Tuesday, October 15, 2013

ಸಂತಸದ ಶರಧಿ

ಅರಳುಗ‌‍‌ಣ್ಣಲಿ ನಿನ್ನ ನಗುವು
ತುಟಿಗಳಂಚಲಿ ಮಿಂಚಿ ತುಳುಕಿ
ಮೆಲ್ಲ ನಿನ್ನನು ದಾಟಿ ನಡೆದು
ನೋಡುಗರಿಗದು ಪಸರಿದೆ

ಮುಗುಳು ನಗುವಿನ ಮೂಕ ಭಾಷೆ
ಬಿಡದ ಅಳುವಿನ ನಿನ್ನ ಆಜ್ಞೆ
ಮಾತ ಹೊನಲನು ಹರಿಸಿದೆ

ಭವದ ಭಾಷ್ಯವ ಅಳಿಸಿ ಹಾಕಿ
ಪುಟ್ಟ ಮುಷ್ಠಿಯೊಳೆಮ್ಮ ಜಗವನು
ನಿನ್ನ ಸುತ್ತಲೆ ಕಟ್ಟಿ ಹಾಕಿ
ನಿನ್ನೊಳೆಮ್ಮನು ಬಿಗಿದಿರೆ

ಮೃದುವ ಪಾದದಿ ಮೀಟಲೆಮ್ಮನು
ನಿಜದ ಚಿಂತೆಗಳೆಲ್ಲ ಸ್ಪರ್ಶದಿ
ತಿಳಿಗೈದು ಲೀನಗೊಂಡಿದೆ

ಮುಗ್ಧತೆಯ ಪ್ರತಿರೂಪ ನಿನ್ನನು
ಮಾತ ಮರೆತೆಮ್ಮೆಲ್ಲ ಜೀವಕು
ತಣ್ಪ ಶರಧಿಯ ತೋರಲೆಂದೇ
ದೇವ ನಿನ್ನನು ಕಳಿಸಿಹ

ಯಶವು ಸಿಗಲಿ ಎನ್ನ ಕಂದನೆ
ನಿನ್ನ ನೆರಳು ಸೋಂಕೆ ಎಂದಿಗು
ಹಾಲುನಗುವೆ ಉಕ್ಕಲಿ

Thursday, September 26, 2013

ಕಾಡು ಮತ್ತು ಕ್ರೌರ್ಯ – ಕೆ ಪಿ ಪೂರ್ಣಚಂದ್ರ ತೇಜಸ್ವಿ

ನಮ್ಮನ್ನಗಲಿ ೫ ವರ್ಷವಾದರೂ ಓದಿಸುತ್ತಿದ್ದಾರೆ ತೇಜಸ್ವಿ.

ಕಲ್ಮನೆಯೆಂಬ ಮಲೆನಾಡ ತಪ್ಪಲಿನ ಊರ ಕಥೆ ಇದು. ಅಲ್ಲಿನ ಜನರ ನಂಬಿಕೆಗಳು ಹಾಗು ಅವರ ಮೌಢ್ಯದ ನಡುವಿನ ತಾಕಲಾಟವೇ ಕಾದಂಬರಿಯ ವಸ್ತು.

ಕಲ್ಮನೆಯ ರಂಗಪ್ಪನವರು ವೆಂಕನೆಂಬ ಮೌಢ್ಯಪೋಷಿತ ಮಂತ್ರವಾದಿಗೆ ಬದುಕಿದ್ದಾಗ ಮೂಢನಂಬಿಕೆಗಳಿಗೆ ಬಲಿಯಾಗದೆ, ಕಾಯಿಲೆಯಾಗಿ ತೀರಿಹೋದಾಗ ಮಗಳು ಹೋಮ-ಶಾಂತಿಯೆಂದು ವೆಂಕುವನ್ನಾಶ್ರಯಿಸದೆ, ಕಡೆಗೆ ರಂಗಪ್ಪನ ಸಮಾಧಿ ಬಳಿ ವಾಮಾಚಾರ ಮಾಡಲು ಹೋದ ವೆಂಕುವಿನ ಅರಿವಿಗೆ ಬಾರದೆ ತಿರುಮಂತ್ರವಾಗಿ ರಂಗಪ್ಪನ ಬದುಕು-ಸಾವಿನ ಹಾಗೆ ಅವನ ನಂಬಿಕೆ ಅವನಿಗೇ ಪ್ರಶ್ನೆಯಾಗಿ ಉಳಿಯುತ್ತದೆ. ಇಲ್ಲಿ ವೆಂಕ ಶತಮಾನಗಳ ಮೂಢ ಕ್ರೌರ್ಯದ ಪ್ರತಿನಿಧಿ.

