಂದು ಕುರುಹುಗಳಿದ್ದರೂ, ಎಲ್ಲಿಂದ ಬಂದವರೆಂದು ಯಾರೂ ಸ್ಪಷ್ಟವಾಗಿ ಪ್ರತಿಪಾದಿಸಿಲ್ಲದ ಕಾರಣ ಸಂಶೋಧಿಸುತ್ತಾ ಹೊರಟ ಹೈಡ್ರಾಲ್ ಹಲವು ಕುರುಹು, ಸಾಕ್ಷಿಗಳನ್ನು ಎಡತಾಕುತ್ತಾನೆ. ಎಲ್ಲವೂ ಪಾಲಿನೇಷ್ಯಾ ಜನರು ೪೩೦೦ ಮೈಲಿ ದೂರದ ದಕ್ಷಿಣ ಅಮೆರಿಕೆಯಿಂದಲೇ ಬಂದವರೆಂಬತ್ತ ಬೆರಳು ಮಾಡುತ್ತವೆ. ಅಲ್ಲಿನ ಶಿಲೆಗಳಿಗೂ, ದಕ್ಷಿಣ ಅಮೆರಿಕೆಯ ಶಿಲೆಗಳಿಗೂ ಇರುವ ಹೋಲಿಕೆ, ೧೧ನೇ ಶತಮಾನದವರೆಗೆ ಲೋಹ ಬಳಸದೆ ಕಲ್ಲಿನ ಆಯುಧದ ಉಪಯೋಗ, ಟಿಕಿ ಎನ್ನುವ ರಾಜನ ಹೆಸರಿನ ತಳಕು, ಇವೆಲ್ಲವೂ ಹೈಡ್ರಾಲ್ ನನ್ನು ಇದೇ ಸಿದ್ಧಾಂತದೆಡೆಗೆ ಸೆಳೆಯುತ್ತವೆ. ಆದರೆ ಈ ಸಿದ್ಧಾಂತವನ್ನು ಸಂಶೋಧಕರು ಹಾಗೂ ಜಗತ್ತು ನಂಬಬೇಕಾದರೆ ಆಗಿನ ಕಾಲಕ್ಕೆ ಏಕೈಕ ಮಾರ್ಗವಾಗಿದ್ದ ಬಾಲ್ಸಾ ಮರದ ದಿಮ್ಮಿಯಿಂದ ಮಾಡಬಹುದಾದ ತೆಪ್ಪಗಳ ಮೇಲೆಯೇ ವಲಸೆ ಹೋದದ್ದೆಂದು ಸಾಧಿಸಬೇಕಾಗುತ್ತದೆ. ಈ ಪ್ರಮುಖ ಸಂಗತಿಯನ್ನು ಸಾಬೀತುಪಡಿಸಲು ನಡೆಯುವ ಸಾಹಸಯಾತ್ರೆಯೇ ಕೊನ್ ಟಿಕಿ - ತೆಪ್ಪದ ಪ್ರಯಾಣ.
ನೂರು ದಿನಗಳಿಗಿಂತ ಹೆಚ್ಚಾದ ಪ್ರಯಾಣದಲ್ಲಿ ಹೈಡ್ರಾಲ್ , ಹರ್ಮನ್ (ಎಂಜಿನೀರ್), ಎರಿಕ್ (ನಾವಿಕ), ಬೆಂಟ್ (ಸ್ಪ್ಯಾನಿಷ್ ಅನುವಾದಕ ಹಾಗೂ ವಲಸೆ ಸಿದ್ಧಾಂತದ ಪ್ರತಿಪಾದಕ), ನಟ್  ಹಾಗೂ ಟಾರ್ಸ್ಟೀನ್(ರೇಡಿಯೋ ತಜ್ಞರು)- ಹಲವಾರು ಸವಾಲುಗಳನ್ನು ಎದುರಿಸುತ್ತ, ಸಾಗರ ಜೀವಿಗಳಲ್ಲಿ ತಮ್ಮದೂ ಒಂದು ಜೀವನದ ಹಾಗೆ ಬೆರೆತುಹೋಗುತ್ತಾರೆ. ಕೊನ್ ಟಿಕಿಯ ತಳದಲ್ಲಿಯೇ ಹಾದುಹೋಗುವ ಶಾಂತ ದೈತ್ಯ ನೀಲಿ ತಿಮಿಂಗಲ, ಬೆಳಗಾಗುವಷ್ಟರಲ್ಲಿ ಕೊನ್ ಟಿಕಿಯ ಸದಸ್ಯರ ಊಟಕ್ಕಾಗಿಯೇನೋ ಅನ್ನುವ ಹಾಗೆ ಬಿದ್ದಿರುವ ಹಾರುವ ಮೀನುಗಳು, ಕೆಲವೊಮ್ಮೆ ಬಿದ್ದಿರುವ ಭಯಜನಕ ಪುಟ್ಟ ಪುಟ್ಟ ಆಕ್ಟೋಪಸ್ ಗಳು,  ಯಾನ ಸುಖವೆನ್ನಿಸಿದಾಗೆಲ್ಲ ಎಚ್ಚರ ನೆನಪಿಸುವಂತೆ ಬರುವ ಬಿರುಗಾಳಿ, ದೊಡ್ಡ ಅಲೆಗಳ ಮೇಲೆ ನೃತ್ಯಗೈದರೂ ಪವಾಡದಂತೆ ಗಟ್ಟಿತನ ಕಾಯ್ದುಕೊಳ್ಳುವ ಕೊನ್ ಟಿಕಿ, ಶಾರ್ಕ್ ಗಳನ್ನು ಬೇಟೆಯಾಡುವ ಹುಂಬತನ, ಕೊನ್ ಟಿಕಿಗೆ ಕಟ್ಟಿದ ರಬ್ಬರ್ ಡಿಂಜಿಯಮೇಲೆ ತೆಪ್ಪದಿಂದ ದೂರ ಸಾಗಿ ವಾಪಸಾಗುವ ಸಂದರ್ಭಗಳು... ಈ ಅದ್ಭುತ ಯಾನ ಎಂಬ ಪುಟ್ಟ ಪುಸ್ತಕದ ತುಂಬೆಲ್ಲ ಕಟ್ಟಿದ ಸಾಗರ ಯಾನದ ರೋಮಾಂಚಕ ಚಿತ್ರಣ. ಕೊನ್ ಟಿಕಿ ಕಡೆಗೆ ಪಾಲಿನೇಷ್ಯಾ ತಲುಪುವಷ್ಟರಲ್ಲಿ ಛಿದ್ರ ಛಿದ್ರವಾದರೂ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಿ ದಕ್ಷಿಣ ಅಮೇರಿಕೆಯಿಂದ ತೆಪ್ಪದ ಮೇಲೆ ಪ್ರಯಾಣ ಸಾಧ್ಯವಿತ್ತೆಂದು ತೋರಿಸಿಕೊಟ್ಟಾಗ ಬುದ್ಧಿ ಈಗಷ್ಟೇ ನೀರಿನ ಮೇಲೆ ಮುಳುಗೇಳುವ ದೋಣಿಯೊಂದರಿಂದ ಕೆಳಗಿಳಿದ ಅನುಭವ.

ಈ ಸಾಹಸಗಾಥೆ ಪ್ರಕೃತಿಯಲ್ಲಿ ಬೆರೆಯುವ ಮನುಷ್ಯ ಸದಾ ಸುರಕ್ಷಿತ ಹೇಗೆಂಬುದನ್ನು ಮನಸ್ಸಿಗೆ ಅರಿವಾಗುವಂತೆ ತೋರಿಸಿಕೊಟ್ಟಿದೆ. ಯಾನ ಎಷ್ಟೇ ಅಪಾಯಕಾರಿಯಾದರೂ ಪ್ರಕೃತಿಯೊಂದಿಗೆ ಸಮ್ಮಿಳಿತ ಮನಸ್ಥಿತಿ ಹಾಗೂ ಸಂದರ್ಭವಿದ್ದಲ್ಲಿ ಜೀವಸಂಕುಲ ಹೇಗೆ ಹಾನಿಗೊಳಗಾಗದು ಎಂದು ಅರಿವು ಮೂಡಿಸುವ ಪಯಣ ಕೊನ್ ಟಿಕಿಯ ಯಾನ. ನೀವು ಪ್ರಕೃತಿ, ಪರಿಸರ ಕುರಿತ ಕಥೆ-ವಿಷಯಗಳನ್ನು ಇಷ್ಟಪಡುವವರಾಗಿದ್ದಲ್ಲಿ ಈ ಅದ್ಭುತ ಯಾನ ಪುಸ್ತಕ ಮರೆಯಲಾರದ ಓದು.

೨೦೧೨ರಲ್ಲಿ ಕೊನ್ ಟಿಕಿ ವಿಶುಯಲ್ ಡಾಕ್ಯುಮೆಂಟರಿ ಸಹ ಬಿಡುಗಡೆಯಾಗಿದೆ. ಆಸ್ಕರ್ ಪ್ರಶಸ್ತಿ ಕೂಡ ಬಂದಿರುವ ಸಿನಿಮಾ ಅಂತ ಈ ಪುಸ್ತಕ ಓದಿ browse ಮಾಡಿದ ನಂತರ ತಿಳೀತು. Trailor ಅಂತೂ ಪುಸ್ತಕದಲ್ಲಿ ಕಲ್ಪಿಸಿಕೊಂಡದ್ದು ಹಾಗೆ ಹಾಗೇ ಜೀವಂತವಾದ ಹಾಗಿದೆ. ಅದನ್ನಿನ್ನೂ ನೋಡಲಿಕ್ಕೆ ಕಾಯ್ತಿದ್ದೇನೆ.. ಸಾಧ್ಯವಾದಷ್ಟು ಬೇಗ.... 

Sunday, December 6, 2015

Chanakya's Chant: Ashwin Sanghi

The finest of men was born in Bharath before 4000 years. He was the one who had a vision of united India. He was the one who we believe to have worked in all 4 Purusharthas of life- Dharma-artha-kaama-moksha. He was the strategist who is known for his cunning wars and law of Kingship- Kautilya’s Arthashaastra. He is the one believed to be Chanakya turned Vishnugupta who was the king-maker of Maurya Dynasty- The savior of Chandra Gupta Maurya.

Chanakya’s chant from Ashwin Sanghi is a supreme political fiction of present day that goes hand in hand with Chanakya’s story believed to have happened 4000 years ago. People till now believe the power in Chanakya’s chant – ‘Adi Shakti, Namo Namah; Sarab Shakti, Namo Namah; Prithum Bhagvati, Namo Namah; Kundalini Mata Shakti; Mata Shakti, Namo Namah’-whose enchantment is said to make a person the kingmaker- promising the wisdom that chanakya once had; the wisdom that is buried in the dunes of time. Pandit Gangasagar Mishra – In present day Uttar Pradesh gets the engraved chant when excavating and he puts all his wits and wisdom in making the next Prime Minister of India.

The story marvels at its turn of events when Gangasagar proceeds in every little step towards his dream of Making a slum-born – chandini as the calculated-strong prime ministerial candidate. He sets the perfect stage when he arranges her adoption to a muslim MLA candidate, projecting her as the right choice for the indian harmony. Gangasagar incubates chosen students under his training, who study pretty well and their very purpose of existence is to get various degrees. They also organise student unions in the universities that they learn and then they gain entry into strategic positions of Indian Administration services.

