Tuesday, May 6, 2025

ಬರೆಯಬೇಕು ಅನ್ನಿಸಿತು. ಬರೆದುಕೊಂಡೆ!

ಕೆಲವು ವಿಚಾರಗಳೇ ಹಾಗೆ.. ಎಲ್ಲೋ ಒಂದು ಮೆಲುಕಿನಿಂದ, ಎಲ್ಲಿಯೋ ತಳಕು ಹಾಕಿಕೊಂಡ ನೆನಪಿನ ಸಂದಿನಿಂದ ತಲೆಎತ್ತಿಬಿಡುತ್ತವೆ. 

ಕ್ಲಾಸ್ಸಿನ ಒಳಗಷ್ಟೇ ಅಲ್ಲದೆ, ಎಲ್ಲ ಮಕ್ಕಳೂ ಗುರುಗಳೆಂದರೆ ಶಾಲೆಯಾಚೆ ಎಂದಿಗೆ ಸಿಕ್ಕರೂ ಸಂತಸ ಹಾಗು ಶಿಸ್ತಿನಿಂದ ಗುಡ್ ಮಾರ್ನಿಂಗ್, ಗುಡ್ ಇವಿನಿಂಗ್ ಗಳನ್ನ ಹೇಳುತ್ತಾ, ಕ್ಲಾಸಿನಲ್ಲಿ ೬೦ಕ್ಕೂ ಹೆಚ್ಚು ಮಕ್ಕಳಿದ್ದರೂ, ನಮ್ಮ ಹೆಸರು ಅವರಿಗೂ ನೆನಪಿರಬೇಕು ಅನ್ನುವ ಹಂಬಲ ನಮಗೆ; ಗುರುಗಳು ಅಂದರೆ ದಾರಿ ತೋರಿಸುವವರು ಅನ್ನುವ ಗೌರವವಿತ್ತೇ ಹೊರತು, ಅವರ ಸಂಬಳಕ್ಕಾಗಿ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ ಅನ್ನುವ ಲವಲೇಶ ಮಾತ್ರ ಯೋಚನೆಯೂ ಇಲ್ಲದ ಕಾಲ. ಬಹುಶಃ ನಮ್ಮೀ ಭಕ್ತಿಯೇ ನಮ್ಮ ಗುರುಗಳ ಕಣ್ಣಿನ ನಮ್ಮೆಡೆಗಿನ ಅಕ್ಕರೆಯಾಗುತ್ತಿತ್ತೋ ಏನೋ. ಒಟ್ಟಿನಲ್ಲಿ ನಮ್ಮ ಶಾಲಾ ದಿನಗಳನ್ನು ತಿರುವಿ ಹಾಕಿ ನೋಡಿದಷ್ಟೂ ಸಂತಸ ತರುತ್ತದೆ. 

೭ನೇ ತರಗತಿ ಓದುವಾಗ ನಮಗೆ ಸಮಾಜ ಶಾಸ್ತ್ರ ಪಾಠ ಮಾಡುತ್ತಿದ್ದ ಆಕೆಯನ್ನು ಎಲ್ಲರೂ ತುಂಬಾ ಗೌರವಿಸುತ್ತಿದ್ದೆವು. ಹಲವು ವಿಚಾರಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವಾಗ - ಇನ್ನೆಲ್ಲೋ ಪ್ರಗತಿಪರ ಮಹಿಳೆಯರ ಬಗ್ಗೆ ತಿಳಿಹೇಳುವಾಗ, ಇತಿಹಾಸದ ಪಾಠಗಳಲ್ಲಿ ಬರುವ ರಾಣಿಯರ ಬಗ್ಗೆ ವಿಶ್ಲೇಷಿಸಿ ನಮ್ಮಲ್ಲಿ ಕುತೂಹಲ ಮೂಡಿಸಿ, ಹಲವಾರು ಬಾರಿ ಅವರೊಡನೆ ಸಂವಹಿಸುವಾಗ ಗುರುಗಳೆಂದರೆ ಹೀಗಿರಬೇಕು ಎನಿಸುತ್ತಿತ್ತು. ಒಳ್ಳೆಯ ಹೆಸರಿಗಾಗಿ ಮತ್ತು ಸಕಾರಾತ್ಮಕ ಪರಿಣಾಮ ಬೀರುವ ಸಲುವಾಗಿಯೇ ಶಿಕ್ಷಕ ವೃತ್ತಿ ಮಾಡುವ ಕೆಲವರು ಗುರುಗಳಲ್ಲಿ ಅವರ ಗುರುತು ನೆನಪಲ್ಲಿ ಪಡಿಮೂಡಿತ್ತು. ಒಟ್ಟಿನಲ್ಲಿ ಪ್ರಭಾವ ಬೀರಿದ ಹೆಣ್ಣುಮಕ್ಕಳಲ್ಲಿ ಆಕೆಯ ಭಾಷೆ, ಧೈರ್ಯ, ಎಲ್ಲರನ್ನೂ ಮಾತನಾಡಿಸುವ ಸ್ಥೈರ್ಯ, ಎತ್ತರ ಕಡಿಮೆಯಿದ್ದರೂ, ತೆಳ್ಳಗಿದ್ದರೂ, ಕಣ್ಣಿನಲ್ಲಿ ಕಣ್ಣಿಟ್ಟು ನೋಡಿ ಉತ್ತರಿಸುವ ರೀತಿ, ನಾವು ಮಕ್ಕಳು ಪಾಠದ ವಿಷಯವಾಗಿ - ವಿಚಾರಪೂರಿತ ಪ್ರಶ್ನೆಗಳನ್ನು ಕೇಳಿದಾಗಲೂ ವಿಚಲಿತರಾಗದೆ ಸಮಾಧಾನ ಹೇಳುತ್ತಿದ್ದುದು - ಇವೆಲ್ಲವೂ ಆಗಿನ ಕಾಲಕ್ಕೆ ನನಗೊಂದು ಮಾದರಿಯಾಗಿತ್ತು. 

ಪ್ರೌಢ ಶಾಲೆಗೆಂದು ಮನೆಯ ಹತ್ತಿರವಿದ್ದ ಇನ್ನೊಂದು ಶಾಲೆಗೆ ದಾಖಲಾದೆ. ಓದುತ್ತಿದ್ದುದು ಚಿಕ್ಕ ಊರಾದ್ದರಿಂದ ನನ್ನ ಹಿಂದಿನ ಶಾಲೆಯ ಅಧ್ಯಾಪಕರುಗಳು ಆಗಾಗ ಎದುರಾಗುತ್ತಿದ್ದರು. ಎಂದೂ ನನಗೆ ಸಮಾಜ ಶಾಸ್ತ್ರ ಹೇಳಿಕೊಡುತ್ತಿದ್ದ ನನ್ನ ನೆಚ್ಚಿನ ಟೀಚರ್ ಸಿಕ್ಕಿರಲಿಲ್ಲ. ಸಂದರ್ಭ ನೆನಪಿಲ್ಲವಾದರೂ ಬಹುಶಃ ಬೇರ್ಯಾರೊ ಟೀಚರ್ ಸಿಕ್ಕಿ, ನನಗವರ ನೆನಪಾಗಿಯೋ ಏನೋ ೨ ವರ್ಷಗಳಾದ ನಂತರ ಒಮ್ಮೆ ಆಕೆಯ ಮನೆಯ ಮುಂದೆ ಹೋಗುವಾಗ ಮಾತಾಡಿಸಿಯೇ ಬಿಡುವ ಅನ್ನಿಸಿತು. ಆಕೆ ಮನೆಯಲ್ಲಿರುತ್ತಾರೋ ಇಲ್ಲವೋ- ರಜೆಯಾದ್ದರಿಂದ ಬಹುಶಃ ಇರಬಹುದು, ಮಾತನಾಡಿಸುತ್ತಾರೋ ಇಲ್ಲವೋ, ಆಕೆಗೆ ನನ್ನ ನೆನಪು ಇರುತ್ತದೋ ಇಲ್ಲವೋ, ದೊಡ್ಡ ತರಗತಿ, ಒಂದೇ ವರ್ಷ ಅವರು ನನಗೆ ಹೇಳಿ ಕೊಟ್ಟಿದ್ದು- ಎಂಬೆಲ್ಲ ಕಾರಣಾತಿ ಕಾರಣಗಳನ್ನೆಲ್ಲ ಬದಿಗಿಟ್ಟು, ಆಕೆಯ ಮನೆಯ ಗೇಟ್ ಒಳಹೋದೆ !

ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಬಟ್ಟೆ ಒಗೆಯುತ್ತಲಿದ್ದದ್ದು ನೋಡಿ, "ಟೀಚರ್ ಇದ್ದಾರಾ? ಮಾತನಾಡಿಸಬೇಕಿತ್ತು" ಅಂದೆ. "ಸ್ವಲ್ಪ ಇರು" ಎಂದ ಅವರು ನನ್ನ ಟೀಚರ್ ಹೆಸರನ್ನು ಕೂಗುತ್ತಾ, "ನಿನ್ನನ್ನು ನೋಡಲು ನಿನ್ನ ವಿದ್ಯಾರ್ಥಿ ಬಂದ ಹಾಗಿದೆ" ಎಂದು ಒಳಹೋದರು. ಮನೆಯೊಳಗೆ ಹೆಚ್ಚು ಕತ್ತಲೆ ಇತ್ತು. ಬಹುಶಃ ಕಿಟಕಿಯಿಂದ ಬರುವ ಬೆಳಕು ಮನೆಯಲ್ಲೆಲ್ಲಾ ಚೆಲ್ಲುವಷ್ಟು ದೊಡ್ಡದು ಇರಲಿಕ್ಕಿಲ್ಲ. ಒಳಗೆ ಹೇಗೆ ಕಾಣುತ್ತದೆಂದು ಬಿಸಿಲಲ್ಲಿದ್ದ ನನಗೆ  ಗೋಚರಿಸಲಿಲ್ಲ. 

ಹೊರನಿಂತು ಕಾದಿದ್ದು ಅರ್ಧ ನಿಮಿಷ. ಅಷ್ಟರಲ್ಲಿ ನನ್ನ ಟೀಚರ್ ಈಗ ಹೇಗಿರಬಹುದು? ಪಾಠ ಹೇಳಿಕೊಡುವಾಗಲೆಲ್ಲ ಆಕೆ ಸದಾ ಶುಭ್ರ ಸೀರೆಯನ್ನು ಒಪ್ಪವಾಗಿ ಉಟ್ಟಿರುತ್ತಿದ್ದರು. ನಡೆಯುವಾಗಲೂ ಅಷ್ಟೇ. ಪುಸ್ತಕವನ್ನು ಎದೆಗೊತ್ತಿಕೊಂಡು, ಯಾವ ಮಕ್ಕಳು ವಿಶ್ ಮಾಡಿದರೂ, ನಗೆಯೊಡನೆ ಪ್ರತ್ಯುತ್ತರ. ಸ್ಕೂಲ್ ನಲ್ಲಿಯೂ ಇದ್ದ ಹಾಗೆ ಕೇಳಿರಲಿಲ್ಲ. ಬೇರೇನಾದರೂ ಕೆಲಸಕ್ಕೆ ಸೇರಿರಬಹುದೋ ಏನೋ, ಏನು ಮಾತನಾಡುವುದೆಂಬ ಅರಿವೇ ಇಲ್ಲದೇ ಸಮಯ ನೋಡದೇ ಬಂದಿದ್ದೇನೆ. ಏನೆನ್ನುತ್ತಾರೋ ಮೊದಲೇ ಖಡಕ್ ಮಹಿಳೆ ಆಕೆ ಅನ್ನುವ ಹಿಂಜರಿಕೆ ಮನಸ್ಸಿನಲ್ಲಿ ತಳಮಳಿಸುತ್ತಿತ್ತು. ಅರ್ಧ ನಿಮಿಷ ಅರ್ಧ ಘಳಿಗೆಯಂತೆ ಭಾಸವಾಗಿತ್ತು. 

