Showing posts with label Article. Show all posts
Showing posts with label Article. Show all posts

Tuesday, May 6, 2025

ಬರೆಯಬೇಕು ಅನ್ನಿಸಿತು. ಬರೆದುಕೊಂಡೆ!

ಕೆಲವು ವಿಚಾರಗಳೇ ಹಾಗೆ.. ಎಲ್ಲೋ ಒಂದು ಮೆಲುಕಿನಿಂದ, ಎಲ್ಲಿಯೋ ತಳಕು ಹಾಕಿಕೊಂಡ ನೆನಪಿನ ಸಂದಿನಿಂದ ತಲೆಎತ್ತಿಬಿಡುತ್ತವೆ. 

ಕ್ಲಾಸ್ಸಿನ ಒಳಗಷ್ಟೇ ಅಲ್ಲದೆ, ಎಲ್ಲ ಮಕ್ಕಳೂ ಗುರುಗಳೆಂದರೆ ಶಾಲೆಯಾಚೆ ಎಂದಿಗೆ ಸಿಕ್ಕರೂ ಸಂತಸ ಹಾಗು ಶಿಸ್ತಿನಿಂದ ಗುಡ್ ಮಾರ್ನಿಂಗ್, ಗುಡ್ ಇವಿನಿಂಗ್ ಗಳನ್ನ ಹೇಳುತ್ತಾ, ಕ್ಲಾಸಿನಲ್ಲಿ ೬೦ಕ್ಕೂ ಹೆಚ್ಚು ಮಕ್ಕಳಿದ್ದರೂ, ನಮ್ಮ ಹೆಸರು ಅವರಿಗೂ ನೆನಪಿರಬೇಕು ಅನ್ನುವ ಹಂಬಲ ನಮಗೆ; ಗುರುಗಳು ಅಂದರೆ ದಾರಿ ತೋರಿಸುವವರು ಅನ್ನುವ ಗೌರವವಿತ್ತೇ ಹೊರತು, ಅವರ ಸಂಬಳಕ್ಕಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ ಅನ್ನುವ ಲವಲೇಶ ಮಾತ್ರ ಯೋಚನೆಯೂ ಇಲ್ಲದ ಕಾಲ. ಬಹುಶಃ ನಮ್ಮೀ ಭಕ್ತಿಯೇ ನಮ್ಮ ಗುರುಗಳ ಕಣ್ಣಿನ ನಮ್ಮೆಡೆಗಿನ ಅಕ್ಕರೆಯಾಗುತ್ತಿತ್ತೋ ಏನೋ. ಒಟ್ಟಿನಲ್ಲಿ ನಮ್ಮ ಶಾಲಾ ದಿನಗಳನ್ನು ತಿರುವಿ ಹಾಕಿ ನೋಡಿದಷ್ಟೂ ಸಂತಸ ತರುತ್ತದೆ. 

೭ನೇ ತರಗತಿ ಓದುವಾಗ ನಮಗೆ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ಆಕೆಯನ್ನು ಎಲ್ಲರೂ ತುಂಬಾ ಗೌರವಿಸುತ್ತಿದ್ದೆವು. ಹಲವು ವಿಚಾರಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವಾಗ - ಇನ್ನೆಲ್ಲೋ ಪ್ರಗತಿಪರ ಮಹಿಳೆಯರ ಬಗ್ಗೆ ತಿಳಿಹೇಳುವಾಗ, ಇತಿಹಾಸದ ಪಾಠಗಳಲ್ಲಿ ಬರುವ ರಾಣಿಯರ ಬಗ್ಗೆ ವಿಶ್ಲೇಷಿಸಿ ನಮ್ಮಲ್ಲಿ ಕುತೂಹಲ ಮೂಡಿಸಿ, ಹಲವಾರು ಬಾರಿ ಅವರೊಡನೆ ಸಂವಹಿಸುವಾಗ ಗುರುಗಳೆಂದರೆ ಹೀಗಿರಬೇಕು ಎನಿಸುತ್ತಿತ್ತು. ಒಳ್ಳೆಯ ಹೆಸರಿಗಾಗಿ ಮತ್ತು ಸಕಾರಾತ್ಮಕ ಪರಿಣಾಮ ಬೀರುವ ಸಲುವಾಗಿಯೇ ಶಿಕ್ಷಕ ವೃತ್ತಿ ಮಾಡುವ ಕೆಲವರು ಗುರುಗಳಲ್ಲಿ ಅವರ ಗುರುತು ನೆನಪಲ್ಲಿ ಪಡಿಮೂಡಿತ್ತು. ಒಟ್ಟಿನಲ್ಲಿ ಪ್ರಭಾವ ಬೀರಿದ ಹೆಣ್ಣುಮಕ್ಕಳಲ್ಲಿ ಆಕೆಯ ಭಾಷೆ, ಧೈರ್ಯ, ಎಲ್ಲರನ್ನೂ ಮಾತನಾಡಿಸುವ ಸ್ಥೈರ್ಯ, ಎತ್ತರ ಕಡಿಮೆಯಿದ್ದರೂ, ತೆಳ್ಳಗಿದ್ದರೂ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಉತ್ತರಿಸುವ ರೀತಿ, ನಾವು ಮಕ್ಕಳು ಪಾಠದ ವಿಷಯವಾಗಿ - ವಿಚಾರಪೂರಿತ ಪ್ರಶ್ನೆಗಳನ್ನು ಕೇಳಿದಾಗಲೂ ವಿಚಲಿತರಾಗದೆ ಸಮಾಧಾನ ಹೇಳುತ್ತಿದ್ದುದು - ಇವೆಲ್ಲವೂ ಆಗಿನ ಕಾಲಕ್ಕೆ ನನಗೊಂದು ಮಾದರಿಯಾಗಿತ್ತು. 

ಪ್ರೌಢ ಶಾಲೆಗೆಂದು ಮನೆಯ ಹತ್ತಿರವಿದ್ದ ಇನ್ನೊಂದು ಶಾಲೆಗೆ ದಾಖಲಾದೆ. ಓದುತ್ತಿದ್ದುದು ಚಿಕ್ಕ ಊರಾದ್ದರಿಂದ ನನ್ನ ಹಿಂದಿನ ಶಾಲೆಯ ಅಧ್ಯಾಪಕರುಗಳು ಆಗಾಗ ಎದುರಾಗುತ್ತಿದ್ದರು. ಎಂದೂ ನನಗೆ ಸಮಾಜ ಶಾಸ್ತ್ರ ಹೇಳಿಕೊಡುತ್ತಿದ್ದ ನನ್ನ ನೆಚ್ಚಿನ ಟೀಚರ್ ಸಿಕ್ಕಿರಲಿಲ್ಲ. ಸಂದರ್ಭ ನೆನಪಿಲ್ಲವಾದರೂ ಬಹುಶಃ ಬೇರ್ಯಾರೊ ಟೀಚರ್ ಸಿಕ್ಕಿ, ನನಗವರ ನೆನಪಾಗಿಯೋ ಏನೋ ೨ ವರ್ಷಗಳಾದ ನಂತರ ಒಮ್ಮೆ ಆಕೆಯ ಮನೆಯ ಮುಂದೆ ಹೋಗುವಾಗ ಮಾತಾಡಿಸಿಯೇ ಬಿಡುವ ಅನ್ನಿಸಿತು. ಆಕೆ ಮನೆಯಲ್ಲಿರುತ್ತಾರೋ ಇಲ್ಲವೋ- ರಜೆಯಾದ್ದರಿಂದ ಬಹುಶಃ ಇರಬಹುದು, ಮಾತನಾಡಿಸುತ್ತಾರೋ ಇಲ್ಲವೋ, ಆಕೆಗೆ ನನ್ನ ನೆನಪು ಇರುತ್ತದೋ ಇಲ್ಲವೋ, ದೊಡ್ಡ ತರಗತಿ, ಒಂದೇ ವರ್ಷ ಅವರು ನನಗೆ ಹೇಳಿ ಕೊಟ್ಟಿದ್ದು- ಎಂಬೆಲ್ಲ ಕಾರಣಾತಿ ಕಾರಣಗಳನ್ನೆಲ್ಲ ಬದಿಗಿಟ್ಟು, ಆಕೆಯ ಮನೆಯ ಗೇಟ್ ಒಳಹೋದೆ !

ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಬಟ್ಟೆ ಒಗೆಯುತ್ತಲಿದ್ದದ್ದು ನೋಡಿ, "ಟೀಚರ್ ಇದ್ದಾರಾ? ಮಾತನಾಡಿಸಬೇಕಿತ್ತು" ಅಂದೆ. "ಸ್ವಲ್ಪ ಇರು" ಎಂದ ಅವರು ನನ್ನ ಟೀಚರ್ ಹೆಸರನ್ನು ಕೂಗುತ್ತಾ, "ನಿನ್ನನ್ನು ನೋಡಲು ನಿನ್ನ ವಿದ್ಯಾರ್ಥಿ ಬಂದ ಹಾಗಿದೆ" ಎಂದು ಒಳಹೋದರು. ಮನೆಯೊಳಗೆ ಹೆಚ್ಚು ಕತ್ತಲೆ ಇತ್ತು. ಬಹುಶಃ ಕಿಟಕಿಯಿಂದ ಬರುವ ಬೆಳಕು ಮನೆಯಲ್ಲೆಲ್ಲಾ ಚೆಲ್ಲುವಷ್ಟು ದೊಡ್ಡದು ಇರಲಿಕ್ಕಿಲ್ಲ. ಒಳಗೆ ಹೇಗೆ ಕಾಣುತ್ತದೆಂದು ಬಿಸಿಲಲ್ಲಿದ್ದ ನನಗೆ  ಗೋಚರಿಸಲಿಲ್ಲ. 

ಹೊರನಿಂತು ಕಾದಿದ್ದು ಅರ್ಧ ನಿಮಿಷ. ಅಷ್ಟರಲ್ಲಿ ನನ್ನ ಟೀಚರ್ ಈಗ ಹೇಗಿರಬಹುದು? ಪಾಠ ಹೇಳಿಕೊಡುವಾಗಲೆಲ್ಲ ಆಕೆ ಸದಾ ಶುಭ್ರ ಸೀರೆಯನ್ನು ಒಪ್ಪವಾಗಿ ಉಟ್ಟಿರುತ್ತಿದ್ದರು. ನಡೆಯುವಾಗಲೂ ಅಷ್ಟೇ. ಪುಸ್ತಕವನ್ನು ಎದೆಗೊತ್ತಿಕೊಂಡು, ಯಾವ ಮಕ್ಕಳು ವಿಶ್ ಮಾಡಿದರೂ, ನಗೆಯೊಡನೆ ಪ್ರತ್ಯುತ್ತರ. ಸ್ಕೂಲ್ ನಲ್ಲಿಯೂ ಇದ್ದ ಹಾಗೆ ಕೇಳಿರಲಿಲ್ಲ. ಬೇರೇನಾದರೂ ಕೆಲಸಕ್ಕೆ ಸೇರಿರಬಹುದೋ ಏನೋ, ಏನು ಮಾತನಾಡುವುದೆಂಬ ಅರಿವೇ ಇಲ್ಲದೇ ಸಮಯ ನೋಡದೇ ಬಂದಿದ್ದೇನೆ. ಏನೆನ್ನುತ್ತಾರೋ ಮೊದಲೇ ಖಡಕ್ ಮಹಿಳೆ ಆಕೆ ಅನ್ನುವ ಹಿಂಜರಿಕೆ ಮನಸ್ಸಿನಲ್ಲಿ ತಳಮಳಿಸುತ್ತಿತ್ತು. ಅರ್ಧ ನಿಮಿಷ ಅರ್ಧ ಘಳಿಗೆಯಂತೆ ಭಾಸವಾಗಿತ್ತು. 

ಅಗೋ ಅಲ್ಲಿ ನನ್ನ ಟೀಚರ್ ಬಂದರು! ನನ್ನ ಕಾಯುವಿಕೆ ಕೊನೆಗೊಂಡಿತ್ತು- ಅವರನ್ನು ಆತುರದಿಂದ ಮಾತನಾಡಿಸಲು ಪಾಕೆಟ್ ಮನಿ ಎಲ್ಲಾ ಇಲ್ಲದ ಜಾಯಮಾನದಲ್ಲಿ ದೊಡ್ಡ ಮಂದಹಾಸ ಮುಖದ ಮೇಲೆ- ಹಾಗು ಅಷ್ಟೇ ಖಾಲಿ ಕೈಯಲ್ಲಿ ನಿಂತಿದ್ದೆ.  ಕಂಕುಳಲ್ಲಿ ಪುಟ್ಟ ಮಗುವನ್ನು ಸ್ವಲ್ಪ ಕಷ್ಟ ಪಟ್ಟಂತೆ ಎತ್ತಿಕೊಂಡು, ಆ ಮಗು ಈಗಷ್ಟೇ ಊಟ ಮಾಡಿರಬಹುದು, ಕೈಯೊರೆಸಿಕೊಳ್ಳುತ್ತ, ಆ ಮಗುವಿನ ಬಾಯೊರೆಸುತ್ತ, ನಡೆದು ಬಂದರು. ನೆನಪಿನ ಹಾಳೆಯಲ್ಲಿದ್ದ ಸೂಕ್ಷ್ಮ ಕಾಯವಾದರೂ ದೊಡ್ಡ ಗತ್ತಿನ ಆಕೆಗೂ, ನನ್ನ ಮುಂದೆ ನಿಂತಿದ್ದ ಈ ಮನೆಗೆಲಸ ಮಾಡಿಕೊಂಡು ಸೋತು ಹೋದಂತೆ ಕಂಡ ತಾಯಿಗೂ ಅಜ-ಗಜಾಂತರ ವ್ಯತ್ಯಾಸವಿದ್ದಂತೆ ಅನಿಸಿತು. ಮೊದಲ ಬಾರಿಗೆ ಜೀವನದಲ್ಲಿ ಭ್ರಮನಿರಸನದ ಅನುಭವ. 