Gangasagar makes friends and foes during his life and eventually all the foes gang up against him and swear to defeat him. What he does within his dwindling life is worth reading. This is a truly unstoppable book and has to be taken-in sip by sip but in one long read. The book side-by side opens your mind to the events that could have happened during the establishment of Maurya Empire. Alexander and his conquest, Paurus and his bravery, Seulecus’s vision and his downfall, the Ashwakans and their warfare, breeding of a gang of Mangalik battalion of Vishakanyas- the poison maidens, are worth knowing about. Hats off to the authors effort at stitching the well-known-Chanakya story that we watched in Doordarshan (DD1) during our childhood but understood the story nothing more than Chanakya’s angry demeanor. Author has put the story line commendably to make Chanakya’s chant as a gripping read and unstoppable till end. Hats off to all the research that is put-in and the strategy of putting all the pieces of puzzle into place while visualising a political warfare.

Readers with avid interest in politics, strategic and methodical warfare, and tactical mind-games must read this once.

Sunday, October 11, 2015

The Krishna Key: Ashwin Sanghi

We all know Krishna as an icon of love and as a strategist. Krishna is that adorable avatar that we, in every Hindu houses see in their sons during their younger age. The mistakes that the grown up Krishna makes in the mythology is well covered with "greater goods" ahead. As we believe it as mythology and learn the way of life from the saga, historians would have experienced heebie-jeebies when the real Dwaraka off-coast Gujarat was discovered.

Krishna Key is a try at probing the historical Krishna. Many aspects of Krishna's life and Mahabharata has been seen through scientific magnification supported by historical and geographic findings. This book is truly unstoppable till the last page because of its twist of events which prods the reader to race through the novel.


A historian gets spirally caught in a series of murders where he is deliberately being dragged into, by someone he doesn't even know. He gets even more deeply involved when he tries to solve an ancient riddle which could be a key to the long-lost secret of lord Krishna. A high rank female police official tries to catch him and he slips out clean every time. His student is his supporter who plans for his escapes and supports his views.

Having said all this, I must mention it maintains a striking narrative similarity with Dan Brown's 'The Lost Symbol'. There, the symbologist Robert Langdon gets caught as a suspect for a high-profile abduction. There's a female FBI agent who's behind his tail to catch him while another lady supports him. The situation compels him go on a wild goose chase for a long lost secret which is then found at a commonplace which is beyond suspicion.

The Krishna Key being published after three years of The Lost Symbol gives us ample space to seed in head that the narrative style is too same to be a coincidence. 

Thursday, March 12, 2015

Shiva Trilogy - Amish

The word of mouth spread and compelled me to buy these three books together. I wanted to know what do this trilogy carry, that it has drove so many readers towards and what made Amish to have been called the Paulo Coelho of Asia. Hence with immense curiosity I turned each page.

I was carried away by the story telling, I must admit. But there are few repetitive sentences for similar situations which pop up every 40-50 pages once, all along the three books. (Like a sentence that reads " This would be the guilt that he shall carry for the rest of his life". This dialogue gets repeated at least 5 times. And so is the phrase 'Started at'). Though the story line is strong with handful of unpredictable turns, the lines used for description becomes too predictable at times. There are narrative flaws recognizable almost half way through his first book, "Immortals of Meluha". Then on, either I got adjusted with his style or Amish has improved within his book.

I got engrossed so much that Shiva's picture in a calender at home began to show only his masculinity and warrior-like fierceness; The picture of Sati/Parwati began emanating a brave warrior's image; Karthik became my favourite strategist; Ganesh started appearing more calmer and secluded..Well! well! well! Enough for imaginations right? This book depicts Kaali (Hindu Goddess with Jet dark complexion and four hands) and Ganesha (Hindu God with an elephant head) as people with cancerous protrusions resultant of a side effect of the evil of Indus Valley civilization. It says all the war weapons named "Daivi Astras" were similar to nuclear weapons that we see now.


Yes. Imaginations are good. There have been attempts by authors of various times at mortalizing the immortals (Gods). We have accepted them and encouraged them as well. This trilogy drags us deep into its story to a point where we get confused with facts, myths, mythology and beliefs.

As  Jayraj Dave tells us on Quora-

YES, Amish Tripathi's Shiva trilogy has definitely connection to our scriptures (like  Shiva being 'Neelkanth', Shiva's third eye, Shaktipeetha's of Sati, Name and behavior of many Characters, part of Sequences in story,etc. ) and some of the parts are also purely fictional (story of 'Somras', conflicts among different empires, War at the end).

-So it's neither totally based on scriptures nor totally fictional.


This book has to be read with a staunch foot-note that One needs to know about what Indian mythology says, before you put your hands on this trilogy, since you need to remember that this book is a blend of fiction and mythology, to a point of fiction again.

With that, It is worth imagining things as you sail along the book since it keeps you engaged of the messages it carries within. A sentence is worth quoting from the book, which actually explains the stand on Amish- Trilogy as well.-

- "There is my truth and there is your truth. As for the universal truth, it does not exist"

Friday, January 16, 2015

The Mahabharatha Secret : Christopher C Doyle

The long erased scientific knowledge from the epic of Mahabharata stands out as an adrenaline rushing thriller. There is this artfully woven story of secret brotherhood that existed since 2300years, since the time of the Emperor- Asoka the great who dates to have ruled between 304-232 BC.

Mahabharata, more than a mythology, is a mystery unsolved. This is since there are lot of verses which could be deciphered in more than one way. Mahabharata was first documented after 500 BC, after generations of passing on its verses verbally. And through passing time, no one can deny the possibility about the old verses omitted and the new verses added when Mahabharata is re-chanted and rewritten innumerable times through various authors whose intellect would be unique from others. Yet Mahabharata connects Asian history to a point where you have found artifacts which have served as evidences to elevate Mahabharata from mere Mythology to a documented history.

This novel connects those loose ends that what if all the cutting edge technology that they have mentioned in the historic epic is true?How can we conclude that if we do not know a technology that's there in the epic, they were no intellect than us now? What if there still lies an untold secret deep within the layers of earth that is valid till date? What if that secret is of immense knowledge and can decide the dwelling, construction or destruction on earth?

Vikram Singh, nephew of the head of a secret brotherhood goes en route Asoka's edicts to unveil the mystery behind the clues that his uncle left for him just before his death. If there is hidden knowledge, its always hidden only to keep its misusers at bay. A terrorist organization also tries to findout the age old mythical weapon to rule over mankind. And the stupefying quench for a historical possession begins.

Hardly difficult to keep off from reading once resumed, this book provides you with the knowledge about Indian History as well. So, pick it up, read it, and then try and separate facts from woven story around facts!!

Ah! What a novel!A knowledge giving thriller though!

Monday, January 12, 2015

ಧರ್ಮಶ್ರೀ -ಎಸ್ ಎಲ್ ಭೈರಪ್ಪ

(ಇತ್ತೀಚಿನ ಪತ್ರಿಕೆಯೊಂದರ ಸಂದರ್ಶನದಲ್ಲಿ ಮರುಮತದಾನದ ಬಗ್ಗೆ ಭೈರಪ್ಪನವರ ಅಭಿಪ್ರಾಯವನ್ನ ಕೇಳಿದಾಗ ಅವರ ಉತ್ತರ- "ನಾನು ೧೯೫೯ ರಲ್ಲಿ ಬರೆದ ಧರ್ಮಶ್ರೀ ಕಾದಂಬರಿಯಲ್ಲಿ ಮರುಮತದಾನದ ಬಗ್ಗೆ ನನ್ನ ನಿಲುವು ಸ್ಪಷ್ಟವಾಗಿದೆ" ಎಂದು. ಅವರ ಈ ಹೇಳಿಕೆಯನ್ನೋಡಿಯೇ ಧರ್ಮಶ್ರೀ -ಯನ್ನೋದಿದೆ. )

ಮತಾಂತರದ ಮುನ್ನ-ನಂತರದ ಭಾವನೆ-ಸಂಸ್ಕೃತಿ-ಸಂಬಂಧಗಳ ಘರ್ಷಣೆಯೇ ಇಲ್ಲಿನ ಕಥಾವಸ್ತು. ಸಿರಿ,ಪದವಿಗಳಿಗಾಗಲ್ಲದೆ ಓದಿ ಜ್ಞಾನವಂತನಾಗಬೇಕೆಂಬ ಒಂದೇ ಆಸೆಯಿಂದ ತನ್ನ ವಿದ್ಯಾರ್ಥಿ ಜೀವನದಲ್ಲಿ ನಾನಾ ಪಡಿಪಾಟಲು ಅನುಭವಿಸುವ ನಾಯಕ ಪದವಿ ಮುಗಿಸುವಷ್ಟರಲ್ಲಿ ಲಿಲ್ಲಿಯೆಂಬ ಕ್ರೈಸ್ತ ಹುಡುಗಿಯನ್ನು ಪ್ರೀತಿಸುತ್ತಾನೆ. ಬ್ರಾಹ್ಮಣ ಹುಡುಗನಾದ ಆತ ಮುಂಚಿನಿಂದ ಚರ್ಚೆಯಿಂದಲೂ, ಅಧ್ಯಯನದಿಂದಲೂ ಹಿಂದುತ್ವದ ಕುರಿತು ಅಚಲವಾದ ನಂಬಿಕೆ ಪೋಷಿಸಿಕೊಂಡಿರುತ್ತಾನೆ. ಕ್ರೈಸ್ತ ಧರ್ಮ-ಸಂಸ್ಕೃತಿಯೆಡೆಗೆ ಬಹಳವಾಗಿ ಶ್ರದ್ಧೆಯಿಟ್ಟ ಲಿಲ್ಲಿಯು ಇವನೊಡನೆ ಚರ್ಚೆ ಮಾಡುತ್ತ ಮಾಡುತ್ತ ಹಿಂದೂ ಧರ್ಮದೆಡೆ ಬೌದ್ಧಿಕವಾಗಿ ವಾಲುತ್ತಾಳೆ. ಹಿಂದುತ್ವ ಒಂದು ಧರ್ಮವಲ್ಲ, ಅದೊಂದು ಆಚರಣೆ ಎನ್ನುವಂತೆ ಹಿಂದುವಾಗುತ್ತ ಬಂದ ಲಿಲ್ಲಿಯೆಡೆಗೆ ಪ್ರಜ್ಞಾಪೂರ್ವಕವಾಗಿ ದೂರವಿರಬೇಕೆಂದುಕೊಂಡಷ್ಟೂ ಸೆಳೆಯಲ್ಪಡುತ್ತಾನೆ. ಮದುವೆಗೆ ತಮ್ಮ ಮತಗಳು ಅಡ್ಡಿಯಾಗುತ್ತವೆ. ಹಿಂದೂವಾಗಿ ಲಿಲ್ಲಿಯನ್ನು ಮತಾಂತರಿಸಿದರೆ ಆಗುವ ಪಲ್ಲಟಕ್ಕಿಂತ ತಾನೇ ಕ್ರೈಸ್ತನಾದರಾಯಿತೆಂದು ತನ್ನ ಕಷ್ಟದ ದಿನಗಳಲ್ಲಿ ಆಗದ ಹಿಂದೂ ಧರ್ಮವನ್ನ, ತನ್ನ ಸ್ವಜಾತೀಯರನ್ನ ವಿಮರ್ಶಿಸಿಕೊಳ್ಳುತ್ತಾನೆ. ಅಂತೆಯೇ ಮತಾಂತರ ಹೊಂದಿ ಆಕೆಯನ್ನು ವರಿಸುತ್ತಾನೆ. ಅದೆಷ್ಟೇ ತಿಣುಕಾಡಿದರೂ ಕ್ರೈಸ್ತ ಸಂಸ್ಕೃತಿಗೆ ಒಗ್ಗಲಾರ-ತನ್ನ ಪೂರ್ವಾಶ್ರಮದ ಬಂಧಗಳಿಂದ ಬಿಡಿಸಿಕೊಳ್ಳಲಾರನಾಗುತ್ತಾನೆ. ಸಂಬಂಧಪಲ್ಲಟಕ್ಕಿಂತ ತನ್ನಲ್ಲಾದ ಭಾವ ಪಲ್ಲಟ ಸಹಸ್ರಾರು ಪಾಲು ದೊಡ್ಡದಾಗುತ್ತದೆ. ಕೊನೆಗೆ ಸಮಾನಮನಸ್ಕನೊಬ್ಬನ  ಸಲಹೆಯಂತೆ ಲಿಲ್ಲಿಯೊಡನೆ ಮರುಮತಾಂತರಗೊಂಡು ಆರ್ಯಸಮಾಜಿಗನಾಗುತ್ತಾನೆ. 