ಅಗೋ ಅಲ್ಲಿ ನನ್ನ ಟೀಚರ್ ಬಂದರು! ನನ್ನ ಕಾಯುವಿಕೆ ಕೊನೆಗೊಂಡಿತ್ತು- ಅವರನ್ನು ಆತುರದಿಂದ ಮಾತನಾಡಿಸಲು ಪಾಕೆಟ್ ಮನಿ ಎಲ್ಲಾ ಇಲ್ಲದ ಜಾಯಮಾನದಲ್ಲಿ ದೊಡ್ಡ ಮಂದಹಾಸ ಮುಖದ ಮೇಲೆ- ಹಾಗು ಅಷ್ಟೇ ಖಾಲಿ ಕೈಯಲ್ಲಿ ನಿಂತಿದ್ದೆ.  ಕಂಕುಳಲ್ಲಿ ಪುಟ್ಟ ಮಗುವನ್ನು ಸ್ವಲ್ಪ ಕಷ್ಟ ಪಟ್ಟಂತೆ ಎತ್ತಿಕೊಂಡು, ಆ ಮಗು ಈಗಷ್ಟೇ ಊಟ ಮಾಡಿರಬಹುದು, ಕೈಯೊರೆಸಿಕೊಳ್ಳುತ್ತ, ಆ ಮಗುವಿನ ಬಾಯೊರೆಸುತ್ತ, ನಡೆದು ಬಂದರು. ನೆನಪಿನ ಹಾಳೆಯಲ್ಲಿದ್ದ ಸೂಕ್ಷ್ಮ ಕಾಯವಾದರೂ ದೊಡ್ಡ ಗತ್ತಿನ ಆಕೆಗೂ, ನನ್ನ ಮುಂದೆ ನಿಂತಿದ್ದ ಈ ಮನೆಗೆಲಸ ಮಾಡಿಕೊಂಡು ಸೋತು ಹೋದಂತೆ ಕಂಡ ತಾಯಿಗೂ ಅಜ-ಗಜಾಂತರ ವ್ಯತ್ಯಾಸವಿದ್ದಂತೆ ಅನಿಸಿತು. ಮೊದಲ ಬಾರಿಗೆ ಜೀವನದಲ್ಲಿ ಭ್ರಮನಿರಸನದ ಅನುಭವ. 

ಅಲ್ಲಿ ಏನು ಮಾತನಾಡಿದೆ, ಆಕೆ ಗುರುತು ಹಿಡಿದರಾ? ಅಲ್ಲಿಂದ ಮುಂದೆ ಧನ್ಯವಾದ ಹೇಳಿ ಬೇಗ ಅಲ್ಲಿಂದ ಹೊರಬಂದಿದ್ದೊಂದು ನೆನಪು. ಮಿಕ್ಕುದೆಲ್ಲಾ ಮಬ್ಬು ಗೊಂದಲ !

ನಾನು ಎಷ್ಟು ಸುಲಭವಾಗಿ ಪೂರ್ವಾಗ್ರಹ ಪೀಡಿತಳಾಗಿದ್ದೆ ! ಎಳೆಯ ಮನಸ್ಸಿಗೆ ಆಕೆ ಸೂಪರ್ ವುಮನ್ ಹಾಗೆ ಕಂಡಿದ್ದಾಕೆ ಇದ್ದಕ್ಕಿದ್ದ ಹಾಗೆ ಸಾಧಾರಣ ಗೃಹಿಣಿಯಾಗಿ ನಾನಾಕೆಯನ್ನು ಕಂಡಾಗ ಮನಸ್ಸು ಒಪ್ಪಲೇ ಇಲ್ಲ ಏಕೆ? ಪ್ರತಿಯೊಬ್ಬರಿಗೂ ಖಾಸಗಿ ಬದುಕೂ ಸಾಮಾಜಿಕ ಜನಭರಿತ ಜೀವನದ ನಡುವಿನ ಅಂತರ ಇರುತ್ತದೆಂದು ಬಹುಶಃ ನನಗೆ ಆಗಲೇ ಗ್ರಹಿಕೆಗೆ ಬಂದಿದ್ದಿರಬೇಕು. 

ನಮ್ಮ ಭೂತಕಾಲವು ನಮ್ಮ ಕಲ್ಪನೆಯ ಮೇಲೆ ಬೀರುವ ಪ್ರಭಾವ ಎಂಥದ್ದಲ್ಲವೇ ಅನಿಸುತ್ತದೆ! ಹಿಂದಿನ ಆಗುಹೋಗುಗಳ ಆಧಾರದ ಮೇಲೆ ಅದೆಷ್ಟು ಸುಲಭವಾಗಿ ಇದಮಿತ್ಥಮ್ ಎಂದು ಮನದಲ್ಲಿ ಗೆರೆ ಎಳೆದುಕೊಂಡು ಅಲ್ಲಿಂದ ಮುಂದೆ ಸಾಗಲೂ ಒಲ್ಲದ ಮನಸ್ಥಿತಿಯನ್ನು ಅದೆಷ್ಟು ಸಾಧಾರಣವಾಗಿ ರೂಪಿಸಿಕೊಂಡಿದ್ದೇನಲ್ಲ ಎನ್ನಿಸಿಬಿಟ್ಟಿತ್ತು. ಇದೆಲ್ಲವೂ ದಿನಗಳುರುಳುತ್ತ ಗೋಚರವಾಗಿದ್ದರೂ, ಆ ದಿನದ ನನ್ನ ಟೀಚರ್ ಭೇಟಿ ನನ್ನ ಮಂದಮತಿಗೆ ಸಾಕ್ಷಿಯಾಗಿ ಇಂದು ನಿಂತು ನಗುತ್ತಿದೆ!



Wednesday, July 13, 2022

ಗುರುವೋ ಅಂತರಾತ್ಮವೋ!

ಗುರು ಪೂರ್ಣಿಮೆಯ ಮುಂಜಾವು
ಗುರುವಿನಾ ಕರುಣೆ ಕಣ್ಣ ಬೆಳಗುತಲಿರಲಿ,
ಮನದಲ್ಲಿ ಗುರುವಿನೆಡೆಯ ಭಕುತಿ
ಗುರಿ ತೋರುವಂತಿರಲಿ,
ಎಡವಿ ಬೀಳುವ ಮುನ್ನ
ತೋಚದಿದ್ದ ಹೊರಗಣ್ಣ-
ಗುರುವಿನ ಕರಣ ಒಳಗಣ್ಣ ತೆರೆಯುವಂತಿರಲಿ,
ಬೈತಿಟ್ಟ ಒಳಗಿನ ಬೆಳಗು 
ಹೊರಲೋಕಕೆಲ್ಲ ತಾನು 
ಮತ್ತೆ ತೋರುವಂತಿರಲಿ,
ಹಗಲೆನದೆ ಕತ್ತಲೆನದೆ
ಅನುದಿನವು ನಿನ್ನ ಬಗೆಗಿನ ಆಸ್ಥೆ -
ನನ್ನ ಮರುಳ ಮಾಚಿ ಸರಿದೋರುವಂತಿರಲಿ!

Tuesday, May 31, 2022

ಕುಡಿಯರ ಕೂಸು - ಶಿವರಾಮ ಕಾರಂತ

ಕುಡಿಯರ ಕೂಸು
ಮಲೆಗಳಲ್ಲಿ ಮನತಣಿಯುವಂತೆ ತಡವುತ್ತ ಓಡಾಡುವ ಅನುಭವ ನೀಡುವ ಪುಸ್ತಕ - ಕುಡಿಯರ ಕೂಸು. ಕಾರಂತರು ಈ ಕಾದಂಬರಿಯಲ್ಲಿ ಸುಬ್ರಹ್ಮಣ್ಯದ ಬಳಿಯ ಹಿರಿಮಲೆ, ಕಿರಿಮಲೆಯ ಕುಡಿಯರ ಜೀವನ ಬಿಂಬಿಸುವ ಕಥೆ ಹೆಣೆದಿದ್ದಾರೆ. ಇದ್ದೊಬ್ಬ ಮಗನನ್ನೂ ಸೊಸೆಯನ್ನೂ ಕಳೆದುಕೊಳ್ಳುವ ಕೆಂಚಜ್ಜ ತನ್ನ ಮೊಮ್ಮಗು ಕರಿಯನನ್ನು ಬೆಳೆಸುವ ಕಥೆಯ ಜಾಡು ಹಿಡಿದು,  ಕರಿಯನ ಜೀವನ ಹೇಗೆ ರೂಪುಗೊಂಡಿತೆಂಬ ಬಗ್ಗೆ ಚಿತ್ರಣ ಕಟ್ಟಿಕೊಡುತ್ತ ಹೋಗುತ್ತಾರೆ ಕಾರಂತರು. 

ಏಲಕ್ಕಿ ಸೊಂಪಾಗಿ ಬೆಳೆಯುವ ಮಲೆಯ ಮೂಲ ನಿವಾಸಿಗಳೂ, ಅಲ್ಲಿನ ಮಲೆಯನ್ನು ಕೊಳ್ಳುವ ಧಣಿಗಳಿಗೆ ವಿಧೇಯರೂ ಆಗಿರುವ ಕುಡಿಯರು ಬಯನಿಯ ದಿಂಡು ತಿನ್ನುತ್ತಲೂ, ಗೆಡ್ಡೆ ಗೆಣಸು ಸೇವಿಸುತ್ತಲೂ, ಹರಿಯುವ ಜೀವನದಿಯ ತೊರೆಯಲ್ಲಿ ಮೀನು-ಏಡಿಗಳನ್ನು ಹಿಡಿದು, ಬೇಟೆಯಾಡಿ  ಜೀವನ ಮಾಡಲು ಬಲ್ಲರು. ಅವರ ಇತರೆ ಅವಶ್ಯಕತೆಗಳಿಗೆ ಮಲೆಯ ಧಣಿಗಳಿಂದ ಬರುವ ಹಚ್ಚಡ, ಉಪ್ಪು, ಚಿಮಣಿ ಎಣ್ಣೆಯೇ ಸಾಕೆನ್ನುವಂಥವರು. 