ಅಲ್ಲಿ ಏನು ಮಾತನಾಡಿದೆ, ಆಕೆ ಗುರುತು ಹಿಡಿದರಾ? ಅಲ್ಲಿಂದ ಮುಂದೆ ಧನ್ಯವಾದ ಹೇಳಿ ಬೇಗ ಅಲ್ಲಿಂದ ಹೊರಬಂದಿದ್ದೊಂದು ನೆನಪು. ಮಿಕ್ಕುದೆಲ್ಲಾ ಮಬ್ಬು ಗೊಂದಲ !

ನಾನು ಎಷ್ಟು ಸುಲಭವಾಗಿ ಪೂರ್ವಾಗ್ರಹ ಪೀಡಿತಳಾಗಿದ್ದೆ ! ಎಳೆಯ ಮನಸ್ಸಿಗೆ ಆಕೆ ಸೂಪರ್ ವುಮನ್ ಹಾಗೆ ಕಂಡಿದ್ದಾಕೆ ಇದ್ದಕ್ಕಿದ್ದ ಹಾಗೆ ಸಾಧಾರಣ ಗೃಹಿಣಿಯಾಗಿ ನಾನಾಕೆಯನ್ನು ಕಂಡಾಗ ಮನಸ್ಸು ಒಪ್ಪಲೇ ಇಲ್ಲ ಏಕೆ? ಪ್ರತಿಯೊಬ್ಬರಿಗೂ ಖಾಸಗಿ ಬದುಕೂ ಸಾಮಾಜಿಕ ಜನಭರಿತ ಜೀವನದ ನಡುವಿನ ಅಂತರ ಇರುತ್ತದೆಂದು ಬಹುಶಃ ನನಗೆ ಆಗಲೇ ಗ್ರಹಿಕೆಗೆ ಬಂದಿದ್ದಿರಬೇಕು. 

ನಮ್ಮ ಭೂತಕಾಲವು ನಮ್ಮ ಕಲ್ಪನೆಯ ಮೇಲೆ ಬೀರುವ ಪ್ರಭಾವ ಎಂಥದ್ದಲ್ಲವೇ ಅನಿಸುತ್ತದೆ! ಹಿಂದಿನ ಆಗುಹೋಗುಗಳ ಆಧಾರದ ಮೇಲೆ ಅದೆಷ್ಟು ಸುಲಭವಾಗಿ ಇದಮಿತ್ಥಮ್ ಎಂದು ಮನದಲ್ಲಿ ಗೆರೆ ಎಳೆದುಕೊಂಡು ಅಲ್ಲಿಂದ ಮುಂದೆ ಸಾಗಲೂ ಒಲ್ಲದ ಮನಸ್ಥಿತಿಯನ್ನು ಅದೆಷ್ಟು ಸಾಧಾರಣವಾಗಿ ರೂಪಿಸಿಕೊಂಡಿದ್ದೇನಲ್ಲ ಎನ್ನಿಸಿಬಿಟ್ಟಿತ್ತು. ಇದೆಲ್ಲವೂ ದಿನಗಳುರುಳುತ್ತ ಗೋಚರವಾಗಿದ್ದರೂ, ಆ ದಿನದ ನನ್ನ ಟೀಚರ್ ಭೇಟಿ ನನ್ನ ಮಂದಮತಿಗೆ ಸಾಕ್ಷಿಯಾಗಿ ಇಂದು ನಿಂತು ನಗುತ್ತಿದೆ!



Tuesday, May 31, 2022

ಕುಡಿಯರ ಕೂಸು - ಶಿವರಾಮ ಕಾರಂತ

ಕುಡಿಯರ ಕೂಸು
ಮಲೆಗಳಲ್ಲಿ ಮನತಣಿಯುವಂತೆ ತಡವುತ್ತ ಓಡಾಡುವ ಅನುಭವ ನೀಡುವ ಪುಸ್ತಕ - ಕುಡಿಯರ ಕೂಸು. ಕಾರಂತರು ಈ ಕಾದಂಬರಿಯಲ್ಲಿ ಸುಬ್ರಹ್ಮಣ್ಯದ ಬಳಿಯ ಹಿರಿಮಲೆ, ಕಿರಿಮಲೆಯ ಕುಡಿಯರ ಜೀವನ ಬಿಂಬಿಸುವ ಕಥೆ ಹೆಣೆದಿದ್ದಾರೆ. ಇದ್ದೊಬ್ಬ ಮಗನನ್ನೂ ಸೊಸೆಯನ್ನೂ ಕಳೆದುಕೊಳ್ಳುವ ಕೆಂಚಜ್ಜ ತನ್ನ ಮೊಮ್ಮಗು ಕರಿಯನನ್ನು ಬೆಳೆಸುವ ಕಥೆಯ ಜಾಡು ಹಿಡಿದು,  ಕರಿಯನ ಜೀವನ ಹೇಗೆ ರೂಪುಗೊಂಡಿತೆಂಬ ಬಗ್ಗೆ ಚಿತ್ರಣ ಕಟ್ಟಿಕೊಡುತ್ತ ಹೋಗುತ್ತಾರೆ ಕಾರಂತರು. 

ಏಲಕ್ಕಿ ಸೊಂಪಾಗಿ ಬೆಳೆಯುವ ಮಲೆಯ ಮೂಲ ನಿವಾಸಿಗಳೂ, ಅಲ್ಲಿನ ಮಲೆಯನ್ನು ಕೊಳ್ಳುವ ಧಣಿಗಳಿಗೆ ವಿಧೇಯರೂ ಆಗಿರುವ ಕುಡಿಯರು ಬಯನಿಯ ದಿಂಡು ತಿನ್ನುತ್ತಲೂ, ಗೆಡ್ಡೆ ಗೆಣಸು ಸೇವಿಸುತ್ತಲೂ, ಹರಿಯುವ ಜೀವನದಿಯ ತೊರೆಯಲ್ಲಿ ಮೀನು-ಏಡಿಗಳನ್ನು ಹಿಡಿದು, ಬೇಟೆಯಾಡಿ  ಜೀವನ ಮಾಡಲು ಬಲ್ಲರು. ಅವರ ಇತರೆ ಅವಶ್ಯಕತೆಗಳಿಗೆ ಮಲೆಯ ಧಣಿಗಳಿಂದ ಬರುವ ಹಚ್ಚಡ, ಉಪ್ಪು, ಚಿಮಣಿ ಎಣ್ಣೆಯೇ ಸಾಕೆನ್ನುವಂಥವರು. 

ಕಲ್ಲೊಂದಕ್ಕೆ ದೈವತ್ವವನ್ನು ಕೊಟ್ಟು ಆದರಿಸುವ ಮುಗ್ಧರು ತಮ್ಮ ಪೂಜಾರಿಯ ಮೈಮೇಲೆ ಬರುವ ಕಲ್ಕುಡ ದೈವಕ್ಕೆ ನೇಮದಿಂದಿರುತ್ತಾರೆ. ಇವರ ಜೀವನದಲ್ಲಿ ಕಲ್ಕುಡನ ಮಹಿಮೆ- ಆತನ ಒಲುಮೆಗಾಗಿ ಇವರೆಲ್ಲರ ನಿಷ್ಠೆ, ಇವೆಲ್ಲ ಕಲ್ಕುಡನು ಕಲ್ಲಿನಲ್ಲೋ, ಮೈದುಂಬುವ ಪೂಜಾರಿಯಲ್ಲೋ ಇಲ್ಲದೆ, ತಂತಮ್ಮ ಮನದ ಒಳಗಣ ತಿಳಿವಾಗಿ ತೋರುವುದು ಸುಸ್ಪಷ್ಟ.

ಮಳೆಗಾಲದಲ್ಲಿ ಕಾಡು ಸವರಿ ಕುಮರಿಯಲ್ಲಿ ಭತ್ತದ ಬೇಸಾಯ ಮಾಡುವ, ಉಳಿದಂತೆ ಹಲವು ಉರುಳುಗಳನ್ನು ಒಡ್ಡಿ ಬೇಟೆಯಾಡುವ ಇವರು ಒಬ್ಬರಿಟ್ಟ ಉರುಳಿಗೆ ಬಿದ್ದ ಪ್ರಾಣಿಯನ್ನು ಇನ್ನೊಬ್ಬರು ಕದಿಯಲು ಕೈ ಹಾಕದ ನಿಯಮದವರು. ಎಲ್ಲ ಮನುಷ್ಯರಂತೆಯೇ ಮಸೆಯುವ ಮಾತ್ಸರ್ಯ, ಅಧಿಕಾರದ ಆಸೆ ಇವರ ಜೀವನದಲ್ಲಿ ತಿರುವುಗಳನ್ನು ತರುತ್ತ ಮನೋರಂಜಕ ಅಧ್ಯಾಯಗಳನ್ನು ತೆರೆಯುತ್ತ ಹೋಗುತ್ತದೆ.

ಈ ಪುಸ್ತಕದಲ್ಲಿ ಮೂಡಿರುವ ನಿಸರ್ಗದ ವರ್ಣನೆ, ಕಾಡಿನ ಉತ್ಪನ್ನಗಳ ವರ್ಣನೆ, ಆನೆಗಳ ನಡವಳಿಕೆ, ಕರಡಿಯ ಬೇಟೆ,  ನರಭಕ್ಷಕವಾಗುವ ಚಿರತೆಯ ಬೇಟೆ, ಇವ್ಯಾವುವೂ ಉದ್ದೇಶಪೂರ್ವಕವಾಗಿ ತೋರದೆ, ಕಥೆಗೆ ಪೂರಕವಾಗಿ ಎಂದು ಮಾತ್ರ ಕಾಣುವುದೇ ಈ ಕಥೆಯ ಅಂದವನ್ನು ಇನ್ನೂ ಹೆಚ್ಚಿಸಿವೆ. 

ಇಲ್ಲಿ ಮೂಡಿ ಬಂದಿರುವ ಕುಡಿಯರ ಸರಳ ಜೀವನ, ಕನಿಷ್ಠ ಅವಶ್ಯಕತೆಗಳ ಬಗ್ಗೆ ಓದುವ ಈಗಿನ ಪೀಳಿಗೆಗೆ ಆಗಿನ ಸರಳತೆಯೇ, ಅವರ ಸ್ವಾವಲಂಬಿ ಜೀವನವೇ ಒಂದು ಕೌತುಕವಾಗಿ ಕಂಡು ಪುಸ್ತಕ ನಿರರ್ಗಳವಾಗಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. 

Saturday, January 16, 2021

Tandav : Amazon Web Series - A Review

 

Tandav - Amazon Prime Video
TANDAV - with the trailer itself so powerful, and a risky - pesky time of no-visit to theaters since long made me wait for this series for days. Grabbing the first opportunity we could, we curled up with enough snacks to last for the season and give us a theater-like feel. The Tandav unfurled itself with the ultimate move that Saif Ali Khan (as Samar Pratap Singh) does for power. 

In a nutshell, Tandav is a political drama about how Samar - Son of a sitting Prime Minister of India plays out to become the ruler, starting with his father's murder. Now, there is murder, there is conspiracy attached, thirst for power that everyone plunges at, precisey when the ruler is no more; There is also blackmail, there is unfaithfulness, and there is manipulation that comes with it.
In a parallel story that runs along, is Mohd. Zeeshan Ayyub (as Shiva Shekhar) who is a university student fueled with a potent mix of eagerness to do something, and still exploring his possibilities at what life has to offer him. 
The paths of Samar and Shiva cross soon when Samar realizes that he wants to be the King maker if he cannot be the king. 

Flawless direction by Ali Abbas Zafar to the story line written by himself and Gaurav Solanki is a treat to viewers. Dimple Kapadia as Anuradha KishoreKumud Mishra as Gopal Das Munshi have done their jobs wonderfully well. Sunil Grover as Gurpal Chauhan must have a special mention because of the outstanding support cast as a cold persuader.

Now let's come to what this series has to offer the viewers, when observed closely by someone who keeps an occasional tab on current events. A Rightist party, students from University like JNU, in this series who are usually not okay with anything that's right, Student leader Shiva who reminds of Kanhaiyya Kumar from JNU, Barkha Dutt resembling reporter who listens to students and helps them when none other does, Government suppressing farmer's protests, which then yields to it favorably, Police - which acts according to orders from high - up in the political hierarchy, who shoots two innocent youth and frames them on UAPA (Unlawful Activities Prevention Act), party IT cell portrayed like hashtag trending factory on social media and may be even more resemblances to someone who keeps a tab on current events regularly.

What the viewer sees through mostly, is the series as an entertainer that is worth watching, and yes, absolutely, the team of Tandav has delivered it in a mish-mash of imagination and amalgamation of current events, only as much required to perk the viewer expectations up to the second series.

Just curious, if the team will also include something about these in their upcoming series- any leftist opposition party that is not-even-mentioned once, and about all darker shaded characters surnamed Singh, Shekar, Chauhan, Munshi, Mishra that could ocasionally be surnames from Muslims and minority exactly like the ones in this series 1 who are killed, lynched, tortured, anyone who misses opportunity or their fair opportunity is snatched away heartlessly, the downtrodden, and like only the name of true workers to uplift the downtrodden.

When someone watches this series because of its great make after twenty, or thirty or forty years, they will always perceive it closely linked to what was happening in 2010's and 2020's. For that matter, every series that is made to look like its shot in some imaginary era when all the downtrodden from the Indian Society were only Dalits and Muslims.


Saturday, August 1, 2020

Shakuntala Devi



P.S:

Shakuntala Devi: A world-renowned mathematician, known for her scientifically inexplicable master-brain with numbers, with no formal education had always kept me amazed, but from a great emotional distance.
I knew her as a human computer, and that's that. So much for an Indian personality known world-wide!