ರಂಗಪ್ಪನ ಮಗಳು ನಳಿನಿಯನ್ನು ವಿವಾಹವಾಗಲು ಬಂದ ವಿದ್ಯಾವಂತ ಸೋಮುವು ಆಕೆಯ ತಂದೆಯಗಲಿದ ದುಃಖದಲ್ಲಿ ಮುಸುಕಾದ ಪ್ರೇಮದೆಡೆ ಅಪನಂಬಿಕೆ ಬೆಳೆಸಿಕೊಳ್ಳುತ್ತಾನೆ. ಈ ಮಧ್ಯೆ ಕಲ್ಮನೆಯ ಕಾಡಿದ ಭಾರೀ ಕಾಡುಹಂದಿಗೆ ಡೈನಮೈಟ್ ಇಟ್ಟು, ಅದಕ್ಕೆ ಬಲವಾದ ಪೆಟ್ಟು ತಾಗಿದರೂ ಇನ್ನೂ ಬದುಕುಳಿಯುತ್ತದೆ. ಆಳುಗಳು ಅದರ ಇರುವನ್ನು ಹುಡುಕಿ ಕೊನೆಗಾಣಿಸೋಣವೆಂದಾಗ ಸಮಾಧಿಯನ್ನೂ ಬಿಡದೆ ಬೆದಕಿ ತೆಗೆದು ಹೆಣ ಬಗೆದ ರಾಕ್ಷಸ ಹಂದಿಯ ಸಿಡಿಮದ್ದಿನಿಂದ ಹಿಂಜಿದ ಬಾಯಲ್ಲಿ ಹುಳು ಮುಲುಗುಟ್ಟಿ ಯಾತನೆ ಪಟ್ಟು ಸಾಯಲಿ ಎಂದು ಬಯಸುವ ಸೋಮು ನಿಷ್ಕಾರಣ ಕ್ರೌರ್ಯವೊಂದರ ಕುರುಹಾಗುತ್ತಾನೆ.

ಹಂದಿ ಬೇಟೆಯಾಡಲು ಹೋದಾಗಿನ ರೋಚಕತೆ, ಪಾನಮತ್ತ ಮಾರ್ಯನೆಂಬ ಆಳಿನ ಕಾಲ್ಗಳಡಿಯಲ್ಲೇ ತಿವಿದು ನುಸುಳಿದಾಗಿನ ಕಳ್ಳಭಟ್ಟಿಯ ನಶೆ ತಂದ ಫಜೀತಿ, ವೆಂಕನ ಪೊಳ್ಳು ಮಂತ್ರಗಳಿಗೆ ಒಂಟಿಗ ಹಂದಿಯ ರೂಪದ ಭೂತ ವಶವಾಯಿತೆಂದು ಬೀಗುವ ಅವನ ಹೆಡ್ಡತನ, ಜೀತದಾಳು ಲಿಂಗನ ಮುಗ್ಧತೆ, ತಾನು ಬಯಲುಸೀಮೆಗೆ ಓಡಿಹೋಗಬೇಕೆನ್ನುವ ತವಕ, ಎಲ್ಲವೂ ನಮ್ಮನ್ನು ಕಲ್ಪನೆಯ ಕಥೆಯೊಳಕ್ಕೆ ಇಳಿಸಿ ಎಲ್ಲಿಯೂ ನಿಲ್ಲಿಸದೆ ಓದಿಸಿಕೊಂಡು ಹೋಗುತ್ತವೆ.