ಕಲ್ಲೊಂದಕ್ಕೆ ದೈವತ್ವವನ್ನು ಕೊಟ್ಟು ಆದರಿಸುವ ಮುಗ್ಧರು ತಮ್ಮ ಪೂಜಾರಿಯ ಮೈಮೇಲೆ ಬರುವ ಕಲ್ಕುಡ ದೈವಕ್ಕೆ ನೇಮದಿಂದಿರುತ್ತಾರೆ. ಇವರ ಜೀವನದಲ್ಲಿ ಕಲ್ಕುಡನ ಮಹಿಮೆ- ಆತನ ಒಲುಮೆಗಾಗಿ ಇವರೆಲ್ಲರ ನಿಷ್ಠೆ, ಇವೆಲ್ಲ ಕಲ್ಕುಡನು ಕಲ್ಲಿನಲ್ಲೋ, ಮೈದುಂಬುವ ಪೂಜಾರಿಯಲ್ಲೋ ಇಲ್ಲದೆ, ತಂತಮ್ಮ ಮನದ ಒಳಗಣ ತಿಳಿವಾಗಿ ತೋರುವುದು ಸುಸ್ಪಷ್ಟ.

ಮಳೆಗಾಲದಲ್ಲಿ ಕಾಡು ಸವರಿ ಕುಮರಿಯಲ್ಲಿ ಭತ್ತದ ಬೇಸಾಯ ಮಾಡುವ, ಉಳಿದಂತೆ ಹಲವು ಉರುಳುಗಳನ್ನು ಒಡ್ಡಿ ಬೇಟೆಯಾಡುವ ಇವರು ಒಬ್ಬರಿಟ್ಟ ಉರುಳಿಗೆ ಬಿದ್ದ ಪ್ರಾಣಿಯನ್ನು ಇನ್ನೊಬ್ಬರು ಕದಿಯಲು ಕೈ ಹಾಕದ ನಿಯಮದವರು. ಎಲ್ಲ ಮನುಷ್ಯರಂತೆಯೇ ಮಸೆಯುವ ಮಾತ್ಸರ್ಯ, ಅಧಿಕಾರದ ಆಸೆ ಇವರ ಜೀವನದಲ್ಲಿ ತಿರುವುಗಳನ್ನು ತರುತ್ತ ಮನೋರಂಜಕ ಅಧ್ಯಾಯಗಳನ್ನು ತೆರೆಯುತ್ತ ಹೋಗುತ್ತದೆ.

ಈ ಪುಸ್ತಕದಲ್ಲಿ ಮೂಡಿರುವ ನಿಸರ್ಗದ ವರ್ಣನೆ, ಕಾಡಿನ ಉತ್ಪನ್ನಗಳ ವರ್ಣನೆ, ಆನೆಗಳ ನಡವಳಿಕೆ, ಕರಡಿಯ ಬೇಟೆ,  ನರಭಕ್ಷಕವಾಗುವ ಚಿರತೆಯ ಬೇಟೆ, ಇವ್ಯಾವುವೂ ಉದ್ದೇಶಪೂರ್ವಕವಾಗಿ ತೋರದೆ, ಕಥೆಗೆ ಪೂರಕವಾಗಿ ಎಂದು ಮಾತ್ರ ಕಾಣುವುದೇ ಈ ಕಥೆಯ ಅಂದವನ್ನು ಇನ್ನೂ ಹೆಚ್ಚಿಸಿವೆ. 

ಇಲ್ಲಿ ಮೂಡಿ ಬಂದಿರುವ ಕುಡಿಯರ ಸರಳ ಜೀವನ, ಕನಿಷ್ಠ ಅವಶ್ಯಕತೆಗಳ ಬಗ್ಗೆ ಓದುವ ಈಗಿನ ಪೀಳಿಗೆಗೆ ಆಗಿನ ಸರಳತೆಯೇ, ಅವರ ಸ್ವಾವಲಂಬಿ ಜೀವನವೇ ಒಂದು ಕೌತುಕವಾಗಿ ಕಂಡು ಪುಸ್ತಕ ನಿರರ್ಗಳವಾಗಿ ಓದಿಸಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. 

Tuesday, May 24, 2022

The Unseen

When the path is pitch dark
And no signs of stars above;
On the cloudy night when
Moon is absent and so is any sign of life;
What lays ahead is a mystery
And the unknown awaits lurking around,

It's your faint voice within that guides,
It's the faith in you that help me take strides;
When every bend seems like an oblivion;
It's the quest towards you that keeps me going,
It's the zest that you've sown in me that keeps my smile,
It's the hope of fruition that keeps me from fading into abyss,
It's the belief in you that spreads me light!
Now, tomorrow and forever to come!!

Saturday, March 19, 2022

Kashmir files: A Review

Kashmir files.

After reading about the movie that had the most interesting topic since decades, we couldn't wait till all stars come together to help us watch the movie in peace. Sneaking out time off from every pressing work, we somehow got into movie hall.

My review: 3.5 stars as a movie and a 5 fine stars for the information in it.

The movie is fine-studded by hidden gems of truth; truth that was seldom spoken. Offlate it's a complete politicisation of any opinion about the issue that let a wonderful part of our nation burn and get scarred for ever. The moment anyone speaks about the genocide of Kashmiri Pandits, they are branded a certainty but instead if anyone sympathises with the false and decorated narrative of media around the world, they are approved in no time.

No matter how ghastly the past is, I everytime fail to understand the pinks with which the media wants to paint it and present to the world. We aptly forget that the cheapsters in media play yellow journalism and embrace what we also think appeals to us; may be by believing that the genocide was an exodus. 

I don't think it is that appealing to imagine a person cut in halves on a saw or ladies who were brutally raped or died even before someone would get to them with such intentions. 

Even today I fail to totally imagine how a race can be deemed harmless and did not figure out what was coming at them and fight it out instead of giving in. This movie has made an effort at bringing together the facts, as many as possible within the boundaries of keeping it as a movie and not a documentary. In the process, ofcourse there are shortcomings in keeping the audience connected throughout and hence the 3.5 rating for it as a movie.

As I say that, I am fully aware that every Indian must watch the movie since the facts have merely been hidden away for too long.

Unlike the Holocaust on Jews, Cambodian genocide in Democratic Kampuchia, Armenian genocide in ottoman or the atrocities on Rohingyas of Myanmar, this story of Kashmiri Pandits is hidden since long and it needed a pardafash too. Afterall, we must open our eyes to what we call it knowledge without biased rally cry of Muslims being minority, oppressed and suppressed.

The experts quote even more of what happened in various books. No movie of 2.5 hour can do justice to what the entire community of Kashmiri Pandits went through; seeing a demon in peaceful neighbours, to seeing their own friends turning them in, to seeing their children die before them, to leaving everything that they believed is theirs behind, to being penniless, to seeing a generation of miscarriages, broken families, and yet not leaving their passion for learning and education despite the genocide, to building their broken hearts and homes in a new place unknown to them till then.

Aah! Yes, it's less on screen and ofcourse more to plunder on the topic.

Saturday, January 16, 2021

Tandav : Amazon Web Series - A Review

 

Tandav - Amazon Prime Video
TANDAV - with the trailer itself so powerful, and a risky - pesky time of no-visit to theaters since long made me wait for this series for days. Grabbing the first opportunity we could, we curled up with enough snacks to last for the season and give us a theater-like feel. The Tandav unfurled itself with the ultimate move that Saif Ali Khan (as Samar Pratap Singh) does for power. 

In a nutshell, Tandav is a political drama about how Samar - Son of a sitting Prime Minister of India plays out to become the ruler, starting with his father's murder. Now, there is murder, there is conspiracy attached, thirst for power that everyone plunges at, precisey when the ruler is no more; There is also blackmail, there is unfaithfulness, and there is manipulation that comes with it.
In a parallel story that runs along, is Mohd. Zeeshan Ayyub (as Shiva Shekhar) who is a university student fueled with a potent mix of eagerness to do something, and still exploring his possibilities at what life has to offer him. 
The paths of Samar and Shiva cross soon when Samar realizes that he wants to be the King maker if he cannot be the king. 

Flawless direction by Ali Abbas Zafar to the story line written by himself and Gaurav Solanki is a treat to viewers. Dimple Kapadia as Anuradha KishoreKumud Mishra as Gopal Das Munshi have done their jobs wonderfully well. Sunil Grover as Gurpal Chauhan must have a special mention because of the outstanding support cast as a cold persuader.

Now let's come to what this series has to offer the viewers, when observed closely by someone who keeps an occasional tab on current events. A Rightist party, students from University like JNU, in this series who are usually not okay with anything that's right, Student leader Shiva who reminds of Kanhaiyya Kumar from JNU, Barkha Dutt resembling reporter who listens to students and helps them when none other does, Government suppressing farmer's protests, which then yields to it favorably, Police - which acts according to orders from high - up in the political hierarchy, who shoots two innocent youth and frames them on UAPA (Unlawful Activities Prevention Act), party IT cell portrayed like hashtag trending factory on social media and may be even more resemblances to someone who keeps a tab on current events regularly.

What the viewer sees through mostly, is the series as an entertainer that is worth watching, and yes, absolutely, the team of Tandav has delivered it in a mish-mash of imagination and amalgamation of current events, only as much required to perk the viewer expectations up to the second series.

Just curious, if the team will also include something about these in their upcoming series- any leftist opposition party that is not-even-mentioned once, and about all darker shaded characters surnamed Singh, Shekar, Chauhan, Munshi, Mishra that could ocasionally be surnames from Muslims and minority exactly like the ones in this series 1 who are killed, lynched, tortured, anyone who misses opportunity or their fair opportunity is snatched away heartlessly, the downtrodden, and like only the name of true workers to uplift the downtrodden.

When someone watches this series because of its great make after twenty, or thirty or forty years, they will always perceive it closely linked to what was happening in 2010's and 2020's. For that matter, every series that is made to look like its shot in some imaginary era when all the downtrodden from the Indian Society were only Dalits and Muslims.


Wednesday, September 30, 2020

Unkempt

Moments of despair and waves of crushing pain,
That gush and pass like a shooting disdain.
Through every tissue, in every cell,
A silent storm that challenges the swell.

The tears are commanded stop as they start,
But droplets rebound with all their heart.
Oh conscience, why won’t you take command?
Why abandon me adrift on any demand?
A courage once crushed, a hope that’s thinned,
Yet silver linings are softly pinned.

Why, oh why, does it come this way?
Why must the might devour the say?
In the past I must not dwell,
The future’s anchor not letting it dwindle.

But how do I rip and tidy in fleeting seconds,
To cleanse the pain that tear beckons?
To wipe, to rise, and be adept,
To silently bother, 
yet neat and appear kept.

With all that’s happened, still move on,
To chase the light till the very dawn.
To do the next right thing, steadfast, true,
With all my strength in all I do.
While rafting hurdle upon hurdle again,
I still forge my path through loss and gain,
Again and again and again.

Saturday, August 1, 2020

Shakuntala Devi



P.S:

Shakuntala Devi: A world-renowned mathematician, known for her scientifically inexplicable master-brain with numbers, with no formal education had always kept me amazed, but from a great emotional distance.
I knew her as a human computer, and that's that. So much for an Indian personality known world-wide!

Through this movie, with a brilliant screenplay and direction, Anu Menon and dialogue writer Ishita Moitra have spun a magic wand of bringing Shakuntala Devi's personal life back from the dead.  