Through this movie, with a brilliant screenplay and direction, Anu Menon and dialogue writer Ishita Moitra have spun a magic wand of bringing Shakuntala Devi's personal life back from the dead.  

I sometimes wonder how would it be to lead a life being child prodigy. This lady did, and it was difficult foregoing the childhood for she never let success get ahead of her. The screenplay in the movie has added bit of spice to pump up life into her story, but her own life as is was never less of any!

This movie will leave the viewer with a feeling of watching a great life's story and stay amazed at the personal touch it has. Grey patches exist in everyone's life here and there, and they are real, no matter how successful you are, or how publicly loved you are. Handling each challenging circumstance depend on the head-weight of the person in question, the baggage that the person carries, and the experiences that one learns from deep scratches on one's leg of thoughts.

Vidya Balan as Shakuntala Devi on screen is full of life, math and laughter, Sanya Malhotra as Anupama Banerjee, her daughter, leaves us keep wondering about how the life of a kid with informal education due to prodigy parent turns out a roller coaster ride of choices and these two casts in the movie seem very well-weighed and created on screen. 

Being woman is not only about having a family, doing house-hold chores and raising kids, but also a balance that is hard to strike with what a woman wants in her life. Each movie is an experience and this one is not the one to be missed!
Four Stars for sure!

Saturday, May 2, 2020

Thappad: A Review ⭐⭐⭐1/2

PC: https://www.imdb.com/title/tt10964430/

Thappad- Hindi movie looks like it could run in theatres farther, if lockdown wasn't imposed. It is a kind of movie where I cannot say that it is an amazing movie, but if one is looking for a movie that can leave an impact, this is a must watch. 

Story line: Tapsi Pannu in lead role, taking on her husband for a slap.

Seems a bleak one liner, isn't it? What do you think is the line of limit for a relationship? When do you know that a relationship has totally worn-out? When the word 'relationship' itself is so relative to how much two people are bonded to each other, how do you decide when it could end? 

They say bond breaks without a snapping sound. This movie is a reflection of how differently each of us with a variety of perceptions see a cross-over in a relationship. What may seem ok to one, may seem a blunder to the other. Relationship lies in relying on the delicate balance that keeps both personalities in the bond involved, yet feeling respectful of themselves.

As the movie progresses, it has tried to portray us how first-time slapping one's own wife is pursued as an okay act by many relatives. 

To a girl who has left everything that she ever loved, and who has accepted a new way of life by reconsidering and compromising so many of her priorities after marriage, it becomes a matter of reconciliation, with whatever she perceives as her line of limit. 

The takeaway for viewer here is a retrospection of the past events in their life with their loved ones, for sure. But it is an eye-opener to not get entangled in any relationship so much that we lose our identity in it. Any individual has their priorities in life before getting married, and each one of us slowly realise that we have changed so much in life after our marriage, with umpteen adjustments that gradually eat up our likes, we must just make sure that we do not let the parasitic adjustments eat up our Lives!!!

Psst! you can watch it on Amazon now.

Sunday, March 29, 2020

ಪುಸ್ತಕ ವಿಚಾರ- ಅಂಚು: ಎಸ್ ಎಲ್ ಭೈರಪ್ಪ

ಜೀವನದ ಮೇಲಿನ ಆಸ್ಥೆ-ಸಾವಿನ ಬಗೆಗಿನ ಆಕರ್ಷಣೆಯ ಅಂಚಿನಲ್ಲಿ ನಡೆಯುತ್ತ, ಇತ್ತ ಮುಗಿಸದೆ, ಅತ್ತಲೂ ನಿಲ್ಲದೆ ಹೆಣಗುವ, ಕಥಾವಸ್ತು - ಅಂಚು. ಇದರ ಕಥಾ ಹಂದರವನ್ನು ಮೊದಲು ತಿಳಿಸಿದರೆ, ಮುಂದೆ ಹೇಳುವ ಅಂಶಗಳಿಗೆ ಅದೇ ಬೆನ್ನೆಲುಬಾಗುತ್ತದೆಂದೆನಿಸುತ್ತದೆ. 

ಡಾಕ್ಟರ್ ಅಮೃತಾ ಪಿ.ಎಚ್.ಡಿ ಪದವೀಧರೆ, ಉಪನ್ಯಾಸಕಿ. ತಂದೆ - ತಾಯಿ ಇಲ್ಲದ ಈಕೆ ತನ್ನ ಆಸ್ತಿವಿಚಾರದಲ್ಲಿ ಸ್ವಂತ ಚಿಕ್ಕಮ್ಮನಿಂದಲೇ ಚಿಕ್ಕಂದಿನಿಂದಲೂ ನಯವಂಚನೆಗೊಳಗಾಗಿ, ಆಕೆಯ ತಮ್ಮನನ್ನೇ ಮದುವೆಯಾಗಿ, ತಾನು ಮೋಸಕ್ಕೊಳಗಾದದ್ದು ಬೋಧೆಯಾದಾಗಿಂದ ಗಂಡನಿಂದ ದೂರವಿರುವ ಎರಡು ಮಕ್ಕಳ ತಾಯಿ. ಆಗಾಗ ತನ್ನ ಅಸ್ತಿತ್ವದ ಬಗ್ಗೆ ಕಾಡುವ ಶೂನ್ಯಭಾವ ಸದಾ ಆಕೆಯನ್ನು ಸಾವಿನೆಡೆಗೆ ಆಕರ್ಷಿಸುತ್ತಿರುತ್ತದೆ. ಈ ಮಧ್ಯೆ ಸೋಮಶೇಖರನೆಂಬ ಆರ್ಕಿಟೆಕ್ಟ್ ನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬಲಿತು ಗೋಜಲಾಗುವ ಕಥೆ. 

ಪುಸ್ತಕದ ಹಲವಾರು ಭಾಗಗಳಲ್ಲಿ ಕಥೆಯೇ ಮಾಸುವಷ್ಟು ಸಂಭಾಷಣೆ- ತಗಾದೆ- ಭಾವನೆಗಳ ವಿಸ್ತಾರ ಇರುವುದರಿಂದ ಒಡನೆಯೇ ಈ ಕಥೆಯ ವಿಸ್ತಾರ ಅರಿವಾಗುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಎಸ್ ಎಲ್ ಭೈರಪ್ಪನವರ ಇತರೆ ಹಲವು ಕಾದಂಬರಿಗಳನ್ನೋದಿದವರೂ ಅಂಚುವನ್ನು ತಡವಾಗಿ ಓದಿರುತ್ತಾರೆ - ಅಥವಾ ಮಧ್ಯದಲ್ಲೇ ನಿಲ್ಲಿಸಿರಲಿಕ್ಕೂ ಸಾಕು; ನನ್ನ ಹಾಗೆ. 

ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ  ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು. 

ಕೊರೋನಾ ಮಹಾಮಾರಿಯ ದೆಸೆಯಿಂದ ದೇಶಕ್ಕೆಲ್ಲಾ lockdown ಸೂಚನೆ ಹೊರಟ ನಂತರ ಬಿಡುವಿನ ಸಮಯದಲ್ಲಿ ಓದಲು ಆರಿಸಿಕೊಂಡದ್ದು - "ಅಂಚು" ಕಾದಂಬರಿಯನ್ನು. 

ಅಂಚುವಿನ ಅಮೃತಾ ಉತ್ತಮ ಅಧ್ಯಾಪಕಿ- ಅಪನಂಬಿಕೆಯ ನಂಜುಂಡರೂ ಆಕೆಯ ಚಿಕ್ಕಮ್ಮ ಮತ್ತು ಮನೆಯವರಿಗೆ ಮನದೆಲೆಲ್ಲೋ ಕಿತ್ತೊಗೆಯಲಾಗದ ಅಸಹಾಯಕ ಆರ್ದ್ರತೆ. ಇನ್ನು ತನ್ನೆರಡು ಮಕ್ಕಳಿಗೆ ಒಳ್ಳೆಯ ತಾಯಿಯಾದರೂ, ತಾನು ಸೆಳೆಯಲ್ಪಟ್ಟಿರುವ ಸೋಮಶೇಖರನೊಂದಿಗೆ ಮಾತ್ರ ಅದ್ವಿತೀಯ ಲಹರಿಯವಳು. ಒಮ್ಮೊಮ್ಮೆ ನಿರಾತಂಕ ಪ್ರೀತಿ, ಹಿಂದೇ ಸುತ್ತಿ ಕವುಚಿಬರುವ ಮೌನ- ಶೂನ್ಯತೆ! ಶೂನ್ಯತೆಯ ಪರಮಾವಧಿ ಅಕಾರಣ ಸಿಟ್ಟಿನತ್ತ ಹಲವೊಮ್ಮೆ ಎಳೆದೊಯ್ದರೆ, ಕೆಲವೊಮ್ಮೆ ಮುಗಿಸಿಕೊಂಡುಬಿಡಬೇಕೆನ್ನುವ ಆತ್ಮಹತ್ಯಾ ತುಡಿತ, ಇನ್ನು ಕೆಲವೊಮ್ಮೆ ಪ್ರೀತಿಸಿದವನ ಮೇಲೆ ಕ್ರೌರ್ಯಕ್ಕೂ ತಿರುಗುವ ಮೌಢ್ಯ! ಈ ಭಾವನೆಗಳ ಅಲಗು ಮೊನೆಗಳ ಮೇಲಿನ ಹೊಯ್ದಾಟದಲ್ಲೇ ಕಥೆ ಸಾಗುತ್ತದೆ.  

ಕಥಾನಾಯಕಿ ಅಮೃತಾಳಂತಹಾ ಪಾತ್ರವನ್ನು ನಾವು ನಿಜಜೀವನದಲ್ಲೂ ನೋಡಿರಬಹುದು; ಕೆಲವರು ಇಡೀ ಜಗತ್ತಿಗಿದ್ದಷ್ಟು ಉದಾರವಾಗಿ, ತಮ್ಮವರೊಡನೆ, ತಮಗೆ ಕಷ್ಟ-ಸುಖಗಳಲ್ಲಿ ಸಮಪಾಲು ಇರುವವರೊಡನೆ ಭಾವ ಕಳೆದವರಂತಿರುತ್ತಾರೆ. ಹೊರಗಿನವರೆನಿಸಿಕೊಂಡ ಬೇರೆಲ್ಲರೊಂದಿಗೂ ನಗುನಗುತ್ತ ಬೆರೆತಂತಿದ್ದು ತಮ್ಮ ಮೇಲೆ ಭಾವುಕವಾಗಿ ಅವಲಂಬಿತರಾದವರ ಮೇಲೆ ಕೊಂಕುಗೆದರಿಸುತ್ತ ತಪ್ಪಿತಸ್ಥ ಭಾವ ಮೂಡಿಸುತ್ತಲೋ, ಆಪಾದನೆ ಹೊರಿಸುತ್ತಲೋ ಇದ್ದುಬಿಡುತ್ತಾರೆ. ಅವರ ಅಭಿವ್ಯಕ್ತಿ ತಮ್ಮವರೆನಿಸಿಕೊಂಡವರ ಮೇಲಾಗಲಿ, ಕಾರಣ ಏನೇ ಇರಲಿ, ಕ್ರೌರ್ಯ, ಆತ್ಮಾವಹೇಳನ, ಕೊಂಕಿನ ಮೂಲ- ಇವೆಲ್ಲ ನಿಲುಕಿಗೂ ಸಿಕ್ಕದ ಅಂತರದಲ್ಲೆಲ್ಲೋ ಹೂತುಹೋಗಿರುತ್ತದೆ. ಆಳದಲ್ಲೆಲ್ಲೋ ಆದ ವ್ರಣ ಮೇಲುಮೇಲಿನ ಸಿಡುಕು - ದ್ವಂಧ್ವಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 

ತೀವ್ರ ಭಾವಸ್ಪಂದನ, ಅದರಿಂದುಂಟಾಗುವ ದಣಿವು - ಸೋಮಶೇಖರನಿಗೆ ಹಿಂಸೆಯೆನಿಸಿದಷ್ಟೂ, ಬಿಡಿಸಿಕೊಳ್ಳಬೇಕೆನಿಸಿದಷ್ಟೂ ತೊರೆಯಲಾರದ ಅಂಟಾಗಿ, ಬಂಧವಾಗಿ, ಆಕರ್ಷಣೆಯಾಗಿ, ಕಡೆಗೆ ವೃತ್ತಿಗಿಂತಲೂ ಮುಖ್ಯವಾಗಿ ವೃತ್ತಿಯಲ್ಲಿ ಸೋಲುತ್ತ ಬಂದು, ಅಮೃತಾಳನ್ನು ಕಳೆದುಕೊಳ್ಳುವ ಸಂಕಲ್ಪವೇ ಭಯತರಿಸಿ, ಈ ಬಂಧವನ್ನು ನಿಭಾಯಿಸಿಯೇ ತೀರುವೆನೆಂಬ ಸ್ಪೂರ್ತಿಯಾಗಿ ಮಜಲು ಮಜಲಾಗಿ ಬಿಡಿಸಿಕೊಳ್ಳುವುದು ಕಾಣುತ್ತದೆ.

ಇಲ್ಲಿ ಸೋಮಶೇಖರನಂಥಾ ತಾಳ್ಮೆಯುಳ್ಳವರ ಪ್ರೀತಿ-ಕಾಳಜಿಯ ಇಂಧನ ಯಾವುದು? ಪ್ರೀತಿಸಿದವರನ್ನು ಪಡೆದೇ ತೀರಬೇಕೆಂಬ ಹಂಬಲವೋ, ಪ್ರೀತಿಸಿದವರು ಸಂತೋಷವಾಗಿಯೇ ಬದುಕಬೇಕೆಂಬ ಛಲವೋ? ಕೋಮಲ ಹೃದಯಿಯಾದ ಅಮೃತಾಳ ನಾಡಿಹಿಡಿಯಲಾರದ, ಭಾರ ಬಲಿಯದೆಯೂ ಇಕ್ಕೆಲಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ತೂಗಾಡುವ ತಕ್ಕಡಿಯಂಥಾ ಸ್ವಭಾವಕ್ಕಿರುವ ತಲ್ಲಣದಲ್ಲಿ- ಪ್ರಸ್ತುತದ ಕ್ಷುಲ್ಲಕ ಕಾರಣಗಳು ಸತ್ಯವೋ, ಅಥವಾ ಜೀವನದಲ್ಲಿ ಹಿಂದೆಲ್ಲೋ ಮನಸ್ಸಿಗೆ ಬಿದ್ದ ಪೆಟ್ಟು ತಾಳಲಾರದ ಏಟುಗಳೋ? ಇವೆಲ್ಲ ಪದರಗಳೊಳಗೂ ಜೀಕುತ್ತ ಸಾಗುವುದು - "ಅಂಚು". 