ಪ್ರಕಾಶಕರು ಹೇಳುವಂತೆ ಈ ಕಾದಂಬರಿ ೫೦ ವರ್ಷ ಹಳೆಯದು. ತೇಜಸ್ವಿಯವರ ಕಥಾಮಂಡನೆ ಕೊಂಚವೂ ಹಳತೆನ್ನಿಸುವುದಿಲ್ಲ. ಅವರ ಬರಹವನ್ನ ಇಷ್ಟ ಪಡುವವರು ಓದಲು ತಪ್ಪಿಸಬಾರದ ಪುಸ್ತಕ.


Wednesday, September 18, 2013

ನಿದಿರೆಯ ನಗು

ಚಿಟ್ಟೆ ಕಚಗುಳಿಯಿಟ್ಟವೇನೋ,
ಬೆಳ್ಳ ಮುಗಿಲು ಹಿಂಜಿ ಕನಸಲಿ-
ಹಸಿರ ಮರೆಯಲಿ ಹಕ್ಕಿಯೊಂದು
ಕುಹುಕುಹೂ ಎಂದಿತೆ ಮುದದಲಿ?

ಮೃದುವ ಹುಲ್ಲಿನ ಹಾಸ ತಂಪು
ಮೆಲ್ಲ ಪಾದಕೆ ತಾಕಿತೇನೋ,
ಹೂವ ನುಣುಪಿನ ಪಕಳೆ ಅದುವೆ
ಕೈಗಳಿಗೆ ತಾ ಸೋಂಕಿತೋ?

ಘಲ್ಲೆನುವ ಝೇಂಕಾರವೊಂದು
ಪುಟ್ಟ ಕಿವಿಗಳದುಂಬಿತೇನು?
ಸವಿದ ಅಮೃತದ ರುಚಿಯು ಮತ್ತೆ
ನಾಲಗೆಗೆ ಮುದ ನೀಡಿತೋ?

ಮಳೆಯ ದಪ್ಪನೆ ಹನಿಯದೊಂದು
ಎಲೆಯ ಮೇಲ್ಗಡೆ ಜಾರಿ ಹನಿದು-
ನಿಂತ ನೀರೊಳು ಎಬ್ಬಿಸಿದ ಆ
ಸುರುಳಿ ಕನಸಲಿ ಕಂಡಿತೋ?

ಉದಯರವಿಯು ಆಕಳಿಸುತಲಿ
ಕರಿಯ ತೆರೆಯನು ಸರಿಸಿ ಎದ್ದು-
ಬೆಳಕ ಕೋಲ್ಗಳ ಪಸರಿ ಹರಡಿದ
ಬಣ್ಣಗಳು ಅವು ಕಂಡವೋ?

ಏನ ಕಂಡೆಯೊ ನನ್ನ ಕಂದನೆ
ನಗುವ ಸಿರಿಯದು ಎಂಥ ಚಂದ;
ನೀನು ನಿದ್ದೆಯೊಳದ್ದಿ ಬೀರಿಹ
ಮುಗುಳ ಮುದವೇ ಮೋಡಿಯೋ...

Wednesday, August 28, 2013

ನನ್ನ ಮಗು

ಕನಸಿದ್ದ ನಗು ಈಗ ನನಸಾಗಿದೆ. ಒಳಗೆ ಮಿಡುಕಾಡುವ ಜೀವವೊಂದು ಎಲ್ಲಿಂದ ಬಂತೆಂದು ಅಚ್ಚರಿ ಪಡುವಷ್ಟರಲ್ಲಿ, ನಾನಿನ್ನೂ ನನ್ನ ಬಸಿರನ್ನು ಮನಹ್ಪೂರ್ತಿ ಆಸ್ವಾದಿಸುವ ಮೊದಲೇ, ಅವಧಿಗೂ ಮುನ್ನವೇ ಪುಟ್ಟ ಗಂಡು ಮಗುವೊಂದು ನನ್ನ ಮಡಿಲು ತುಂಬಿದೆ.