ಯಾವ ಚರ್ಚಾಪ್ರಾವೀಣ್ಯತೆಯನ್ನು ಮತಾಂತರವನ್ನ ಖಂಡಾತುಂಡವಾಗಿ ವಿರೋಧಿಸಲು ಬಳಸುತ್ತಿದ್ದನೋ ಆ ವಾಕ್ಶಕ್ತಿಯನ್ನು ಬಿಶಪ್ಪರು ಮತಾಂತರ ಪ್ರೇರೇಪಿಸಲು ಒತ್ತಾಯಿಸಿದಾಗ, ಮತಾಂತರಗೊಂಡದ್ದಕ್ಕೆ ಮರಣಶಯ್ಯೆಯಲ್ಲಿದ್ದ ತಂದೆಯಿಂದಲೂ ಮೌನ ನಿರಾಕರಣ ಕಂಡಾಗ, ಆತ ಅಪರಾಧೀ ಭಾವದಿಂದ ಕುಗ್ಗುತ್ತ ಹೋಗುತ್ತಾನೆ. ಒಡಹುಟ್ಟಿದ ತಂಗಿ ತನ್ನ ಹೆಂಡತಿಯನ್ನು ಅತ್ತಿಗೆಯೆಂದು ಸಂಬೋಧಿಸದೇ ಇದ್ದಾಗ ಏಳುವ ತಳಮಳ- ಹಿಂದೂ ಹಿತೈಷಿಗಳ ಮದುವೆಯೊಂದರಲ್ಲಿ ತನ್ನ ಹೆಂಡತಿಗೆ ಸಿಗುವ ಸಮಾನ ಆತಿಥ್ಯದಲ್ಲೂ- ತಮ್ಮ ಸಂಸ್ಕಾರ ಇದರಿಂದ ಬೇರೆಯಾಯಿತಲ್ಲ, ಎಂಥಹಾ ಸಮಾನ ಧರ್ಮೀಯರಂತೆ ಕಂಡರೂ ಆ ಸಂಸ್ಕೃತಿಯ ಭಾಗ ನಾವಲ್ಲದೇ ಹೋದೆವಲ್ಲ-ಎಂಬ ವಿರೋಧಾಭಾಸವಾಗಿ ತಳಮಳ ಮುಂದುವರೆಯುತ್ತದೆ.

ಹಿಂದೂ ಧರ್ಮದ ಬಗ್ಗೆ ಸ್ಪಷ್ಟ ಅರಿವು-ಒಲವಿದ್ದೂ, ಸಂದರ್ಭಕ್ಕೆ ಕಟ್ಟುಬಿದ್ದು ಕ್ರೈಸ್ತನಾಗುವ ಸತ್ಯನ ತಾಕಲಾಟವನ್ನ ಕಾದಂಬರಿ ಶಕ್ತವಾಗಿ ಮೂಡಿಸಿದೆ.  ಮತಾಂತರ-ಮರುಮತಾಂತರಗಳ ಬಗ್ಗೆ ಚರ್ಚೆಯಾಗುತ್ತಿರುವ ಈ ಸಮಯ ಧರ್ಮಶ್ರೀ ಯ ಅಧ್ಯಯನಕ್ಕಂತೂ ತಕ್ಕುದಾಗಿದೆ.

Monday, December 1, 2014

Half-Girlfriend - Chetan Bhagat : A Review

It’s already been months of its release. Compared to all the other ones, this is his only novel which I’ve laid my hands on, so late indeed.

Bhagat has mastered the skills of keeping young readers hooked on to his story, irrespective of what he wants to convey from it. I should say, he has proved it again.

It all starts with Chetan Bhagat in Pune meeting a heart broke young man Madhav giving him his dead half-girlfriend(Riya)’s journal to read. Out of human tendency, the author reads the whole of her journal and then asks Madhav to tell him his version of story.

Well, I must admit there are flaws in narration. In the very beginning Madhav persuading Bhagat to read his girlfriend’s journal just because that guy and Riya had read Chetan’s novel as a part of unconventional English learning, itself strikes a wrong chord. Added to it, Madhav admits that the journal is his priceless possession since he got it after 2 years of their separation; But yet doesn’t want to read it since he wanted to get over her. Madhav has the personal journal of a girl who would withdraw everytime he tried to make her talk about her past. A guy who tried to decode her every expression during each moment together, a guy who has clinged on to past for 2 years thinking about Riya everyday, the only love of his life, yet not curious of what she has in her journal, given any reason, doesn’t seem realistic.


What makes Riya forget her personal journal in the remotest corner of her condo(to go unnoticed for more than 2 years) even after scribbling in it the very day before she cuts off with the world leaving absolute no clues to anyone, but this most evident one, is another loose link in the story.

Apart from that, this novel doesn’t disappoint you. The way Madhav deals with getting grants to his rural remote school from Gates foundation is worth knowing and inspirational as well. Its an eye opener about how vital English-This foreign language is, despite all odds about brainy people being overlooked just for their lack of sound knowledge of English. 

The love story and Madhav trying to make a meaning from their half-baked relationship and all the confusion around it is what that holds the reader till end.

No wonder if you skip parts of it during last chapter in the eagerness to know what happened next, it’s all reasonable!!
(With a wink, lest I did the same!!) 

Saturday, September 20, 2014

ಪ್ಯಾಪಿಯೋನ್ ೩ - ಬಾಜಿ - ಪ್ರದೀಪ್ ಕೆಂಜಿಗೆ

ಅವತ್ತು ತೇಜಸ್ವಿಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕೀಟಗಳ ಛಾಯಾಚಿತ್ರ ಪ್ರದರ್ಶನದ ಕೊನೆಯ ದಿನ. "ಪ್ಯಾಪಿಯೋನ್ ೩–ಬಾಜಿ"–ಯ ಬಿಡುಗಡೆ ಕೂಡ. ಅಲ್ಲಿಗೇ ಮುಕ್ತಾಯವೇನೊ ಅಂದುಕೊಂಡಿದ್ದ ಕಥೆಯ ಮೂರನೇ ಭಾಗ ಬರುತ್ತದೆಂದಾಗ ಕುತೂಹಲದಿಂದ ಅವತ್ತೇ ಹೋಗಿ ಕೊಳ್ಳೋಣವೆಂದು ನಮ್ಮೆಜಮಾನರನ್ನು ಪುಸಲಾಯಿಸಿದೆ.. ನಗೆಯ ಉತ್ತರ ಸರಿಯೆಂದು ಸೂಚಿಸಿತು. ಅವತ್ತು ಮರೆಯಲಾಗದ ದಿನ.. ಅದ್ಭುತ ಯಾನ ಬರೆದ, ತೇಜಸ್ವಿಯವರ ಜೊತೆ ಮಿಲೆನಿಯುಂನ ವಿಸ್ಮಯ ಸರಣಿಯನ್ನು ಹೊರತಂದ ಪ್ರದೀಪ್ ಕೆಂಜಿಗೆಯವರನ್ನು ಭೇಟಿ ಮಾಡಿದೆ.

ಜೈಲುಹಕ್ಕಿ ಪ್ಯಾಪಿಯ ಬಿಡುಗಡೆಯ ನಂತರದ ಕಥೆ ಈ ಪುಸ್ತಕ. ಬಿಡುಗಡೆಯ ದಿನ ಕಾಣಲು ಕಾತರಿಸಿದ್ದ ಪ್ಯಾಪಿಯೋನ್ (ಪ್ಯಾಪಿಲ್ಲಾನ್) ಹೊರಬಂದು ಮಕೋಪಿಯಾ ಚಿನ್ನದ ಗಣಿಯಲ್ಲಿ ಕೆಲಸಕ್ಕೆ ಸೇರುತ್ತಾನೆ. ಆದರೆ ಅಷ್ಟೇನೂ ಬಿಗಿ ಭದ್ರತೆಯಿಲ್ಲದ ಗಣಿಯ ಚಿನ್ನದ ಗಟ್ಟಿಗಳಿಗೆ ಮಾರುಹೋಗುತ್ತಾನೆ. ಬೆಂಬಿಡದೇ ಕಾಡುವ ಸೇಡಿನ ಕಿಚ್ಚನ್ನಾರಿಸಲು ಸುಲಭ ಲಾಭ ಸಂಪಾದನೆಯ ಮಾರ್ಗ ನಿರಂತರವಾಗಿ ಶೋಧಿಸುತ್ತಾ ಜೂಜುಕೋರರ ಸಂಗಡಿಗನಾಗುತ್ತಾನೆ, ಬ್ಯಾಂಕ್ ದರೋಡೆ, ಚಿನ್ನದಂಗಡಿಯ ಲೂಟಿಯ ಯೋಜನೆಯಲ್ಲಿ ಭಾಗಿಯಾಗುತ್ತಾನೆ.

ನಿಧಿ ಶೋಧಕರ ಜೂಜಿನ ಧಾಂಧಲೆ ಮೈನವಿರೆಳುವಂತಿದೆ. ಗೆದ್ದವನನ್ನು ಕತ್ತಲಲ್ಲಿ ಮುಗಿಸಲು ಕಾದು ಕೂತ ಬಲಿಷ್ಠರು. ಸತ್ತರೆಂದು ಮನೆಯವರೆಗೂ ಸುದ್ದಿ ತಿಳಿಯುವುದೇ ವಾರಗಟ್ಟಲೆ ಆದಮೇಲೆ. ಇನ್ನೆಲ್ಲಿಯ ಪೋಲೀಸು? ಎಲ್ಲೆಲ್ಲಿಯೂ ಸಾಫಲ್ಯ ಕೈಕೊಡುತ್ತದೆ. ಇನ್ನೇನು ರಾಶಿ ಸಂಪತ್ತು ಕೈಸೇರಿತೆನ್ನುವಾಗ ವಿಧಿ ಸೋಲಿನ ಸಂಚು ಹೂಡುತ್ತದೆ. ಭೂಗತ ಚಟುವಟಿಕೆಗಳು ಯಾವುವೂ ಗೆಲ್ಲದೆ ಕೊನೆಗೆ ವೆನಿಜುವಲಾ ಕಂಪನಿಯೊಂದಕ್ಕೆ ತೈಲ ನಿಕ್ಷೇಪ ಶೋಧಕರ ಮುಂದಾಳಾಗುತ್ತಾನೆ. ಅಲ್ಲಿಂದ ಮುಂದೆ ಸತ್ಪ್ರಜೆಯಾಗಿ ಗೌರವಯುತ ಬದುಕು ಕಂಡುಕೊಳ್ಳುತ್ತಾನೆ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಅವನ ಹೆಸರು ಸೇರಲ್ಪಡುತ್ತದೆ. ಯಾವ ಫ್ರೆಂಚ್ ಸರ್ಕಾರ ಆಜೀವ ನಿಷೇಧ ವಿಧಿಸಿತ್ತೋ ಅದೇ ಸರ್ಕಾರ ಅವನ ಮೇಲಿನ ನಿರ್ಬಂಧ ತೆಗೆದುಹಾಕುತ್ತದೆ.

ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಭರ್ತಿ 37 ವರ್ಷಗಳು ಕಳೆದಿರುತ್ತವೆ. ಪ್ರತಿ ಅಧ್ಯಾಯವೂ ಮುಗಿಯದೆ ವಿರಾಮ ಕೊಡುವುದು ಓದುಗರಿಗೆ ಕಷ್ಟ. ಪ್ರತಿ ಘಟನೆಯೂ ಪ್ಯಾಪಿಯ ಬಾಳಲ್ಲೊಂದು ಕಾಣದ ಸಂಕ್ರಮಣ. ಆದರೆ ಕೊಂಚವೂ ಎದೆಗುಂದದೆ-ತನ್ನ ವಿಧಿಯನ್ನು ವೃಥಾ ಹಳಿಯದೇ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ಯಾಪಿ ನಮ್ಮ ಮನದಲ್ಲೂ ಗೌರವ ಮೂಡಿಸುತ್ತಾನೆ. ದಿನ-ರಾತ್ರಿ ಲೆಕ್ಕವಿಡದೆ ಶ್ರದ್ಧೆ ಸುರಿದು ಶ್ರಮವಹಿಸಿ ಹೋಟೆಲ್ಗಳ ಮಾಲಿಕನಾಗುವ ಪ್ಯಾಪಿ ಓದುಗನ ಸ್ಫೂರ್ತಿಯಾಗುತ್ತಾನೆ. ಆತನ ಬಾಳಿನಲ್ಲಿ ಬರುವ ಹೆಂಗಳೆಯರೆಲ್ಲರೂ ತಮ್ಮ ಪ್ರತಿಫಲ ಅರಸದ ಪ್ರೀತಿ, ಮಾತುಗಳಿಂದ ಆತನ ಮನಸ್ಥಿತಿ, ಸ್ಥಿಮಿತ ತಪ್ಪದಂತೆ ಮುನ್ನಡೆಸುವ ಮಾರ್ಗದರ್ಶಿಗಳಾಗುತ್ತಾರೆ.

ಪ್ಯಾಪಿಯ ಮಾತುಗಳಲ್ಲಿ—ಇಂದು ಇದೇ ಆತ್ಮಕಥೆಯನ್ನು ಮುಗಿಸುವ ಹೊತ್ತಿಗೆ ನನಗನ್ನಿಸುತ್ತಿದೆ ಅದು ದುರ್ದಷೆ ಅಲ್ಲ, ಕಠಿಣವಾದ ಅದೃಷ್ಟ ಪರೀಕ್ಷೆ. ಜೀವಕೋಟಿಗಳ ಪ್ರತಿನಿತ್ಯದ ಜೀವನಸಂಗ್ರಾಮದಲ್ಲಿ ನನ್ನದೂ ಒಂದು ಹೋರಾಟ. ವಿಶ್ವವೆಂಬ ಚದುರಂಗದಲ್ಲಿ ನನ್ನದೂ ಒಂದು ಆಟ. ಅದೃಷ್ಟ ಚೆನ್ನಾಗಿತ್ತು. ಉರುಳಿಸಿದ ದಾಳ, ನಡೆಸಿದ ನಡೆಗಳು ಫಲಕೊಟ್ಟವು. ನಾನು ಪರೀಕ್ಷೆಯಲ್ಲಿ ಗೆದ್ದು ಬಂದೆ ಅಷ್ಟೇ!


((ಇದು ಈ ಸರಣಿಯ ಮೊದಲೆರೆಡು ಪುಸ್ತಕಗಳ ಬಗೆಗಿನ ನನ್ನ ನೋಟ. 
http://suprabhasulthanimatt.blogspot.in/2013/03/blog-post_21.html))


Wednesday, August 6, 2014

ಯಾನ - ಚಿಂತನೆಗಳ ಅನುರಣನೆ

ಭೂಮ್ಯಾಕಾಶಗಳ ವಿಸ್ತಾರವನ್ನು ಭಾವದ ನಿಲುಕಿಗೆ ತಂದು ವೈಜ್ಞಾನಿಕ ವಿವರಣೆ ಕೊಡುತ್ತಲೇ, ಪಾತ್ರಗಳ ಮನಮಂಥನವನ್ನು ಸಮರ್ಥವಾಗಿ ತೆರೆದಿಡುವ ಭಾಷೆ ಈ ಕಾದಂಬರಿಯದು. ಯಾವುದೇ ವಿಷಯವೆತ್ತಿಕೊಂಡರೂ ಪೂರಕ ಅಧ್ಯಯನ ಮಾಡಿ ಬರೆಯುವ ಭೈರಪ್ಪನವರು ಐಐಎಸ್ ಸಿ - ಭಾರತೀಯ ವಿಜ್ಞಾನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾಗಿನ ಸಂದರ್ಭವನ್ನು ಬಳಸಿಕೊಂಡು ಗಗನಯಾತ್ರೆ, ಅಂತರಿಕ್ಷಯಾನದ ಬಗೆಗೆಲ್ಲ ಮಾಹಿತಿ ಕಲೆಹಾಕಿದ್ದಾರೆ. ಅವರೇ ಹೇಳುವಂತೆ, ವಾಯುನೆಲೆ ಅಧಿಕಾರಿಗಳ ಒಡನಾಟದಿಂದ ವಾಯುಸೇನೆ ಮತ್ತದರ ಕಾರ್ಯವೈಖರಿಯ ಬಗ್ಗೆ ವಿಸ್ತಾರ ಮಾಹಿತಿ ಪಡೆದಿದ್ದಾರೆ. ವೈಜ್ಞಾನಿಕ ವಿವರಣೆಯನ್ನೆಲ್ಲ ಅಜೀರ್ಣವಾಗುವಂತೆ ಬರೆಯದೆ ಬೇಕಾದಲ್ಲಿ ಹೂರಣವಾಗಿ ಬಳಸಿದ್ದಾರೆ. ತಮ್ಮ  ನೆಚ್ಚಿನ ತತ್ವಶಾಸ್ತ್ರವನ್ನು ಸಂಬಂಧಗಳ ಮನಮಂಥನ, ಅವುಗಳ ಸ್ವರೂಪ, ವ್ಯಾಪ್ತಿ, ಸುಪ್ತ ಮನದ ಅಭಿವ್ಯಕ್ತಿಗಳಲ್ಲಿ ಕಥೆಯೊಳಗೆ ಬೆರೆತು ಹೋಗುವಂತೆ ಮೂಡಿಸಿದ್ದಾರೆ.

ಪ್ರಾಕ್ಸಿಮಾ ಸೆಂಟಾರಿಸ್ ನಕ್ಷತ್ರದೆಡೆಗೆ ಕಳುಹಿಸುವ ಅಂತರಿಕ್ಷಯಾನವೇ ಕಥಾವಸ್ತು.

ಸಂಬಂಧದ ಅಂಟು-ನಂಟು ಎಲ್ಲಿಯವರೆಗೆ? ಯಾವ ಎಳೆತ ಮನಃಬಂಧಕ್ಕೆ ಕಾರಣ? ಅದರ ಮಿತಿ ಏನು? ಏಕರೂಪಿಯಾಗಿ ಎಷ್ಟು ಸಮಯ ಅದು ನಮ್ಮನ್ನು ಬಾಧಿಸಬಲ್ಲದು? ನಾವು ಒಳಪಡುವ ನೈತಿಕತೆಗೆ ಸೌರಮಂಡಲದ ಚೌಕಟ್ಟಿದೆಯಾ? ಅದರಾಚೆಗಿನ ಬಾಧ್ಯತೆಗಳೇನು? ಸೂರ್ಯನೇ ನಮ್ಮ ಆಲೋಚನೆಗಳ ಆಕರರೂಪಿಯೇ? ನಭೋಮಂಡಲದಾಚೆ ಸಾಗುವಾಗ ಮನದ ಸುಪ್ತ ದುಗುಡಗಳಾವು? ಆಧ್ಯಾತ್ಮದಿಂದಲೋ ಕೆಲಸದಿಂದಲೋ ಈ ಎಲ್ಲ ತುಮುಲಗಳನ್ನು ದೂರವಿರಿಸಲು ಸಾಧ್ಯವೇ?- ಈ ಎಲ್ಲ ಆಯಾಮಗಳನ್ನು ತಡಕುತ್ತ ಸಾಗುತ್ತದೆ ಯಾನ..

ಒಂಟಿತನದ ಸವಾಲುಗಳು, ಪಾತ್ರಗಳು ಅದನ್ನು ಬಗೆಹರಿಸಿಕೊಳ್ಳಲು ಹುಡುಕುವ ದಾರಿಗಳು, ಮತ್ತೂ ಅಂತರ್ಮುಖಿಗಳನ್ನಾಗಿ ಮಾಡುತ್ತ, ಹೊಸತನ್ನು ಕಲಿಯುತ್ತ, ತಮ್ಮನ್ನು ತಾವೇ ಕಂಡುಕೊಳ್ಳುವ ಪ್ರಯತ್ನವನ್ನು ಇನ್ನೂ ತೀವ್ರವಾಗಿಸುತ್ತದೆ ಯಾನ.

ಭೈರಪ್ಪನವರ ಚಾರ್ ಧಾಮ್ ಯಾತ್ರೆಯ ಅನುಭವವೂ ಇಲ್ಲಿ ಪಾತ್ರವೊಂದರ ಸನ್ನಿವೇಶವಾಗಿ ಮೂಡಿಬಂದಿದೆ. ಅವರ ಆತ್ಮಕಥೆ 'ಭಿತ್ತಿ' ಓದಿದ್ದರೂ ಕಾದಂಬರಿಯಾದ್ದರಿಂದಲೋ ಏನೋ ಯಾನದಲ್ಲಿಯ ಹಿಮಾಯಲಯದ ವರ್ಣನೆಯೇ ಮನಮುಟ್ಟಿತು.

ಯಾನದ ವಸ್ತುವಿನ ಬಗ್ಗೆ ಓದಿ ಇದು ವೈಜ್ಞಾನಿಕ ಕಾದಂಬರಿಯೆಂದುಕೊಂಡೆ. ಆದರೆ ಬರಿಯ ರಂಜನೆಯಾಗಿ ಉಳಿಯದೆ, ಬರಿಯ ವಿಜ್ಞಾನವೂ ತುಂಬಿರದೆ ಮನೋವಿಜ್ಞಾನ, ತತ್ವ, ಆಧ್ಯಾತ್ಮದ  ಹೊಳಹುಗಳಲ್ಲಿ ಹರಿದು ಬೇರೆಯದೇ ಸ್ತರದಲ್ಲಿ ನಿಲ್ಲುತ್ತದೆ ಯಾನ.

ನನ್ನ ಯಾನ ೨ನೇ ಮುದ್ರಣದ್ದು. ನಿಮ್ಮದು?..

Thursday, September 26, 2013

ಕಾಡು ಮತ್ತು ಕ್ರೌರ್ಯ – ಕೆ ಪಿ ಪೂರ್ಣಚಂದ್ರ ತೇಜಸ್ವಿ

ನಮ್ಮನ್ನಗಲಿ ೫ ವರ್ಷವಾದರೂ ಓದಿಸುತ್ತಿದ್ದಾರೆ ತೇಜಸ್ವಿ.