I sometimes wonder how would it be to lead a life being child prodigy. This lady did, and it was difficult foregoing the childhood for she never let success get ahead of her. The screenplay in the movie has added bit of spice to pump up life into her story, but her own life as is was never less of any!

This movie will leave the viewer with a feeling of watching a great life's story and stay amazed at the personal touch it has. Grey patches exist in everyone's life here and there, and they are real, no matter how successful you are, or how publicly loved you are. Handling each challenging circumstance depend on the head-weight of the person in question, the baggage that the person carries, and the experiences that one learns from deep scratches on one's leg of thoughts.

Vidya Balan as Shakuntala Devi on screen is full of life, math and laughter, Sanya Malhotra as Anupama Banerjee, her daughter, leaves us keep wondering about how the life of a kid with informal education due to prodigy parent turns out a roller coaster ride of choices and these two casts in the movie seem very well-weighed and created on screen. 

Being woman is not only about having a family, doing house-hold chores and raising kids, but also a balance that is hard to strike with what a woman wants in her life. Each movie is an experience and this one is not the one to be missed!
Four Stars for sure!

Saturday, May 2, 2020

Thappad: A Review ⭐⭐⭐1/2

PC: https://www.imdb.com/title/tt10964430/

Thappad- Hindi movie looks like it could run in theatres farther, if lockdown wasn't imposed. It is a kind of movie where I cannot say that it is an amazing movie, but if one is looking for a movie that can leave an impact, this is a must watch. 

Story line: Tapsi Pannu in lead role, taking on her husband for a slap.

Seems a bleak one liner, isn't it? What do you think is the line of limit for a relationship? When do you know that a relationship has totally worn-out? When the word 'relationship' itself is so relative to how much two people are bonded to each other, how do you decide when it could end? 

They say bond breaks without a snapping sound. This movie is a reflection of how differently each of us with a variety of perceptions see a cross-over in a relationship. What may seem ok to one, may seem a blunder to the other. Relationship lies in relying on the delicate balance that keeps both personalities in the bond involved, yet feeling respectful of themselves.

As the movie progresses, it has tried to portray us how first-time slapping one's own wife is pursued as an okay act by many relatives. 

To a girl who has left everything that she ever loved, and who has accepted a new way of life by reconsidering and compromising so many of her priorities after marriage, it becomes a matter of reconciliation, with whatever she perceives as her line of limit. 

The takeaway for viewer here is a retrospection of the past events in their life with their loved ones, for sure. But it is an eye-opener to not get entangled in any relationship so much that we lose our identity in it. Any individual has their priorities in life before getting married, and each one of us slowly realise that we have changed so much in life after our marriage, with umpteen adjustments that gradually eat up our likes, we must just make sure that we do not let the parasitic adjustments eat up our Lives!!!

Psst! you can watch it on Amazon now.

Sunday, March 29, 2020

ಪುಸ್ತಕ ವಿಚಾರ- ಅಂಚು: ಎಸ್ ಎಲ್ ಭೈರಪ್ಪ

ಜೀವನದ ಮೇಲಿನ ಆಸ್ಥೆ-ಸಾವಿನ ಬಗೆಗಿನ ಆಕರ್ಷಣೆಯ ಅಂಚಿನಲ್ಲಿ ನಡೆಯುತ್ತ, ಇತ್ತ ಮುಗಿಸದೆ, ಅತ್ತಲೂ ನಿಲ್ಲದೆ ಹೆಣಗುವ, ಕಥಾವಸ್ತು - ಅಂಚು. ಇದರ ಕಥಾ ಹಂದರವನ್ನು ಮೊದಲು ತಿಳಿಸಿದರೆ, ಮುಂದೆ ಹೇಳುವ ಅಂಶಗಳಿಗೆ ಅದೇ ಬೆನ್ನೆಲುಬಾಗುತ್ತದೆಂದೆನಿಸುತ್ತದೆ. 

ಡಾಕ್ಟರ್ ಅಮೃತಾ ಪಿ.ಎಚ್.ಡಿ ಪದವೀಧರೆ, ಉಪನ್ಯಾಸಕಿ. ತಂದೆ - ತಾಯಿ ಇಲ್ಲದ ಈಕೆ ತನ್ನ ಆಸ್ತಿವಿಚಾರದಲ್ಲಿ ಸ್ವಂತ ಚಿಕ್ಕಮ್ಮನಿಂದಲೇ ಚಿಕ್ಕಂದಿನಿಂದಲೂ ನಯವಂಚನೆಗೊಳಗಾಗಿ, ಆಕೆಯ ತಮ್ಮನನ್ನೇ ಮದುವೆಯಾಗಿ, ತಾನು ಮೋಸಕ್ಕೊಳಗಾದದ್ದು ಬೋಧೆಯಾದಾಗಿಂದ ಗಂಡನಿಂದ ದೂರವಿರುವ ಎರಡು ಮಕ್ಕಳ ತಾಯಿ. ಆಗಾಗ ತನ್ನ ಅಸ್ತಿತ್ವದ ಬಗ್ಗೆ ಕಾಡುವ ಶೂನ್ಯಭಾವ ಸದಾ ಆಕೆಯನ್ನು ಸಾವಿನೆಡೆಗೆ ಆಕರ್ಷಿಸುತ್ತಿರುತ್ತದೆ. ಈ ಮಧ್ಯೆ ಸೋಮಶೇಖರನೆಂಬ ಆರ್ಕಿಟೆಕ್ಟ್ ನೊಂದಿಗಿನ ಪರಿಚಯ ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಬಲಿತು ಗೋಜಲಾಗುವ ಕಥೆ. 

ಪುಸ್ತಕದ ಹಲವಾರು ಭಾಗಗಳಲ್ಲಿ ಕಥೆಯೇ ಮಾಸುವಷ್ಟು ಸಂಭಾಷಣೆ- ತಗಾದೆ- ಭಾವನೆಗಳ ವಿಸ್ತಾರ ಇರುವುದರಿಂದ ಒಡನೆಯೇ ಈ ಕಥೆಯ ವಿಸ್ತಾರ ಅರಿವಾಗುವುದು ಸುಲಭಸಾಧ್ಯವಲ್ಲ. ಈ ಕಾರಣಕ್ಕಾಗಿಯೇ ಎಸ್ ಎಲ್ ಭೈರಪ್ಪನವರ ಇತರೆ ಹಲವು ಕಾದಂಬರಿಗಳನ್ನೋದಿದವರೂ ಅಂಚುವನ್ನು ತಡವಾಗಿ ಓದಿರುತ್ತಾರೆ - ಅಥವಾ ಮಧ್ಯದಲ್ಲೇ ನಿಲ್ಲಿಸಿರಲಿಕ್ಕೂ ಸಾಕು; ನನ್ನ ಹಾಗೆ. 

ಏಳು ವರ್ಷಗಳ ಹಿಂದೆ ಓದಲು ತಂದಿಟ್ಟುಕೊಂಡೂ, ಓದದೇ ಅರ್ಧದಲ್ಲೇ ಕೈಬಿಟ್ಟಿದ್ದ ಪುಸ್ತಕ - ಎಸ್ ಎಲ್ ಭೈರಪ್ಪನವರ "ಅಂಚು". ಸಂಕಲ್ಪವಿದ್ದರೂ ಸಂಕಲ್ಪವನ್ನು ಹಸಿರಾಗಿಟ್ಟು ಪುಸ್ತಕದ ಉದ್ದಗಲವನ್ನೂ ಓದುವ, ಓದಿದ್ದನ್ನು ವಿಶ್ಲೇಷಿಸಿ ಅರಗಿಸಿಕೊಳ್ಳುವ ಭಾವ ಬಹುಶಃ ಬಲಿತಿರದ ದಿನಗಳವು. ಬಸುರಿನಲ್ಲಿ ಹಿಡಿದ ಈ ಪುಸ್ತಕದ ಅಭಿವ್ಯಕ್ತಿಯ ಧ್ವನಿ, ಸನ್ನಿವೇಶಗಳ ಪೋಣಿಸುವಿಕೆ ನನ್ನ ತಾಯ್ತನದ ಹೊಸ್ತಿಲಿನ ದಿನಗಳಲ್ಲಿ ಅತಿ ಭಾವುಕತೆಯನ್ನು ತಂದು ಪಾತ್ರಗಳ ನೋವಿನೊಡನೆ  ಸಮೀಕರಿಸಿಕೊಳ್ಳುವ ಮನಸ್ಥಿತಿಯೊಡೆದು ಪಕ್ಕಕ್ಕಿಟ್ಟಿದ್ದೆ; ದೂರವಿಟ್ಟು ಮರೆತಿದ್ದೆ. ವರ್ಷಗಳ ನಂತರ, ಇದೇ ಲೇಖಕರ "ಯಾನ" ಸಂವಾದವನ್ನು ಶತಾವಧಾನಿ ಗಣೇಶರು ನಡೆಸಿಕೊಡುವಾಗ ಪ್ರಶ್ನೋತ್ತರ ಸಮಯದಲ್ಲಿ ಶ್ರೋತೃಗಳೊಬ್ಬರು "ಅಂಚು"ವಿನಲ್ಲಿ ನಾಯಕಿ ಆತ್ಮಹತ್ಯೆಯ ಪ್ರಯತ್ನವನ್ನು ಇಡೀ ಪುಸ್ತಕದಲ್ಲಿ ಇಪ್ಪತ್ತೊಂದೋ ಇಪ್ಪತ್ಮೂರೋ ಸಲ ಮಾಡಿಕೊಳ್ಳುತ್ತಾಳೆ ಅನ್ನುವ ಅಂಶ ಚರ್ಚೆಗೆ ಬಂದಾಗ ಗಣೇಶರು ಹೇಳಿದ್ದ ಉತ್ತರದ ಭಾಗವೊಂದು ನಿಜಕ್ಕೂ ಚಕಿತಗೊಳಿಸಿತ್ತು - ಅಂಚು ಕಾದಂಬರಿ ಮದುವೆಯನ್ನೊಳಗೊಂಡ ನಂಬಿಕೆಯನ್ನು ಕಳೆಯುವಂಥದಲ್ಲ, ಮದುವೆಯಾಗಲು ಪ್ರೇರೇಪಿಸುವಂಥದ್ದು, ಮದುವೆಯ ತಳಹದಿಯಲ್ಲಿ ನಂಬಿಕೆಯನ್ನು ಗಟ್ಟಿಮಾಡುವಂಥದ್ದು ಅಂದದ್ದು ಮನಸ್ಸಿನಲ್ಲಿ ಉಳಿದಿತ್ತು. 

ಕೊರೋನಾ ಮಹಾಮಾರಿಯ ದೆಸೆಯಿಂದ ದೇಶಕ್ಕೆಲ್ಲಾ lockdown ಸೂಚನೆ ಹೊರಟ ನಂತರ ಬಿಡುವಿನ ಸಮಯದಲ್ಲಿ ಓದಲು ಆರಿಸಿಕೊಂಡದ್ದು - "ಅಂಚು" ಕಾದಂಬರಿಯನ್ನು. 