ಜೀವನ ನಿರಂತರ ಕಲಿಕೆ ಅನ್ನುವ ಮಾತು ಚೆನ್ನಾಗಿಯೇ ಅನುಭವಕ್ಕೆ ಬಂತು. ಅವಧಿಗೆ ಮುನ್ನ ಜನಿಸಿದ/ ಪ್ರತ್ಯೇಕ ವ್ಯವಸ್ಥೆ ಬೇಕಾದ ಮಕ್ಕಳಿಗೆಂದೇ ಇರುವ N-ICU ನಲ್ಲಿ ವಾರದ ಕಾಲ ಇಟ್ಟು, ೪ ದಿನ ಹುಟ್ಟಿದಾರಭ್ಯ ನನ್ನ ಮಗುವನ್ನ ನೋಡಲಾಗಲೇ ಇಲ್ಲ. ಮಕ್ಕಳು ದೂರವಾದಾಗಿನ ವೇದನೆಯನ್ನ ತಿಳಿಸಲೆಂದೇ ಆ ಸಂದರ್ಭ ಬಂತೇನೋ. ಒಟ್ಟಿನಲ್ಲಿ ೧೨ ದಿನ ಆಸ್ಪತ್ರೆಯಲ್ಲಿದ್ದು, ನಂತರ ಮನೆಗೆ ಬಂದಾಗಿನ ಸಮಾಧಾನವೇ ದೊಡ್ಡದು.

ಕೆಲವು ದಿನಗಳಂತೂ ಮಗುವನ್ನು ಪ್ರತಿ ಬಾರಿ ನೋಡಿದಾಗಲೂ ಕಣ್ತುಂಬಿ ಬರುತ್ತಿತ್ತು. ಅದೇ ವಾತ್ಸಲ್ಯದ ಸ್ಫುರಣೆಯಾ? ಎಷ್ಟು ಏಳಿಸಿದರೂ ಏಳದೆ, ಹೊಟ್ಟೆಗೆ ಸರಿಯಾಗಿ ಹಾಲು ಕುಡಿಯದೆ ಹಸಿದು ಮಲಗಿದ ಅವನನ್ನು ನೋಡಿದಾಗ ನಾನು ನನ್ನ ತಾಯಿಯನ್ನ ನಾ ಪುಟ್ಟವಳಿದ್ದಾಗ ಊಟ ಮಾಡದೇ ಕಾಡಿಸಿ, ಮಾತು ಕೇಳದೇ ಹೋದಾಗೆಲ್ಲ ಆಕೆಯ ಮನಸ್ಸಿಗೆ ಎಷ್ಟು ಕಷ್ಟವಾಗಿರಬಹುದೆಂಬ ಭಾವ...

ಜಗವೊಂದು ತೂಕವಾದರೆ ಮಗುವೊಂದು ತೂಕ ಅನ್ನುವ ಮಾತು ಈಗ ಅನುಭವವೇದ್ಯವಾಗಿದೆ. ಟೀವಿ, ಓದು, ಬರವಣಿಗೆ, ಮೊಬೈಲು, ಎಲ್ಲ ಹವ್ಯಾಸ- ಅಭ್ಯಾಸಗಳನ್ನೂ ಬಿಟ್ಟು ಮಗುವೇ ನನ್ನೆಲ್ಲ ಮನೋರಂಜನೆಯಾಗಿದೆ. ಮಲಗಿದಾಗ ಕನಸಿ ನಗುವಾಗಿನ ಸೊಗಸು, ಹಸಿದಾಗ ಗುಬ್ಬಿ ಮರಿಯಂತೆ ತೆಗೆಯುವ ಪುಟ್ಟ ಬಾಯಿ, ಅಳು, ಕೈಗೆತ್ತಿಕೊಂಡ ಕೂಡಲೇ ನಿನ್ನನ್ನೇ ನಾ ಕೇಳಿದ್ದು ಅನ್ನುವ ಹಾಗೆ ಸುಮ್ಮನಾಗುವ ಅವನ ಮೌನ, ನಿದ್ದೆಯಲ್ಲಿನ ಗಾಂಭೀರ್ಯ, ಎಲ್ಲವೂ ಮುದ್ದು ಮುದ್ದು.

