Saturday, August 27, 2011

ಜಗಳದ ನೆಮ್ಮದಿ!!

ಒಮ್ಮೊಮ್ಮೆ ಹೀಗಾಗಿಬಿಡುತ್ತದೆ. ಎದ್ದಾಗಿನಿಂದ ದುಸುಮುಸು, ಅರ್ಥವಾಗದ ಭಾವವ್ಯಾವುದೋ ತರ್ಕಕ್ಕೆ ನಿಲುಕುತ್ತಿಲ್ಲವೆಂಬ ಅಸಮಾಧಾನ. ಕಂಡಲ್ಲಿ ಹರಿಹಾಯಬಹುದೇನೋ ಅನ್ನುವ ದುಗುಡ. ತೋರಲಾರದ ಕುದಿ. ಮನದೊಳಗಣ ಅನಾರೋಗ್ಯದ ಕೀವು ಹೇಗಾದರೂ ಹೊರ ಹಿಚುಕಿ ನೆಮ್ಮದಿಯಾಗಬೇಕೆಂದು ಕಾಯುವ ಸಮಯ. ಆಗ ಸಿಗಬೇಕು ನೋಡಿ, ಯಾರಾದರೂ ನಮ್ಮ ಸಿಟ್ಟಿನ ನೈವೇದ್ಯಕ್ಕೆ! ಒಳಗೆ ಸಿಟ್ಟು ಬೆಲೂನಿನಂತೆ ತುಂಬಿದ್ದಾಗ ಅದು ಹೊರಬರಲು ಎಂಥಹಾ ನಿಮಿತ್ತ ಮಾತ್ರವಾದರೂ ಸಾಕು. ಕೇಳಿದ ಬೆಲೆಗೆ ಕೊಡದ ತರಕಾರಿ ಮಾರುವವನೋ, ಕೊಂಚ ಅಜಾಗರೂಕತೆಯಿಂದ ಬಂದ ವಾಹನ ಚಾಲಕನೋ, ಉಪ್ಪು ಹೆಚ್ಚಾದ ಅಡುಗೆಯೋ,  ಕೊನೆಗೊಂದು ಅಂಕೆ ತಪ್ಪಿ ಬಂದ ಮೊಬೈಲ್ ಕರೆಯಾದರೂ ಸರಿಯೇ... ಲಾವಾರಸದಂತೆ ಹರಿಯುತ್ತದೆ ನಮ್ಮ ಕೋಪದ ನುಡಿಗಳು. ರಿಸರ್ಚ್ ಪ್ರಕಾರ, ಇಂತಹ 'ಸಿಕ್ ' ಭಾವ ಸೋಮವಾರದಂದೇ ಹೆಚ್ಚಂತೆ. ಅದೇನಾದರೂ ಇರಲಿ, ಕೆಲವೊಮ್ಮೆ ಇಂತಹಾ ಲಾವ ಕುದಿ ಹತ್ತಿದಾಗ ಅವಕಾಶವಿದ್ದಲ್ಲಿ ಹೊರಚೆಲ್ಲಿಬಿಡೋದೇ ಉತ್ತಮ ಅಂತ ಮನಸ್ಶಾಸ್ತ್ರಜ್ಞ್ಯರ ಅಂಬೋಣ.  