ಶತಾವಧಾನಿ ಗಣೇಶರು ಹೇಳಿದಂತೆ, ವಿವರಣೆಗಳಿಗೆ ಮಾತ್ರ ಪಕ್ಕಾಗದೆ ಪ್ರೀತಿ, ಸಂಬಂಧ, ವಿವಾಹದ ಮೂಲಧನಕ್ಕೊಂದು ಧಾತು - "ಅಂಚು". 

Tuesday, July 30, 2019

Vanara: Anand Neelakantan

Let me tell you a bit about the backdrop of this story that it is woven upon.

Valmiki Ramayana tells the tale of how Sugreeva and his Vanara sena helped Rama fight Ravana and rescue Sita. This Sugreeva was an outcast of his brother Vaali or Baali's Kishkinda. He was evicted from the Kingdom of Kishkinda by his own brother who was very dear to him. This is since Sugreeva had married Tara and was ruling Kishkinda since he believed his brother was dead in battle with Mayavi. But the moment Baali comes back winning over the demon, he charges his brother with treachery and evicts him from Kishkinda. Sugreeva waits in vain being an outcast until he meets Rama. Then Sugreeva invites Baali for a duel and Rama killed Baali by standing behind a nearby tree. Sugreeva is crowned again and after him, Angada, son of Tara and Baali is made the Prince of Kishkinda.

Now this act of Rama is justified in various texts in different ways, backing him up that this was done to save Dharma ultimately. This event always leaves a hollow in the epic of Ramayana nevertheless. This novel Vaanara is an attempt at weaving the sequence of events.

Anand Neelakantan has a finesse story telling that captivates the reader. I must mention how he weaves in chapter after chapter. Every chapter ends as a prelude to the next chapter which keeps the reader on toes until the story is completed. One simply cannot put this book down and be at peace until the reading is done. 

Dilemma of Tara about the two brothers, though she heartily loves one and tries to despise the other, her thoughts are stuck not knowing which way to waiver. Baali is so lost in building an empire that though he loves Tara with all his heart, he is unable to spend enough time with her. Meanwhile encashing all this, Sugreeva lusts for his sister-in-law, unknowing of the consequences that it might pose; once Tara is married to Sugreeva as Baali does not return from fighting Mayavi and is thought to be dead, Sugreeva sees that the appeal of having Tara as his is vanished completely, and a constant hindrance towards the relationship sets in. 

Though Tara marries two brothers, she is still considered the virtuous wife and is given a worshipful place till today. Giving the benefit of doubt to the tale that she is considered a pious and virtuous wife, author gives it a justified ending that Tara after Angada and Sugreeva return victorious post battle with Ravana, stays in the sacred grove of seven palmyra trees that Baali had envisioned and nurtured; thinking every moment of Baali, she lives as a telltale to the whole of Kishkinda until her last breath, serving the city-dwellers with her wise deeds and words.

The loyalty of the abandoned wolf pup 'Chemba' raised by Baali is a part of the story that touches the most. The wolf's tried and true love towards its master is depicted well in parts of story where it stays near the cave till its master returns victorious from his struggle with the demon and its unfailing attempts at digging his grave though its claws are all worn out from the futile effort. Chemba still believes that somehow he can bring his master back from the dead if it digs enough to reach his body even after death of Baali.

The sublime character of Baali and Sugreeva's foster father Riksharajas, the valour of Ravana depicted in even his defeat against Baali in duel, the motherly turned pompous Ruma - the wife of Sugreeva, the demonity that is illustrated in weaving sequence about the humongous bull Dundubhi that is brought by Sugreeva, the plight of the outcast - Vana naras - called later as Vanaras, the love and understanding of the two brothers - Baali and Sugreeva and the intervention to their fraternal bonding with entry of Tara in their life, the only amazing city that they build deep in the woods with all amenities and aiming at no caste- colour discrimination is all that is part of reading hangover. 

Definitely a thumbs up for even those who despise heavy reading.

Friday, March 22, 2019

Kesari ✮✮✮✮1/2


Each war has many stories to tell. Of the martyrs, of the survivors, of the wounded, and of the hounded. If wars were only documented, the lines become meager numbers on paper. When a movie like Kesari is made on a lesser known but bravest of battles fought under British India, heart swells with pride for their bravado.

North Western Frontier Province, part of Pakistan in today's world map had witnessed a constant friction and confrontation between Afghans and British. Many of us may know that 21 Sikhs belonging to 36 Sikh regiment killed over 600 Afghans in the battle of Saragarhi. The level of motivation it took not to run away from overwhelming 10000 Afghans and the power of commitment they got in them at that crisis is a question of creative liberty for screenplay and direction. Director Anurag Singh has tapped the right chords to create a slow and touchy movie that says about the turn of events and glorifies the brave battle, ever so rightly.

The movie keeps you in splits at times, touches the raw nerve of British ruled India, flares the viewer's patriotism and polishes our religious beliefs, all at right times during the movie. Songs compliment the pace of the movie. It is a slow paced movie, but deliberately been made so. First 30 minutes is just an under-structure for the story that is to be unveiled. 

Akshay Kumar as Hawaldar Ishar Singh is not the only glorified hero but one among the heroes who fought and were martyred that day. Screenplay has given a rightful space and justice for each hero among the 21+1. The brutality of force and strategies of the then group of Afghans makes us mull over the story and events that we have read about Afghanistan, Lashqar and Taliban in recent times.

None of us moved even when the movie had completed its show. We were shun to silence. It took a moment more to realize that we had to leave the movie hall.

Wednesday, January 30, 2019

Manikarnika - The Queen of Jhansi ✮✮✮

Jhansi Rani Lakshmibai, one of the key leaders of the Sepoy mutiny against British raj, strategically escaped twice from the British army, gave an arduous fight and was a nightmare to the Angrezi Sarkar until she chose her death by being a rebellion in a battle near Gwalior. 

Manikarnika Poster.jpg
As British officer Hugh Rose commented in his battle report, Jhansi Rani was the most dangerous of all Indian leaders. Our heart swells with pride when the story unveils on screen, and the battle tactics used at that time is commendable. Story is kept intact as much possible and the glorification of Rani as a personality seems apt in many frames.

This movie itself seems like a mark of respect for a leader's story which sprung through the hoodlum effort by British to erase her name in the History of India. The moment when Lakshmibai jumps off the fort of Jhansi while trying to save her heir  is enough to prove how outgoing and rebellious she could have been who survived battles and did not give in an opportunity for British for being captured alive. This sacrifice is what she believed will become a precedence and instilled an undying urge in Indians about Swaraj.

Now about the movie, Indian audience have watched Baahubali which has given us an excellent VFX that is lasting even after years of its release; we have watched Baajirao Mastani which featured Baajirao, a courtier of Jhansi empire; we have watched an excellent epos with a right mix of everything- VFX, story line, Direction, editing, scale, songs and performance in Padmaavat recently.

Manikarnika has everything, but lacks the same intensity of direction almost for the first 40 minutes. It is noticeable, had this movie been in the hands of a more experienced director, this could have been improvised here and there. I cannot conclude that the movie hasn't much to offer the audience as well, even in those first 40 minutes. But the direction seems a cracked spell at times during the movie which seems crackled further through poor VFX during few instances. Songs are amazing, which is as a matter of fact drew me to the theater. Shankar Ehsaan Loy are back with a bang, that has complimented Prasoon Joshi's lyrics so rightly. But what is lacking, is timing in the movie. Songs seem a bit too many in the movie which would have sounded even better if their gelling with the flow of the movie was better. Songs should always be rightly placed, and must compliment the movie rather than being an impediment to its flow, is what I believe.

Having said that, there is no doubt that the battle scenes, scenes with weaving battle strategics are commendable. Kangana Ranaut has proved yet again that she can mold into any character that comes to her in making. Supporting crew has done their job great. A one time watch, and lore to sing in bits for a long time, for sure.

✮✮✮File:The place from where Rani Lakshmibai jumped.jpg

Sunday, January 28, 2018

Padmaavat: An Onscreen Epos

★★★1/2
For a movie that received a lot of one and a half stars from big media houses, I had given up the thought of watching the movie. All the commotion that followed the controversy that had to be solved by judiciary intervention might also have been an abetment terming it a publicity stunt.


Watching the video song of Ek dil ek jaan, I finally decided to watch the movie. Even if the movie would bore me, sets and music could come to my rescue, or so I knew. We went to watch morning show and there were hardly 12 people in the theater for it.

Yes it is a slow movie. It does take time and effort to get the feel of Rajputana and Khilji dynasties. And each scene is twined carefully to create the required impact. It is a movie that appeals for only audience who have patience to read a book. Poetic freedom is the essence of any epic that is woven on the historic events. Since history does not tell us word by word of what has actually happened, each interpretation between the lines can be different. Also when the history has been created majorly by the winning side of the story, one can't take history for fact. I wish the Karni Sena could have watched the movie before pulling all the stunts that it did. 

It looks like Bansali has focused most on grooming the character of Sultan Alauddin Khilji than the others in the movie. His costumes, lighting moderation and each frame that Ranveer Singh is in, is solely focused on bringing out his character and Ranveer Singh has scored a full on ten for his performance. Jim Sarbh as Malik Kafur has performed very well as an able sidekick and a blind supporter of each weird move of Sultan. Deepika Padukone as Padmaavati has shone during the introduction and an effective climax. Shahid Kapoor as Chittor's Maharaja leaves his impact in the chemistry with Rani Padmaavati and in the final battle with Sultan. 

Dialogues by Prakash Kapadia is a highlight of the movie too. "सर धर से अलग होजाये तब भी हाथ में तलवार चलताराहे, वो है राजपूत" kind of dialogues are not easy to fade away from the viewer's memory. Music and timely songs that blend with the movie are a plus.

Bottom-line is, it takes a relaxed mood and an open mind to enjoy this movie. There's lots to absorb and the movie is deliberately been made a slow one. Having said that, the movie doesn't bore you if you have the patience to have watched a full fledged dance performance or read good novels. 

P.S: Of course do not expect a cabaret or dramatic turns to an already known history. 

(For all those who could not understand the meaning of seemingly small word epos, I couldn't find a better exact translate of mahakavya (ಮಹಾಕಾವ್ಯ) to express what I wanted to convey. This throws me into one of the hollow of English language in which I occasionally find myself at loss of words to convey thoughts)

Monday, July 31, 2017

Indu Sarkar: Movie Review

✭✭✭1/2

If you have been having high hopes for Indu Sarkar, since it is made by Madhur Bhandarkar, you might just as well leave it at the door before watching the movie.

From what we have known from Google, this movie about emergency is as sober as it can be. Maintaining a decorum and not to instigate a threat to internal peace that is existing, may be Madhur Bhandarkar has toned down a lot that might have been initially written for the movie, or the sensor board has cast its edits too many times for it to be a realistic movie.

For all who expect this flick to be an outburst of rage on the most controversial period of Indian political history and conscience, let me tell you, there are only few of the aspects touched. Movie portraits issue like the most infamous mass sterilisation, Turkman gate mishap and sucking out press freedom. 

Recreating each scene from 1975 has been brought in almost flawless with retro style music. The only qawali song in the movie rings in the head even once you are out of theatre. 

Indu Sarkar is not even Indira Gandhi's Sarkar. It's the name of a conservative girl whos brought up in orphanage whose sole purpose of life is being a good wife. While she gets married to an officer in civil services and is close to the inner circle of the ruling party, and when she is about to be a ghost poet for the home minister praising Indira's rule, emergency is declared and she is horrified about the consequences that happen around her.

Being constantly told by Sarkar(her husband) not to oppose emergency, she is drawn into the underground movement of peaceful activists. Hold on! It's not due to intellectual interest in causing a Kranti is why she's drawn to activists, but because of emergency's effect on her own life.

This is where I felt that Madhur Bhandarkar could have woven the story strong, lest it would have even had a greater impact as a film. Since the movie is too sober for a realistic movie of the barbaric emergency which oppressed people by ruthless killings, third degree punishments and detainment of lakhs of people in jail, had it been woven with a stronger character for Indu Sarkar's motive while she gets into the activism, this would have made a better movie.

Movie needs a rapt attention to be savoured and be disappointed at the same time. Honestly feels that this topic could've been made into a lot heavier movie than this. 

Neil Nithin Mukesh as Sanjay Gandhi has done the best he could in looks and performance, Tota Roy Chaudhari as Sarkar, and Kriti Kulhari as Indu are very promising actors and have done a great job. Anupam Kher as Naanaji has performed with his usual ease, Supriya Vinod as Indira Gandhi is biggest disappointment since either her dialogues might have been censored or not filmed at all! Not even one!

And for all of the "inteflectuals" who tell India is currently undergoing an undeclared emergency, this is must watch for some real ground work as to what emergency could match to up with!

Saturday, July 29, 2017

Sita: Warrior of Mithila - Amish Tripathi : A Review

Sita: Warrior of Mithila has come out after a long wait of almost 2 years through which I personally have forgot a lot of Scion of Ikshvaku I had read. This book here reminds a lot of scenes from the earlier book and at some point feels like this would have been a chapter in Scion of Ikshvaku instead of being an independent book.