ಸಿಸೇರಿಯನ್ ಆದ ನಂತರ ಹೆಚ್ಚು ಮಲಗಿಯೇ ಇರಬೇಕೆಂಬ ನಿಯಮ ಗಾಳಿಗೆ ತೂರಿ ಆಗಿದೆ. ತಿನ್ನುವ ಸಪ್ಪೆ ಊಟೋಪಚಾರದ ಕಡೆ ಗಮನವೇ ಇಲ್ಲ. ಅವನು ಎದ್ದಿರುವಾಗ ಅವನ ಅವಶ್ಯಕತೆಗಳ ಕಡೆ ಗಮನ, ಮಲಗಿರುವಾಗ ಮುದ್ದು ಮುಖ ನೋಡಿ ನಿದ್ದೆಯ ಭಾವಗಳನ್ನು ನೋಡುವ ಸಿರಿಯಲ್ಲೇ ಕಾಲ ಕಳೆಯುತ್ತಿದ್ದೇನೆ.

ಈ ಪರಿಪೂರ್ಣತೆ ಚಿರವಾಗಿರಲಿ ಅಂತ ಆಸೆಪಡುತ್ತಾ,

ಅಮ್ಮನಾದ,

ಸಂತಸದ ನಾನು.

Wednesday, July 3, 2013

ಹನಿ

ಕತ್ತಲಲ್ಲು ಪ್ರೀತಿ ಹೊಳಪ ಕಾಯ್ದುಕೊಂಡಿರೆ
ಚಿಲುಮೆ ಕಂಡ ತೆರದಿ ಬಾಹು ತಾನು ಬಿಡಿಸಿರೆ
ಮಿಂಚಿನ ನಗೆ ಸಂಚು ತೋಳ ಚಾಚಿ ಕಾದಿರೆ
ತಬ್ಬಿಕೊಳಲು ಹೋದರದುವೆ ಮಾಯವಾಗಿದೆ
ಇನಿಯನೆಂದುಕೊಳಲು ಬರಿಯ ದಿಂಬೆ ಸಿಕ್ಕಿದೆ!!!!!

Monday, July 1, 2013

ಗಾಳ

ಮಾಯದಾ ಮಾತಾಡಿ ಮರುಳಾಗಿ ಹದಗೊಳಲು ವಿಷವ ಉಣಿಸುವರೆಲ್ಲ
ವಿಷಯದಾ ಬಾಯಾರಿ ತಮ್ಮ ಚಪಲಕೆ ಗುರಿ ಯಾರಾದರೂ ಅಚ್ಚರಿಯಿಲ್ಲ
ಸತ್ಯವಾ ಸುಳ್ಳೆನಿಸಿ, ಮಾತಿನಾ ಮುಸುಗೆಳೆದು ಮತಿ ಮಂಕುಗವಿಯಿತಲ್ಲ;

ಅರಗಿನರಮನೆ ಗಿಣಿಗೆ ಪಂಜರವೆಂಬುದರಿವಾಗಿಯೇ ಇಲ್ಲ
ಪ್ರೀತಿಯಾ ದೂಡಿ ತನಗೇ ತಿಳಿವಿದೆಯೆಂದು ಬೀಗಿ ಹೊರಟಿತಲ್ಲ
ಸಂಗಾತಿಯಿಂದೆನ್ನ ದೂರವಿರಿಸಲು ಎಲ್ಲ ಕಪಟಯೆಂದರಿಯದಲ್ಲ;

ದೂರವಾಗಿಹ ಸಂಗಾತಿ ಎಂತು ದನಿಮಾಡಿದರೂ ಕೇಳಲೊಲ್ಲ;
ಇನಿದನಿಯ ನೆನೆವು ಕಾಡದೆ ಜೀವ ತತ್ತರಿಸಿ ಸೊರಗಲಿಲ್ಲ

ಬರುವಾಗ ಬರಲೆಂದು ಕೈಚೆಲ್ಲಿ ಸಂಗಾತಿ ಸಮಯ ದೂಡಿತಲ್ಲ..