ನಾನು ಕೃಷಿ ಬಿಎಸ್ಸಿಯ ಅಂತಿಮ ವರ್ಷದಲ್ಲಿದ್ದಾಗ RWEP (Rural Agricultural Work Experience Program ಅಥವಾ ನಮ್ಮ ಭಾಷೆಯಲ್ಲಿ 'ರಾವೆ') ಅಂತ ಕೊನೆಯ ಸೆಮಿಸ್ಟರಿನಲ್ಲಿ ನಾವು ನಮಗೆ ನಮ್ಮ ಶಿಕ್ಷಕರು ಗೊತ್ತು ಮಾಡಿದ ಹಳ್ಳಿಯಲ್ಲೇ ಇದ್ದು, ರೈತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ, ಕೃಷಿಯ ಆಧುನಿಕ ವಿಧಾನಗಳ ಬಗ್ಗೆ ಅಲ್ಲಿನ ಜನರಿಗೆ ತಿಳಿಸಿಕೊಡಬೇಕಿತ್ತು. ರಾವೆಯ ಕಡೆಯ 10 ದಿನ  ಏನ್ಎಸ್ಸೆಸ್ ಕ್ಯಾಂಪಿನಲ್ಲಿ ನಮ್ಮ ಗುಂಪಿನ ಮುಖ್ಯ ಹಳ್ಳಿಯ (ಅಥವಾ ಹೋಬಳಿ) ಅಭಿವೃದ್ಧಿಗಾಗಿ ಮೀಸಲಿಡಬೇಕಿತ್ತು.   ಮಣ್ಣಿನಲ್ಲಿ ಗೆಯ್ದು ಅಭ್ಯಾಸವಾಗಿದ್ದರೂ ಸಹ ಕೊಚ್ಚೆ, ಚರಂಡಿ, ಮೋರಿಗಳನ್ನು ಎಂದೆಂದೂ ಮುಟ್ಟದವಳೇ ನಾನು. ಅದೊಂದು ದಿನ ನಮ್ಮ ಕ್ಯಾಂಪಿನಲ್ಲಿ ಕಡುಗಪ್ಪು ಗಬ್ಬು ಚರಂಡಿಯನ್ನು ಸ್ವಚ್ಛ ಮಾಡುವ ಸೌಭಾಗ್ಯ ನಮ್ಮ 12 ಜನರ ಗುಂಪಿಗೆ ಬಂದಿತ್ತು. ಹುರುಪಿನಿಂದ ಕೆಲಸ ಮಾಡಿ ಚರಂಡಿಯೇನೋ ಸ್ವಚ್ಚವಾಯಿತು. ಆಮೇಲೆ ಸ್ನಾನಕ್ಕೆ ನೀರೇ ಇಲ್ಲ. ಜಗ್ಗು ಕೊಳವೆಯಲ್ಲಿ ಕೈ ಕಾಲುಗಳನ್ನು ಎಷ್ಟು ಸ್ವಚ್ಛ ಮಾಡಿಕೊಂಡರೂ, tan ಆಗೀವೆಂಬ ಮುಂಜಾಗರೂಕತೆಯಿಂದ ಧರಿಸಿದ್ದ ಮುಂಗೈ ಮಟ್ಟದ ಶರ್ಟು, ಪಾದ ಮುಚ್ಚುವ ಪ್ಯಾಂಟಿನಿಂದ ವಾಸನೆಯೇ ಹೋಗಲೊಲ್ಲದು. ನಮ್ಮ ಕಣ್ಣಿಗೆ ಕಿಸಿರಂತೆ, ನಮ್ಮ ಕ್ಲಾಸಿನದೇ ಇನ್ನೆರೆಡು ತಂಡಗಳಿಗೆ ಮೋರಿ ಕಸವೆತ್ತುವ ಕೆಲಸ ಕೊಡಲೇ ಇಲ್ಲವೆಂಬ ಹೊಟ್ಟೆಯ ದಳ್ಳುರಿ. ಕೋಪ, ಅಸಹಾಯಕತೆ ಕುದಿಯಲು ಅಷ್ಟು ಕಾರಣ ಸಾಕಿತ್ತು. ಮೈಕೈ ನೋವಿನಲ್ಲಿ ನಾವು ಕುಳಿತಿದ್ದಾಗ ನನ್ನ ಮೊಬೈಲಿಗೆ ಮತ್ತದೇ ಅನಾಮಿಕ ಕರೆ ಬಂತು.ಈಗಿನಷ್ಟು ನಿಷ್ಟುರವಾಗಿ ಕರೆ ಅನಾಮಿಕವಾದರೆ, ಬೇಡವಾದುದಾದರೆ ಸ್ವೀಕರಿಸಿ ತೆಗೆದು ಪಕ್ಕದಲ್ಲಿರಿಸಿಯೋ, ಕಟ್ ಮಾಡಿಯೋ ಬಿಡುವ ದಾರ್ಷ್ಯವಾಗಲಿ, ಪ್ರೌಢತೆಯಾಗಲೀ ಇರಲಿಲ್ಲ. ಯಾರು ಅಂತ ಕೇಳಿ ಕೇಳಿ ನನಗೂ ರೋಸಿ ಹೋಗಿತ್ತು. ಆಗಾಗ ಬರುತ್ತಿದ್ದ ಕರೆಗೆ ಆ ಸಮಯ ಯಮಗಂಡವಾಗಿತ್ತು. ಇದ್ದುಬದ್ದ ಅಸಹನೆಯೆಲ್ಲಾ ಸುರಿದು ಬೈದು, ಸೈಬರ್ ಕ್ರೈಂ ಬಗ್ಗೆ ಬೈಗುಳದಲ್ಲೇ ತಿಳಿಸಿಕೊಟ್ಟು, ಪೋಲಿಸ್ ಗೆ ದೂರು ಕೊಡುವುದಾಗಿ ಬೆದರಿಸಿ, ಉಚ್ಚಸ್ಥಾಯಿಯಲ್ಲಿ ಉಗಿದ ನಂತರ ಮತ್ತೆಂದೂ ಆ ಅನಾಮಿಕ ಕರೆ ಮರುಕಳಿಸಲಿಲ್ಲ.