But the upbringing of Sita, her childhood, an insight into her character are definitely a welcome. I have many times wondered how Sita could survive in Dandakaranya for 14 years when in exile, bearing the hard way of forest dwelling if she was raised just like a delicate princess just to be married and live like a queen. Either she should have had an arduous training during her childhood which helped her to endure the exile, or her conviction to walk with her husband in all walks of life must be unshakable. And Sita being trained like a warrior also could be a possibility, which we do not get much to perceive much from the epic of Valmiki Ramayana.

But I somehow feel that Amish is great in explaining what happens with nature, forest, and animals more than what is happening to characters of his novel. His novels are gripping when he explains these in detail.

Like Scion of Ikshvaku, there is woven story about Sita’s Mithila too, and the way that small city is ruled by Sita’s Mother more than Janak, and the larger politics that happen in Sapt Sindhu makes us keep reading the book.

May be I liked Amish’s Shiva Trilogy since it was completely different from the Shiva Purana though difficult to digest Ganesh and Durga as Nagas. But this series seems to be totally just meant to satiate the whim of the author that is nowhere connected to Ramayana except names and places. He also addresses Sapt SIndhu as India a few times, which was non-existent in the Ramayana timeline.

But the reader will enjoy the book thoroughly if read as just another work of Amish. The city security features, war scenes, each bit in forest is a good read in the novel. Rest said, I am not liking this Ram Chandra Series a lot and I might rethink before picking his next book which he says that the same story will be from the perspective of Ravan. My question is, when the context of literary intricacy is not much, the author could elaborate only the non-repeating parts of the story, instead of rather putting the same parts of the story in another person’s perspective, unless their experience of the same situation is vastly different from what has already been told!

Tuesday, May 23, 2017

Fault In Our Stars: John Green

Hazel Grace is diagnosed with thyroid cancer who is alive because of continuous experimentation with cancer treatments and is relatively stable due to a new drug. She is mostly home-bound due to her disease. Hazel meets Augustus Waters and Isaac in cancer support group when she almost has given up on her chance of making new friends, and the trio develop a strong bond. Augustus falls in love with her as she refrains since she knows her days in life are numbered.

There are parents who like anyone whose kids’ life has an only ultimatum of timed existence are jittery and skittish over everything. The story unfolds between the depths of An Imperial Affliction (AIA) and the Price of dawn, with extreme different topics and width of coverage. Price of dawn is a Sci fi made to a video game where as AIA is a story that tells you about Anna, a little girl ridden with blood cancer who seemingly achieves remission and falls back into final stage of the disease and the story ends abruptly mid-sentence, like the way the afflicted lives end; mid-life & mid-phase without hinting that the good day you spent with them was actually their last good day.

Fault in our stars is a perfect frame story – That it actually tells a story within the story to a point where the quotes and the plot of the story within the story (An Imperial Affliction - AIA) becomes so surreal, that the reader might as well think that the “Fault in our stars” was constructed because of AIA. The nested story within seems to have a full-on grip on the lives of Hazel Grace and Augustus Waters in “Fault in our stars” since they both adore the book. Many quotes from the book are brought to life in Hazel & Gus’s conversations. Though the technique of nestled stories is not new, the prowess to the way of telling a story and using the frame story at substantiating every turn in the story is captivating.

You will find the book light-hearted at times and will compel you to feel it to the point of affecting the reader with the characters. Quotes from the novel are worth spending time to think upon. You will find the book heavy in that ways, and not just as an easy to read novel. Death is a steadfast end of life; but the series of events that lead to it is quite a stressful journey for those who know what will kill them; and for the people who take care of them, it is even more challenging.

I quite keep questioning myself, why people take care of their beloved ones during their illness, without letting them go, without letting them struggle all on their own, or just leave them to their fate. The answer is in this book. How the relationships are bonded and why they are the way they are, is very well tried and explained in it. I’m yet to watch the movie that made “Fault in our stars” come to life, but am sure everything that is felt in the book is far more vivid than the movie has to show to me. Peter Van Houten, the imaginary author of the imaginary book “An Imperial Affliction” is a character built to stay, to weigh Hazel and Gus, several notches higher is all I can say!

Wednesday, April 5, 2017

ಪೂರ್ಣಚಂದ್ರ ತೇಜಸ್ವಿ

ನಮ್ಮ ತೇಜಸ್ವಿ
ಬೆಳಗು ನಗುನಗುತ್ತಾ ಇದ್ದು ಇಳಿ ಮಧ್ಯಾಹ್ನದ ಹೊತ್ತಿಗೆ ರಪ್ಪಂತ ಕಂತೆ ಒಗಾಸಿ ಎದ್ದು ಹೋದ ಪೂರ್ಣಚಂದ್ರ ತೇಜಸ್ವಿಯವರ ನಗುಮೊಗವೇ ೧೦ ವರ್ಷವಾದ ಮೇಲೂ ಈ ದಿನ ಕಣ್ಣೀರು ತರಿಸುತ್ತೆ ಅಂದ್ರೆ ತೇಜಸ್ವಿಯವರು ಅದೆಂಥಾ ಮೋಡಿ ಮಾಡಿದೋರು ಅಂತ ಆಶ್ಚರ್ಯವಾಗುತ್ತೆ. ಪ್ರತಿಯೊಂದು ಪುಸ್ತಕವೂ ಮಾಹಿತಿಯೊಂದಿಗೆ ಬೆಸೆದ ನಂಟು - ಪ್ರೀತಿ, ಹಾಗು ಸುಮಾರು ಪುಸ್ತಕಗಳಲ್ಲಿ ತಾವೂ ಒಬ್ಬ ಪಾತ್ರವಾಗಿ ಬಂದಿರುವುದರಿಂದಲೋ, ಅಥವಾ ಮನಮುಟ್ಟುವ ಪರಿಸರದ ಕತೆಗಳನ್ನ ಹೇಳುತ್ತಾ ಅಲ್ಲಿನ ಗಿಡ ಮರ ಪಕ್ಷಿ ಪ್ರಾಣಿಗಳಿಗೆಲ್ಲಾ ವ್ಯಕ್ತಿತ್ವವೊಂದನ್ನ ಕೊಟ್ಟು ನವಿರಾಗಿ ಸಂದರ್ಭಗಳನ್ನು ಹೆಣೆಯುತ್ತಾ ಪ್ರತಿ ಪುಟದಲ್ಲೂ ನಕ್ಕು ನಗಿಸುತ್ತಿದ್ದ, ತಲ್ಲೀನಗೊಳಿಸುತ್ತಿದ್ದ ತೇಜಸ್ವಿಯ ಬರವಣಿಗೆ ಯಾವ ಓದುಗ ಮರೆತಾನು?

ಗುಂತಕಲ್ಲಿನ ಕಾಡುಗಳಲ್ಲಿನ ನರಭಕ್ಷಕ ಹುಲಿಗೆ ಈಗಲೂ ಕೆನೆತ್ ಆಂಡರ್ಸನ್ ಮಣ್ಣು ಕೊರೆದು, ಕಲ್ಲುಗಳನ್ನು ಸುತ್ತಲೂ ಹುಲಿಗೆ ಅನುಮಾನ ಬರದಂತೆ ದೂರದಿಂದ ತಂದು ಹರಡಿ ಕಾದು ಕುಳಿತಾಗ ಅವರ ಹಿಂದಿನ ಕಾಡಿನಿಂದ ಕೇಳಿಸಿದ ಗರ್ಜನೆ ಹತ್ತಿರವಾಗುತ್ತಾ ಹೋದಂತೆ ಉಗುರು ಕಚ್ಚುತ್ತ ಓದುತ್ತಿದ್ದ ಜ್ಞಾಪಕ. ಪಕ್ಷಿಯೊಂದು ಇವರೊಡನೆ ಮಾಡಿದ ಗೆಳೆತನದ ಕಾರಣವಾಗಿ ಕೊನೆಯುಸಿರೆಳೆದಾಗ ಕಣ್ಣೀರಾದ ನೆನಪು. ಚಂದ್ರನ ಮೇಲಿಳಿದ ಮಾನವನ ಕಥೆ ಹೇಳುವಾಗಲೋ, ಮಿಸ್ಸಿಂಗ್ ಲಿಂಕ್ ಗಾಗಿ ಹುಡುಕಾಟ ನಡೆಸುವಾಗ ಬೆರಗುಗೊಂಡು ಪುಸ್ತಕದಲ್ಲೇ ಇಳಿದು ಪುಸ್ತಕ ಓದಿದ್ದಲ್ಲ - ಪ್ರತಿ ಸಂಗತಿಯನ್ನೂ ನೋಡಿದ ಭಾಸ. ಅದೇ ಜುಗಾರಿ ಕ್ರಾಸ್ ನಲ್ಲಿನ ಹೇಲು ತುಂಬಿದ ಗುಂಡಿಯೊಳಕ್ಕೆ ಮೂಗು ಮುಚ್ಚಿ ಕೂರುವ ಸಂಗತಿ, ಕಿರಗೂರಿನ ಗಯ್ಯಾಳಿಗಳು ಕೆಲಸಕ್ಕೆ ಬಾರದ ಗಂಡಂದಿರನ್ನ ಬಯನೆ ಕಟ್ಟುಗಳಲ್ಲಿ ಭೂತ ಬಿಡಿಸಿದ ಸಂಗತಿ - ಓದಿ ಜೋರಾಗಿ ನಕ್ಕು, ಮನೆಯವರಿಗೆಲ್ಲ ಇವಳೇನು ಓದುತ್ತಿದ್ದಾಳೋ, ಹಾಸ್ಯದ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಳೋ ಅಂತ ಗೊಂದಲವಾಗಿದ್ದು ನೆನೆದರೆ ಈಗಲೂ ನಗು.

ಅವರ ಸುಲಭ ಬರವಣಿಗೆ ಹಾಗು ತುಂಬಾ relate ಆಗಿಸುವ ಶೈಲಿಯ ಪುಸ್ತಕಗಳಿಂದ ಎಷ್ಟೋ ಹೊಸ ಓದುಗರನ್ನು ಕನ್ನಡಕ್ಕೆ ತರುತ್ತಲೇ ಇರುವವರು ತೇಜಸ್ವಿ. ಹೆಚ್ಚೇನೂ ಹೇಳುವುದು ಇಲ್ಲ. ಯಾಕೆಂದರೆ, ಇನ್ನು ಮುಂದೂ ಓದಿಸಲಿಕ್ಕೆ ತೇಜಸ್ವಿಯವರೇ ಇಲ್ಲ. ಅವರೆಲ್ಲ ಪುಸ್ತಕಗಳನ್ನೂ ಬಿಡುವಾದಾಗ ಮತ್ತೆ ಮತ್ತೆ ಓದಿ ಖುಷಿ ಪಡೋಣ. ಈ ರೀತಿ ತೇಜಸ್ವಿಯವರು ಸದಾ ನಮ್ಮೊಂದಿಗೇ ಉಳಿಯೋದರಲ್ಲಿ ಸಂಶಯವೇ ಇಲ್ಲ.

Tuesday, February 14, 2017

ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ


ವ್ಯಾಲೆಂಟೈನ್ಸ್ ಡೇ ಭರಾಟೆ ನೆನ್ನೆ ತಾನೇ ಮುಗಿದಿದೆ. ಆಭರಣದಂಗಡಿಗಳು, ಆನ್ ಲೈನ್ ಶಾಪಿಂಗ್, ಕೆಫೆ ರೆಸ್ಟೋರೆಂಟ್ ಗಳೆಲ್ಲಾ ತಂತಮ್ಮ ಲಾಭಕ್ಕೆ ಫೆಬ್ರವರಿ ಪೂರ್ತಿ ಕೆಂಪು ಬಿಳಿ ಕರಿ ಬಲೂನ್ಗಳನ್ನ ಮೆರೆಸಿದ್ದೇ ಮೆರೆಸಿದ್ದು. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿ (monitory ಪ್ರೀತಿ!) ಹಂಚಿಕೊಳ್ಳಿ ಅಂತ ಎಲ್ಲೆಲ್ಲಿ ನೋಡಿದರೂ ಜಾಹಿರಾತುಗಳು.


ಬಂಗಾರದ ಉಡುಗೊರೆಯ ಜಾಹಿರಾತು ಪದೇ ಪದೇ ಪ್ರಸಾರಗೊಳ್ಳುವಾಗ ಪ್ರತಿ ಬಾರಿಯೂ ಇಗ್ನೋರ್ ಮಾಡಿ ಹೆಂಡತಿಯೊಂದಿಗೆ ಟಿವಿಯೂ ನೋಡೋಹಾಗಿಲ್ಲ! ನೀನೇನು ತಂದೆ ಮುಂಡೇದೆ, ಅಂತ ಆಕೆ ಗಂಡನ ಮೂತಿ ತಿವಿದರೆ? ಒಬ್ಬಂಟಿಯಾಗಿ ಹೊಸ ಊರಿನಲ್ಲಿ ಗರ್ಲ್ ಫ್ರೆಂಡ್ ಇಲ್ಲದೆ ದಿನಾ ಮಜವಾಗಿರೋ ಹುಡುಗರಿಗೆ ಈ ತಿಂಗಳು ಏನೋ ಕಳಕೊಂಡ ಭಾವ! ಇನ್ಯಾರಿಗೋ ಹುಡುಗಿಯೊಬ್ಬಳ ಮೇಲೆ ಭಾರೀ ಮೋಹ. ಹೇಳಿಕೊಂಡು ಇಲ್ಲ ಅನ್ನಿಸಿಕೊಂಡರೆ ಅನ್ನೋ ಭಯ. ಈ ದಿನ ಹೇಳಿ ಅವಕಾಶವಾದಿ ಅನ್ನಿಸಿಕೊಂಡರೆ? ಅದೇ ಕಾರಣಕ್ಕೇ ಇಲ್ಲವೆಂದುಬಿಟ್ಟರೆ? ಗರ್ಲ್ ಫ್ರೆಂಡ್ ಇರುವವರಿಗೆ ಜೇಬಿಗೆ ಭಾರವಾದರೂ ಉಡುಗೊರೆ ಕೊಟ್ಟು ನಿಭಾಯಿಸಲೇ ಬೇಕಾದ ಅನಿವಾರ್ಯ- ಇವೆಲ್ಲ ಈ ವ್ಯಾಲೆಂಟೈನ್ ಡೇಯ ಅಡ್ಡ ಪರಿಣಾಮಗಳು!