ಕಲ್ಮನೆಯೆಂಬ ಮಲೆನಾಡ ತಪ್ಪಲಿನ ಊರ ಕಥೆ ಇದು. ಅಲ್ಲಿನ ಜನರ ನಂಬಿಕೆಗಳು ಹಾಗು ಅವರ ಮೌಢ್ಯದ ನಡುವಿನ ತಾಕಲಾಟವೇ ಕಾದಂಬರಿಯ ವಸ್ತು.

ಕಲ್ಮನೆಯ ರಂಗಪ್ಪನವರು ವೆಂಕನೆಂಬ ಮೌಢ್ಯಪೋಷಿತ ಮಂತ್ರವಾದಿಗೆ ಬದುಕಿದ್ದಾಗ ಮೂಢನಂಬಿಕೆಗಳಿಗೆ ಬಲಿಯಾಗದೆ, ಕಾಯಿಲೆಯಾಗಿ ತೀರಿಹೋದಾಗ ಮಗಳು ಹೋಮ-ಶಾಂತಿಯೆಂದು ವೆಂಕುವನ್ನಾಶ್ರಯಿಸದೆ, ಕಡೆಗೆ ರಂಗಪ್ಪನ ಸಮಾಧಿ ಬಳಿ ವಾಮಾಚಾರ ಮಾಡಲು ಹೋದ ವೆಂಕುವಿನ ಅರಿವಿಗೆ ಬಾರದೆ ತಿರುಮಂತ್ರವಾಗಿ ರಂಗಪ್ಪನ ಬದುಕು-ಸಾವಿನ ಹಾಗೆ ಅವನ ನಂಬಿಕೆ ಅವನಿಗೇ ಪ್ರಶ್ನೆಯಾಗಿ ಉಳಿಯುತ್ತದೆ. ಇಲ್ಲಿ ವೆಂಕ ಶತಮಾನಗಳ ಮೂಢ ಕ್ರೌರ್ಯದ ಪ್ರತಿನಿಧಿ.

ರಂಗಪ್ಪನ ಮಗಳು ನಳಿನಿಯನ್ನು ವಿವಾಹವಾಗಲು ಬಂದ ವಿದ್ಯಾವಂತ ಸೋಮುವು ಆಕೆಯ ತಂದೆಯಗಲಿದ ದುಃಖದಲ್ಲಿ ಮುಸುಕಾದ ಪ್ರೇಮದೆಡೆ ಅಪನಂಬಿಕೆ ಬೆಳೆಸಿಕೊಳ್ಳುತ್ತಾನೆ. ಈ ಮಧ್ಯೆ ಕಲ್ಮನೆಯ ಕಾಡಿದ ಭಾರೀ ಕಾಡುಹಂದಿಗೆ ಡೈನಮೈಟ್ ಇಟ್ಟು, ಅದಕ್ಕೆ ಬಲವಾದ ಪೆಟ್ಟು ತಾಗಿದರೂ ಇನ್ನೂ ಬದುಕುಳಿಯುತ್ತದೆ. ಆಳುಗಳು ಅದರ ಇರುವನ್ನು ಹುಡುಕಿ ಕೊನೆಗಾಣಿಸೋಣವೆಂದಾಗ ಸಮಾಧಿಯನ್ನೂ ಬಿಡದೆ ಬೆದಕಿ ತೆಗೆದು ಹೆಣ ಬಗೆದ ರಾಕ್ಷಸ ಹಂದಿಯ ಸಿಡಿಮದ್ದಿನಿಂದ ಹಿಂಜಿದ ಬಾಯಲ್ಲಿ ಹುಳು ಮುಲುಗುಟ್ಟಿ ಯಾತನೆ ಪಟ್ಟು ಸಾಯಲಿ ಎಂದು ಬಯಸುವ ಸೋಮು ನಿಷ್ಕಾರಣ ಕ್ರೌರ್ಯವೊಂದರ ಕುರುಹಾಗುತ್ತಾನೆ.

ಹಂದಿ ಬೇಟೆಯಾಡಲು ಹೋದಾಗಿನ ರೋಚಕತೆ, ಪಾನಮತ್ತ ಮಾರ್ಯನೆಂಬ ಆಳಿನ ಕಾಲ್ಗಳಡಿಯಲ್ಲೇ ತಿವಿದು ನುಸುಳಿದಾಗಿನ ಕಳ್ಳಭಟ್ಟಿಯ ನಶೆ ತಂದ ಫಜೀತಿ, ವೆಂಕನ ಪೊಳ್ಳು ಮಂತ್ರಗಳಿಗೆ ಒಂಟಿಗ ಹಂದಿಯ ರೂಪದ ಭೂತ ವಶವಾಯಿತೆಂದು ಬೀಗುವ ಅವನ ಹೆಡ್ಡತನ, ಜೀತದಾಳು ಲಿಂಗನ ಮುಗ್ಧತೆ, ತಾನು ಬಯಲುಸೀಮೆಗೆ ಓಡಿಹೋಗಬೇಕೆನ್ನುವ ತವಕ, ಎಲ್ಲವೂ ನಮ್ಮನ್ನು ಕಲ್ಪನೆಯ ಕಥೆಯೊಳಕ್ಕೆ ಇಳಿಸಿ ಎಲ್ಲಿಯೂ ನಿಲ್ಲಿಸದೆ ಓದಿಸಿಕೊಂಡು ಹೋಗುತ್ತವೆ.

ಪ್ರಕಾಶಕರು ಹೇಳುವಂತೆ ಈ ಕಾದಂಬರಿ ೫೦ ವರ್ಷ ಹಳೆಯದು. ತೇಜಸ್ವಿಯವರ ಕಥಾಮಂಡನೆ ಕೊಂಚವೂ ಹಳತೆನ್ನಿಸುವುದಿಲ್ಲ. ಅವರ ಬರಹವನ್ನ ಇಷ್ಟ ಪಡುವವರು ಓದಲು ತಪ್ಪಿಸಬಾರದ ಪುಸ್ತಕ.


Wednesday, June 26, 2013

ಕಲ್ದವಸಿ – ಡಾ. ಕೆ. ಏನ್. ಗಣೇಶಯ್ಯ

ಗಣೇಶಯ್ಯನವರ ಇತರೆ ಪುಸ್ತಕಗಳಾದ ‘ಶಾಲಭಂಜಿಕೆ’, ‘ಪದ್ಮಪಾಣಿ’, ‘ಕಪಿಲಿಪಿಸಾರ’, ‘ಚಿತಾದಂತ’ ಪುಸ್ತಕಗಳಂತೆ ಕಲ್ದವಸಿಯನ್ನೂ ಓದಿ ಮುಗಿಸುವ ವರೆಗೆ ಕೆಳಗಿಡಲಾಗಲಿಲ್ಲ. ಅವರ ಬರವಣಿಗೆಯ ವಸ್ತುವೇ ಅಂಥವು.

ರಾಜರು ಸಾಮಾನ್ಯವಾಗಿ ತಂದೆಯ ಹೆಸರಿನಿಂದ ಗುರುತಿಸಲ್ಪಟ್ಟರೆ ಶಾತವಾಹನರನ್ನು ಸೋಲಿಸಿ ಅಮರಾವತಿಯನ್ನಾಳಿದ ಹಿಂದೂ ಧರ್ಮೀಯರೂ ರಘುವಂಶೀಯರೂ ಆದ ಇಕ್ಷ್ವಾಕು ವಂಶಸ್ಥರು ಕೂಡ ಬೌದ್ಧ ರಾಜರಂತೆ (ಗೌತಮಿ ಪುತ್ರ ಯಜ್ಞ ಶತಕರ್ಣಿ, ಗೌತಮಿ ಪುತ್ರ ವಿಜಯ ಶತಕರ್ಣಿ..) ತಾಯಿಯ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಸ್ಥೂಲವಾಗಿ ಬೆಳಕು ಚೆಲ್ಲಲಾಗಿದೆ. ಮೊದಲ ಕಥೆ ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ಕಂಠಪಾಠ ಮಾಡಿ ಕಾಟಾಚಾರಕ್ಕೆ ಪಾಸಾದ ನಮಗೆ ಹೀಗೆ ಇತಿಹಾಸವನ್ನು ಕಥೆಯಾಗಿ ತೋರಿಸಿ ಕುತೂಹಲ ಕೆರಳಿಸಿದ್ದರೆ ಇನ್ನಷ್ಟು ಉತ್ಸುಕತೆಯಿಂದ ಓದುತ್ತಿದ್ದೆವೇನೋ ಎನ್ನಿಸದೆ ಇರಲಿಲ್ಲ.

ನಂತರದ ಕಥೆ ಹಿಂದುತ್ವದ ರಕ್ಷಣೆಯ ವಿಚಾರ ಹಾಗು ಉಗ್ರಗಾಮಿ ಸಂಘಟನೆಗಳ ವಿತ್ತ ವ್ಯವಹಾರಗಳ ಬಗ್ಗೆ ಒತ್ತು ಕೊಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಸ್ವಾರ್ಥಿ ರಾಜಕಾರಣಿಗಳ ಬೆಂಬಲಕ್ಕೆಂದೇ ಬದುಕೇನೊ ಅನ್ನುವಂತೆ ಅನ್ಯ ಕೋಮಿನವರ ಬಗೆಗೊಂದು ಮೃದು ಧೋರಣೆ ಬೆಳೆಸಿಕೊಂಡು ಇತಿಹಾಸದ ಸತ್ಯಗಳೆಡೆ ಜಾಣಕುರುಡರಾಗುವ ಬುದ್ಧಿಜೀವಿಗಳಿಗೆ ಅಂಕಿ-ಅಂಶ ಸಹಿತ ವೈಚಾರಿಕತೆಯ ವಿಮರ್ಶೆ ಇದೆ.

ನನ್ನ ತಂದೆ ಈ ಪುಸ್ತಕವನ್ನ ತಂದ ಕೂಡಲೇ ಹೆಸರಿನ ಅರ್ಥವೇ ಆಗಲಿಲ್ಲ. ಇದೊಂದು ೩ ಕಥೆಗಳ ಸಂಕಲನ. ಕಲ್ದವಸಿ ಅನ್ನೋ ಕಥೆ ಅವುಗಳಲ್ಲಿ ಕಡೆಯದು. ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಪ್ರೇರಣೆಯಾದ ಹಲವು ಸಂದರ್ಭಗಳಲ್ಲಿ ಒಂದರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನ್ನು ರಾಮಾಯಣದ ವೈಭವೀಕರಣದ ಪ್ರಸ್ತುತತೆಯ ಬಗ್ಗೆ ಚಿಂತನೆಗೆ ದೂಡಿಬಿಡುತ್ತಾರೆ. ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. ಇಲ್ಲಿ ಮನಮಂಥನಕ್ಕೆ ಅವಕಾಶವಿದೆ. ಮತ್ತೆ ಮತ್ತೆ ಕೇಳಿ, ಓದಿ, ಹೇಳಿದ ರಾಮಾಯಣದ ತಿರುಳು ಮತ್ತೊಮ್ಮೆ ಒರೆಗಲ್ಲಿಗೆಳೆಯಲ್ಪಡುತ್ತದೆ. ಕಾಲಗರ್ಭದಲ್ಲಿ ಹೂತು ಹೋದ ವೈಚಾರಿಕತೆ ತಾನೇ ಮೈವೆತ್ತು ಬಂದಂತಿದೆ.