ಸಿಟ್ಟು ತಾನು ಸಲ್ಲುವಲ್ಲಿ ತೋರಿಸಿದರೆ, ಸಿಟ್ಟೂ ಸಹ ಪ್ರಯೋಜನಕಾರಿ ಆಗಬಲ್ಲುದೆಂದು ಆಗ ತಿಳಿಯಿತು ನನಗೆ. ಅಂದಿನಿಂದ, ಬೇಗುದಿಯ ಶಮನಕ್ಕೆ ಸಕಾರಣ ಸಿಟ್ಟನ್ನು ಬಳಸುತ್ತಿದ್ದೇನೆ. ನೀವೂ ಬಳಸಿ ನೋಡಿ. ಪರಿಣಾಮ ಪ್ರಯೋಜಕವಾದೀತು. ನಮ್ಮ-ನಮ್ಮವರ ಮೇಲೆಯೇ ಸಿಟ್ಟಾಗುವುದರ ಬದಲಿಗೆ, ಅಪರಿಚಿತರ ಮೇಲೆ ಸಕಾರಣ ಕೋಪ ತೋರಿಸುವುದೇ ಲೇಸು. ಮನೆಯವರು, ಸ್ನೇಹಿತರು, ನಮ್ಮ ಒಮ್ಮಿಲ್ಲೋಮ್ಮಿಗಿನ ಅಕಾರಣ ಸಿಟ್ಟಿಗೆ ನೊಂದುಕೊಳ್ಳುತ್ತಾರೆ. ಸಂಬಂಧ, ಭಾವ ಎರಡಕ್ಕೂ damage. ಅದರ ಬದಲು ಇತರರ ತಪ್ಪಿಗೆ ಸಿಟ್ಟು ತೋರಿಸಿ. ದಾಕ್ಷಿಣ್ಯಕ್ಕೆ ಬಿದ್ದು ನಗೆಗೆರವಾಗುವುದರ ಬದಲಿಗೆ ಸಮಾಜವೂ ಒಂದಿಷ್ಟು ಸುಧಾರಿಸೀತು.

Friday, August 26, 2011

Aarakshan- A Review

It clued that it could rain. Heavy, sweet and moisture laden winds were blowing on the evening of my birthday. My parents doubted if we could come back from banashankari to nagarbhavi to take them to dine as planned. And my hubby's parents also weren't willing to come since they had had a long roaming day till then already. At the dusty-windy Mysore road signal, two of us dicided to go to the nearest mall, Gopalan archade for some movie. Selected Aarakshan coz we were very curious about the star cast and trailors. I was unaware that aarakshan meant reservation. And thus the whole theme was a surprise since i had not even read its review anywhere.

Movie tries to unveil the aftermaths of reservation which was extended to other backward classes during 2008. Prakash Jha has been succesful in appending the debate on both sides of the issue. But the movie shifts to more personal turn when it slides to only "Tabela School v/s KK coaching centre" side of it. The former is portrayed as a solution to teachers who take private tutions & do injustice to their courses offered in colleges. Films builds a lot of hope that it may take a stance in case of reservation but at the end it goes offgaurd from its sharpness.

No song is very impressive and the first one is totally out of place. But yet the movie is worth watching. May be in few circumstances, you'l feel yourself drawn into the conversations and start thinking outside the conservative mind, irrespective of whichever stance you take. The movie suggests that only equality in education could bring backward classes to the main stream and only after that the "total competitive era free of quotas" could start.

But a million dollar question is, Where, when and how does the purely competitive line begin. The movie is rightly subtitled, India v/s India. Its a debate yet to go on till competitive era begins. Backward classes say that they are downtrodden, underprevileged and thats why they deserve quota, and majority communities say its harsh on them to keep watching less deserving candidates clinch their growth due to quota.