ಇವಕ್ಕೆಲ್ಲಾ ನುಣುಚಿಕೊಳ್ಳುವ ಅತೀ ಸುಲಭ ವಿಧಾನ ಅಂದ್ರೆ ವ್ಯಾಲೆಂಟೈನ್ ಡೇ ಪಾಶ್ಚಿಮಾತ್ಯ ಸಂಸ್ಕೃತಿಯ ಉದ್ಘೋಷಿತ ಸ್ವರೂಪ. ನಾವು ಭಾರತೀಯರು. ಭಾರತೀಯ ಸಂಸ್ಕೃತಿಯ ಮೂಲದಲ್ಲಿಯೇ ಇಲ್ಲದ ಪ್ರೇಮಿಗಳ ದಿನ ನಮಗೇತಕ್ಕೆ? ಇದರ ಬದಲು ತಂದೆ-ತಾಯಿಯನ್ನ ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಸ್ನೇಹಿತರಿಗೊಂದು ಥ್ಯಾಂಕ್ಸ್ ಹೇಳುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ. ಮಕ್ಕಳಿಗೊಂದು ಹೂಮುತ್ತನ್ನಿಟ್ಟು ಅವರ ಜೊತೆ ಕ್ವಾಲಿಟಿ ಸಮಯ ಕಳೆಯುವ ದಿನವಾಗಲಿ ವ್ಯಾಲೆಂಟೈನ್ ಡೇ. ಬಡವರಿಗೋ, ಅನಾಥರಿಗೋ, ಹಿಂದುಳಿದವರಿಗೋ, ಶೋಷಿತರಿಗೋ ಒಪ್ಪತ್ತು ಊಟವೋ ಬಟ್ಟೆಯೋ ಕೊಡುವ ದಿನವಾಗಲಿ ವ್ಯಾಲೆಂಟೈನ್ ಡೇ . ತಮ್ಮನ್ನು ತಾವು ಪ್ರೀತಿಸಿಕೊಳ್ಳುವ ((!)ಯಾವ ರೂಪ ಬೇಕಾದ್ರೂ ಕಲ್ಪಿಸಿಕೊಳ್ಳಿ) ದಿನವಾಗಲಿ ವ್ಯಾಲೆಂಟೈನ್ಸ್ ಡೇ.  ಉತ್ತಮ ಹವ್ಯಾಸವೊಂದನ್ನು ಪ್ರೀತಿಸುವ ದಿನವಾಗಲಿ ವ್ಯಾಲೆಂಟೈನ್ಸ್ ಡೇ- ಹೀಗೆಲ್ಲಾ ಪುಂಖಾನುಪುಂಖ ಸಂವಾದ ನಡೆಸುವವರನ್ನು ಕಂಡು ಸೋಜಿಗವಾಗುತ್ತದೆ. 

ಇಲ್ಲಿನ ಯಾವ ವಾದವೂ ತಪ್ಪೆಂದು ಹೇಳುತ್ತಿಲ್ಲ. ಹೀಗೆ ಯೋಚಿಸುವ ಎಷ್ಟು ಜನ ಅವುಗಳನ್ನು ಆಚರೆಣೆಗೆ ತರುವ ಜೊತೆ, ತನ್ನ ಖಾಸಾ ಸ್ನೇಹಿತೆಗೋ, ಪ್ರೇಮಿಗೋ, ಹೆಂಡತಿಗೋ ವರ್ಷಕ್ಕೊಂದು ದಿನವಾದರೂ ಪೂರ್ಣ ಮೀಸಲಿಟ್ಟು ತಮ್ಮ ಪ್ರೀತಿ ಹೇಳಿಕೊಳ್ಳುತ್ತಾರೆ ಅಂತ ನಂಬೋಣ? ಪ್ರೀತಿಗೆಂದೇ ಪ್ರತ್ಯೇಕ ದಿನ ಬೇಕಿಲ್ಲ ಎನ್ನುವ ಎಷ್ಟು ಜನ ತಮ್ಮ ಪ್ರತಿ ದಿನವನ್ನೂ ಪ್ರೇಮಮಯವಾಗಿಟ್ಟುಕೊಳ್ಳುತ್ತಾರೆ? ವ್ಯಾಲೆಂಟೈನ್ ಡೇ ಆಚರಿಸಿಬಿಟ್ಟರೆ ದೇಶವೇ ಕೊಳ್ಳೆಹೋಗುತ್ತದೆನ್ನುವಂತೆ ಮಾತನಾಡುವುದು ಎಷ್ಟು ಉಚಿತ? ಪ್ರೀತಿ ಹೇಳಿಕೊಳ್ಳಿ, ತೋರ್ಪಡಿಸಿಕೊಳ್ಳಿ. ಯಾವದಿನವಾದರೂ ಸರಿಯೇ. ಆಮೇಲೆ ವ್ಯಾಲೆಂಟೈನ್ ಡೇ ಯ ಅವಾಶ್ಯಕತೆಯಾದರೂ ಯಾಕಿರುತ್ತೆ ಸಂಬಂಧಗಳಲ್ಲಿ? ಪ್ರೇಮಿಗಳ ದಿನವೆಂದು ಉಡುಗೊರೆ ಕೊಟ್ಟರೆ ಕೊಡಲಿ ಬಿಡಿ. ಹಾಗಾದರೂ ಮತ್ತೊಂದು ಪ್ರೀತಿಯ ಚಿನ್ಹೆ ನಂಟಿನ ಹೆಸರಲ್ಲಿ ಸೇರ್ಪಡೆಯಾದೀತಲ್ಲ. ಪ್ರೀತಿಯ ದಿನದ ನೆಪಮಾಡಿ ಒಂದು ಪೂರ್ತಿ ದಿನ ಜೊತೆ ಕಳೆಯಲಿ ಬಿಡಿ ಪ್ರೇಮಿಗಳು- ಮಕ್ಕಳು ಹೆತ್ತು ಹೋಂ ವರ್ಕ್ ಮಾಡಿಸುವುದರಲ್ಲಿ ಬೇಸತ್ತ ದಂಪತಿಗಳೋ, ಅನುದಿನವೂ ೧೨ ತಾಸು ದುಡಿದುಡಿದು ಬುದ್ಧಿ ಅಡವಿಕ್ಕುವ ಜನ ಅವತ್ತೊಂದು ರಾತ್ರಿ ನೆಮ್ಮದಿಯಾಗಿ ಜೊತೆಯಲ್ಲಿ ಕೂತು ಸಮಯ ಕಳೆಯಲಿ ಬಿಡಿ, ಕಾವ್ಯಾತ್ಮಕ ಮಾತುಗಳನ್ನು ಬರೆದೋ - ಕೊರೆದೋ ಕೊಡಲಿ ಬಿಡಿ. ಆಚರಣೆಯಲ್ಲಿ ಹೊಸತನ ತಂದು ಸ್ವಲ್ಪ ಬುದ್ಧಿ ತೀಕ್ಷ್ಣಗೊಳಿಸಿ ಕ್ರಿಯೇಟಿವ್ ಆಚರಣೆ ಮಾಡಲಿ ಬಿಡಿ. ದುಡ್ಡು ಕೊಟ್ಟು ಆಭರಣವೋ, ಬಟ್ಟೆಯೋ ಮತ್ತೊಂದೋ ಕೊಂಡುಕೊಂಡೇ ಸಂಗಾತಿಯನ್ನು ಪ್ರಸನ್ನ ಪಡಿಸಬೇಕಾದ್ದಿಲ್ಲವೇ ಇಲ್ಲ. ನಾಲ್ಕು ಸಾಲುಗಳ ಪ್ರೇಮಮಯ ಕವಿತೆಯಾದರೂ, ಮನೆಕೆಲಸ ಮಾಡುವುದರಲ್ಲಿ ಸಹಾಯ ಮಾಡಿ ಆಕೆಯನ್ನು (ಅಥವಾ ಆತನನ್ನು) ಕೂರಿಸಿ ಮಾತಾಡಿಸಿದರೂ, ಎಂದೋ ಕರೆದುಕೊಂಡು ಹೋಗಬೇಕಾದ ಸ್ಥಳಕ್ಕೆ ಭೇಟಿಯೋ (ಪಾರ್ಕ್ ನಲ್ಲೊಂದು ವಾಕ್), ಇನ್ನೂ ಹಲವಾರು ಓಲೈಕೆಯ ದಾರಿಗಳಿಂದ ಪ್ರೀತಿಯ ಆಚರಣೆ ಸಾಧ್ಯ. ಸೃಜನಶೀಲತೆ ಇದ್ದಲ್ಲಿ sky is the limit. ಆಚರಣೆ ಬೇಡ ಅನ್ನುವ ಜನವೆಲ್ಲಾ ಆಲೋಚಿಸಿಕೊಳ್ಳಿ.  ಒಟ್ಟಿನಲ್ಲಿ ಆಚರಿಸಲಾಗದ್ದಕ್ಕೆ ವ್ಯಾಲೆಂಟೈನ್ ಡೇ ನಮ್ಮ ಸಂಸ್ಕೃತಿಯಲ್ಲ ಅನ್ನೋದು ನಿಂತರಾಯಿತು! ಜೀವನ ಸುಖಮಯ.

Wednesday, January 11, 2017

Ajaya- Duryodhana's Mahabharata- By Anand Neelakantan


Mahabharata is a poetically narrated story (rather, history) of war that had happened around 6000 years ago. A story of a plethora of events leading to the war unfolds in every chapter of the epic. While Jaya is the story that tells you the winner's side of the story, Ajaya -Roll of dice and The rise of Kali - series is one of the logical most explanations of the Mahabharata war in the voice of the conquered. I had only heard of Kananda author and poet, Ranna, who had written a version of Mahabharata which is narrated as Suryodhana's story (Gadhaayuddha).

I have got to know the story of Mahabharata by bits and parts since I was in the age I could understand 10 liner stories. The beauty of the humongous epic lies in its ability to decipher itself in smaller stories. We can be told 100's of short stories which can finally be comprehended as the Jaya-Mahabharata. The more we study and research about the topic, the complex this book of epic becomes. With thousands of characters into it, Tretayuga's Mahabharata really has in it a lot to tell us, a lot to teach us, apart from the sacred text of Geeta.

In this war of Dharma, did the war really happen for the sake of Dharma or were the turn of events later termed to be the path to achieve and restore Dharma, owing to the fact that Pandavas won over Kauravas? Story can be told either ways; understood either ways. We all know Krishna to be the eternal God who's mortal life came to an end like a commoner owing to Gandhari's curse. What might have been the other side of the story?? Could the eldest of the Kaurava clan, Suyodhana been a good ruler after all? What if the downfall of the empire became more evident only because of the foolish decisions taken and wrong stances, rather than the Kauravas branded to the demonic evils?

If you have read Mahabharata, you might have wondered why Karna was killed when unarmed, why Drona was killed with a lie and then slayed while in meditating posture, why was Jayadratha killed with the illusion of fall of dusk? Why was Pitamaha Bhishma killed with Shikhandi as an armour, knowing that he would not fight with women or eunuch? Why was Ekalavya killed at all by Krishna? Why did Iravan, naga son of Arjuna die? How can the dying of a woman with her 5 sons in Varanavrata be justified as aapaddharma? How can the killing of nagas like worms in Khandivaprastha through agni be justified as it had medicinal herbs for agni to consume since he had indigestion due to yaaga?

This book tries to answer what might have happened during the period. If you have read the story of Mahabharata already, please do read this one also, to get a different perspective. Anand Neelkanthan doesn't bore you anywhere in the book. The story is woven in such a way that the loose ends in the epic of Mahabharata seem to have tied till the author's efforts and creativity permit. This you can enjoy the most while reading the book. It is a welcome try at deciphering the actual events; trying to reason with what might have happened.

Since research on Mahabharata has left us with solid reasons, places and monuments - sunken Dwaraka, radioactivity of Kurukshetra, and temples of various Mahabharata characters within India and beyond, what really might have led to the war is always a wild guess to think. Here's a nice try from Anand Neelkanthan worth reading and a subject to mull over for days later.

Thursday, October 20, 2016

One Indian Girl: Chetan Bhagat

How does the Indian society perceive a girl who comes from a middle-class family with small dreams, is more than well-educated that most majority of her peers and relatives, and earns a bomb? What are the personal issues that she faces that comes along with her education and high profile career? What are the marriage woes that she faces and how does she face the issue of having a family?

In painting this story, Chetan Bhagat has banged feminism head on to the closed walls of the novel. There is no solid base of feministic character provided at all for the person in main role, Radhika, despite Radhika uttering feminism so many times. A socially shy person, more because of her wheatish complexion in a Punjabi family with a milky-fair sibling with a sense of style. Yes she is educated-she worked tight-lipped to achieve the luscious niche team of a prestigious MNC. That becomes the way she studied, and strictly displays no portrait of a strong feminist in her, either in her thoughts during college days of when she started to work. She is a normal working girl with dreams to achieve more every day, who loves her job, cooks minimal and who wants the attention of who she likes. But at the same time, she is taken aback when her superiors compliment her on work.
Radhika falls without any analysis, for the first guy who sort of gives her attention in abroad and the relation turns sore. To forget the first one, she moves to a different continent and falls for a married man owing to his looks, mostly. However natural it may sound for a girl to have more than one relationship, both the scenarios doesn’t seem quite enough for a highly educated girl who thinks of feminism to fall for. And she only weighs her future once she can’t take the relationship casual anymore and secretly craves for a normal family life.