ವಿವಿಧ ವಿಚಾರಗಳ ಬಗ್ಗೆ ವಿಶದವಾಗಿ ತಿಳಿಸುತ್ತಾ ತೌಲನಿಕತೆಯನ್ನು ಬೆಳೆಸಿಕೊಳ್ಳುವಲ್ಲಿ ಈ ಪುಸ್ತಕ ಸಹಾಯಕವಾಗಿದೆ. ಪ್ರಾಧ್ಯಾಪಕರಾಗಿದ್ದುಕೊಂಡೂ ಸಂಶೋಧನಾತ್ಮಕ ಮನೋಭಾವವಿರುವ ಲೇಖಕರು ಮೆಚ್ಚುಗೆಯಾಗದೆ ಇರಲು ಕಷ್ಟಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ಬೋಧಕರಾದ ಗಣೇಶಯ್ಯನವರ ಪ್ರಯತ್ನ ಈ ನಿಟ್ಟಿನಲ್ಲಿ ಶ್ಲಾಘನೀಯ. 

Thursday, March 21, 2013

ಪ್ಯಾಪಿಲಾನ್ - ೧,೨, - ಪ್ರದೀಪ ಕೆಂಜಿಗೆ, ಕೆ ಪಿ ಪೂರ್ಣಚಂದ್ರ ತೇಜಸ್ವಿ (ಮೂಲ- ಹೆನ್ರಿ ಛಾರೇರೆ)


ಹೆನ್ರಿ ಛಾರೇರೆ 
MBA ಓದುವಾಗ ನನ್ನ ಕಾಲೇಜಿನಲ್ಲಿ ಪುಸ್ತಕಗಳ ಒಂದು ಸ್ಟಾಲ್ ಇಟ್ಟಿದ್ರು. ಆಗ ಸ್ನೇಹಿತ ಅಕ್ಷಯನ ಜೊತೆ ಕೆಲವು ಬುಕ್ಸ್ ಕೊಂಡಿದ್ದೆ. ಪ್ಯಾಪಿಲಾನ್ ಪುಸ್ತಕ ಕೊಳ್ಳೋವಾಗ ಅವನಂದ, ನಂಗೂ ಈ ಪುಸ್ತಕ ಬೇಕು, ನೀನು ಪ್ಯಾಪಿಲಾನ್ ಭಾಗ ೧ ತಗೋ, ನಾನು ಭಾಗ ೨ ತಗೋತೀನಿ. ಖರ್ಚು ಕಮ್ಮಿ, ಅದಲು ಬದಲು ಮಾಡಿಕೊಂಡು ಓದೋಣ ಅಂದ. ಅಲ್ಲಿಂದ ಶುರುವಾಯ್ತು ನಮ್ಮ ಕೋಳಿ ಜಗಳ. ಪುಸ್ತಕವನ್ನೇನೋ ಕೊಂಡು ಆಯ್ತು. ಮೊದಲು ಓದಿ ಎರಡೂ ಪುಸ್ತಕ ನಿಂಗೆ ಓದೋಕೆ ಕೊಡ್ತೀನಿ ಅಂದ ಅಕ್ಷಯ ವರ್ಷಗಟ್ಟಲೆ ಮುಗಿದ್ರೂ ಕೊಡ್ಲೇ ಇಲ್ಲ!! ನಾನಂತೂ ಪೀಡಿಸೋಕೆ ಶುರುವಿಟ್ಟೆ. ಪುಸ್ತಕ ಕೊಡು ಅಂತ ಒಂದೇ ಗೋಳು ನಂದು. ಅಕ್ಷಯ ಏನು ಮಾಡಿದ್ರು ಕೊಡಲೊಲ್ಲ. ಕೊನೆಗೆ ಸಪ್ನಾ ಬುಕ್ ನಿಂದ ಆರ್ಡರ್ ಹಾಕಿ ತರಿಸಿ ಕೊಟ್ಟನೆ ವಿನಃ, ಅದೇ ಪುಸ್ತಕಗಳನ್ನ ವಾಪಸ್ ಮಾಡ್ಲಿಲ್ಲ.

ಓದಿದ ನಂತರವೇ ತಿಳಿದದ್ದು, ಅವನು ಆ ಪುಸ್ತಕಗಳಿಗೆ ಜೋತು ಬಿದ್ದದ್ದು ಯಾಕೆ ಅಂತ. ಇಂಥಾ ರೋಚಕ ಆತ್ಮಕಥೆಯನ್ನ ನಾನೇ ಮೊದಲು ಓದಿದ್ದರೂ ಅವನಿಗೆ ಹಿಂದಿರುಗಿಸ್ತಿರಲಿಲ್ಲ

ಒಬ್ಬ ಖೈದಿ ಕಾರಾಗೃಹದಿಂದ ಎಷ್ಟು ಬಾರಿ ಪಲಾಯನಗಯ್ಯಲು ಸಾಧ್ಯ? ಕಪ್ಪು ಜಗತ್ತಿಗೆ ಸೇರಿದ್ದರೂ ನಮ್ಮ ಕಥಾನಾಯಕ ಹೆನ್ರಿ (ಉರ್ಫ್ ಪ್ಯಾಪಿಲಾನ್)ಗೆ ಸುಳ್ಳು ಆಪಾದನೆಯ ಮೇಲೆ ಸಿಕ್ಕಿ ಹಾಕಿಸಿ ಜೀವಾವಧಿಯಂಥಾ ಕಠೋರ ಶಿಕ್ಷೆಗೆ ತಳ್ಳಿದ ಫ್ರಾನ್ಸ್ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಕುದಿ ಸಿಕ್ಕಿಹಾಕಿಕೊಂಡಂತೆಲ್ಲ ಸ್ವಾತಂತ್ಯ ಬಯಸುವ ಪಲಾಯನದೆಡೆಗೆ ಅವನನ್ನು ಪ್ರೇರೇಪಿಸುತ್ತದೆ. ನರಕ ಸದೃಶ ಜೈಲುಗಳ ವ್ಯವಸ್ಥೆ ಆತನ ಆತಸ್ಥೈರ್ಯ ಕಲಕುವ ಬದಲು ಹೆಚ್ಚು ವ್ಯವಸ್ಥಿತಗೊಳಿಸುತ್ತದೆ. ಒಬ್ಬರಾದಂತೆ ಒಬ್ಬ ಸ್ನೇಹಿತರನ್ನು ಪಲಾಯನದ ಮಜಲುಗಳಲ್ಲಿ ಕಳೆದುಕೊಳ್ಳುವ ಹೆನ್ರಿ ಎರಡು ಬಾರಿ ಏಕಾಂತ ಸೆರೆವಾಸಕ್ಕೆ ತಳ್ಳಲ್ಪಟ್ಟರೂ ಎದೆಗುಂದದೇ ಇದ್ದು, ಆತ್ಮಹತ್ಯೆಯಂಥಾ ಯೋಚನೆ ಆವರಿಸಿದಂತೆಲ್ಲ ಹತ್ತಿಕ್ಕುತ್ತ ಹೋಗುತ್ತಾನೆ. 

ಸೆರೆಮನೆಗಳಲ್ಲಿನ ಅನಾಚಾರ, ಅಲ್ಲಿನ ವಾರ್ಡರ್, ಇತರೆ ಅಧಿಕಾರಿಗಳ ದುರುಳತನ ಮನಕಲಕುವಂತಿದೆ. ಪುಂಡಾಟಗಳಾಗಿ ಕೊಲೆಗಳಾದರೆ, ತನಿಖೆ ನಡೆಯುತ್ತಿದ್ದುದೂ ಅಷ್ಟಕ್ಕಷ್ಟೇ. ಶವಸಂಸ್ಕಾರಕ್ಕೆಂದೇ ಪ್ರತ್ಯೇಕ ಜಾಗಗಳಿಲ್ಲದೆ ಶವವನ್ನು ಗೋಣಿಯೊಳಗೆ ತುಂಬಿ ಸಮುದ್ರದ ಶಾರ್ಕ್ ಗಳ ಮಧ್ಯೆ ಎಸೆಯಲಾಗುತ್ತಿತ್ತು. ಏಕಾಂತ ಸೇರೆವಾಸವಂತೂ ಅತೀ ಕೀಳು ವ್ಯವಹಾರ. ಪುಟ್ಟದಾದ ಭಾಗಶಃ ಕತ್ತಲ ಕೋಣೆಯೊಳಗೆ ದೂಡಿದರೆ ಮುಗಿಯಿತು; ಅಲ್ಲೇ ವರ್ಷಗಟ್ಟಲೆ ಬಂಧಿ. ಯಾರೊಟ್ಟಿಗೂ ಮಾತಾಡುವ ಹಾಗೇ ಇಲ್ಲ. ಚಿಕ್ಕ ಕಿಂಡಿಯೊಂದರಿಂದ ಆಹಾರದ ಸರಬರಾಜು, 2 ವಾರಕ್ಕೊಮ್ಮೆ ಕಿಂಡಿಯಿಂದ ಮುಖ ಹಾಕಿ ಅಧಿಕಾರಿಗಳ ಸಮ್ಮುಖದಲ್ಲಿ ಕ್ಷೌರ. ಅಪರೂಪಕ್ಕೊಮ್ಮೆ ಸಾಗರದಲ್ಲಿ ಸ್ನಾನ. ದಿನವೂ ಬಹಿರ್ದೆಸೆಗೆ ಹೋಗಲು ಒಂದು ಬಕೆಟ್ಟು, ಮೇಲೆ ತೂತಿರುವ ಹಲಗೆ. ಉಪಯೋಗಿಸಿದ್ದಾದ ಮೇಲೆ ಬಕೆಟ್ ಹೊರದೂಡಿ ಸುಮ್ಮನಾಗಬೇಕು. ಚಿಕ್ಕ ಪುಟ್ಟ ಖಾಯಿಲೆ ಬಂದು ವೈದ್ಯರು ಭೇಟಿಯಿದ್ದರೆ, ತೂತಿನಿಂದಲೇ ಕೈ-ಕಾಲು ಆಚೆ ಹಿಡಿದು ಪರೀಕ್ಷೆ. ಊಟವಂತೂ ಕಾಯಿಲೆಗಳಿಂದ ತಡೆಯುವಷ್ಟು ಪುಷ್ಟವಾದುದಲ್ಲ. ಏಕಾಂತ ತಡೆಯಲಾಗದೆ ಮಾನಸಿಕ ಅಸ್ವಸ್ಥಗೊಂಡು, ಆತ್ಮಹತ್ಯೆಗಯ್ಯುವವರೇ ಎಷ್ಟೋ ಜನ. ಫ್ರಾನ್ಸ್ ನ ಅಂದಿನ ಅತ್ಯಂತ ಕೀಳು ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಕನಿಕರ ಬರುವಂತಿದೆ. ಆ ಮಟ್ಟಿಗೆ ಜಗತ್ತಿನ ಕಣ್ತೆರೆಸಿದ ಬರವಣಿಗೆ ಪ್ಯಾಪಿಲಾನ್ ನದ್ದು. 

ಪಲಾಯನದಲ್ಲಿ ಎಷ್ಟೋ ಪೌರರು, ಅಧಿಕಾರಿ ವರ್ಗದವರು, ಸ್ನೇಹಿತರು, ಖೈದಿಗಳು, ಅಪರಿಚಿತರು ಸಹಾಯ ಮಾಡುತ್ತಾರೆ.