ಅಂಚುವಿನ ಅಮೃತಾ ಉತ್ತಮ ಅಧ್ಯಾಪಕಿ- ಅಪನಂಬಿಕೆಯ ನಂಜುಂಡರೂ ಆಕೆಯ ಚಿಕ್ಕಮ್ಮ ಮತ್ತು ಮನೆಯವರಿಗೆ ಮನದೆಲೆಲ್ಲೋ ಕಿತ್ತೊಗೆಯಲಾಗದ ಅಸಹಾಯಕ ಆರ್ದ್ರತೆ. ಇನ್ನು ತನ್ನೆರಡು ಮಕ್ಕಳಿಗೆ ಒಳ್ಳೆಯ ತಾಯಿಯಾದರೂ, ತಾನು ಸೆಳೆಯಲ್ಪಟ್ಟಿರುವ ಸೋಮಶೇಖರನೊಂದಿಗೆ ಮಾತ್ರ ಅದ್ವಿತೀಯ ಲಹರಿಯವಳು. ಒಮ್ಮೊಮ್ಮೆ ನಿರಾತಂಕ ಪ್ರೀತಿ, ಹಿಂದೇ ಸುತ್ತಿ ಕವುಚಿಬರುವ ಮೌನ- ಶೂನ್ಯತೆ! ಶೂನ್ಯತೆಯ ಪರಮಾವಧಿ ಅಕಾರಣ ಸಿಟ್ಟಿನತ್ತ ಹಲವೊಮ್ಮೆ ಎಳೆದೊಯ್ದರೆ, ಕೆಲವೊಮ್ಮೆ ಮುಗಿಸಿಕೊಂಡುಬಿಡಬೇಕೆನ್ನುವ ಆತ್ಮಹತ್ಯಾ ತುಡಿತ, ಇನ್ನು ಕೆಲವೊಮ್ಮೆ ಪ್ರೀತಿಸಿದವನ ಮೇಲೆ ಕ್ರೌರ್ಯಕ್ಕೂ ತಿರುಗುವ ಮೌಢ್ಯ! ಈ ಭಾವನೆಗಳ ಅಲಗು ಮೊನೆಗಳ ಮೇಲಿನ ಹೊಯ್ದಾಟದಲ್ಲೇ ಕಥೆ ಸಾಗುತ್ತದೆ.  

ಕಥಾನಾಯಕಿ ಅಮೃತಾಳಂತಹಾ ಪಾತ್ರವನ್ನು ನಾವು ನಿಜಜೀವನದಲ್ಲೂ ನೋಡಿರಬಹುದು; ಕೆಲವರು ಇಡೀ ಜಗತ್ತಿಗಿದ್ದಷ್ಟು ಉದಾರವಾಗಿ, ತಮ್ಮವರೊಡನೆ, ತಮಗೆ ಕಷ್ಟ-ಸುಖಗಳಲ್ಲಿ ಸಮಪಾಲು ಇರುವವರೊಡನೆ ಭಾವ ಕಳೆದವರಂತಿರುತ್ತಾರೆ. ಹೊರಗಿನವರೆನಿಸಿಕೊಂಡ ಬೇರೆಲ್ಲರೊಂದಿಗೂ ನಗುನಗುತ್ತ ಬೆರೆತಂತಿದ್ದು ತಮ್ಮ ಮೇಲೆ ಭಾವುಕವಾಗಿ ಅವಲಂಬಿತರಾದವರ ಮೇಲೆ ಕೊಂಕುಗೆದರಿಸುತ್ತ ತಪ್ಪಿತಸ್ಥ ಭಾವ ಮೂಡಿಸುತ್ತಲೋ, ಆಪಾದನೆ ಹೊರಿಸುತ್ತಲೋ ಇದ್ದುಬಿಡುತ್ತಾರೆ. ಅವರ ಅಭಿವ್ಯಕ್ತಿ ತಮ್ಮವರೆನಿಸಿಕೊಂಡವರ ಮೇಲಾಗಲಿ, ಕಾರಣ ಏನೇ ಇರಲಿ, ಕ್ರೌರ್ಯ, ಆತ್ಮಾವಹೇಳನ, ಕೊಂಕಿನ ಮೂಲ- ಇವೆಲ್ಲ ನಿಲುಕಿಗೂ ಸಿಕ್ಕದ ಅಂತರದಲ್ಲೆಲ್ಲೋ ಹೂತುಹೋಗಿರುತ್ತದೆ. ಆಳದಲ್ಲೆಲ್ಲೋ ಆದ ವ್ರಣ ಮೇಲುಮೇಲಿನ ಸಿಡುಕು - ದ್ವಂಧ್ವಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. 

ತೀವ್ರ ಭಾವಸ್ಪಂದನ, ಅದರಿಂದುಂಟಾಗುವ ದಣಿವು - ಸೋಮಶೇಖರನಿಗೆ ಹಿಂಸೆಯೆನಿಸಿದಷ್ಟೂ, ಬಿಡಿಸಿಕೊಳ್ಳಬೇಕೆನಿಸಿದಷ್ಟೂ ತೊರೆಯಲಾರದ ಅಂಟಾಗಿ, ಬಂಧವಾಗಿ, ಆಕರ್ಷಣೆಯಾಗಿ, ಕಡೆಗೆ ವೃತ್ತಿಗಿಂತಲೂ ಮುಖ್ಯವಾಗಿ ವೃತ್ತಿಯಲ್ಲಿ ಸೋಲುತ್ತ ಬಂದು, ಅಮೃತಾಳನ್ನು ಕಳೆದುಕೊಳ್ಳುವ ಸಂಕಲ್ಪವೇ ಭಯತರಿಸಿ, ಈ ಬಂಧವನ್ನು ನಿಭಾಯಿಸಿಯೇ ತೀರುವೆನೆಂಬ ಸ್ಪೂರ್ತಿಯಾಗಿ ಮಜಲು ಮಜಲಾಗಿ ಬಿಡಿಸಿಕೊಳ್ಳುವುದು ಕಾಣುತ್ತದೆ.

ಇಲ್ಲಿ ಸೋಮಶೇಖರನಂಥಾ ತಾಳ್ಮೆಯುಳ್ಳವರ ಪ್ರೀತಿ-ಕಾಳಜಿಯ ಇಂಧನ ಯಾವುದು? ಪ್ರೀತಿಸಿದವರನ್ನು ಪಡೆದೇ ತೀರಬೇಕೆಂಬ ಹಂಬಲವೋ, ಪ್ರೀತಿಸಿದವರು ಸಂತೋಷವಾಗಿಯೇ ಬದುಕಬೇಕೆಂಬ ಛಲವೋ? ಕೋಮಲ ಹೃದಯಿಯಾದ ಅಮೃತಾಳ ನಾಡಿಹಿಡಿಯಲಾರದ, ಭಾರ ಬಲಿಯದೆಯೂ ಇಕ್ಕೆಲಗಳಿಗೆ ಯಾವ ಮುನ್ಸೂಚನೆಯೂ ಇಲ್ಲದೆ ತೂಗಾಡುವ ತಕ್ಕಡಿಯಂಥಾ ಸ್ವಭಾವಕ್ಕಿರುವ ತಲ್ಲಣದಲ್ಲಿ- ಪ್ರಸ್ತುತದ ಕ್ಷುಲ್ಲಕ ಕಾರಣಗಳು ಸತ್ಯವೋ, ಅಥವಾ ಜೀವನದಲ್ಲಿ ಹಿಂದೆಲ್ಲೋ ಮನಸ್ಸಿಗೆ ಬಿದ್ದ ಪೆಟ್ಟು ತಾಳಲಾರದ ಏಟುಗಳೋ? ಇವೆಲ್ಲ ಪದರಗಳೊಳಗೂ ಜೀಕುತ್ತ ಸಾಗುವುದು - "ಅಂಚು". 

ಶತಾವಧಾನಿ ಗಣೇಶರು ಹೇಳಿದಂತೆ, ವಿವರಣೆಗಳಿಗೆ ಮಾತ್ರ ಪಕ್ಕಾಗದೆ ಪ್ರೀತಿ, ಸಂಬಂಧ, ವಿವಾಹದ ಮೂಲಧನಕ್ಕೊಂದು ಧಾತು - "ಅಂಚು". 

Friday, February 7, 2020

ಅವಸಾನ: ಸಹನಾ ವಿಜಯಕುಮಾರ್

ಸಹನಾ ವಿಜಯಕುಮಾರ್ ರವರ "ಕಶೀರ" ಪುಸ್ತಕವನ್ನು ಬಹು ತಡವಾಗಿ ಓದಿದ್ದ ನಾನು, ಕಾಶ್ಮೀರದಂಥಾ ಬೃಹತ್ ವಿಷಯದ ಬಗ್ಗೆ ಮೊದಲ ಬಾರಿ ಓದಿದ್ದರಿಂದ ವಿಮರ್ಶೆಯೇನನ್ನೂ ಬರೆಯಲಾಗಲಿಲ್ಲ. ಆಗಿನಿಂದ ಕಾಡಿದ್ದು, ಅವರ ಮುಂದಿನ ಪುಸ್ತಕವನ್ನು ಬಿಡದೇ, ಬಿಡುಗಡೆಯಾದ ಕೂಡಲೇ ಅವರ ಮೊದಲ ಕಾದಂಬರಿ - "ಕ್ಷಮೆ" ಯನ್ನೋದಿದ ಹಾಗೆ ಓದಿಬಿಡಬೇಕು ಅಂತ. ಕಾದಂಬರಿಯೊಂದು ಮಹತ್ತರವಾದುದಾಗಬೇಕೆಂದರೆ ವಿಷಯ ವಸ್ತು ಎಷ್ಟು ಮುಖ್ಯವೋ, ಸುಲಭಗ್ರಾಹ್ಯವಾಗಿ ಅದನ್ನು ಓದುಗರ ಮುಂದಿಡುವುದೂ ಅಷ್ಟೇ ಪ್ರಮುಖವಾಗುತ್ತದೆ. ಮಹತ್ತರವಾದ ವಸ್ತು ವಿಷಯವು ಕಶೀರದಲ್ಲಿದ್ದರೆ, ಹದವಾಗಿ ಹರವಿದ ವಿಚಾರಗಳನ್ನು ಮಂಡಿಸಿರುವ ರೀತಿ "ಅವಸಾನ" ದಲ್ಲಿ ಬಹು ಆಪ್ತವಾಗುತ್ತದೆ.