Yes the novel is like all other novels he has written and the storytelling makes you read the whole book in one go. With the added luscious factors that she falls in love multiple times, craves hard for a male compliment, and there are expected twists in the story, readers are bound to complete the novel out of interest. Set all analysis apart while you read this book. I do not tell that there are no flaws in the making of this book. Radhika should have had a stronger character that matches her education and theory, the novel should have been more insightful regarding each character. Because the story is narrated from the girl’s perspective, there is no much light on the other characters, which make the reader feel the reasoning in the novel insufficient. Moreover, Radhika goes on a long feminism, bird-wings-nest talk at the end of the story to a length which the reader feels is not required.

But the book is readable from start to end and is still a good read for all youngsters and older people with a young mind. Though the reader cannot be carried over completely, this story of successful Indian girl is worth the read. Had a great feeling just to be reading the storyteller who made the whole India read, yet again. 

Sunday, October 16, 2016

ನೀರ್ ದೋಸೆ :ಇಷ್ಟ್ ದಿನ ಆದ್ಮೇಲೆ ಮತ್ತೊಂದ್ ವಿಮರ್ಶೆ

Disclaimer: ಇಷ್ಟ್ ದಿನ ಆದ್ಮೇಲೆ ಈಗ್ಯಾಕೆ ನೋಡ್ಬೇಕನ್ನಿಸ್ತೋ ಗೊತ್ತಿಲ್ಲ. ಬಿಡುಗಡೆಯಾಗಿ ೬ವಾರ ಆದ್ಮೇಲೂ ಚಿತ್ರಮಂದಿರದ ತುಂಬಾ ಜನ ನೋಡಿ ಖುಷಿಯಾಯ್ತು. ನೋಡಿದೋರೆಲ್ಲ ಫೇಸ್ ಬುಕ್ಕಲ್ಲಿ "ನೋಡಿ. ಮಿಸ್ ಮಾಡ್ಬೇಡಿ" ಅಂತ ಹೇಳಿದ್ದು ಓದಿಯೇ ಹೋದ್ವೇನೋ. ಹುಡುಗಿಯೊಬ್ಬಳು ಐಟಂ ಸಾಂಗ್ ಥರ ಎಂಟರ್ಟೈನಿಂಗ್ ಸಂಭಾಷಣೆಗಳ ಸಿನಿಮಾ ಒಂದರ ವಿಮರ್ಶೆ ಬರೀತಿದ್ದಾಳೆಂದ ಮಾತ್ರಕ್ಕೇ ತಾವು ಪೂರ್ವಗ್ರಹಿಕೆ ಇಟ್ಟುಕೊಂಡು ನನ್ನ ಅಭಿಪ್ರಾಯ ಓದುವ ಅವಶ್ಯಕತೆಯಿಲ್ಲ ಅಷ್ಟೇ.  

2016 Kannada film Neer Dose poster.jpgನೀರ್ ದೋಸೆನೋ ಮಸಾಲ್ ದೋಸೆನೋ ಅಂತ ಟೈಟ್ಲೆ ಕನ್ಫ್ಯೂಸ್ ಆಗೋ ಮಟ್ಟಿಗಿನ ಸಂಭಾಷಣೆ. ಓಪನಿಂಗ್ ದೃಶ್ಯಗಳಲ್ಲೇ ಪಕ್ಕಾ ದ್ವಂಧ್ವಾರ್ಥಗಳು. ಆದ್ರೆ ದತ್ತಣ್ಣ-ಜಗ್ಗೇಶ್ ಸಿನಿಮಾ ನೋಡ್ತಾ ಹೋದಹಾಗೆಲ್ಲಾ ಇಷ್ಟವಾಗ್ತಾ ಹೋಗ್ತಾರೆ. "ಸಪೂರ ಕಟಿ" ನೋಡ್ತಾ ಇದ್ಯಾಕಿಂಥಾ ಪಾತ್ರಕ್ಕೆ ಹರಿಪ್ರಿಯಾ ಒಪ್ಪಿದ್ರೋ ಅನ್ನಿಸುತ್ತೋ, ಅದೇ ಪಾತ್ರದ ಪ್ರಾಮುಖ್ಯ ಮುಂದೆ ಅರಿವಾಗ್ತಾ ಹೋಗ್ತದೆ. ಸಾಧಾರಣ ಜನರನ್ನ ನೀರ್ ದೋಸೆಯ ಎಳೆಯಿಂದ ಕಟ್ಟಿಕೊಟ್ಟಿರುವ ಚಿತ್ರ ಇದು. ಎಷ್ಟು ನಗಿಸುತ್ತೋ ಅಷ್ಟೇ ಒತ್ತರಿಸುವ ಫೀಲ್ ತರುವ ನಾಲ್ಕಾದರೂ ಸಂದರ್ಭಗಳು. ದತ್ತಣ್ಣ ತನ್ನ ಅಕ್ಕನನ್ನು ನೆನೆಸಿಕೊಳ್ಳುವ, ಅರ್ಥಮಾಡಿಕೊಂಡಿರುವ, ಕರ್ಮಗಳನ್ನು ನೆರವೇರಿಸುವ ಪರಿ-touchy ಮತ್ತು ಅರ್ಥಪೂರ್ಣ. ಜಗ್ಗೇಶ್ ಗೆ ತನ್ನ ತಂದೆಯೊಡನಿರುವ ಭಾವದ ನಂಟೂ ತಂದೆ-ಮಗನ ಮಧ್ಯೆ ಅಪರೂಪದ್ದು. ತಂದೆಯ ಪುಟ್ಟಪುಟ್ಟ ಆಸೆಗಳನ್ನೂ ಮರೆಯದೆ ನೆಮ್ಮದಿಯಾಗಿ ಕೊನೆ ಕ್ಷಣಗಳನ್ನು ಕಳೆವಂತೆ ಮಾಡುವುದು, ಕ್ಯಾಬರೆ ಡ್ಯಾನ್ಸರ್ ಹರಿಪ್ರಿಯಾಳ ಗತವನ್ನು ಕೆದಕದೆ ಆ ಸ್ವೇಚ್ಛೆಯ ಪಾತ್ರಕ್ಕೂ ನೀಡಿರುವ ಮಾನವೀಯ ಮೆರುಗು, ಮೂಲಾ ನಕ್ಷತ್ರದಲ್ಲಿ ಹುಟ್ಟಿ ಮೂವತ್ತಾರಾದರೂ ಮದುವೆಯಾಗದೆ ಉಳಿದು ಜಗ್ಗೇಶ್ ನನ್ನು ಇಷ್ಟಪಡುವ ಸುಮನ್ ಹಾಗು ಏನೇ ಆದರೂ ಹೆಣದ ಗಾಡಿಯ ಚಾಲಕನಿಗೆ ಮದುವೆ ಮಾಡಲಿಚ್ಛಿಸದೆ ಜಗ್ಗೇಶ್-ಹರಿಪ್ರಿಯಾ-ದತ್ತಣ್ಣನ ಗುಂಪು ಕಂಡು ಗಲಿಬಿಲಿಯಾಗಿ ಹೌಹಾರುವ ಅವಳ ಅಪ್ಪ - ಎಲ್ಲವೂ ಸರಳ ಸಂಬಂಧಗಳ ಜಟಿಲ ವ್ಯಕ್ತಿತ್ವಗಳಿಂದೇರ್ಪಡುವ ನವಿರು ಹಾಸ್ಯದ ಕಥೆ-ಅಗತ್ಯ ದ್ವಂದ್ವ ಸಂಭಾಷಣೆ. ಕಳೆದು ಹೋಗ್ತಿರೋ ಮಾನವೀಯ ಸಂಬಂಧಗಳನ್ನ, ಬದುಕಿನಲ್ಲಿ ಹತ್ತಿರವಾಗುವ ಜನಗಳನ್ನ ಹೇಗೆ ಸಹಜವೆನ್ನುವಂತೆ, ಸಂಬಂಧಗಳ ಮೌಲ್ಯ ಹಾಸ್ಯದಲ್ಲೂ ಉಳಿಸಿಕೊಂಡು ಬದುಕೋ ಸರಳತೆ ತೋರಿಸಿಕೊಡೋ ಸಿನಿಮಾ ಇದು.

ಕಥೆಯ ಓಘ ಒಂದೇ ಸಮನಾಗಿಲ್ಲ. ಕೆಲವು ಕಡೆ ಅನಾವಶ್ಯಕವೆನ್ನಿಸುವಷ್ಟು ಉದ್ದದ ದೃಶ್ಯಗಳು. ಆದರೆ ಎಲ್ಲಕಡೆಯೂ ಸಿನಿಮಾ ಪ್ರೇಕ್ಷಕರ ಆಸಕ್ತಿ ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿದೆ. ನಿರೂಪಣೆಯೇ ಈ ಚಿತ್ರದ ಬಂಡವಾಳ. ಅಲ್ಲಿಗೆ ಕಥೆಯ ಪೂರ್ಣ ಹೆಚ್ಚುಗಾರಿಕೆ ವಿಜಯ ಪ್ರಸಾದ್ ಗೇ ಸಲ್ಲಬೇಕು. ದತ್ತಣ್ಣ ಅಂತೂ ಸಿಂಪ್ಲಿ ಸುಪರ್ಬ್. ಕಲಾವಿದರೆಲ್ಲರೂ ತಂತಮ್ಮ ಪಾತ್ರಗಳಲ್ಲಿ ಛಾಪೊತ್ತುತ್ತಾರೆ.

ಕೊನೆಗಂತೂ ನೀರ್ ದೋಸೆ ನೋಡಿದೋರ್ಯಾರಿಗೂ ಸಿನಿಮಾ ನಿರಾಸೆ ಅಂತೂ ಮಾಡೋದಿಲ್ಲ. ಮುಜುಗರ ತರಿಸುವ ಸಂಭಾಷಣೆಗಳೆಲ್ಲಾ ಕೊನೆಕೊನೆಗೆ ಇವು ಈ ಸಿನಿಮಾಗೆ ಅವಶ್ಯಕ ಅನ್ನಿಸುವಂಥಾ ಚಿತ್ರ. ನನ್ನ ಹಾಗೆ A ಸಂಭಾಷಣೆಗಳು ಅನ್ನುವ ಕಾರಣಕ್ಕೇ ಇನ್ನೂ ನೋಡದಿರೋ ಮಂದಿ ಇದ್ರೆ, ಆದಷ್ಟ್ ಬೇಗ ನೋಡಿ ಬನ್ನಿ. ಶುರುವಿನಲ್ಲಿ ಅತಿರೇಕ ಅನ್ನಿಸಿದರೂ ಸಿನಿಮಾ ಇಷ್ಟವಾಗದಿರಲು ಕಷ್ಟಸಾಧ್ಯ.

Thursday, September 8, 2016

ಕಾವೇರಿ ನೀರು ಸಮರ!

ಮಹದಾಯಿ ಹೋರಾಟವಿನ್ನೂ ಹಸಿಯಾಗಿರುವಾಗಲೇ ಕಾವೇರಿ ನೀರಿಗಾಗಿ ಮತ್ತೊಮ್ಮೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಮರ ಶುರುವಾಗಿದೆ. ನೆನ್ನೆಯಿಂದ whatsapp ನಲ್ಲಿ ಮತ್ತೆ ಕುಹಕಗಳು, ರಾಜಕಾರಣಿಗಳ ಕುರಿತ ವಕ್ರೋಕ್ತಿಗಳು ಹರಿದಾಡುತ್ತಿವೆ. ನಮ್ಮ ಮನೆಯ ಮಕ್ಕಳು ಹಸಿದಿರುವಾಗ ಪಕ್ಕದ ಮನೆಯವರಿಗೆ ಉಣಿಸಲು ಬಡಿದಾಡಬೇಕಾಗಿರುವ ಹೀನತನ ನೋಡಿ ರೈತರಿಗೆಲ್ಲ ಕಣ್ಣೀರಿನ ಬದಲು ಸರ್ಕಾರ, ಆಡಳಿತ, ನ್ಯಾಯಾಲಯದೆಡೆಗಿನ ತಿರಸ್ಕಾರವೇ ಹೆಚ್ಚಾಗಿ ಬಂಡಾಯವೇಳುವಂತೆ ಮಾಡಿದೆ.

ಪೂರ್ಣಚಂದ್ರ ತೇಜಸ್ವಿಯವರು ಎಂದೋ ಹೇಳಿದ "ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲ ಹಾಗು ಅನಾನುಕೂಲಗಳಿರುತ್ತವೆ. ಅಲ್ಲಿಯ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯೊಳಗಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆಯಾ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರನಾಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ಮೇಲಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ" ಎಂಬ ಮಾತು ಸುಪ್ರೀಂ ಕೋರ್ಟ್ ಮನಗಾಣಲು ಇನ್ನೆಷ್ಟು ಕಾಲ ಬೇಕೋ ತಿಳಿಯೆವು.