ಪ್ಯಾಪಿಲಾನ್ ಬಳಸಿದ ಪಲಾಯನ ಮಾರ್ಗ 
ಪಲಾಯನಗಯ್ಯುತ್ತಾ ಪಿಜನ್ ಐಲ್ಯಾಂಡ್ ತಲುಪುವ ಹೆನ್ರಿ ಮತ್ತವನ ಸ್ನೇಹಿತರಿಗೆ ಅಲ್ಲಿನ ಕುಷ್ಟ ರೋಗ ಪೀಡಿತ ಖೈದಿಗಳಿಂದ ಸಿಗುವ ಸಹಾಯ ಅವಿಸ್ಮರಣೀಯ. ತಾವೇ ಸಾವನ್ನು ಎದುರು ನೋಡುತ್ತಿದ್ದರೂ ಇವರ ಮೇಲಿನ ಕಾಳಜಿಯಿಂದ ಇವರು ಇದ್ದಷ್ಟು ದಿನ ಏನೂ ಕೊರತೆಯಾಗದಂತೆ, ತಮ್ಮ ಜಾಡ್ಯ ಇವರಿಗೆ ತಾಕದಂತೆ ಆಹಾರ, ಬಟ್ಟೆ, ಹೊದಿಕೆ ಎಲ್ಲವನ್ನೂ ಶುದ್ಧಿ ಮಾಡಿ ಮುಟ್ಟಗೊಟ್ಟು, ಹಣವನ್ನೂ ಒದಗಿಸಿ ಕೊಡುತ್ತಾರೆ. 

ಅಲ್ಲಿಂದ ಕೊಲಂಬಿಯಾದಲ್ಲಿ ಮತ್ತೆ ಸೆರೆಸಿಕ್ಕು ಅಲ್ಲಿಂದ ತಪ್ಪಿಸಿಕೊಂಡು ಹೊರಡುವ ಹೆನ್ರಿ, ಗೊಜಿರ ಬುಡಕಟ್ಟಿನ ಬಳಿ ನೆಲೆಯಾಗುತ್ತಾನೆ. ಅಲ್ಲಿನ ಜನ ಇವನನ್ನು ತಮ್ಮೊಳಗೊಬ್ಬನೆಂದು ಸ್ವೀಕರಿಸಿದರೂ ವರ್ಷದವರೆಗೂ ನಿಲ್ಲದೆ ಹೆನ್ರಿಯ ಸೇಡಿನ ಕಿಚ್ಚು ಮತ್ತೆ ಆತನನ್ನು ಸೆರೆಗೆ ದೂಡುತ್ತದೆ. 

ಬಾರಂಕ್ವಿಲಾದಲ್ಲಿ ಬಂದಿಯಾಗುವ ಈತನ 3 ಪಲಾಯನಗಳು ವಿಫಲವಾಗಿ ಮುಂದೆ ರೋಯಲ್ ದ್ವೀಪದಲ್ಲಿಯೂ ಎಲ್ಲವೂ ಹೊಂದಿ ಇನ್ನೇನು ಓಡಿಹೋಗಬಲ್ಲೆ ಅನ್ನಿಸಿದಾಗ 2 ಬಾರಿ ಪ್ರಯತ್ನ ವಿಫಲವಾಗುತ್ತದೆ. ಡೆವಿಲ್ಸ್ ದ್ವೀಪದ ಸುತ್ತ ಶಾರ್ಕುಗಳು ಕಿಕ್ಕಿರಿದಿದ್ದರೂ ಲೆಕ್ಕಿಸದೆ ಕೊನೆಗೆ ಸಮುದ್ರದಲ್ಲಿ ತೇಲುವ ತೆಂಗಿನ ಮೂಟೆಗಳನ್ನು ಉಪಯೋಗಿಸಿ ಕುರೋವು ದ್ವೀಪ ತಲುಪಿಯೇ ಬಿಡುತ್ತಾನೆ. ಅಲ್ಲಿಂದ ಆತನ ಬದುಕು ಇಂಗ್ಲೆಂಡಿನ ಜಾರ್ಜ್ ಟೌನ್ ಗೆ ಕರೆದೊಯ್ಯುತ್ತದೆ. ಕೊಟ್ಟಕೊನೆಯಲ್ಲಿ, ಅಲ್ಲಿಯೂ ನೆಮ್ಮದಿ ಕಾಣದ ಚಿಟ್ಟೆಯಂಥಾ ಪ್ಯಾಪಿಲಾನ್ ವೆನಿಸುವೆಲಾದಲ್ಲಿ ನೆಲೆಯಾಗುತ್ತಾನೆ.

1973 ರಲ್ಲಿ ಈ ಆತ್ಮಕಥೆಯನ್ನು ಆಧರಿತ ಚಲನಚಿತ್ರ ಸಹ ಬಂದಿದೆ. ಕಥೆಯೇ ಪುಸ್ತಕಕ್ಕೊಂದು ಅಸಾಧ್ಯ ಓಘ ಕೊಡುತ್ತದೆ. ಪುಟದ ಪ್ರತಿ ತಿರುವಿನಲ್ಲೂ ಕಥೆಯ ತಿರುವುಗಳೇ!! 

ಕನ್ನಡದಲ್ಲಿ ಓದಿದಂತೆ ವಿಚಾರಗಳು ಇಂಗ್ಲಿಷ್ ಪುಸ್ತಕಗಳಲ್ಲಿ ಅಷ್ಟು ರುಚಿಸುವುದಿಲ್ಲ. ಇಂಗ್ಲೀಶ್ ಓದುವಾಗ ಸಾಮಾನ್ಯವಾಗಿ ಬರೀ ಕಾದಂಬರಿ ಆರಿಸಿಕೊಳ್ಳುವ ನಾನು ಇನ್ನು ಮುಂದೆ ಕಥೆ-ಕಾದಂಬರಿಯೇ ಆದರೂ ವಿಚಾರಾತ್ಮಕ ಪುಸ್ತಕಗಳ ಕಡೆ ವಾಲಬೇಕೆಂದು ನಿರ್ಧರಿಸಿದ್ದೇನೆ. ಬರಿಯ ಇಂಗ್ಲಿಷ್ ಭಾಷಾಜ್ಞಾನಕ್ಕಷ್ಟೇ ಅಲ್ಲದೆ ಸಾಮಾನ್ಯಜ್ಞಾನಕ್ಕಾಗಿಯೂ ಓದಬೇಕೆಂದುಕೊಂಡಿದ್ದೇನೆ.... ಪ್ಯಾಪಿಲಾನ್ ಗೆ, ಅದನ್ನು ಕೊಡಿಸಿದ ನನ್ನ ಸ್ನೇಹಿತನಿಗೆ ಧನ್ಯವಾದ...

Friday, October 5, 2012

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು.. - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಒಂಟೆ ಹುಳ (Giraffe Weevil)
ಕೀಟ, ಪ್ರಾಣಿ ಜಗತ್ತಿನ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ. "ಸಿಲ್ಲಬುಸ್ಸು ಇರಬಾರ್ದೆ ಸಿನಿಮಾ ಥರ" ಅನ್ನೋ ಗುಂಪಿಗೆ ಸೇರಿದ, ಪದವಿ ಓದುವಾಗಿನ ವಿಷಯಗಳನ್ನೆಲ್ಲಾ ಅಲ್ಲಲ್ಲಿಗೇ ಮರೆತು ಬಂದ ನನಗಂತೂ ತೇಜಸ್ವಿಯವರ ಪುಸ್ತಕಗಳು ವರದಾನ. 




ಮೊಟ್ಟೆ ಇಡಲು ಬೀಡಾದಂತೆ ಕಟ್ಟಿದ ಎಲೆ (Giraffe Weevil Eggtube)
ಒಂಟೆ ಹುಳ(Trachelophorus giraffe).. ಇದು ಅಬ್ಬಲು ಮರದ (Bredelia tomentosa) ಮೇಲೆ ಬೀಡಾದಂಥಹ ನಳಿಕೆಯನ್ನು ಕಟ್ಟಿ ಅದರಲ್ಲಿ ತನ್ನ ಮೊಟ್ಟೆ ಇರಿಸುತ್ತದೆ. ಮಡಗಾಸ್ಕರ್ ನಲ್ಲಿ  ಇದು ಸಾಮಾನ್ಯ. ಬೀಡಾದಂಥ ನಳಿಕೆಗಳನ್ನು ಮೂಡಿಗೆರೆಯಲ್ಲಿ ನೋಡಿದ ತೇಜಸ್ವಿಯವರು ಕೀಟ ಯಾವುದೆಂದು ಹುಡುಕುತ್ತ ಆ  ಬಗ್ಗೆ ಕುತೂಹಲ ಮೂಡಿಸುತ್ತಾ ಹೋಗುತ್ತಾರೆ. 

ಏರೋಪ್ಲೇನ್ ಹುಳದ ರೂಪಾಂತರ  (Metamorphosis of Dragon fly)

ಏರೋಪ್ಲೇನ್ ಚಿಟ್ಟೆಯನ್ನ(Dragon fly) ನಾವೆಲ್ಲರೂ ನೋಡಿರುತ್ತೇವೆ. ಆದರೆ ಅದರ ರೂಪಾಂತರದ ಬಗ್ಗೆ, ತಲೆ ಕೆಡಿಸಿಕೊಂಡಿರೋದಿಲ್ಲ. ಬೇರೆಯ ಸುಮಾರು ಕೀಟಗಳಂತೆ ಕೋಶಾವಸ್ಥೆಗೆ (Cucoon) ಬಾರದೆ  ಲಾರ್ವಾದಿಂದ ನೇರವಾಗಿ ಪ್ರೌಢಾವಸ್ಥೆಗೆ ಬರುವ ವಿಚಾರವನ್ನ ಅನುಭವದೊಡನೆ ನಿರೂಪಿಸುತ್ತಾರೆ. 



ಹಾವುಮೀನು (SnakeHead Fish)
ಬಾವಲಿಗಳ ಸೂಪರ್ ಕಂಪ್ಯೂಟರಿನ ಹಾಗೆ ಕಾರ್ಯ ನಿರ್ವಹಿಸುವ ultrasonic ಶಬ್ಧದ ಬಗ್ಗೆ, ಹಾವುಗಳ ಅತೀಂದ್ರೀಯ  ಎಂತಲೇ ಕರೆಯಲ್ಪಡುವ ಶಾಖದ ವ್ಯತ್ಯಯದಿಂದ ನೆರವಾಗುವ ಮೂಗಿನ ಮೇಲಣ ಹೊಳ್ಳೆಗಳ ಬಗ್ಗೆ, ಕಳೆದರೂ ಮತ್ತೆ ಬೆಳೆಯುವ ಬಾಲದ ಹಲ್ಲಿ, ತುಂಡಾದರೂ ಬದುಕಿ ಬೆಳೆಯುವ ಎರೆಹುಳದ ದೇಹ, ಜೀವ ಕಳೆದರೂ ಸುಮಾರು ಹೊತ್ತು ಜೀವದಿಂದಿದ್ದು ತಮ್ಮ ಸ್ನೇಹಿತನ ಬೆರಳು ಕಡಿದ ಆಮೆಯ ಬರಿಯ ತಲೆ, ಏಡಿಯ ಕೊಂಡಿಗಳು, ವಿವಿಧ ಜೇಡಗಳ ಜೀವನ ಕ್ರಮದ ಬಗ್ಗೆ,  ಹಾವು-ಮೀನುಗಳ ವಿಚಿತ್ರ ಗರಗಸದಂಥಹ ಮೇಲ್ಮೈಯ್ಯ  ಬಗ್ಗೆ ಕಥೆಯ ರೂಪದಲ್ಲಿ ನಮಗರಿವಿಲ್ಲದಂತೆ ಸಾಕಷ್ಟು ವಿಚಾರ ತಿಳಿಸುತ್ತ ಹೋಗುತ್ತಾರೆ ಲೇಖಕರು. 