Do not just watch it only as a movie. We still may say that now there is no much difference between the socio economic status of all communities. But there are classes which have not been let to grow, in many parts of our country yet. Thats what the film focuses about. I would rather say in a sentence, "Aarakshan is a nice material to debate upon, irrespective of stances or for a skeptic mind play too. Dont miss it".

Friday, August 19, 2011

ನಮ್ಮದಲ್ಲದ ಜೀವ

ಆರಕ್ಕರೆಯೆರೆದರೆಂತಿಹುದು ನಮ್ಮದಲ್ಲದ ಜೀವಕೆ
ಕೇಳಲು ಬಾರದು ಇನ್ನಷ್ಟನು;
ನೀಡಲು ಬಾರದು ಮತ್ತಷ್ಟನು;
ಆರ ನೆರಳಿಲ್ಲದೆ ಬೆಳೆದ ಜೀವ ಬಾಗಿರೆ,
ನೆರಳ ಬೆಚ್ಚಗಾವಿನಲ್ಲಿ ಪ್ರೀತಿಯ ಬಿಸಿಯನುಂಡುದು
ಮೆರೆದಷ್ಟೂ ನಡೆವುದೆಂಬ ಹಮ್ಮಿನಲಿ ಬಾಳ್ವುದು
ನೆಳಲಿನಾಸರೆ ತೊರೆದಾಗ
ಬಿಳಿಲು ಬಿಡದೆ ಬೀಳ್ವ ಮರವಾಗ್ವುದು.
ಹುಂಬ ಬಾಳ ಜಗ್ಗದೆಯೆ ಹೀರಿ ಹಿಗ್ಗಿ ನಡೆವುದು
ಸತ್ವವೆಲ್ಲ ಹೀರಿ ನಾತವನ್ನು ಬೀರಿ 
ಸುತ್ತ ನೆರಳ ತಂಪಿನಲಿ ತಂಗಲೆಂದು ಬಂದವರು-
ಬರುವವರೂ ಬಾರದಂತೆ ಮಾಡ್ವುದು.

Monday, July 18, 2011

Tomato soup

 I always wondered why i did't like tomato soup in almost any hotel i'd tried. Later i found that the soup that my mom prepares is really YUMM than the other ones. Just wanted to share her recipe...
So, here it goes-
  • 4 cherry tomatoes (Red and fleshy)
  • 2 medium sized onions (peeled and cut into half)
  • 2 garlic cloves
  • a clove
  • a piece of cinnamon, 2 cm wide 
-To be boiled in cooker for 1 or 2 whistles, until tender. Strain and extract juice.
     To the extract, add --
  • 1 tsp Sugar
  • 1 tsp Chilly powder
  • 1 tbsp Salt
  • a pinch of pepper powder
 --and boil. If you want the soup to be very thick, add a tsp of corn flour dissolved in a little water finally while boiling the soup.

  *Spices can be altered according to spice buds, thou ;)

Wednesday, June 15, 2011

ವಧು

ಹೆಣ್ಣೊಂದು ವಧುವಾಗಿ
ಹುಟ್ಟುಮನೆ ತೊರೆದು
ಹೊಸ್ತಿಲಲಿ ನಿಂತು
ಹಿಂತಿರುಗಿ ನೋಡಲು,

ಹುಟ್ಟಿದಾ ಮನೆಯದು,
ಅತ್ತಾಗ ತಾಯಿ
ಕೊಟ್ಟಾಗ ಮುತ್ತನ್ನು,
ಮೂಗೆಳೆದು ಸುಮ್ಮನಾದ
ದಿನವದನು ಮರೆಯುವಳೆ

ಸೋದರನು ಜಡೆ ಹಿಡಿದು
ರೇಗಿಸಿ ಕಾಡಿಸಿ
ಓಡಿಯಾಡಿಸಿದ ಕ್ಷಣಗಳದು
ರೆಪ್ಪೆಯಲಿ ಭದ್ರ

ಒಲ್ಲೆಂದರೂ ತಂದೆ
ಪಾಠ ಕಲಿಸಿ
ಅಕ್ಷರ ತಿದ್ದಿದ ದಿನಗಳವು
ಎಲ್ಲಕಿಂತ ಮೇಲು

ಜತನದಿ ಒಂದೊಂದೆ
ತನ್ನ ವಸ್ತುಗಳನು ಕೂಡಿಸಿ
ಗಂಡನೊಡೆ ಕಳೆವ 
ಮಧುಚಂದ್ರದಾ 
ಕನಸ ಕಾಣುತ
ವಧುವಾಗುವ ದಿನ
ಹತ್ತಿರಕೆ ಬರಲು