ತಂದೆಯೊಬ್ಬನ ಅವಸಾನದ ದಿನಗಳಲ್ಲಿನ ಕಥನ - ಅವಸಾನ. 
ಕಥೆಯ ಎಳೆ ಇಷ್ಟು- ಅಸ್ಪಷ್ಟ ಮಾತೊಂದನ್ನು ಬಿಟ್ಟು ಬೇರೊಂದು ಮಾಡಲಾಗದ ಪಾರ್ಶ್ವವಾಯು ಪೀಡಿತ ಬಾಬುರಾಯರು. ಆರು ವರ್ಷಗಳಿಂದ ಅಹೋರಾತ್ರಿ ಮಗುವಿನಹಾಗೆ ಗಂಡನನ್ನು ಲಾಲಿಸುತ್ತಿರುವ ಗಂಗಾಬಾಯಿ. ತಮ್ಮದೇ ಕಂಪನಿಯಲ್ಲಿ ಗಂಡನ ಸಮಕ್ಕೂ ದುಡಿಯುತ್ತಿರುವ, ಮದುವೆಯಾದ ಏಳುವರ್ಷಗಳ ಮೇಲೆ ಗರ್ಭಿಣಿಯಾಗಿರುವ ಸೊಸೆ ಸುಲಭಾ. ಯಶಸ್ಸಿನ ಹಿಂದೆ ಹಠ-ಛಲಗಳ ಬೆನ್ನೇರಿ ಹೊರಟಿರುವ ಮಗ ವಿನೋದ್. 
ಇವರೆಲ್ಲರೊಡನೆ ಮನೆಗಂಟಿಕೊಂಡಿರುವ ಕಚೇರಿಯ ಕೆಲಸದ ಸಂದರ್ಶನಕ್ಕೆಂದು ಬಂದು ಮನೆಮಗನಿಗಿಂತ ಹೆಚ್ಚಾಗುವ ಸತ್ಯ, ಹಾಗು ಬಾಬುರಾಯರನ್ನು ಕಕ್ಕುಲಾತಿಯಿಂದ ನೋಡಿಕೊಳ್ಳುವ ಆಳು ಮೋಟಾರಾಮ್ - ಇವರೆಲ್ಲರ ಸುತ್ತ...... ಇವರೆಲ್ಲರೊಳಗೆ ಘಟಿಸುವ ಕಥೆ - "ಅವಸಾನ". 

ಕಥೆಯು ಬರಿಯ ಕಥೆಯಾಗುಳಿಯದೆ, ಪ್ರತಿಯೊಂದು ಪಾತ್ರದ ಮನಮಂಥನವಾಗಿ ಹೊಮ್ಮುತ್ತದೆ. ಒಬ್ಬಬ್ಬರೂ ತಾವು ಬೆಳೆದ ಪರಿಸ್ಥಿತಿ, ಪರಿಸರಕ್ಕನುಗುಣವಾಗಿ ರೂಪಿಸಿಕೊಂಡ ಅಭಿಪ್ರಾಯ, ನಡವಳಿಕೆಗಳು- ಅವರವರ ಮಟ್ಟಿಗೆ ಸರಿಯೆಂದೇ ಕಾಣುತ್ತ ಹೋಗುತ್ತದೆ. ಪ್ರತಿಯೊಂದು ಪಾತ್ರವೂ ತನಗೆ ಬಾಲ್ಯದಿಂದ ಸಿಕ್ಕ ಸಂಸ್ಕಾರದಿಂದ ಹೇಗೆ ಮತ್ತು ಎಷ್ಟು ಪ್ರಭಾವಿತವಾಗುತ್ತದೆ? ಅನ್ನುವುದು ಪುಟಪುಟವೂ ಬಿಡಿಸಿಕೊಳ್ಳುತ್ತ ಹೋಗುತ್ತದೆ. ಪಾತ್ರಗಳೆಲ್ಲ ತಂತಮ್ಮ ಜಾಗೆಗಳಲ್ಲಿ ಸಶಕ್ತವಾಗಿರುವುದರಿಂದಲೇ ಪುಸ್ತಕಕ್ಕೆ ತೂಕ ಹೆಚ್ಚು.

ಇನ್ನು ಕಥೆಯೆಂಬ ಅರಿವೆಯ ಕೆಲ ಹೊಳಹುಗಳನ್ನು ಹರವಲು ಪ್ರಯತ್ನಿಸುತ್ತೇನೆ.

ಪೀಡಿತರೆಂಬ ರಿಯಾಯಿತಿ ಸದಾ ರೋಗಿಗಿದ್ದರೆ, ರೋಗಿಯನ್ನು ಸದಾ ನೋಡಿಕೊಳ್ಳುವ ಜೀವಕ್ಕಾಗಿ ಮರುಗುವವರು ಕಾಣಸಿಗುವುದೇ ಕಷ್ಟ. ತನ್ನಮ್ಮನ ನಿತ್ಯದ ಗೋಳನ್ನು ನೋಡಲಾಗದೆ ಮರುಗುವ ಮಗ ತನ್ನ ಪಾಲಿಗೆ, ತನ್ನ ಮನಃ ಸ್ಥಾನದಲ್ಲಿ, ತನ್ನ ಹೆಂಡತಿಯ ಪಾಲಿಗೂ ಕೊನೆಗೆ ಸರಿ; ಆದರೆ ತನ್ನ ತಾಯಿಗೆ, ಆತ ಹೃದಯಹೀನ. ಇಲ್ಲಿ ಮುಖ್ಯವಾಗುವುದು ಯಾವುದು? ಗಂಡನ ಕರುಣಾಜನಕ ಸ್ಥಿತಿಯೋ? ಕಳೆದ ಒಳ್ಳೆಯ ಕ್ಷಣಗಳ ನೆನಪೋ? ಅಥವಾ ಪತಿಗೆ ಹೀಗಾದ ನಂತರದಲ್ಲಿ ಇನ್ನಷ್ಟು ಬಿರುಸಾಗಿ ಕಾಣುತ್ತಿರುವ ಮಗನ ನಡವಳಿಕೆಯೋ?
ಮಗನ ಪಾಲಿಗೆ ಅವನ ತಾಯಿ ಬರಿಯ ನೊಂದ ಜೀವ; ಮುಂಚಿನಿಂದಲೂ, ಇಡಿಯ ಮನೆಯಲ್ಲವಳೊಬ್ಬಳು ಕೆಲಸದಾಳಿನಂತೆ ದುಡಿದು, ಸುಖವೆಂಬುದೇನನ್ನೂ ಕಾಣದೆ, ಕೊನೆಗೆ ತಾಯಿ-ಮಗುವೆಂಬ ಮಮತೆಯನ್ನೇ ಬದಿಗಿಟ್ಟು ಪತಿ ಮತ್ತು ಆತನ ವಿಸ್ತರಿತ ಕುಟುಂಬದ ಸಮಯಪಾಲಕಿ. ಇನ್ನು ತಂದೆ? ಮಗನ ಪಾಲಿಗೆ ಎಂದೆಂದಿಗೂ ಪ್ರೀತಿಯನ್ನೇ ತೋರದ, ತೋರಲಾರದೇ ಹೋಗಿ, ಕೊನೆಗೆ ಉಳಿದಿರುವ ಒಂದಿಷ್ಟು ಗೌರವವನ್ನೂ ತನ್ನ ವ್ಯವಹಾರ ವೈಫಲ್ಯದ ಜೊತೆ ಕಳೆದುಕೊಂಡ ಕೈಲಾಗದವ. ತನ್ನ ರೆಕ್ಕೆಗಳು ವಿಸ್ತರಿಸಿದಷ್ಟೂ, ಯಶಸ್ಸು ಗಳಿಸಿಕೊಂಡಷ್ಟೂ "ಮೊಂಡಾದರೂ ಏನೀಗ? ಸರಿಯಾದರಷ್ಟೇ ಸಮ" ಎಂದುಕೊಳ್ಳುವ ಮಗನ ದಾರ್ಷ್ಯ ಹೆಚ್ಚಾದಷ್ಟೂ, ಹೆತ್ತ ತಂದೆ-ತಾಯಿಗಳು ಅವಲೋಕನಕ್ಕೆ ಸಿಲುಕಿಬಿಡುತ್ತಾರೆ.

ಇನ್ನು ಸಂಸ್ಕಾರದ ಮಾತು. ಸಂಸ್ಕಾರ ಹುಟ್ಟಿನಿಂದ ಬರಬೇಕಾದದ್ದೋ? ಅದರಲ್ಲಿ ವಾತಾವರಣದ ಪಾಲೆಷ್ಟು? ಮುಂಬೈನ ಕಾಮಾಠಿಗರ ಕಾಮಾಠಿಪುರದ ಗಲ್ಲಿಯಿಂದ ಬಂದ ಮುನ್ನಾ "ಸತ್ಯ"ನಾಗುವ ಕಥೆಯಲ್ಲಿನ ಹಿನ್ನೆಲೆ ಸ್ವಾರಸ್ಯಕರ. ಲೈಂಗಿಕ ಕಾರ್ಯಕರ್ತೆಯಾದ ತಾಯಿ ಆತನನ್ನು ಕೆಸರೊಳಗಿನ ಕಮಲದಂತೆ ಬೆಳೆಸುವಾಗ ಇದ್ದಕ್ಕಿದ್ದಂತೆ ಮುನ್ನಾನನ್ನು ಕಾಡುವ ಕುಟುಂಬವೆಂದರೇನು? ಎಂಬ ಜಿಜ್ಞಾಸೆ - ಕುಟುಂಬದಲ್ಲಿ ತಂದೆಯೊಬ್ಬನಿರಬೇಕಲ್ಲವೇ? ಅವನೆಲ್ಲಿ? ನನ್ನ ಕುಟುಂಬದ ಚಿತ್ರ ಸಂಪೂರ್ಣವಾಗುವುದು ಯಾವಾಗ ಅನ್ನುವ ಪ್ರಶ್ನೆ ವಯಸ್ಸಾದವರ ಸೇವೆಯಲ್ಲಿ ತನ್ನ ತಂದೆತಾಯಿಯ ರೂಪ ಕಾಣುವಲ್ಲಿ ಸಮಾಧಾನಿಸಿಕೊಳ್ಳುವ ಸತ್ಯ.

ಇನ್ನೊಂದು ಎಳೆ ಮೋಟಾರಾಮನದ್ದು. ಆತ ಕೆಲವು ಕಡೆ ಅಸಹಾಯಕರ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ವೈಯುಕ್ತಿಕ ವಿಚಾರಗಳಿಂದ ದೂರವುಳಿಯುವ ಪ್ರಯತ್ನದಲ್ಲೇ ಈ ಎಲ್ಲ ಎಳೆಗಳಲ್ಲೂ ಸಿಲುಕಿಕೊಳ್ಳುತ್ತ ಹೋಗುತ್ತಾನೆ. ತನಗನಿಸಿದ್ದನ್ನು ತನ್ನ ಬುದ್ಧಿ-ತರ್ಕಕ್ಕೆ ನಿಲುಕುವ ಮಟ್ಟಿಗೆ ಯೋಚಿಸುತ್ತ ,ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಉಳಿಯುತ್ತಾನೆ.

ಕುಟುಂಬಕ್ಕಾಗಿ ಹಂಬಲಿಸುವ ಮುನ್ನಾ, ಕಾಮಾಠಿಪುರದ ಗಲ್ಲಿಯಲ್ಲಿನ ಮುನ್ನಾನನ್ನು ಆಶ್ರಮವೊಂದು "ಸತ್ಯ" ನನ್ನಾಗಿಸುವ ಬಗೆ, ಆತನ ಫಂಡರಾಪುರದ ಯಾತ್ರೆಯ ಸಂದರ್ಭ, ಆತನೊಳಗೆ ತಾನು ಏಳಿಗೆ ಕಾಣಬೇಕೆಂಬ ಶ್ರದ್ಧೆ, ನಿಜವನ್ನೇ ಹೇಳಬೇಕೆಂಬ ನಂಬುಗೆ, ಅದಕ್ಕಾಗಿ ಏನನ್ನಾದರೂ ಪಣವಾಗಿಡುವ ಸತ್ಯನ ಬದ್ಧತೆ ಆತನ ಪಾತ್ರವನ್ನು ಆಪ್ತವಾಗಿಸುತ್ತದೆ.