Wednesday, June 26, 2013

ಕಲ್ದವಸಿ – ಡಾ. ಕೆ. ಏನ್. ಗಣೇಶಯ್ಯ

ಗಣೇಶಯ್ಯನವರ ಇತರೆ ಪುಸ್ತಕಗಳಾದ ‘ಶಾಲಭಂಜಿಕೆ’, ‘ಪದ್ಮಪಾಣಿ’, ‘ಕಪಿಲಿಪಿಸಾರ’, ‘ಚಿತಾದಂತ’ ಪುಸ್ತಕಗಳಂತೆ ಕಲ್ದವಸಿಯನ್ನೂ ಓದಿ ಮುಗಿಸುವ ವರೆಗೆ ಕೆಳಗಿಡಲಾಗಲಿಲ್ಲ. ಅವರ ಬರವಣಿಗೆಯ ವಸ್ತುವೇ ಅಂಥವು.

ರಾಜರು ಸಾಮಾನ್ಯವಾಗಿ ತಂದೆಯ ಹೆಸರಿನಿಂದ ಗುರುತಿಸಲ್ಪಟ್ಟರೆ ಶಾತವಾಹನರನ್ನು ಸೋಲಿಸಿ ಅಮರಾವತಿಯನ್ನಾಳಿದ ಹಿಂದೂ ಧರ್ಮೀಯರೂ ರಘುವಂಶೀಯರೂ ಆದ ಇಕ್ಷ್ವಾಕು ವಂಶಸ್ಥರು ಕೂಡ ಬೌದ್ಧ ರಾಜರಂತೆ (ಗೌತಮಿ ಪುತ್ರ ಯಜ್ಞ ಶತಕರ್ಣಿ, ಗೌತಮಿ ಪುತ್ರ ವಿಜಯ ಶತಕರ್ಣಿ..) ತಾಯಿಯ ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಎರಡನೇ ಬುದ್ಧನೆಂದು ಪ್ರಖ್ಯಾತರಾದ ನಾಗಾರ್ಜುನ ಆಚಾರ್ಯರ ಜೀವನದ ಬಗ್ಗೆ ಸ್ಥೂಲವಾಗಿ ಬೆಳಕು ಚೆಲ್ಲಲಾಗಿದೆ. ಮೊದಲ ಕಥೆ ಅಮರಾವತಿಯನ್ನು ಆಳಿದ ಶಾತವಾಹನರು ಹಿಂದೂ ಧರ್ಮೀಯರಾಗಿದ್ದೂ ಜೈನ ಸ್ತೂಪಗಳ, ವಿಶ್ವವಿದ್ಯಾಲಯ ಸ್ಥಾಪನೆ ಹಾಗು ಜೈನ ಧರ್ಮಕ್ಕೆ ಪ್ರೋತ್ಸಾಹ, ಅದರ ಪ್ರಚಾರಕ್ಕೆ ಕಾರಣವಾಗಿದ್ದು ಏಕೆಂದು ಹೇಳುತ್ತಾ ಇತಿಹಾಸವನ್ನು ಕಥೆಯಾಗಿ ಬಿಚ್ಚಿಡುತ್ತದೆ. ಇತಿಹಾಸವನ್ನು ಕಂಠಪಾಠ ಮಾಡಿ ಕಾಟಾಚಾರಕ್ಕೆ ಪಾಸಾದ ನಮಗೆ ಹೀಗೆ ಇತಿಹಾಸವನ್ನು ಕಥೆಯಾಗಿ ತೋರಿಸಿ ಕುತೂಹಲ ಕೆರಳಿಸಿದ್ದರೆ ಇನ್ನಷ್ಟು ಉತ್ಸುಕತೆಯಿಂದ ಓದುತ್ತಿದ್ದೆವೇನೋ ಎನ್ನಿಸದೆ ಇರಲಿಲ್ಲ.