ಎಷ್ಟು ನೆನಪಿಸಿಕೊಂಡರೂ
ಉಳಿವುದಿನ್ನೂ
ಎಷ್ಟು ಜತನ ಮಾಡಿದರೂ
ಮರೆವುದಿನ್ನೂ

ಗಡಿಬಿಡಿಯ ದಿನಗಳವು 
ಹೇಗೆ ಉರುಳಿತೆಂದೇ
ತಿಳಿಯದ ಸಮಯ
ತಂದೇಬಿಟ್ಟಿತು
ಓಲಗದ ದಿನವನ್ನು;
ಹೊಸ ಮನೆಗೆ ಹೋಗುವ
ಕಾತರವನ್ನು.

ಎಲ್ಲ ನೆನಪಾಗಿಂದು
ತನ್ನವರ ತೊರೆದು
ತನ್ನವನಿಗಾಗಿ
ಮರೆತೆಲ್ಲವನು
ಬಿಕ್ಕಿ ಹೊರಟಿಹಳು
ಹೊಸ ಹಾದಿಗೆ,
ಹೊಸ ಬಾಳಿಗೆ,
ಹೊಸ ಮಾಡಿಗೆ..

Friday, June 3, 2011

ಲೇರಿಯೊಂಕ

ಕೀನ್ಯಾದ ಮಾಸಯಿ ಜನಾಂಗದ ಹುಡುಗನಾದ ಲೇರಿಯೊಂಕನ ಶಾಲೆಗೆ ಹೋಗುವ ಕಥೆಯನ್ನೊಳಗೊಂಡಿರುವ ಈ ಪುಸ್ತಕ 1950-1963ರ ನಡುವೆ ಚಿತ್ರಿಸಲಾಗಿದೆ. ಲೇರಿಯೊಂಕ ತನ್ನ ಎಲ್ಲ ಹಿರಿಯರ ವಿರೋಧದ ನಡುವೆಯೂ ತಾನು ವಿದ್ಯೆ ಕಲಿಯುತ್ತಾನೆ. ಸಂಪ್ರದಾಯಸ್ಥ, ನಂಬಿಕೆ ಹಾಗೂ ಮೂಢನಂಬಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಜಾಗತೀಕರಣವನ್ನ ವಿರೋಧಿಸುವ ಮನಸ್ಥಿತಿಯನ್ನು ಸಮಗ್ರವಾಗಿ ಚಿತ್ರಿಸಿರುವ ಜೊತೆಗೆ ಮಾಸಯಿ ಸಂಪ್ರದಾಯ ಅನಾವರಣಗೊಂಡಿದೆ.

{ ಪ್ರಮುಖವಾಗಿ ಜಾನುವಾರುಗಳನ್ನು ಅವಲಂಬಿಸಿ ಬದುಕೋ ಜನಾಂಗ, ಮಾಸಯಿ ಬುಡಕಟ್ಟು ಜನಾಂಗ. ಅಂತರ್ಜಾಲದಲ್ಲಿ ಈ ಬುಡಕಟ್ಟು ಜನಾಂಗದ ಬಗ್ಗೆ ಹುಡುಕ್ತಾ, ಒಂದು ವಿಚಿತ್ರ ಮಾಹಿತಿ ಸಿಕ್ತು. ಮಾಸಯಿ ಜನರು ಮುಖಂಡರ ಶವವಲ್ಲದೆ ಬೇರೆಯವರ ಶವವನ್ನು ಹೂಳೋದೂ ಇಲ್ಲ, ಸುಡೋದೂ ಇಲ್ಲ. ಬದಲಿಗೆ, ಶವವನ್ನು ಪ್ರಾಣಿಗಳು ತಿನ್ನದಿದ್ದರೆ ಊರಿಗೆ ಕೇಡು ಅಂತ ನಂಬೋ ಈ ಜನ, ಶವದ ಮೇಲೆ ಹಸುವಿನ ರಕ್ತ, ಕೊಬ್ಬನ್ನು ಚೆಲ್ಲಿ, ಕಾಡಿನಲ್ಲಿ ಎಸೆಯುತ್ತಾರೆ. ಹೀಗೆ ಮಾಡಿದರೆ, ಪ್ರಾಣಿಗಳು ತಪ್ಪದೇ  ಶವದೆಡೆ ಆಕರ್ಷಿತವಾಗುತ್ತವೆ ಅಂತ. ಶವಸಂಸ್ಕಾರ ಮಣ್ಣಿನಲ್ಲಿ ಮಾಡಿದರೆ, ಮಣ್ಣು ಹಾಳಾಗುತ್ತದೆ ಅನ್ನೋದು ಇವರ ನಂಬಿಕೆ.}