ಏತನ್ಮಧ್ಯೆ ಏಳುವ ಪ್ರಶ್ನೆಯೆಂದರೆ- ಮೈಸೂರು, ಮಂಡ್ಯ, ಬೆಂಗಳೂರಿನವರೆಗಿನ ಜನರೆಲ್ಲಾ ತಮಗೆ ಉಪಯೋಗಿಸಿಕೊಳ್ಳಲು ದಕ್ಕುತ್ತಿರುವ ಕಾವೇರಿ ನೀರನ್ನು ಸಮರ್ಥವಾಗಿ ಪೋಲಾಗದಂತೆ ಬಳಸಿಕೊಳ್ಳುತ್ತಿದ್ದಾರೆಯೇ? ಅನ್ನುವುದು. ನದಿಯ ನೀರುಬಳಕೆ ಬಿಡಿ, ತಮಗೆ ಬೆಳೆ ಬೆಳೆಯಲು ನೀರು ಸಾಲುತ್ತಿಲ್ಲವೆನ್ನುತ್ತಿರುವ ಎಷ್ಟು ರೈತರು ತಂತಮ್ಮ ಹೋಬಳಿ, ತಾಲ್ಲೂಕುಗಳಲ್ಲಿ ನೆರೆಹೊರೆಯ ರೈತರನ್ನು ಒಗ್ಗೂಡಿಸಿಕೊಂಡು ನೀರು ಸಂಗ್ರಹಣಾ ಪ್ರದೇಶಗಳಲ್ಲಿ (catchment area)  ಮಳೆನೀರು ಹಾಗು ಪೋಲಾಗುವ ಕಾಲುವೆ ನೀರನ್ನು ಉಳಿಸಲು ಪುಟ್ಟ ಕೆರೆಗಳಂಥಾ ಪ್ರಯತ್ನ ಕೈಗೊಂಡಿದ್ದಾರೆ ಎನ್ನುವುದು. ಈ ಮಳೆ ಕುಯ್ಲು ರೈತರು ಹಾಗು ಸರ್ಕಾರ ಇಬ್ಬರೂ ಕೈಜೋಡಿಸಿ ಮಾಡಬೇಕಾಗಿರುವಂಥದ್ದು. ರೈತ ಸಮುದಾಯವೊಂದಕ್ಕೇ ಇದು ಅಸಾಧ್ಯ. ಎಲ್ಲೆಲ್ಲಿ ತಗ್ಗು ಪ್ರದೇಶಗಳಿವೆಯೋ ಅವನ್ನು ಗುರುತಿಸಿ ಅಲ್ಲೆಲ್ಲ ನೀರು ಸಂಗ್ರಹಣೆಗೆ ಕ್ರಮ ತೆಗೆದುಕೊಳ್ಳಬೇಕಾದದ್ದು ಅತ್ಯವಶ್ಯ.

ಇದರೊಡನೆ, ಕೃಷಿ ಅಧಿಕಾರಿಗಳಿಗೆ ರಸಗೊಬ್ಬರ, ರಾಸಾಯನಿಕಗಳನ್ನು ಇಂತಿಷ್ಟು ಮಾರಲೇ ಬೇಕೆಂಬ ಟಾರ್ಗೆಟ್ ಬದಿಗೊತ್ತಿಸಿ ನೀರು ಹಾಗು ಇತರೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕಾದ್ದು ಅನಿವಾರ್ಯ;ಅವಶ್ಯ.

ನೀರು ಕಾಪಾಡಿಕೊಳ್ಳುವತ್ತ ನಮ್ಮ ಆಸ್ಥೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಆಸ್ಥೆ ಇರುವ ಸಂಪನ್ಮೂಲಗಳ ಬಳಕೆಗೆ ನೀಡಬೇಕಾಗಿದೆ. ಕಾವೇರಿ ಹೋರಾಟವನ್ನ ರಾಜಕೀಯಕ್ಕೆ ಮಾತ್ರ ಬಳಸಿಕೊಂಡು ಕಡೆಗೆ ರೈತ ಮತ್ತೆ ನಿರ್ಲಕ್ಷಿತನಾಗದೇ ಇರಲಿ. ಸುಪ್ರೀಂ ಕೋರ್ಟಿಗಲೆಯುವುದು ಮಾತ್ರ ವಕೀಲರ ಕೆಲಸವಾಗದೆ ಶೀಘ್ರ ತೀರ್ಪಾಗುವತ್ತ ಗಮನ ಕೊಟ್ಟರೆ ಒಳ್ಳೆಯದೇನೋ. ಎಲ್ಲರೂ ಬಂಗಾರಪ್ಪನವರನ್ನು ನೆನೆಸಿಕೊಂಡು ಆಗ ಸುಗ್ರೀವಾಜ್ಞೆ ಹೊರಡಿಸಿ ತಮಿಳು ನಾಡಿಗೆ ಸುಖಾಸುಮ್ಮನೆ KRS ಬತ್ತಿದ್ದರೂ ಮೆಟ್ಟೂರು ಜಲಾಶಯಕ್ಕೆ ನೀರು ಹರಿಸುವುದನ್ನು ಧಿಕ್ಕರಿಸಿದನ್ನು ಕೊಂಡಾಡುವಾಗ ಸರ್ಕಾರದ ಜವಾಬ್ದಾರಿ ಕಣ್ಣಿಗೆ ರಾಚುತ್ತಿದೆ. ಬಂದ್ ನಂತರ ಮುಂದಿನ ಪರಿಣಾಮ ಏನಾಗುತ್ತದೆ, ಕಾದು ನೋಡುವುದೊಂದೇ ಮಾರ್ಗ!

Friday, July 29, 2016

ಕ್ಷಮೆ: ಸಹನಾ ವಿಜಯಕುಮಾರ್

ಇಂಗಿತ, ಆಸ್ಥೆ-ಆಸೆಗಳನ್ನು, ಕೊನೆಗೆ ತನ್ನತನವನ್ನೂ ಜೀವನದ ಬಾಹ್ಯ ಗೆಲುವುಗಳ ವಾಂಛಲ್ಯಕ್ಕಾಗಿ ಬುದ್ಧಿಗೆ ನಿಲುಕದಂತೆ ಬೀಗ ಹಾಕಿ ಯಾಂತ್ರಿಕ ಬದುಕಿಗೆ ಹೊಂದಿಕೊಂಡುಬಿಟ್ಟಿರುವ ಕಥಾನಾಯಕಿ-ಪಲ್ಲವಿ. ಚಿಗುರಿನಲ್ಲೇ ಮಗನೊಂದಿಗೆ ಅಂತರವನ್ನು ಅಳಿಸಿಹಾಕಲು ಪ್ರಯತ್ನಿಸದೆ ಅಂತರ್ಮುಖಿಯಾಗಿ ತನ್ನೊಳಗೇ ಉಳಿದುಹೋದ ತಂದೆ. ಚಿಕ್ಕಂದಿನಲ್ಲೇ ದೂರವಾದ ತಾಯಿ. ತಾನಾಯಿತು-ತನ್ನ ಕೆಲಸವಾಯಿತೆಂದು ಕರ್ತವ್ಯದಾಚೆಗಿನ ಪ್ರೀತಿಯ, ಅನುಭೂತಿಯ, ಸ್ನೇಹದ, ಸಲುಗೆಯ ಆಕರ್ಷಣೆಯತ್ತ ತಾನಾಗಿ ಹಾತೊರೆಯದ ಗಂಡ-ರಘು. ತಂದೆಯನ್ನು ಅವರ ತಪ್ಪಿನಿಂದಾಚೆಗೆ ಎಳ್ಳುಮಾತ್ರವೂ ನೋಡದೇ ಹಳಿಯುವ ಅಣ್ಣ.


ಪಲ್ಲವಿಗೆ ಆರಂಕಿ ಸಂಬಳದ ಬಹುರಾಷ್ಟ್ರೀಯ ಕಂಪನಿಯ ಜವಾಬ್ದಾರಿಯುತ ಸಾಫ್ಟ್ ವೇರ್ ಕೆಲಸ. ತನ್ನ ಕಡೆ ಯಾರಿಗೂ ಕಾಳಜಿಯೇ ಇಲ್ಲವೇನೋ ಅಂತ ಸುಲಭವಾಗಿ ಅನ್ನಿಸಿಬಿಡುವಂಥಾ ಸಂದರ್ಭ ಹಳೆಯ ಗೆಳೆಯ ಚೇತು ಸಿಕ್ಕಾಗ ಸ್ಥಾಯಿಯಾಗಿಬಿಡುತ್ತದೆ. ಅಲ್ಲಿಂದಾಚೆಗೆ ಪಲ್ಲವಿಗೆ ತನ್ನ ಜೀವನದ ಹೊಂದಾಣಿಕೆಗಳು ಬೃಹತ್ತಾಗಿ ಕಾಣತೊಡಗುತ್ತವೆ. ರಘುವಿನ ಪ್ರತಿ ಮಾತನ್ನೂ ನಡೆಯನ್ನೂ ಚೆತುವಿನೊಂದಿಗೆ ತುಲನೆ ಮಾಡುತ್ತಾ ನೆಮ್ಮದಿಯಿಂದ ದೂರವಾಗುತ್ತಾಳೆ ಪಲ್ಲವಿ. ಜೀವನ ನಿರಾಸೆಯ ಅಲೆಗಳ ಮೇಲಿರುವಾಗ ತಂಗಾಳಿಯಂತೆ ಮತ್ತೆ ಬರುತ್ತಾನೆ ಚೇತು.

ಮುಂದೆ ಆಕೆಯ ತುಮುಲಗಳು ಏನು? ಎಂದಿಗೋ ಕಳೆದುಕೊಂಡ ತನ್ನತನವನ್ನು ಹುಡುಕುತ್ತ ಆಕೆಯ ನಡೆಗಳೇನು? ಇಲ್ಲಿ ಎಷ್ಟೋ ವರ್ಷ ಕಳೆದು ಸಿಕ್ಕ ಗೆಳೆಯನ ಹತ್ತಿರ ಬಾಲ್ಯವನ್ನು ಕಂಡುಕೊಳ್ಳುವ ಪ್ರಯತ್ನ, ಚೇತುವಿನಲ್ಲೇ ತನ್ನ ಜೀವನದ ಅಷ್ಟೂ ಪಾತ್ರಗಳನ್ನು ಕಾಣುವ ಪಲ್ಲವಿ, ತನ್ನ ಜೀವನವನ್ನ ವಿಶ್ಲೇಷಿಸಿಕೊಳ್ಳುವತ್ತ ಸಾಗುವ ದಾರಿ- ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಚಿತ್ರಿಸಿದ್ದಾರೆ ಲೇಖಕಿ.

“ಕ್ಷಮೆ”- ಲೇಖಕಿಯ ಮೊದಲನೆಯ ಕಾದಂಬರಿ ಅಂತ ಕೊಂಚಮಾತ್ರವೂ ಅನ್ನಿಸದಿರುವ ಪುಸ್ತಕ. ಲೇಖಕಿಯ ವಿಚಾರ ಪ್ರಬುದ್ಧತೆ ಓದುತ್ತ ಓದುತ್ತ ಸ್ಪಷ್ಟವಾಗುತ್ತ ಹೋಗುತ್ತದೆ. ಎಲ್ಲಿಯೂ ಎಳೆಯದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ- ಕ್ಷಮೆ. ಎಂದಿಗೂ ಕನ್ನಡ ಪುಸ್ತಕವನ್ನೇ ಓದಿರದವರೂ ಭಾಷಾ ಪ್ರವೇಶಕ್ಕಾಗಿ, ಕಾದಂಬರಿ ಪ್ರಪಂಚದ ಪ್ರವೇಶಕ್ಕಾಗಿ ಓದುವಂತೆ ಮಾಡಬಲ್ಲ ಭಾಷೆ, ವಿಚಾರ ಎರಡೂ ಇದೆ ಈ ಕಾದಂಬರಿಯಲ್ಲಿ.

ಭೈರಪ್ಪನವರಿಂದ ತಿದ್ದಲ್ಪಟ್ಟವರು ಅಂದ ಕೂಡಲೇ ಕುತೂಹಲದಿಂದ ಪುಸ್ತಕ ಬಿಡುಗಡೆಗೇ ಹೋಗಿ ಕೊಂಡ ಪುಸ್ತಕ- ಭಾಷೆಯಲ್ಲೇ ಆಗಲೀ, ವಿಚಾರದಲ್ಲೇ ಆಗಲಿ ನಿರಾಸೆ ಮಾಡಲಿಲ್ಲ. ಇನ್ನಷ್ಟು ವಿಸ್ತಾರವನ್ನು ಬಯಸಿದ್ದುದಕ್ಕೆ ಮಾತ್ರ ಕೊಂಚ ತಣ್ಣೀರೆರೆಚಿದಂತಾಯ್ತು. ರಘು ಹಾಗು ಪಲ್ಲವಿಯ ತಂದೆ-ತಾಯಿಯ ವ್ಯಕ್ತಿತ್ವಕ್ಕೆ ಇನ್ನೂ ವೇದಿಕೆ ಹಾಗು ಒಳನೋಟ ಕೊಡಬಹುದಿತ್ತೇನೋ. ಪಲ್ಲವಿಯ ಪರಿಭಾಷೆಯಲ್ಲಿಯೇ ಇಡೀ ಪುಸ್ತಕವಿರುವುದರಿಂದ ಆ ಅವಕಾಶವಾಗಿಲ್ಲ ಅಂತ ದಟ್ಟವಾಗಿ ಅನ್ನಿಸುತ್ತದೆ. ಬರುವ ಎಲ್ಲ ಪಾತ್ರಗಳ ಮನೋಗತಗಳನ್ನೂ, ಭಾವನೆಗಳನ್ನೂ ವಿವರಿಸಿದ್ದರೆ ಕಥೆ ಇನ್ನಷ್ಟು ಸ್ಪಷ್ಟತೆ ಪಡೆಯುತ್ತಿತ್ತೇನೋ. ಖಂಡಿತವಾಗ್ಯೂ ಕನ್ನಡ ಕಾದಂಬರಿಗಳಲ್ಲಿ ಮುಂಚೂಣಿಗೆ ಸಾಗಬಹುದಾದ ಲೇಖಕಿ- ಸಹನಾ ವಿಜಯಕುಮಾರ್.

ಗುಡ್ ರೀಡ್.. ಕಾದಂಬರಿಪ್ರಿಯರು ಓದಿ ನೋಡಬೇಕಾದ ಪುಸ್ತಕ. ನಾನಂತೂ ಹಿಡಿದಾಗಿನಿಂದ ಕೆಳ ಬಿಡದೆ ಮುಗಿಸಿರುವ ಪುಸ್ತಕ.