ಮೂಲ ಪ್ರಶ್ನೆ ಉದ್ಭವವಾಗುವುದು, ಯಾರೇ ಆಗಲೀ, ಯಾಕೆ ತಮಗನಿಸಿದ್ದನ್ನು ಸಮರ್ಥಿಸಿಕೊಳ್ಳುತ್ತಾರೆ? ತಂತಮ್ಮ ಮನಸ್ಥಿತಿಗಳಿಗೆ ಸ್ಪಂದಿಸುತ್ತ ಸ್ಪಂದನೆಯು ವ್ಯಕ್ತಿತ್ವದೊಡನೆ ಮಿಳಿತವಾಗುವ ಗೆರೆ ಎಷ್ಟು ಅಸ್ಪಷ್ಟ? ಈ ಆಯಾಮದಲ್ಲಿ ಕಥೆ ಸಾಗುತ್ತ ಪೂರಕ ಸಂದರ್ಭಗಳಿಗೆ ಪುಷ್ಟಿಕೊಡುತ್ತ, ಓದುಗರನ್ನು ಆಲೋಚನೆಗೆ ದೂಡುತ್ತಾ ಸಾಗುತ್ತದೆ.

ಒಮ್ಮೆ ಓದಲು ಶುರುವಿಟ್ಟು ಸೆಳೆವಿನಲ್ಲಿ ಸಿಕ್ಕಿಹೋದರೆ ಪುಸ್ತಕ ಮುಗಿಯುವವರೆಗೆ ಬಿಡದ ಸೆಳೆತ - "ಅವಸಾನ". ನನ್ನ ಪತಿ ಮಧ್ಯರಾತ್ರಿ ೩ ಗಂಟೆಯವರೆಗೂ ಪುಸ್ತಕ ಕೆಳಗಿಡದೆ ಓದುತ್ತಿದ್ದು, ಕಾಮಾಠಿಪುರದ ಮಗುವಿನ ಬವಣೆಗಳಿಗೆ ನಾನು ದುಃಖಿಸಿಕೊಂಡು ಅಳುತ್ತಿರುವುದು ಗಮನಿಸಿ, - "ಟ್ವೀಟ್ ಮಾಡ್ತೀನಿ @sahanavijayakumar, you have messed with my wife's brain" ಎನ್ನುವಾಗ ನನ್ನ ಮುಖದಲ್ಲಿ ಮಂದಹಾಸ  😍 😁

ತುಂಬಾ ದಿನಗಳ ನಂತರ ಹಿಡಿದೊಂದು ಪುಸ್ತಕದ ಕಥೆಯಲ್ಲಿ ಮನುಷ್ಯ ಸ್ವಭಾವಗಳಿಗೆ ಇಷ್ಟೊಂದು ಒಳನೋಟ ಸಿಕ್ಕ ಸಂತೋಷ.

Tuesday, September 17, 2019

ಅರಿಕೆ


ಮೋಡದಂಚಲೆಲ್ಲೋ ಇದ್ದ ನನ್ನ ಸೆಳೆದು ತಂದು ನೀವು
ಮಿಣುಕುಹುಳವು ನಿಶೆಯ ಸೊಬಗ ಬೆಳಕಹಾಸಿ ನೋಡುವಂತೆ,
ಹಸುರಿನೊಳಗೆ ತನ್ನ ಸುತ್ತ ಪಸರಿಸಿರುವ ಇನಿತು ಬೆಳಕ-
ಬೀರಿ ಬೀರಿ ಮೇಲೆ ಹಾರಿ, ಕೊಂಚ ದೂರ ಮತ್ತೆ ಹೋಗಿ,
ಅಲ್ಲು ಬೆಳಕ ಮಿಣುಕಿ ಮಿಣುಕಿ ಬೆದಕಿ ಸರ್ಗಕಾಣುವಂತೆ
ಇತ್ತಿರೆನ್ನ ತಾಯಿಗೆ; ತಾಯ ಮಡಿಲ ಹುಡುಕುತ್ತಿದ್ದ ಜೀವಕೆ.

ಮಡಿಲ ಬೆದಕಿ ಕೊಂಚಕೊಂಚ ತೊದಲನಾಡಿ ಹಿಗ್ಗಿಹಾರಿ,
ತಾಯ ಮಡಿಲು ಸಾಲದೆನಗೆ ಮೇಲು ಹಾರಿ -
ಕೆಳಗು ನೋಡಿ ದೂರಸಾಗುವಾಸೆಯು;
ಬೆಳಕಿನಡಿಯು ಬೆರಗನೆಲ್ಲ ಇಲ್ಲೆ ಬಿತ್ತಿ ಬೆಳೆಸಿದಂತೆ 
ಕೊಟ್ಟ ಮನೆಗೆ ಬೆಳಕ ನೀಡಿ, ನೀನೇ ಉಸಿರೂ ಆಗಿರೆಂದು
ಉಜ್ಜುಗಿಸುವ ಕಾಂತಿಯಾಗು- ಮನಕೆ ಎಂದೂ ತಣ್ಪ ನೀಡು,
ಕಣ್ಣ ತುಂಬಿ ಹರಸಿ ಕಳಿಸೆ-ಮನವು ಆರ್ದ್ರವಾಗಲು..

ಮೆಲ್ಲ ಬಂದೆ ಮತ್ತೆ ನಾನು ಹೊಸತದೊಂದು ನಗೆಯ ತುಂಬಿ,
ಹಿರಿಮೆ ಹಿಗ್ಗಿ ಜಗಕದೆಲ್ಲ ನನ್ನ ಮಗುವ ಲಾಲಿಸುತ್ತ,
ನಿದಿರೆ ತೊರೆದು ಪುಟ್ಟ ಮಗುವ ರಂಜಿಸಿದಾ ರಾತ್ರಿಗಳಿಗೆ-
ಲೆಖ್ಖವಿಲ್ಲ ಚುಕ್ಕವಿಲ್ಲ -
ಯಾರೇ ಕೇಳೆ ಬರಿದೆ ನಗುವು ನಿಮ್ಮ ನಲ್ಮೆಯುತ್ತರ!

ಅವನ ಪುಟ್ಟ ಕೈಯ್ಯ ಮುಟ್ಟಿ ಬೆಚ್ಚನಿರುವ ಕೆನ್ನೆ ಸವರಿ
ಹೆಜ್ಜೆಗೊಂದು ಮಾತಿಗೊಂದು ಗೊಂಬೆಯದಕೆ ಬರಿಯ ಮುದ್ದು;
ತೊದಲು ನುಡಿಗಳಲ್ಲು ನೀವೆ, ಅವನ ಕೇಕೆಯಲ್ಲು ನೀವೆ,
ಸಂತಸದಾ ಕ್ಷಣಗಳವನ ಸುತ್ತಲಿರುವ ಸದಾ ಹಾಗೆ,
ಕಣ್ಮಯಿಯಾ ಸೆಲೆಯೇ ಅವನು ಆಗುವುದನು ಕಂಡೆನು!

ನಿಮ್ಮಲೇನೆ ನನ್ನ ಸಲಿಗೆ,
ಭಾವುಕತೆಯ ಎಲ್ಲೆ ಕೊನೆಗೆ,
ಜೀವವಿದುವೆ ಧನ್ಯ ನಿಮಗೆ;
ರೂಪಿಸಿರಲು ನಮ್ಮ ಬದುಕ-
ಪ್ರೀತಿಯಿಂದ ವಂದನೆ.

Saturday, August 24, 2019

Mission Mangal: Movie Review

☆☆☆☆1/2


This birthday was a day which reminded me how difficult everyday is, for a working mother. Mix of emotions and very tight schedule at the same time. It's all the while difficult when you want to feel special for you know it is your birthday but your responsibilities won't allow you take a day off from the work you do. Neither in kitchen, nor at relationships as well. I laughed, I cried, I worked hard, I partied hard, was under very tight schedule, and did relax well too. As a part of too many days in one day, me and my husband had the movie scheduled in midst of last minute travel in two wheeler as usual with just a bit of rain to up the traffic. Reaching the venue heroically, finally we made it on time for the national anthem's tune. All we had was one thing in mind; This movie better be worth the traffic risk we took! 😊


Tara Shinde, the project manager of Mission Mars reminds her team of their purpose of being scientists by sort of time travel to their very first memory that led to the determination of becoming a scientist one day. 
Rakesh Sharma, the Chief Scientist seems an oddball when convincing the panel for supporting his mission every time his superiors find excuses to drop it. He barges in the meeting of chandrayan twice to prove his point once and to pitch for funds, in rather ridiculous seeming poori frying and pretending to talk to Dr APJ Abdul Kalam.

Overtly dramatic as these two sequences might seem to the viewer, were still required to lighten up the heavy subject of research and satellite launch. The amount of pain that the Mars team would have taken to convince everyone else of their home science based rocket science, especially at a time when the mission had no funds of its own and bizarre idea of trusting a Hohmann Transfer Orbit* that was propounded a century ago, indeed has a vast scope of imagination to screenplay of Ravi Varman and direction of Jagan Shakti for creating an effective movie to celebrate the achievement.

Most government projects tend to extend their set time which they give numerous reasons for delay. A mission that was made possible in the record time of 15 months will always be a wonder in a government run institution. India is the first country to be successful in inserting a satellite into Mars in its first attempt, that we all are super proud about. This movie is an attempt at giving this achievement a human touch by weaving it with a palatable story.

Weaving a handful of hilarious turn of events, it feels good to have a right mixture of fun and work in the story. The movie definitely inspires us towards the career that we have chosen in life. A super booster movie for women indeed who are the face of their family and a pride at whatever they are best at.

How the women on mission handle situations and casualties at home as well as at work is what I could relate to, being a working woman myself. Balancing work and family is a humongous task which can only be taken and balanced one issue after the other as they come along in everyday life.

A handful of dialogues, the part of movie where launch and settling of satellite at Mars Orbit is shown will stay with the viewer even after movie. 
Try holding back the burst of happiness within, as a viewer when we become part of witnessing the mission and start praying for no more hurdles in Mission MOM!

Have fun watching, that if you still haven’t watched. Every time you think the movie is going off track, it's propelled on the relevant track again! Movie in bits and pieces is like experiencing how the “Poori Science” worked in Mangalyan by switching off fuel every time the heat was sufficient!!


*Hohmann transfer orbit - Path in space that works with earth's gravity to hold satellite still orbiting around earth, but will keep widening the trajectory every round. Only ISRO used this theory n technique while launching satellite in just a PSLV rocket with very less fuel capacity.

Tuesday, July 30, 2019

Vanara: Anand Neelakantan

Let me tell you a bit about the backdrop of this story that it is woven upon.