ಕಥೆ ಬರಿಯ ಕಥೆಯಾಗಿ ಉಳಿಯದೆ, ಓದುಗನ ಕಲ್ಪನೆಗೆ ಬಣ್ಣ ಕಟ್ಟಿಕೊಡುತ್ತದೆ. ಲೇರಿಯೊಂಕನ ಓದು ಮುಗಿಯುವ ಹೊತ್ತಿಗೆ ಕೀನ್ಯಾದ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಅಧಿಕಾರಿಗಳಿಂದ ಒತ್ತಾಯಿಸಿಕೊಳ್ಳದೆ ಶಾಲೆಗೆ ತಿರುಗಿ ಬಂದ ಒಬ್ಬನೇ ಮಾಸಯಿ ವಿದ್ಯಾರ್ಥಿ ಲೇರಿಯೊಂಕ ಓದಿನ ನಂತರ ಕೆಲಸವಿಲ್ಲದೇ ಕೆಲಕಾಲ ಪರದಾಡಬೇಕಾಗುತ್ತದೆ. ಈ ಮಧ್ಯ ಒಗ್ಗಟ್ಟಾದ ಕೀನ್ಯಾಕ್ಕೆ ಕೊನೆಗೂ ಸ್ವಾತಂತ್ರ್ಯ ಬರುತ್ತದೆ. ಕೊನೆಗೆ ಲೇರಿಯೊಂಕನ ತಂದೆ "ನಾವು ಮುದುಕರು ಕೊಡಬಹುದಾದ ಒಂದೇ ಒಂದು ಸಲಹೆ ಅಂದರೆ ನಮ್ಮನ್ನು ನಿಧಾನವಾಗಿ ಕರೆದುಕೊಂಡು ಹೋಗಿ. ಅವಸರ ಮಾಡಬೇಡಿ. ಏಕೆಂದರೆ ಇದೆಲ್ಲಾ ನಮಗೆ ಹೊಸತು" ಎನ್ನುವಲ್ಲಿ ಅಭಿವೃದ್ಧಿ ತೆರೆ ತೆರೆಯಾಗಿ ಹೊನಲು ಬರಲಿ ಅನ್ನುವ ಆಶಯ ವ್ಯಕ್ತವಾಗುವುದು ಮನಸ್ಸಿಗೆ ನಾಟುತ್ತದೆ.


(ಪ್ರಶಾಂತ್ ಬೀಚಿಯವರು ಬರೆದಿರೋ (ಮೂಲ: ಹೆನ್ರಿ ಆರ್. ಓಲೆ ಕುಲೆಟ್) ಈ ಪುಸ್ತಕ ನನ್ನ ನೆಚ್ಚಿನ ವಸುಧೇಂದ್ರ, ಪ್ರೊ. ಗಣೇಶಯ್ಯ ರವರ ಪುಸ್ತಕಗಳನ್ನ ಅಚ್ಚು ಮಾಡಿದ ಛಂದ ಪ್ರಕಾಶನದಿಂದ ಹೊರಬಂದಿದೆ..)

Friday, May 27, 2011

ಸ್ಮೃತಿಪಟಲದಿ ಮಾಸಿಹೋಗುವ ಮುನ್ನ..