ನಂತರದ ಕಥೆ ಹಿಂದುತ್ವದ ರಕ್ಷಣೆಯ ವಿಚಾರ ಹಾಗು ಉಗ್ರಗಾಮಿ ಸಂಘಟನೆಗಳ ವಿತ್ತ ವ್ಯವಹಾರಗಳ ಬಗ್ಗೆ ಒತ್ತು ಕೊಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಸ್ವಾರ್ಥಿ ರಾಜಕಾರಣಿಗಳ ಬೆಂಬಲಕ್ಕೆಂದೇ ಬದುಕೇನೊ ಅನ್ನುವಂತೆ ಅನ್ಯ ಕೋಮಿನವರ ಬಗೆಗೊಂದು ಮೃದು ಧೋರಣೆ ಬೆಳೆಸಿಕೊಂಡು ಇತಿಹಾಸದ ಸತ್ಯಗಳೆಡೆ ಜಾಣಕುರುಡರಾಗುವ ಬುದ್ಧಿಜೀವಿಗಳಿಗೆ ಅಂಕಿ-ಅಂಶ ಸಹಿತ ವೈಚಾರಿಕತೆಯ ವಿಮರ್ಶೆ ಇದೆ.

ನನ್ನ ತಂದೆ ಈ ಪುಸ್ತಕವನ್ನ ತಂದ ಕೂಡಲೇ ಹೆಸರಿನ ಅರ್ಥವೇ ಆಗಲಿಲ್ಲ. ಇದೊಂದು ೩ ಕಥೆಗಳ ಸಂಕಲನ. ಕಲ್ದವಸಿ ಅನ್ನೋ ಕಥೆ ಅವುಗಳಲ್ಲಿ ಕಡೆಯದು. ಶ್ರೀ ರಾಮಾಯಣ ದರ್ಶನಂ ರಚಿಸುವಾಗ ಕುವೆಂಪುವಿಗೆ ಪ್ರೇರಣೆಯಾದ ಹಲವು ಸಂದರ್ಭಗಳಲ್ಲಿ ಒಂದರ ಬಗ್ಗೆ ಹೇಳುತ್ತಾ ಲೇಖಕರು ನಮ್ಮನ್ನು ರಾಮಾಯಣದ ವೈಭವೀಕರಣದ ಪ್ರಸ್ತುತತೆಯ ಬಗ್ಗೆ ಚಿಂತನೆಗೆ ದೂಡಿಬಿಡುತ್ತಾರೆ. ತನ್ನ ಗಂಡನೊಂದಿಗೆ ವನವಾಸಕ್ಕೆ ಹೋಗದೆ ಭಾವನೆಗಳನ್ನು ಹತ್ತಿಕ್ಕಿ ಕಾದ ಊರ್ಮಿಳೆ ಕಲ್ಲಿನಂತಹಾ ತಪಸ್ವಿನಿಯಾಗಿ, ಸೀತಾರಾಮರ ಹೃದಯದಲ್ಲಿ ಲಕ್ಷ್ಮಣನ ಸ್ಥಿತಿಗೆ ನೆನಪಾಗಿ ವನವಾಸದಲ್ಲಿನ ಪರ್ಣಶಾಲೆಯ ಬಳಿಯ ಕಲ್ಲುಬಂಡೆಯಾಗಿ ನಿಲ್ಲುತ್ತಾಳೆ. ಆಕೆಯೇ ಕಲ್ದವಸಿ. ಇಲ್ಲಿ ಮನಮಂಥನಕ್ಕೆ ಅವಕಾಶವಿದೆ. ಮತ್ತೆ ಮತ್ತೆ ಕೇಳಿ, ಓದಿ, ಹೇಳಿದ ರಾಮಾಯಣದ ತಿರುಳು ಮತ್ತೊಮ್ಮೆ ಒರೆಗಲ್ಲಿಗೆಳೆಯಲ್ಪಡುತ್ತದೆ. ಕಾಲಗರ್ಭದಲ್ಲಿ ಹೂತು ಹೋದ ವೈಚಾರಿಕತೆ ತಾನೇ ಮೈವೆತ್ತು ಬಂದಂತಿದೆ.