"ಅಕ್ಕಮ್ಮ ಹೇಳಿದ ಕಥೆ"ಯಲ್ಲಿ ಜಿಂಕೆಯೊಂದನ್ನು ಬೇಟೆಗಾರರಿಂದ ಉಳಿಸಿದ್ದಕಾಗಿಯೇ ಸಿದ್ದೆಗೌಡರಿಗೆ ಸಿರಿಯ ಪ್ರಾಪ್ತಿಯಾಯಿತೆಂದು ನಂಬುವ ಮುಗ್ಧ ಕಥೆ ನಿರೂಪಿತವಾಗಿದೆ.

ಮಲಬಾರ್ ಟ್ರೋಜನ್ ಹಕ್ಕಿ (Malabar Trogon)
ಗದ್ದೆ ಗೊರವ (Mud Snipe)
ಮಲಬಾರ್ ಟ್ರೋಜನ್ ಹಕ್ಕಿಗಳೆರಡು ಮೂಡಿಗೆರೆಗೆ ಎಲ್ಲಿಂದಲೋ ಹಾರಿ ಬಂದು, ಪ್ರಜ್ವಲಿಸುವ ಉಲ್ಕೆಯಂತೆ ಹೊಳೆವ ಬಣ್ಣದ ಅವುಗಳಲ್ಲೊಂದನ್ನು ಅರಿವಿಲ್ಲದೆ ಸುಖಾಸುಮ್ಮನೆ ತಗಲುವ ಗುಂಡಿನೇಟಿಗೆ ಬಲಿಯಾಗಿ ಹೋಗಿದ್ದು, ಗದ್ದೆಗೊರವನ ಹಕ್ಕಿಯೊಂದು ತೇಜಸ್ವಿ ಹಾಗು ಅವರ ಸ್ನೇಹಿತರು ಮೀನು ಹಿಡಿಯುವಾಗ ಗೆಳೆತನ ಮಾಡಿ, ಅಕಸ್ಮಾತಾಗಿ ಎಸೆದ ಗಾಳಕ್ಕೆ ಸಿಕ್ಕಿದ ಎರೆಹುಳ ತಿನ್ನಲು ಹೋಗಿ ಸಾವಿಗೀಡಾದದ್ದು  ಇನ್ನೆರಡು ಕಥೆಗಳಲ್ಲಿ ಬಿಂಬಿತವಾಗಿದೆ.


"ಹೆಜ್ಜೆ ಮೂಡದ ಹಾದಿ"ಯ ಕಥೆ ಅದೇ ಹೆಸರಿನ ಪುಸ್ತಕದಲ್ಲಿಯೂ ಇದೆ. ಅದರೊಡನೆ ಅವರ ಬರವಣಿಗೆಯ ಇನ್ನಷ್ಟು ಸವಿಯೂಟ ಸಹ ಲಭ್ಯ. ಮುದಗೊಳಿಸಲು ಬೇಕಿದ್ದಲ್ಲಿ ನವಿರು ಹಾಸ್ಯ ಇರುವಂತೆಯೇ ಚಿಂತನೆಗೂ ದೂಡುವಂಥಹ ಬರಹ ತೇಜಸ್ವಿಯವರ ಎಲ್ಲ ಪುಸ್ತಕಗಳಲ್ಲಿ ಬಿಂಬಿತವಾಗಿವೆ. ಅವರ ಮೇರು ಬರವಣಿಗೆಯ ಬಗ್ಗೆ ಇದು ನನ್ನ ಮೊದಲ ತೊದಲು ಪರಿಚಯ..

ಈ ಪುಸ್ತಕವನ್ನ ನನಗಾಗಿ ತಂದು ಕೊಟ್ಟ ನಿತಿನ್ ಗೆ ಪ್ರೀತಿಯ ಥಾಂಕ್ಯೂ. 

Monday, October 4, 2010

ಸೀಳುಗವಲು!!


      ಇತ್ತೀಚೆಗಷ್ಟೇ laser treatment ಆಗಿ, ಕಣ್ಣುಗಳು "readable" ಆದ ತಕ್ಷಣ ಹಿಡಿದ ಪುಸ್ತಕ, "ಕವಲು". ಭಾರೀ ನಿರೀಕ್ಷೆಯಿಂದಲೇ ಓದಿದ ನಂಗೆ ಅಷ್ಟೇನೂ ಖುಷಿ ಕೊಡಲಿಲ್ಲ 'ಕವಲು'.
      ಕಾರಣ, ಭೈರಪ್ಪನವರು ಓದಿಸುವ ಮೊದಲೇ ಅವಲತ್ತುಗೊಂಡಿರುವಂತೆ, ಇದು ಸಮಕಾಲೀನ ಸಂಬಂಧಗಳನ್ನ ಎಳೆಎಳೆಯಾಗಿ ಬಿಡಿಸಿಡೋ ಪ್ರಯತ್ನ. ಫ್ರಾಯ್ಡ್ ಸಿದ್ಧಾಂತಗಳ ಭಾವಸರಣಿಯ ಪರಿಚಯ. ಕಥಾವಿಷಯವೇ ಸಂಬಂಧಗಳ ಬಗ್ಗೆಯಾದ್ದರಿಂದ ಸಂಬಂಧಗಳ ಕವಲು, ಭಾವ ತುಮುಲ, ಸಹಜ. ಒಪ್ಪಬಲ್ಲಂಥದ್ದೆಯೇ .ಆದರೆ ತೀರ ಒಂದೆರಡು ಪಾತ್ರಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಪಾತ್ರಗಳೂ ಕವಲಿಗೀಡಾದ ಸಂಬಂಧಗಳ ಒಡನಾಡಿಯಾಗಿರುವುದು, ಸಮಾಜದ ಋಣಾತ್ಮಕ ಮುಖವನ್ನು ಎತ್ತಿ ಹಿಡಿಯುವಂಥದ್ದಾಗಿದೆ. "ದೂರ ಸರಿದರು" ಕಾದಂಬರಿಯ ಹಾಗೆ ವಿಶ್ಲೇಷಣೆಗಳು ಹರಿಯುತ್ತಾ ಹೋಗುತ್ತದೆ. ಆದರೆ 'ಕವಲು'ವಿನಲ್ಲಿ, ಇಂದಿನ ಸಮಾಜದ ಬಗೆಗೆ, ಈಗಿನ ಸಂಬಂಧಗಳ ಬಗೆಗೆ, ನಂಬಿಕೆಯೇ ಅಲುಗಾಡುವಂತಿದೆ. ಕಾದಂಬರಿಯ ಹರಿವಿನುದ್ದಕ್ಕೂ, ಶೋಷಿತಗೊಳ್ಳದೆ ಹೋರಾಡಿ (ಆ ಹೋರಾಟ ಅನೈತಿಕವಾಗಿದ್ದರೂ ಸಹ) ನ್ಯಾಯ(!) ದೊರಕಿಸಿಕೊಳ್ಳುವ ಮಹಿಳೆಯರ ದೃಷ್ಟಾಂತಗಳಿವೆ. ಇದು ಎಷ್ಟರ ಮಟ್ಟಿಗೆ ಪ್ರಸ್ತುತ? ನಮನಿಮಗೆ ಕಾಣುವ ಹೆಣ್ಣುಮಕ್ಕಳಲ್ಲಿ ಎಷ್ಟು ಜನ domestic voilence ಗೆ ಒಳಗಾಗಿದ್ದರೂ ಸಹ ನ್ಯಾಯ ತಮ್ಮ ಪರವಾಗಿದೆ ಎಂದು ತಿಳಿಯದೆಯೋ ಅಥವಾ ಮುಂದೇನು? ಎಂಬ ಅಭದ್ರತೆಯಿಂದಲೋ ಕಾನೂನಿನ ಮೊರೆಹೋಗುತ್ತಾರೆ? ತಮ್ಮ ಗಂಡನಿಗೆ ವಿವಾಹೇತರ ಸಂಬಂಧವಿದೆಯೆಂದು ತಿಳಿದೂ ಮಕ್ಕಳಿಗೋಸ್ಕರವೋ, ಮರ್ಯಾದೆಗೋಸ್ಕರವೋ  ಅಂಜಿ ಎಷ್ಟು ಹೆಣ್ಣುಮಕ್ಕಳು ಮದುವೆ  ಬಂಧನವಾದರೂ ಅದರೊಳಗೆ ಭದ್ರತೆ ಕಂಡುಕೊಂಡಿಲ್ಲ? ಇನ್ನು ತಮಗೆ ವಿವಾಹೇತರ ಸಂಬಂಧವಿದ್ದೂ ತನ್ನ ಗಂಡನೊಂದಿಗೆ ಇರಬೇಕೆಂದೋ,ಅಥವಾ ಹಣದಾಸೆಗೆ ಜೀವನಂಶಕ್ಕೆಂದೋ ಎಷ್ಟು ಜನ ಕಟಕಟ್ಟೆ ಏರುತ್ತಾರೆ?
      ಭೈರಪ್ಪನವರ ಕಾದಂಬರಿ ಈ ವಿಷಯದಲ್ಲಿ ಆಪ್ಯಾಯತೆಯಿಂದ ದೂರವೇ ಉಳಿಯುತ್ತದೆ. ಹೆಣ್ಣಿನ (ಭಂಡ!?) ಧೈರ್ಯದಲ್ಲಿ ಗಂಡಿನ ಧ್ವನಿ ಕಂಡೀತಷ್ಟೇ. ಸಮಾಜದ ಪರಿಚಯ ಎಂದಿಗೂ ಸ್ವಾಗತಾರ್ಹ. ಪ್ರತಿ ಕಾದಂಬರಿಯಲ್ಲಿಯೂ ಸಂಚಲನ ಉಂಟುಮಾಡುವಷ್ಟು  ಸತ್ವ ಉಳ್ಳ ಭೈರಪ್ಪನವರು, ಧನಾತ್ಮಕ ಸರಣಿಯ ಆಲೋಚನೆಗಳನ್ನು, ಇನ್ನೂ ಕೆಲವು ಸಂಬಂಧಗಳ ಬೆಸುಗೆಯಲ್ಲಿ ಇನ್ನೂ ಕೊಂಚ ಎತ್ತಿಹಿಡಿಯಬಹುದಿತ್ತೇನೋ. ಮುತ್ಸದಿಗಳಿಗೆ ಸಮಾಜ ತಿದ್ದಬಲ್ಲ ಶಕ್ತಿಯಿರುತ್ತದೆ. ಆ ಶಕ್ತಿಯ ಬಳಕೆ ಇನ್ನೂ ಸಮರ್ಪಕವಾಗಿ ಆಗಿದ್ದಿದ್ದರೆ ಚೆನ್ನಿತ್ತು. ಇಲ್ಲಿ ಮಾತ್ರ ಪ್ರೀತಿಪಾತ್ರತೆಯಿಂದ ದೂರ ನಿಲ್ಲುತ್ತದೆ "ಕವಲು". ಮೊಸಕ್ಕೊಳಗಾಗಿ ಮೋಸಮಾಡುವ ಪಾತ್ರಗಳಿಗಿಂತ ಸಮಾಜ ತಿದ್ದಬಲ್ಲ ಪಾತ್ರಗಳೂ ಇದ್ದಿದ್ದರೆ ಮಿನುಗುತ್ತಿತ್ತು 'ಕವಲು'. ಮಿಕ್ಕಿದ್ದು, ಓದುಗರಿಗೆ ಬಿಟ್ಟದ್ದು...