ಮೊನ್ನೆ ನನ್ನ ತಾಯಿಯ ಮನೆಗೆ ಬೈಕಿನಲ್ಲಿ ಒಬ್ಬಳೇ ಹೋಗಿದ್ದೆ. ನಮ್ಮ ಮದುವೆಯ ವೀಡಿಯೋ ಕೊಟ್ಟು ಬರಲಿಕ್ಕೆ. ಮೈಸೂರು ರೋಡಿನ ಸಿಗ್ನಲ್ಲು  ಎಂದಿನಂತೆಯೇ ಅರ್ಧ ಕಿಲೋಮೀಟರು ಹೊಗೆ ಬಿಡ್ತಾ ಗಾಡಿಗಳನ್ನ ಕಲೆಹಾಕಿ ಹಾರ್ನ್ ಹೊಡೆಸ್ತಾ ಸಮಯ ತಿನ್ತಿತ್ತು. ಅಲ್ಲಿ ಯಾವಾಗಿನ ಹಾಗೆಯೇ ಒಂದಿಬ್ಬರು ಮಕ್ಕಳು ದೂರದಲ್ಲಿ ಇನ್ನೊಂದು ಮಗುವಿನೊಡನೆ ಇರೋ ಹೆಣ್ಣುಮಗಳ ಜೊತೆ ಭಿಕ್ಷೆ ಬೇಡ್ತಾ ಸಿಗ್ನಲ್ ಎಷ್ಟು ನಿಧಾನವಾದ್ರೆ ಅಷ್ಟು ಒಳ್ಳೆಯದು ಅನ್ನೋ ಮುಖ ಹೊತ್ತು ನಿಂತಿದ್ದರು. ನನ್ನ ಮುಂದೆ ಒಂದು ಕಪ್ಪು ಡಿಯೋ ಗಾಡಿ ನಿಂತಿತ್ತು. ಒಂದು ೩-೪ ವರ್ಷದ ಹುಡುಗಿ ಬಂದು ಬೈಕ್ ಸವಾರನ ಹತ್ತಿರ "ಕಾಸು ಕೊಡಿ ಅಣ್ಣ.. ಹೊಟ್ಟೆ ಹಸೀತಾ ಇದೆ ಅಣ್ಣಾ.." ಅಂತ ರಾಗ ಮಾಡ್ತು. ಆ ಹುಡುಗ, ಬಹುಶಃ ಈಗ ತಾನೇ ಕಾಲೇಜ್ ಮೆಟ್ಟಿಲು ಹತ್ತಿರಬಹುದು, ಜೇಬುಗಳನ್ನೆಲ್ಲ ತಡಕಾಡಿ, "ಚೇಂಜ್ ಇಲ್ವಲ್ಲಮ್ಮಾ.. ಇರು ಒಂದ್ ನಿಮಿಷ", ಅಂತ ತನ್ನ ಬ್ಯಾಗ್ ತೆಗೆದು, ಹೊಸದೆರಡು ರೆನಾಲ್ದ್ಸ್ ಪೆನ್ನುಗಳನ್ನ ಕೊಟ್ಟು, "ಇದನ್ನ ತಗೋತಿಯ ಅಲ್ವಾ?" ಅಂದ.. ಆ ಮಗುವಿಗೆ ಪೆನ್ನು ಸಿಕ್ಕಿದ್ದಕ್ಕೆ ಖುಷಿಯೋ ಖುಷಿ. "ಹೂ.." "ಕೊಡಿ" ಅಂತ ತಗೊಳ್ತು ಅವನ್ನ. ಅಲ್ಲಿ  ದೂರದಲ್ಲಿ ಪುಟ್ಟ ಮಗುವಿನೊಂದಿಗೆ ಇದ್ದ ಹೆಣ್ಣುಮಗಳು ತಕ್ಷಣ "ತಗೋ ತಾಯಿ. ಆ ಮಗಾ ಇಸ್ಕೂಲಿಗೋಗ್ತೈತೆ ಕಣಪ್ಪಾ" ಅಂತ ಹುಡುಗನಿಗೆ ಕೈ ಮುಗೀತು. ಅಷ್ಟು ಹೊತ್ತಿಗೆ ಸಿಗ್ನಲ್ ಹಸಿರಾಗಿ, ಆ ೫೦೨ ರಿಜಿಸ್ಟ್ರೇಶನ್ ನ ಬೈಕ್ ಕೂಡ ಧೂಳಿನ ಜೊತೆ ಮರೆಯಾಗಿ ಹೋಯ್ತು.
ನಾವೆಲ್ಲಾ ಮಾಡೋ ಹಾಗೆ ಸುಮ್ಮನೆ ಒಂದು ಕನಿಕರದ ನೋಟ ಬೀರಿ ಸುಮ್ಮನಾಗಬಹುದಿತ್ತು ಆ ಹುಡುಗನೂ. ಅಥವಾ ಚಿಲ್ಲರೆ ಇಲ್ಲ ಅಂದಾಗ ಇನ್ನೇನೂ ಕೊಡದೇ ಹೋಗಬಹುದಿತ್ತು. ಇಲ್ಲವೇ ಕೆಲ ಪಡ್ಡೆ ಹುಡುಗರು ಮಾಡೋ ಹಾಗೆ "ಏನು ನಿನ್ನ ಹೆಸರು? ಎಲ್ಲಿ ಮನೆ? ಸ್ಕೂಲಿಗೆ ಹೋಗು.. ಭಿಕ್ಷೆ ಯಾಕೆ?" ಅಂತ ರೇಗಿಸಿ ಉಚಿತ ಅಡ್ವೈಸ್ ಕೊಟ್ಟು ಬುರ್ರನೆ ಹೋಗಬಹುದಿತ್ತೇನೋ. ಅಷ್ಟಕ್ಕೂ, ಆ ಮಗು ಪೆನ್ನಿನಲ್ಲಿ ಬರೆಯುತ್ತೋ ಅಥವಾ ಯಾವುದಾದರೂ ಗೂಡಂಗಡಿಗೆ ಮಾರಿಬಿಡುತ್ತಾಳೋ ಅದರ ತಾಯಿ ಅಂದುಕೊಳ್ಳಬಹುದು ನಾವು... 