Valmiki Ramayana tells the tale of how Sugreeva and his Vanara sena helped Rama fight Ravana and rescue Sita. This Sugreeva was an outcast of his brother Vaali or Baali's Kishkinda. He was evicted from the Kingdom of Kishkinda by his own brother who was very dear to him. This is since Sugreeva had married Tara and was ruling Kishkinda since he believed his brother was dead in battle with Mayavi. But the moment Baali comes back winning over the demon, he charges his brother with treachery and evicts him from Kishkinda. Sugreeva waits in vain being an outcast until he meets Rama. Then Sugreeva invites Baali for a duel and Rama killed Baali by standing behind a nearby tree. Sugreeva is crowned again and after him, Angada, son of Tara and Baali is made the Prince of Kishkinda.

Now this act of Rama is justified in various texts in different ways, backing him up that this was done to save Dharma ultimately. This event always leaves a hollow in the epic of Ramayana nevertheless. This novel Vaanara is an attempt at weaving the sequence of events.

Anand Neelakantan has a finesse story telling that captivates the reader. I must mention how he weaves in chapter after chapter. Every chapter ends as a prelude to the next chapter which keeps the reader on toes until the story is completed. One simply cannot put this book down and be at peace until the reading is done. 

Dilemma of Tara about the two brothers, though she heartily loves one and tries to despise the other, her thoughts are stuck not knowing which way to waiver. Baali is so lost in building an empire that though he loves Tara with all his heart, he is unable to spend enough time with her. Meanwhile encashing all this, Sugreeva lusts for his sister-in-law, unknowing of the consequences that it might pose; once Tara is married to Sugreeva as Baali does not return from fighting Mayavi and is thought to be dead, Sugreeva sees that the appeal of having Tara as his is vanished completely, and a constant hindrance towards the relationship sets in. 

Though Tara marries two brothers, she is still considered the virtuous wife and is given a worshipful place till today. Giving the benefit of doubt to the tale that she is considered a pious and virtuous wife, author gives it a justified ending that Tara after Angada and Sugreeva return victorious post battle with Ravana, stays in the sacred grove of seven palmyra trees that Baali had envisioned and nurtured; thinking every moment of Baali, she lives as a telltale to the whole of Kishkinda until her last breath, serving the city-dwellers with her wise deeds and words.

The loyalty of the abandoned wolf pup 'Chemba' raised by Baali is a part of the story that touches the most. The wolf's tried and true love towards its master is depicted well in parts of story where it stays near the cave till its master returns victorious from his struggle with the demon and its unfailing attempts at digging his grave though its claws are all worn out from the futile effort. Chemba still believes that somehow he can bring his master back from the dead if it digs enough to reach his body even after death of Baali.

The sublime character of Baali and Sugreeva's foster father Riksharajas, the valour of Ravana depicted in even his defeat against Baali in duel, the motherly turned pompous Ruma - the wife of Sugreeva, the demonity that is illustrated in weaving sequence about the humongous bull Dundubhi that is brought by Sugreeva, the plight of the outcast - Vana naras - called later as Vanaras, the love and understanding of the two brothers - Baali and Sugreeva and the intervention to their fraternal bonding with entry of Tara in their life, the only amazing city that they build deep in the woods with all amenities and aiming at no caste- colour discrimination is all that is part of reading hangover. 

Definitely a thumbs up for even those who despise heavy reading.

Friday, March 22, 2019

Kesari ✮✮✮✮1/2


Each war has many stories to tell. Of the martyrs, of the survivors, of the wounded, and of the hounded. If wars were only documented, the lines become meager numbers on paper. When a movie like Kesari is made on a lesser known but bravest of battles fought under British India, heart swells with pride for their bravado.

North Western Frontier Province, part of Pakistan in today's world map had witnessed a constant friction and confrontation between Afghans and British. Many of us may know that 21 Sikhs belonging to 36 Sikh regiment killed over 600 Afghans in the battle of Saragarhi. The level of motivation it took not to run away from overwhelming 10000 Afghans and the power of commitment they got in them at that crisis is a question of creative liberty for screenplay and direction. Director Anurag Singh has tapped the right chords to create a slow and touchy movie that says about the turn of events and glorifies the brave battle, ever so rightly.

The movie keeps you in splits at times, touches the raw nerve of British ruled India, flares the viewer's patriotism and polishes our religious beliefs, all at right times during the movie. Songs compliment the pace of the movie. It is a slow paced movie, but deliberately been made so. First 30 minutes is just an under-structure for the story that is to be unveiled. 

Akshay Kumar as Hawaldar Ishar Singh is not the only glorified hero but one among the heroes who fought and were martyred that day. Screenplay has given a rightful space and justice for each hero among the 21+1. The brutality of force and strategies of the then group of Afghans makes us mull over the story and events that we have read about Afghanistan, Lashqar and Taliban in recent times.

None of us moved even when the movie had completed its show. We were shun to silence. It took a moment more to realize that we had to leave the movie hall.

Wednesday, January 30, 2019

Manikarnika - The Queen of Jhansi ✮✮✮

Jhansi Rani Lakshmibai, one of the key leaders of the Sepoy mutiny against British raj, strategically escaped twice from the British army, gave an arduous fight and was a nightmare to the Angrezi Sarkar until she chose her death by being a rebellion in a battle near Gwalior. 

Manikarnika Poster.jpg
As British officer Hugh Rose commented in his battle report, Jhansi Rani was the most dangerous of all Indian leaders. Our heart swells with pride when the story unveils on screen, and the battle tactics used at that time is commendable. Story is kept intact as much possible and the glorification of Rani as a personality seems apt in many frames.

This movie itself seems like a mark of respect for a leader's story which sprung through the hoodlum effort by British to erase her name in the History of India. The moment when Lakshmibai jumps off the fort of Jhansi while trying to save her heir  is enough to prove how outgoing and rebellious she could have been who survived battles and did not give in an opportunity for British for being captured alive. This sacrifice is what she believed will become a precedence and instilled an undying urge in Indians about Swaraj.

Now about the movie, Indian audience have watched Baahubali which has given us an excellent VFX that is lasting even after years of its release; we have watched Baajirao Mastani which featured Baajirao, a courtier of Jhansi empire; we have watched an excellent epos with a right mix of everything- VFX, story line, Direction, editing, scale, songs and performance in Padmaavat recently.

Manikarnika has everything, but lacks the same intensity of direction almost for the first 40 minutes. It is noticeable, had this movie been in the hands of a more experienced director, this could have been improvised here and there. I cannot conclude that the movie hasn't much to offer the audience as well, even in those first 40 minutes. But the direction seems a cracked spell at times during the movie which seems crackled further through poor VFX during few instances. Songs are amazing, which is as a matter of fact drew me to the theater. Shankar Ehsaan Loy are back with a bang, that has complimented Prasoon Joshi's lyrics so rightly. But what is lacking, is timing in the movie. Songs seem a bit too many in the movie which would have sounded even better if their gelling with the flow of the movie was better. Songs should always be rightly placed, and must compliment the movie rather than being an impediment to its flow, is what I believe.

Having said that, there is no doubt that the battle scenes, scenes with weaving battle strategics are commendable. Kangana Ranaut has proved yet again that she can mold into any character that comes to her in making. Supporting crew has done their job great. A one time watch, and lore to sing in bits for a long time, for sure.

✮✮✮File:The place from where Rani Lakshmibai jumped.jpg

Saturday, January 19, 2019

ತಿಳಿವು

abstract artತಿಳಿವೆನ್ನುವುದು ಹಣತೆಯಂತೆ
ಬೆಳಗಿಸಿದರೆ ಮಾತ್ರ ಕತ್ತಲೆ ತೊಡೆವಂತೆ;
ಮುನ್ನ ಬೆಳ್ಳಿಯೊಳು ಬತ್ತಿಯಿದ್ದರೂ
ಬತ್ತಿಗಾಗಿ ಕಾಯ್ವ ಕಿಡಿಯಿದ್ದರೂ
ಬೆಳ್ಳಿ ದೀಪದೊಳು ಎಣ್ಣೆ ಮೊಗೆದಿದ್ದರೂ
ಹೊತ್ತಿಸದೆ ಬೆಳಕನೆಂತ ಬೀರ್ವುದೋ

ತಿಳಿವೆನ್ನುವುದು ಹಣತೆಯಂತೆ
ಬೆಳಗಿಸಿದರೆ ಮಾತ್ರ ಕತ್ತಲೆ ತೊಡೆವಂತೆ;
ಮುನ್ನ ತಲೆಯೊಳು ಮೆದುಳಿದ್ದರೂ
ಆಲೋಚನೆಗೆ ಕಾಯ್ವ ಕಿಡಿಯಿದ್ದರೂ
ಕಂಗಳು ಕಂಡಿದ್ದರೂ ಸ್ಮೃತಿಗೆದರಿದ್ದರೂ
ಆಲೋಚನೆಯ ಓರೆ ಹಚ್ಚದೇ ತಿಳಿವರಿವಾಗದೋ ಪ್ರಭುವೇ!

Tuesday, September 4, 2018

An Insightful Teacher


An endeavor that invokes faith;
Saga of knowledge You bequeath;
A star that emanates its gleam,
You lead the path to awareness, beam!
Rhapsodic tones, You tune to melody;
Obstinance, You mold to self-mastery;
And defiance, to discipline;
To witness excellence sparkle within;
Oh Guru! You imbue faith!
For all the insight You bequeath!!

(Written as an opening phrase for compering for Teacher's day Celebration at National Hill View Public School)

Special Thanks: Thoughtfully edited by Mrs. Anita Vinodkumar, Principal, NHVPS

Wednesday, June 6, 2018

Why Did I Like Veere Di Wedding


Below the belt talk O..M..G..! Ladies messing around with their lives? No No No. How can girls be themselves amidst everyone? 
- One can enjoy a movie only if your mind is free from these so called taboos.

This movie stands apart from core brand feminist flicks by keeping a sensible story line hemmed with intimate talk. 

Kalindi has seen her parents quarreling constantly and has no faith in marriage. For a girl who is brought up with an independent mindset, it comes as a crashing challenge on her personality to bear with the relationship pressures of the groom's family during the wedding.
Sakshi is a free spirit that's hard to be contained by her husband. She's having trouble calling the relationship an end.
Meera isn't having a smooth-running marriage either.
Avni is sort of desperate for marriage but is a divorce lawyer and is afraid to get into a relationship. Her mom constantly tries to find her marriage alliance and they somehow never workout for Avni.

Movie reaches its crescendo towards the interval and sadly, second half slows down its tempo.
This thin story line is woven with values passed on by their parents and how their family is put before their ego. 

Gang of girls who have been together since their childhood, meet again as Kalindi's (Kareena) wedding is fixed.

However sensible men are, this movie might still seem a not so appealing movie for them. Take your best buds with you is my advice!!

Monday, June 4, 2018

Alter Ego

Predictability is a boon
Boon to the one who predicts
Or he who is gullible?
A mystery unfolds as the time passes by
With a glimpse into each other’s psyche
That only spreads wider with time
Persona becomes easy to intercept
And guess the next move.
Awake here, Oh soul!
For you might reveal wishful secrets
Unintended though might cast
A negligible crack;
A crack that is a thin line
And grows larger with time;
Behold the next words of mine
Just to not wither away the perception
That my thoughts aren’t bare for you;
Not for you; Nor for anyone.