ವಿವಿಧ ವಿಚಾರಗಳ ಬಗ್ಗೆ ವಿಶದವಾಗಿ ತಿಳಿಸುತ್ತಾ ತೌಲನಿಕತೆಯನ್ನು ಬೆಳೆಸಿಕೊಳ್ಳುವಲ್ಲಿ ಈ ಪುಸ್ತಕ ಸಹಾಯಕವಾಗಿದೆ. ಪ್ರಾಧ್ಯಾಪಕರಾಗಿದ್ದುಕೊಂಡೂ ಸಂಶೋಧನಾತ್ಮಕ ಮನೋಭಾವವಿರುವ ಲೇಖಕರು ಮೆಚ್ಚುಗೆಯಾಗದೆ ಇರಲು ಕಷ್ಟಸಾಧ್ಯ. ನಮ್ಮ ಕೃಷಿ ವಿಶ್ವವಿದ್ಯಾಲಯದ ಬೋಧಕರಾದ ಗಣೇಶಯ್ಯನವರ ಪ್ರಯತ್ನ ಈ ನಿಟ್ಟಿನಲ್ಲಿ ಶ್ಲಾಘನೀಯ. 

Monday, June 24, 2013

Parle G Cake

My colleague taught me this wonderful recipe.  It’s cheap and super easy to prepare. Needs no oven even. Have prepared it twice with improved efficiency and had never dreamt that my baking will turn good at first and guess what, It did!!!
Next time when I bake, I will add dry fruits and nuts to the batter to make it a fruit and nut cake for sure J

Needed:

Parle g biscuits – about 40 pcs
Sugar – 4-5 tbsp
Cacao powder – 6 - 7 tsp
Custard powder – 3-4 tsp
Eno powder – lemon flavor, 1 sachet

Method:

Gry grind biscuits and sugar. When it turns to a fine powder, add cacao powder, custard and mixie it further to blend everything.

Take this prepared powder, add required milk to get a cake batter consistency.
Meanwhile, get ready to bake.

In a cooker, add an inch of water. Place an empty bowl upside down. In another bowl/ designer bowl for cake-making, smear butter or ghee all over inside and sprinkle a little maida over it. Tap off excess maida out of the vessel. Do not touch it with hands or do not use fingers.

Take prepared batter and add eno powder to it and mix well. Immediately pour off the mixture into baking vessel. Place the vessel in cooker over the upside down empty vessel and close the lid, keep cooker on medium flame without whistle/ pressure for 25-30 minutes.

Bake check- inserted toothpick should come out clean. Else, cook it further for 5 more minutes.

When done, take out baking vessel, define the edges with a knife, flip the vessel on a plate, tap it with a skillet to get the cake intact.

Honey Aloo

This recipe was picked from a cookery show and modified according to our preferences…
Sure it has loads of calories since it is fried but is tantalizing to taste buds and can be prepared as a rare evening treat or as a starter.


Needed:
Potatoes – 4 big, washed thoroughly and cut thickly as shown in pics. Slices should be thicker than when they are sliced to prepare wedges.
Oil – to deep fry and about 2 tsp to sauté the fried pieces later on.
Garlic – sliced finely and crushed lightly
Required salt
Chilly flakes – 1 tsp
Chilly powder – 1 ½ tsp
Honey – 2 tsp



Method:
Heat oil in a pan. In medium flame, fry potatoes in batches till golden brown. Every batch will take about 5-6 minutes. Keep aside.

Heat about 2 tsp oil in a wide bottomed pan. Sauté garlic for a minute, add chilly flakes, chilly powder and fried potatoes. Put salt and Mix well with a skillet. Add honey, mix well and serve hot.