ಆ ಹುಡುಗ ಇದೇನೂ ಮಾಡದೇ ಕೈಲಾದದ್ದನ್ನ ಕೊಟ್ಟು ಮಾಡಿದ ಒಳ್ಳೆ ಕೆಲಸ ಒಂದೇ..
ಆ ಮಗುವಿನ ಮುಖದಲ್ಲಿ ಗಾಡಿ ದೂರವಾದಮೇಲೂ ಉಳಿದ್ದಿದ್ದ ನಗು ಮತ್ತು ಎರಡೂ ಕೈಯಲ್ಲಿ ಪೆನ್ನುಗಳನ್ನು ಬಾಚಿ ಹಿಡಿದ "ನಂದಿದು.." ಅನ್ನೋ ಭಾವ ಅಷ್ಟೇನೆ..

Wednesday, May 18, 2011

ಜಡ ರಾತ್ರಿ

ಮಲಗುವಾ ಮುನ್ನ ಕಣ್ ತೂಗಿ ಬಂದಿತ್ತು
ಆದರೀಗ ರೆಪ್ಪೆ ಕೂಡದೇಕೋ..
ಶಕುನ ಲೊಚಗುಟ್ಟಿ ಹಲ್ಲಿ ಕಿವಿಮಾತನ್ನು
ಹೇಳಿತ್ತು ಇನಿಯನಿರದಿರೆ ಹೀಗೆಯೇ..

ಆಗೀಗ ಬಂದಿತ್ತು ಮಳೆಯೆನ್ನಲು
ಗುಡುಗು ಸಂದೀತು ಸೊಡರೆನ್ನಲು 
ಗಾಳಿ ಬರಿ ತಂಪನ್ನೆ ಸೂಸುತಿರಲು..

ಗಂಧ ಗಾಳಿಯೊಳಿಲ್ಲ- ಪತಿಯ ತೆಕ್ಕೆಯೊಳಿಲ್ಲ;
ದ್ವಾದಶಿಯ ಬೆಳದಿಂಗಳುಂಡ ಚಕೋರಿ
ನೀ ಬರಿ ಒಂಟಿಯೇನೆನ್ನುತಿಹುದು..

Thursday, March 31, 2011

ಕರೆ

ಇನಿಯನ ಕಾಣದೆ ಮನ ಕಾತರಿಸಿರೆ
ಸಂಜೆ ದೀಪವ ಹೀಗೆ ಹೊತ್ತಿಸದಿರೆ
ಇರುಳಿನೊಳು ಬೆಳಕಿಲ್ಲ
ಸಂಜೆಯೊಳು ಸೊಡರಿಲ್ಲ
ಒರತೆಯನಾರೋ ಬತ್ತಲು ಬಿಟ್ಟಿರೆ
ಓ ಕಾಲವೇ ಸಾಕಿನ್ನು!
ಒಲವನೋರೆಹಚ್ಚಿದ ದೂರವ
ನಲ್ಲನ ಸೇರಲಾಗದ ಗಾವುದವ

ಕರೆ ಬಂದಿಹುದು-ಮನದ ಕರೆ ಬಂದಿಹುದು..
ಸೇರಲೋಸುಗ ಎನ್ನ ಪ್ರಾಣವ
ಪ್ರಾಣಕಿಂತ ಪ್ರಾಣವಾದೆನ್ನ ಜೀವವ..